ಆ್ಯಪ್ನಗರ

ಕರ್ನಾಟಕ ಬಂದ್‌ಗೆ ಸಗಟು ವರ್ತಕರ ಬೆಂಬಲ..! ಬೆಂಗಳೂರಲ್ಲಿ ಸೋಮವಾರ ತರಕಾರಿ, ಹಣ್ಣು ಸಿಗುತ್ತಾ..?

ಎಪಿಎಂಸಿ ಮತ್ತು ಭೂ ಸುಧಾರಣೆ ಕಾಯಿದೆ ವಿರೋಧಿಸಿ ರೈತ ಸಂಘಟನೆಗಳು ಸೋಮವಾರ ಕರೆ ನೀಡಿರುವ ಬಂದ್‌ಗೆ ಕಲಾಸಿಪಾಳ್ಯ ಮಾರುಕಟ್ಟೆಯ ತರಕಾರಿ ಹಾಗೂ ಹಣ್ಣು ಸಗಟು ವ್ಯಾಪಾರಿಗಳ ಸಂಘ ಬೆಂಬಲ ಸೂಚಿಸಿದೆ.

Vijaya Karnataka Web 27 Sep 2020, 11:29 pm
ಬೆಂಗಳೂರು: ಎಪಿಎಂಸಿ ಮತ್ತು ಭೂ ಸುಧಾರಣೆ ಕಾಯಿದೆ ವಿರೋಧಿಸಿ ರೈತ ಸಂಘಟನೆಗಳು ಸೋಮವಾರ ಕರೆ ನೀಡಿರುವ ಬಂದ್‌ಗೆ ಕಲಾಸಿಪಾಳ್ಯ ಮಾರುಕಟ್ಟೆಯ ತರಕಾರಿ ಹಾಗೂ ಹಣ್ಣು ಸಗಟು ವ್ಯಾಪಾರಿಗಳ ಸಂಘ ಬೆಂಬಲ ಸೂಚಿಸಿದೆ.
Vijaya Karnataka Web vegetable and fruit sellers giving support to karnataka bandh
ಕರ್ನಾಟಕ ಬಂದ್‌ಗೆ ಸಗಟು ವರ್ತಕರ ಬೆಂಬಲ..! ಬೆಂಗಳೂರಲ್ಲಿ ಸೋಮವಾರ ತರಕಾರಿ, ಹಣ್ಣು ಸಿಗುತ್ತಾ..?


ಪ್ರತಿಭಟನೆಗೆ ನಮ್ಮ ಮಾರುಕಟ್ಟೆ ವ್ಯಾಪಾರಸ್ಥರು ಸಂಪೂರ್ಣ ಬೆಂಬಲ ನೀಡುತ್ತಿದ್ದೇವೆ. ಈಗಾಗಲೇ ದಾಸನಪುರ, ಯಶವಂತಪುರ ಮಾರುಕಟ್ಟೆಯ ವ್ಯಾಪಾರಿಗಳು ಬೆಂಬಲ ನೀಡಲು ಸೂಚಿಸಿದ್ದಾರೆ. ಅದೇ ರೀತಿ ನಾವೂ ಬೆಂಬಲ ನೀಡುತ್ತೇವೆ. ಹೀಗಾಗಿ, ಸೋಮವಾರ ತರಕಾರಿ ಸಗಟು ವ್ಯಾಪಾರ ಇರುವುದಿಲ್ಲ. ಪುರಭವನ ಬಳಿ ನಡೆಯುವ ಪ್ರತಿಭಟನೆ ಮತ್ತು ಜಾಥಾದಲ್ಲಿ ನಮ್ಮೆಲ್ಲ ವ್ಯಾಪಾರಸ್ಥರು ಬೆಳಗ್ಗೆ 10 ಗಂಟೆಗೆ ಪಾಲ್ಗೊಳ್ಳಲು ಕರೆ ನೀಡಲಾಗಿದೆ,'' ಎಂದು ಸಂಘದ ಅಧ್ಯಕ್ಷ ಆರ್‌.ವಿ.ಗೋಪಿ ತಿಳಿಸಿದ್ದಾರೆ.

ಹೋಟೆಲ್‌ಗಳಿಂದ ನೈತಿಕ ಬೆಂಬಲ ಮಾತ್ರ
ಇನ್ನು, ರೈತರ ಹೋರಾಟಕ್ಕೆ ಹೋಟೆಲ್‌ ಸಂಘ ನೈತಿಕ ಬೆಂಬಲ ಮಾತ್ರ ನೀಡುತ್ತಿದೆ. ಬೆಂಗಳೂರಿನಲ್ಲಿ ಸುಮಾರು 40 ಸಾವಿರ ಮಂದಿ ಕೋವಿಡ್‌ ರೋಗಿಗಳಿದ್ದು, ಇವರಿಗೆ ನಾವು ಊಟ, ತಿಂಡಿ ತಯಾರಿಸಿ ಕೊಡಬೇಕಿದೆ. ಆದರೆ ರೈತರು ಮತ್ತು ಹೋಟೆಲ್‌ ಮಾಲೀಕರಿಗೂ ಅವಿನಾಭಾವ ಸಂಬಂಧವಿದೆ. ಹೀಗಾಗಿ, ನಾವು ಹೋಟೆಲ್‌ಗಳನ್ನು ಸ್ಥಗಿತಗೊಳಿಸದೆ ನೈತಿಕ ಬೆಂಬಲ ನೀಡುತ್ತಿದ್ದೇವೆ,'' ಎಂದು ಬೆಂಗಳೂರು ಮಹಾನಗರ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್‌ ತಿಳಿಸಿದರು.

ಕರ್ನಾಟಕ ಬಂದ್: ಸೋಮವಾರ ಎಂದಿನಂತೆ ಸರಕಾರಿ ಬಸ್ ಸೇವೆ ಎಂದ ಡಿಸಿಎಂ ಲಕ್ಷ್ಮಣ್ ಸವದಿ

ಹೋರಾಟಕ್ಕೆ ಬೆಂಬಲ ಇಲ್ಲ
ಬಹುತೇಕ ಸಂಘ-ಸಂಸ್ಥೆಗಳು ರೈತರ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಹೇಳಿವೆ. ಆದರೆ, ಎಪಿಎಂಸಿ ಹಮಾಲಿ ಮತ್ತು ಗುಮಾಸ್ತರ ಸಂಘ, ಅಖಿಲ ಕರ್ನಾಟಕ ಕಾರ್ಮಿಕರ ವೇದಿಕೆ, ಎಪಿಎಂಸಿ ಯಾರ್ಡ್‌ ವರ್ಕರ್ಸ್ ಯೂನಿಯನ್‌ ಎಪಿಎಂಸಿ ವಿಧೇಯಕದ ಪರವಾಗಿ ನಿಂತಿವೆ. ವಿಧೇಯಕವನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ರಾಜ್ಯ ಸರಕಾರ ಕಾಯಿದೆ ಕುರಿತಂತೆ ಜನರಲ್ಲಿ ಅರಿವು ಮೂಡಿಸಬೇಕಿತ್ತು. ಆದರೆ, ಆ ಕಾರ್ಯ ಮಾಡದೆ ಇಷ್ಟೆಲ್ಲ ಸಮಸ್ಯೆಯಾಗುತ್ತಿದೆ. ಹೀಗಾಗಿ, ನಾವು ಹೋರಾಟ ಬೆಂಬಲಿಸುವುದಿಲ್ಲ ಎಂದು ಎಪಿಎಂಸಿ ಯಾರ್ಡ್‌ ವರ್ಕರ್ಸ್ ಯೂನಿಯನ್‌ ಅಧ್ಯಕ್ಷ ಪರಮೇಶ್‌ ಹೇಳಿದರು.

ಸೋಮವಾರ ಕರ್ನಾಟಕ ಬಂದ್: ಏನಿರುತ್ತೆ, ಏನಿರಲ್ಲ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ