ಆ್ಯಪ್ನಗರ

ಬೇಸಿಗೆ ಆರಂಭದಲ್ಲೇ ಗುಡ್‌ ನ್ಯೂಸ್ ಕೊಟ್ಟ ತರಕಾರಿ..! ಗ್ರಾಹಕರಿಗಿಲ್ಲ ಬೆಲೆ ಏರಿಕೆ ಬಿಸಿ..!

ಬೆಂಗಳೂರು: ಬೇಸಿಗೆ ಆರಂಭದಲ್ಲಿ ಸಾಮಾನ್ಯವಾಗಿ ಎಲ್ಲಾ ಬಗೆಯ ತರಕಾರಿಗಳ ದರ ಹೆಚ್ಚಾಗುತ್ತದೆ. ಆದರೆ ಈ ಬಾರಿ ಅದಕ್ಕೆ ತದ್ವಿರುದ್ಧವಾಗಿದೆ. ಬೀನ್ಸ್‌, ಟೊಮೇಟೊ, ನುಗ್ಗೆಕಾಯಿ, ಹಾಗಲಕಾಯಿ, ಮೂಲಂಗಿ ಸೇರಿದಂತೆ ಎಲ್ಲಾ ಬಗೆಯ ತರಕಾರಿಗಳ ದರದಲ್ಲಿ ಇಳಿಕೆಯಾಗಿದೆ.

Vijaya Karnataka Web 16 Feb 2020, 7:21 pm
ಬೆಂಗಳೂರು: ಬೇಸಿಗೆ ಆರಂಭದಲ್ಲಿ ಸಾಮಾನ್ಯವಾಗಿ ಎಲ್ಲಾ ಬಗೆಯ ತರಕಾರಿಗಳ ದರ ಹೆಚ್ಚಾಗುತ್ತದೆ. ಆದರೆ ಈ ಬಾರಿ ಅದಕ್ಕೆ ತದ್ವಿರುದ್ಧವಾಗಿದೆ. ಬೀನ್ಸ್‌, ಟೊಮೇಟೊ, ನುಗ್ಗೆಕಾಯಿ, ಹಾಗಲಕಾಯಿ, ಮೂಲಂಗಿ ಸೇರಿದಂತೆ ಎಲ್ಲಾ ಬಗೆಯ ತರಕಾರಿಗಳ ದರದಲ್ಲಿ ಇಳಿಕೆಯಾಗಿದೆ.
Vijaya Karnataka Web vegetables price very low in bengaluru coriander leaves costly
ಬೇಸಿಗೆ ಆರಂಭದಲ್ಲೇ ಗುಡ್‌ ನ್ಯೂಸ್ ಕೊಟ್ಟ ತರಕಾರಿ..! ಗ್ರಾಹಕರಿಗಿಲ್ಲ ಬೆಲೆ ಏರಿಕೆ ಬಿಸಿ..!



​ಗ್ರಾಹಕರಿಗೆ ಇದು ಗುಡ್ ನ್ಯೂಸ್..!

ಕೊತ್ತಂಬರಿ ಸೊಪ್ಪು ಹೊರತುಪಡಿಸಿದರೆ, ಇತರೆ ಎಲ್ಲಾ ಬಗೆಯ ಸೊಪ್ಪುಗಳೂ ಕೂಡ ಗ್ರಾಹಕರ ಕೈಗೆಟಕುವಂತಿವೆ. ಆಗಸ್ಟ್‌-ಸೆಪ್ಟೆಂಬರ್‌ಗೆ ಹೋಲಿಸಿದರೆ ಹಣ್ಣುಗಳ ದರವೂ ಹೆಚ್ಚಿಲ್ಲ. ಹೀಗಾಗಿ ಗ್ರಾಹಕರಿಗೆ ಬೇಸಿಗೆಯ ಬಿಸಿಯಿಲ್ಲ. ಈ ಅವಧಿಯಲ್ಲಿ ಎಲ್ಲೆಡೆ ಅಂತರ್ಜಲ ಮಟ್ಟ ಕುಸಿದು, ಬೆಳೆಗಳಿಗೆ ನೀರು ಸಾಕಾಗದೆ ಬೆಳೆ ಒಣಗುತ್ತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಬೇಸಿಗೆ ಸಮೀಪಿಸುತ್ತಿದ್ದಂತೆಯೇ ಪವರ್‌ ಕಟ್‌ ಆರಂಭವಾಗುತ್ತದೆ. ಆಗ ತೋಟಗಾರಿಕೆ ಬೆಳೆಗಳಿಗೆ ನೀರು ಹರಿಸಲು ಸಮಸ್ಯೆ ಉಂಟಾಗಿ ಬೆಳೆ ಒಣಗುತ್ತದೆ. ಇದರಿಂದ ಇಳುವರಿ ಕಡಿಮೆಯಾಗುತ್ತದೆ.

​ಮದುವೆ ಸೀಸನ್ ಇದ್ರೂ ನೋ ಪ್ರಾಬ್ಲಂ..!

ಮದುವೆ ಸೀಸನ್‌ಗಳಿರುವುದರಿಂದ ತರಕಾರಿ, ಸೊಪ್ಪು, ಹಣ್ಣುಗಳಿಗೆ ಸಹಜವಾಗಿ ಬೇಡಿಕೆಯಿರುತ್ತದೆ. ಇಳುವರಿ, ಉತ್ಪಾದನೆಯಿಲ್ಲದಿದ್ದರೆ ಬೆಲೆಗಳು ಗಗನಕ್ಕೇರುತ್ತವೆ. ಆದರೆ ಈ ಬಾರಿ ಕರ್ನಾಟಕ ಮಾತ್ರವಲ್ಲದೆ, ತಮಿಳುನಾಡಿನಿಂದ ನುಗ್ಗೆಕಾಯಿ, ಮಹಾರಾಷ್ಟ್ರದಿಂದ ಟೊಮೇಟೊ, ಈರುಳ್ಳಿ ಹೀಗೆ ನಾನಾ ರಾಜ್ಯಗಳಿಂದ ಬೇಡಿಕೆಗೆ ತಕ್ಕಂತೆ ತರಕಾರಿಗಳು ಪೂರೈಕೆಯಾಗುತ್ತಿವೆ. ಹೀಗಾಗಿ ಬೆಲೆಗಳಲ್ಲಿ ಏರಿಕೆಯಿಲ್ಲ. ಬಾಳೆಹಣ್ಣು, ಕಿತ್ತಳೆ ಮತ್ತಿತರ ಹಣ್ಣುಗಳ ದರದಲ್ಲೂ ಹೆಚ್ಚು ಏರಿಕೆಯಿಲ್ಲ.

​ಬಹು ಬೇಡಿಕೆಯ ಹಾಗಲಕಾಯಿ ದರ ಕುಸಿತ

ನಗರದಲ್ಲಿ ಸಕ್ಕರೆ ಕಾಯಿಲೆಯುಳ್ಳವರು ಹೆಚ್ಚು. ಈಗಾಗಲೇ ಕಾಯಿಲೆ ಬಂದಿರುವವರು ಹಾಗೂ ಕೆಲವರು ಮುಂಜಾಗ್ರತಾ ಕ್ರಮವಾಗಿ ಊಟದಲ್ಲಿ ಹೆಚ್ಚಾಗಿ ಹಾಗಲಕಾಯಿಯನ್ನು ಬಳಸುತ್ತಾರೆ. ಇದು ಸಕ್ಕರೆ ಕಾಯಿಲೆ ಬರದಂತೆ ಹಾಗೂ ಬಂದರೂ ನಿಯಂತ್ರಣದಲ್ಲಿಡಲು ಸಹಕಾರಿಯಾಗುತ್ತದೆ. ಇಂತಹ ಬಹುಬೇಡಿಕೆಯ ಹಾಗಲಕಾಯಿ ಕೆಲ ತಿಂಗಳ ಹಿಂದೆ ಕೆ.ಜಿ.ಗೆ 70-80 ರೂ.ವರೆಗೆ ಇತ್ತು. ಇದೀಗ ಬರಿ 28 ರೂ.ಗೆ ಇಳಿದಿದೆ.

​'ಬೇಸಿಗೆ ತರಕಾರಿ'ಗಳ ದರವೂ ಕಡಿಮೆ..!

ಬೇಸಿಗೆಯಲ್ಲಿ ಯಥೇಚ್ಛವಾಗಿ ಬಳಸುವ ಸೌತೆಕಾಯಿ, ಮೂಲಂಗಿ ತರಕಾರಿಗಳು ಸಹ ಇಳಿಕೆಯಾಗಿವೆ. ಹುರಳಿಕಾಯಿಯಂತೂ ದಿನದಿಂದ ದಿನಕ್ಕೆ ಇಳಿಯುತ್ತಿದ್ದು, ಇದೀಗ ಕೆ.ಜಿ.ಗೆ 29 ರೂ.ಗೆ ತಲುಪಿದೆ. ಬಿಳಿ ಬದನೆಕಾಯಿ 50 ರೂ. ಇದ್ದರೆ, ಗುಂಡು ಬದನೆಕಾಯಿ 27 ರೂ. ಇದೆ. ಗೋರಿಕಾಯಿ, ಕ್ಯಾರಟ್‌, ಬೆಂಡೆ, ತೊಂಡೆ ಹೀಗೆ ಹಲವು ತರಕಾರಿಗಳ ದರದಲ್ಲಿ ಇಳಿಕೆಯಾಗಿದೆ.

​ಏರಿದ ಕೊತ್ತಂಬರಿ ಸೊಪ್ಪು

ಕೊತ್ತಂಬರಿ ಸೊಪ್ಪು ಕೆಲವು ದಿನಗಳಿಂದ ಏರುಗತಿಯಲ್ಲಿ ಸಾಗುತ್ತಿದೆ. ಇದೀಗ ಕೆ.ಜಿ. ಸೊಪ್ಪು 70 ರೂ. ಇದ್ದರೆ, ಒಂದು ಕಂತೆಗೆ 30 ರೂ. ಇದೆ. ಮೆಂತ್ಯ ಸೊಪ್ಪು ತುಸು ಹೆಚ್ಚಾಗಿದೆ. ಉಳಿದಂತೆ ಸಬ್ಬಕ್ಕಿ ಸೊಪ್ಪು, ಪಾಲಕ್‌ ಸೊಪ್ಪು, ದಂಟು, ಪುದೀನ ಮತ್ತಿತರ ಸೊಪ್ಪುಗಳು ಗ್ರಾಹಕರಿಗೆ ಹೊರೆಯಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ