ಆ್ಯಪ್ನಗರ

ಪ್ರೇಮಿಗಳ ದಿನಕ್ಕೆ ಭರದ ಖರೀದಿ

ಪ್ರೇಮಿಗಳ ದಿನದ ಅಂಗವಾಗಿ ನಗರದ ನಾನಾ ಮಳಿಗೆಗಳಲ್ಲಿ ಗುರುವಾರ ಉಡುಗೊರೆಗಳ ಖರೀದಿ ಜೋರಾಗಿ ನಡೆದಿದೆ. ಮಾಲ್‌ಗಳು ಮತ್ತು ಶಾಪಿಂಗ್‌ ಮಳಿಗೆಗಳು ಕೂಡ ಯುವಜನರಿಂದಲೇ ತುಂಬಿದ್ದವು.

Vijaya Karnataka 14 Feb 2019, 5:00 am
ಬೆಂಗಳೂರು : ಪ್ರೇಮಿಗಳ ದಿನದ ಅಂಗವಾಗಿ ನಗರದ ನಾನಾ ಮಳಿಗೆಗಳಲ್ಲಿ ಗುರುವಾರ ಉಡುಗೊರೆಗಳ ಖರೀದಿ ಜೋರಾಗಿ ನಡೆದಿದೆ. ಮಾಲ್‌ಗಳು ಮತ್ತು ಶಾಪಿಂಗ್‌ ಮಳಿಗೆಗಳು ಕೂಡ ಯುವಜನರಿಂದಲೇ ತುಂಬಿದ್ದವು.
Vijaya Karnataka Web valentines day special
ಪ್ರೇಮಿಗಳ ದಿನಕ್ಕೆ ಭರದ ಖರೀದಿ


ಪ್ರೇಮಿಗಳ ದಿನಕ್ಕಾಗಿ ಉಡುಗೊರೆಯ ಆಯ್ಕೆಯಲ್ಲಿ ಎಲ್ಲರೂ ತಲ್ಲೀನರಾಗಿದ್ದರು. ಹೃದಯಾಕಾರದಲ್ಲಿ ವಿನ್ಯಾಸಗೊಂಡಿರುವ ಗ್ರೀಟಿಂಗ್‌ ಕಾರ್ಡ್‌ಗಳು, ಫೋಟೋ ಫ್ರೇಮ್‌ಗಳು, ಡಾಲರ್‌, ಪೆಂಡೆಂಟ್‌, ಉಂಗುರ, ಬೆಳ್ಳಿಯ ಚೈನ್‌, ಪಿಲ್ಲೋಗಳು, ಬೊಂಬೆಗಳು, ಕೀ ಬಂಚ್‌, ತಾಜಮಹಲ್‌ ಆಕೃತಿಗಳು, ಹೆಸರಿನ ಮೊದಲ ಅಕ್ಷ ರ ಇರುವ ಬ್ರೇಸ್‌ಲೆಟ್‌ ಸೇರಿದಂತೆ ನಾನಾ ಉಡುಗೊರೆಗಳನ್ನು ತಮ್ಮ ಬಜೆಟ್‌ಗನುಸಾರವಾಗಿ ಖರೀದಿಸುತ್ತಿದ್ದರು. ಇದಲ್ಲದೆ ಕೆಲವು ಉಡುಗೊರೆಗಳನ್ನು ಆನ್‌ಲೈನ್‌ನಲ್ಲೂ ಖರೀದಿಸುತ್ತಿದ್ದರು.

ರೆಡ್‌ ವೆಲ್‌ವೆಟ್‌ ಕೇಕ್‌

ಪ್ರೇಮಿಗಳ ದಿನಕ್ಕೆಂದೇ ಹೃದಯಾಕಾರದಲ್ಲಿ ತಯಾರಿಸಿರುವ ಕೆಂಪುಬಣ್ಣದ ರೆಡ್‌ವೆಲ್‌ವೆಟ್‌ ಕೇಕ್‌ಗಳಿಗೆ ಹೆಚ್ಚು ಬೇಡಿಕೆಯಿತ್ತು. ದುಬಾರಿಯಾದರೂ ಹೆಚ್ಚು ಮಂದಿ ಸಂಭ್ರಮದಿಂದ ಖರೀದಿಸಿದರು. ಇದಲ್ಲದೆ ವಿದೇಶಿ ಚಾಕೊಲೇಟ್‌ಗಳ ಖರೀದಿಯೂ ಜೋರಾಗಿ ನಡೆದಿತ್ತು.


ಸ್ಟಾರ್‌ ಹೋಟೆಲ್‌ಗಳಲ್ಲಿ ವಿಶೇಷ

ನಗರದ ನಾನಾ ಸ್ಟಾರ್‌ ಹೋಟೆಲ್‌ ಹಾಗೂ ರೆಸ್ಟೋರೆಂಟ್‌ಗಳು ಪ್ರೇಮಿಗಳ ಹಬ್ಬಕ್ಕೆ ಗುಲಾಬಿ ಬಣ್ಣದ ಬಲೂನುಗಳು, ಹೃದಯದ ಚಿಹ್ನೆಗಳೊಂದಿಗೆ ವಿಶೇಷವಾಗಿ ಅಲಂಕೃತಗೊಂಡಿವೆ. ಸ್ಯಾಂಕಿ ರಸ್ತೆ, ಕೋರಮಂಗಲ, ಇಂದಿರಾನಗರ, ವೈಟ್‌ಫೀಲ್ಡ್‌, ಎಚ್‌.ಎಸ್‌.ಆರ್‌ ಬಡಾವಣೆ, ದೊಮ್ಮಲೂರು, ಅಶೋಕ ನಗರ, ಹಳೇ ವಿಮಾನ ನಿಲ್ದಾಣ ರಸ್ತೆ, ಎಂ.ಜಿ. ರಸ್ತೆ, ಬ್ರಿಗೇಡ್‌ ರಸ್ತೆ, ಚರ್ಚ್‌ ಸ್ಟ್ರೀಟ್‌, ಮಲ್ಲೇಶ್ವರ ಸೇರಿದಂತೆ ನಗರದ ನಾನಾ ಐಷಾರಾಮಿ ಹೋಟೆಲ್‌ಗಳು, ಪಬ್‌ ಹಾಗೂ ಡಿಸ್ಕೋಥೆಕ್‌ಗಳಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಗುರುವಾರ ಹೋಟೆಲ್‌ಗಳಲ್ಲಿ ಡಿಜೆ ನೈಟ್ಸ್‌, ಕ್ಯಾಂಡಲ್‌ಲೈಟ್‌ ಡಿನ್ನರ್‌, ಮ್ಯೂಸಿಕ್‌ ಲೈಟ್‌ ಡಿನ್ನರ್‌, ಹೆಲ್ದಿ ಡಿನ್ನರ್‌ ನಡೆಯಲಿವೆ. ಇವುಗಳಿಗೆ ಕೆಲವರು ಮುಂಗಡ ಬುಕ್ಕಿಂಗ್‌ ಮಾಡಿಕೊಂಡು ಹೋದರೆ, ಮತ್ತೆ ಕೆಲವರು ನೇರವಾಗಿಯೂ ಹೋಟೆಲ್‌ಗಳಿಗೆ ತೆರಳಲು ಸಜ್ಜಾಗಿದ್ದಾರೆ.


ಪ್ರೇಮಿಗಳಿಗೆ ವಾಟಾಳ್‌ ನಾಗರಾಜ್‌ ಬೆಂಬಲ

ಪ್ರತಿ ವರ್ಷದಂತೆ ಈ ವರ್ಷವೂ ಪ್ರೇಮಿಗಳಿಗೆ ಕನ್ನಡ ಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಅವರು ಬೆಂಬಲ ಸೂಚಿಸಿದ್ದಾರೆ.

''ಪ್ರೇಮಿಗಳ ಸಾವಿನ ಸಂಖ್ಯೆ ಹೆಚ್ಚಾಗಿರುವ ಈ ಪರಿಸ್ಥಿತಿಯಲ್ಲಿ ಅವರ ಬೆಂಬಲಕ್ಕೆ ನಿಲ್ಲಬೇಕಾದ ಕೆಲಸವನ್ನು ನಮ್ಮ ಸಂಘಟನೆಗಳು ಮಾಡಬೇಕು. ಆ ಹಿನ್ನೆಲೆಯಲ್ಲಿ ಪ್ರೇಮಿಗಳ ದಿನದಂದು ಬೆಳಗ್ಗೆ 10.30ಕ್ಕೆ ಕಬ್ಬನ್‌ ಉದ್ಯಾನ ಬಳಿ ಗುಲಾಬಿ ಹೂವನ್ನು ರಥದಲ್ಲಿ ಇಟ್ಟು ಎಂ.ಜಿ ರಸ್ತೆ, ಬ್ರಿಗೇಡ್‌ ರಸ್ತೆ ಸುತ್ತ ಮೆರವಣಿಗೆ ಮಾಡಲಾಗುತ್ತದೆ. ನಂತರ ಸಾವಿರಾರು ಗುಲಾಬಿಗಳನ್ನು ಸಾರ್ವಜನಿಕರಿಗೆ ವಿತರಿಸಲಾಗುವುದು'' ಎಂದು ವಾಟಾಳ್‌ ನಾಗರಾಜ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ