ಆ್ಯಪ್ನಗರ

ಬನ್ನೇರುಘಟ್ಟ ರಸ್ತೆ ವಿಸ್ತರಣೆಗೆ ಪುರಾತನ ಕಲ್ಯಾಣಿ ಮುಚ್ಚಿದ ಬಿಬಿಎಂಪಿ: ಕಲ್ಯಾಣಿ ಉಳಿಸಲು ಟ್ವಿಟರ್ ಅಭಿಯಾನ

ರಸ್ತೆ ವಿಸ್ತರಣೆಗೆ ಬಿಬಿಎಂಪಿ ಪುರಾತನ ಕಲ್ಯಾಣಿಯನ್ನು ಮುಚ್ಚಿದೆ. ಸ್ವಯಂಸೇವಾ ಕಾರ್ಯಕರ್ತರು ಕಲ್ಯಾಣಿಯ ಪುನಶ್ಚೇತನ ಮಾಡಿದ್ದರೂ ವ್ಯರ್ಥವಾಗಿದೆ. ಈ ಸಂಬಂಧ ಟ್ವಿಟರ್‌ನಲ್ಲಿ ಗೊಟ್ಟಿಗೆರೆ ಕಲ್ಯಾಣಿ ಕುರಿತಾಗಿ ಪೋಸ್ಟ್‌ ಹಾಕಲಾಗಿದೆ. ಈ ಕುರಿತಂತೆ ಒಂದು ವರದಿ ಇಲ್ಲಿದೆ ನೋಡಿ.

Vijaya Karnataka 17 Sep 2019, 9:26 am
ಬನ್ನೇರುಘಟ್ಟ: ಬೆಂಗಳೂರಿನ ಬನ್ನೇರುಘಟ್ಟ ರಸ್ತೆ ವಿಸ್ತರಣೆಗಾಗಿ ಪುರಾತನ ಕಾಲದ ಕಲ್ಯಾಣಿ ಮುಚ್ಚಿರುವ ಕ್ರಮ ಖಂಡಿಸಿ ಹಾಗೂ ಕಲ್ಯಾಣಿಯನ್ನು ಉಳಿಸುವ ನಿಟ್ಟಿನಲ್ಲಿ
Vijaya Karnataka Web gottigere lake twitter  2

ಟ್ವಿಟರ್‌ನಲ್ಲಿ ಅಭಿಯಾನ ಆರಂಭವಾಗಿದೆ.

ಗೊಟ್ಟಿಗೆರೆಯ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಇದ್ದ ಕಲ್ಯಾಣಿ ರಸ್ತೆ ವಿಸ್ತರಣೆಗೆ ಬಲಿಯಾಗಿದೆ. ‘ಸೇವ್‌ ಕಲ್ಯಾಣಿ’ ಎಂಬ ಟ್ವಿಟ್ಟರ್‌ ಅಕೌಂಟ್‌ನಲ್ಲಿ ಈ ಬಗ್ಗೆ ಪೋಸ್ಟ್‌ ಹಾಕಿದ್ದು, ಹಲವರು ಈ ಅಭಿಯಾನವನ್ನು ಬೆಂಬಲಿಸಿದ್ದಾರೆ. ಹಲವು ವರ್ಷಗಳಿಂದ ಪಾಳು ಬಿದ್ದಿದ್ದ ಕಲ್ಯಾಣಿಯನ್ನು ಯುವ ಬ್ರಿಗೇಡ್‌ ತಂಡದವರು ಪುನಶ್ಚೇತನಗೊಳಿಸಿದ್ದರು.


ಬಳಿಕ ಕಲ್ಯಾಣಿಯಲ್ಲಿ ಸಾಕಷ್ಟು ನೀರು ಕೂಡ ಸಂಗ್ರಹವಾಗಿತ್ತು. ಸ್ಥಳೀಯರ ಅಭಿಪ್ರಾಯವನ್ನು ಆಲಿಸದೆ ಬಿಬಿಎಂಪಿ ಕಲ್ಯಾಣಿ ಮುಚ್ಚಿ ರಸ್ತೆ ನಿರ್ಮಿಸಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

‘‘ಗಾಳಿ ಅಂಜನೇಯ ದೇವಸ್ಥಾನಕ್ಕೆ ಕಲ್ಯಾಣಿಯ ನೀರನ್ನು ಬಳಸುತ್ತಿದ್ದರು. ರಸ್ತೆ ವಿಸ್ತರಣೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಕಲ್ಯಾಣಿಯನ್ನು ಉಳಿಸಿ ಕೊಡಬೇಕು ಮತ್ತು ಬಿಬಿಎಂಪಿಯೇ ಇದನ್ನು ಅಭಿವೃದ್ಧಿಪಡಿಸಬೇಕು,’’ ಎಂದು ಗೊಟ್ಟಿಗೆರೆ ನಿವಾಸಿ ಮಂಜೇಶ್‌ ಆಗ್ರಹಿಸಿದರು.

‘‘ಈ ಬಗ್ಗೆ ಆಯುಕ್ತರಿಂದ ಕಲ್ಯಾಣಿಯನ್ನು ಪುನರ್‌ ನಿರ್ಮಾಸಿ ಕೊಡುವ ಭರವಸೆ ಸಿಕ್ಕಿದೆ,’’ ಎಂದು ಬೆಂಗಳೂರು ದಕ್ಷಿಣ ಶಾಸಕ ಕೃಷ್ಣಪ್ಪ ತಿಳಿಸಿದ್ದಾರೆ.

ಕಲ್ಯಾಣಿಯಲ್ಲಿ ನೀರಿನ ಸೆಲೆ ಇಲ್ಲ. ಮಳೆಗಾಲದಲ್ಲೇ ಸ್ಥಳ ಪರೀಕ್ಷಿಸಿ ಇದು ಜನರ ಉಪಯೋಗಕ್ಕೆ ಬರುವುದಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡು, ಗ್ರಾಮಸ್ಥರ ಅಭಿಪ್ರಾಯ ಪಡೆದೇ ಕಲ್ಯಾಣಿ ಮುಚ್ಚಿದ್ದೇವೆ.
- ಸೋಮಶೇಖರ್‌, ಮುಖ್ಯ ಇಂಜಿನಿಯರ್‌ (ಅಭಿವೃದ್ಧಿ ಹಾಗೂ ಮೂಲಸೌಕರ್ಯ ವಿಭಾಗ) ಬಿಬಿಎಂಪಿ

ವಿಪರೀತ ಸಂಚಾರದಟ್ಟಣೆ ಇರುವುದರಿಂದ ರಸ್ತೆ ವಿಸ್ತರಣೆ ಮಾಡಲೇಬೇಕಿದೆ. ಹಳೆಯದಾದ ಕಲ್ಯಾಣಿ ಮುಚ್ಚಿರುವುದರಿಂದ ಯಾರಿಗೂ ತೊಂದರೆಯಾಗದು.
- ಲಲಿತಾ ಟಿ ನಾರಾಯಣ, ಸದಸ್ಯೆ , ಬಿಬಿಎಂಪಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ