ಆ್ಯಪ್ನಗರ

ಸಾಂಗವಾಗಿ ನಡೆದ ವೇಣುಗೋಪಾಲ ಸ್ವಾಮಿ ಹಾಗೂ ಶ್ರೀರಾಮ ದೇವರ ಕಲ್ಯಾಣೋತ್ಸವ

ಶ್ರೀರಾಮ ವೇಣುಗೋಪಾಲ ಕೃಷ್ಣಸ್ವಾಮಿ ಬ್ರಹ್ಮರಥೋತ್ಸವ ಅಂಗವಾಗಿ ನಗರದ ಶ್ರೀ ಗಾಳಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಗರುಡೋತ್ಸವ ಹಾಗೂ ಕಲ್ಯಾಣೋತ್ಸವ ಸಾಂಗವಾಗಿ ನಡೆಯಿತು.

Vijaya Karnataka 13 Apr 2019, 5:00 am
ಬೆಂಗಳೂರು: ಶ್ರೀರಾಮ ವೇಣುಗೋಪಾಲ ಕೃಷ್ಣಸ್ವಾಮಿ ಬ್ರಹ್ಮರಥೋತ್ಸವ ಅಂಗವಾಗಿ ನಗರದ ಶ್ರೀ ಗಾಳಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಗರುಡೋತ್ಸವ ಹಾಗೂ ಕಲ್ಯಾಣೋತ್ಸವ ಸಾಂಗವಾಗಿ ನಡೆಯಿತು.
Vijaya Karnataka Web GALI ANJANEYA


ಮುಂಜಾನೆಯಿಂದಲೇ ದೇವಾಲಯದಲ್ಲಿ ನಾನಾ ಪೂಜಾ ಕೈಂಕರ್ಯಗಳು ನಡೆದವು. ಸ್ವಾಮಿಗೆ ಅಭಿಷೇಕ, ವಿಶೇಷ ಅಲಂಕಾರ ಹಾಗೂ ಪೂಜೆ ಮಾಡಲಾಯಿತು. ಈ ವೇಳೆ ದೇವಾಲಯದ ಆವರಣದಲ್ಲಿ ಪ್ರಾಕಾರೋತ್ಸವ ನಡೆಯಿತು. ಮಧ್ಯಾಹ್ನ ವಿವಾಹ ಸಂದರ್ಭದಲ್ಲಿ ವರನಿಗೆ ನಡೆಯುವ ರೀತಿಯಲ್ಲಿಯೇ ಕಾಶಿಯಾತ್ರೆ ಉತ್ಸವ ನಡೆಯಿತು. ಸಂಜೆ ಹೂಗಳಿಂದ ಅಲಂಕೃತಗೊಂಡ ಗರುಡ ವಾಹನದಲ್ಲಿ ವೇಣುಗೋಪಾಲ ಹಾಗು ರಾಮಸ್ವಾಮಿಯ ಗರುಡೋತ್ಸವದ ನಂತರ ಕಲ್ಯಾಣೋತ್ಸವದಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಸ್ವಾಮಿಯ ಅಲಂಕಾರ ಹಾಗೂ ಕಲ್ಯಾಣೋತ್ಸವವನ್ನು ಕಣ್ತುಂಬಿಕೊಂಡರು.

ಶ್ರೀರಾಮನವಿ ಅಂಗವಾಗಿ ಶನಿವಾರ ಬೆಳಗ್ಗೆ ಶ್ರೀರಾಮ ದೇವರಿಗೆ ಅಭಿಷೇಕ, ಅಲಂಕಾರ, ಅರವಂಟಿಗೆ ಹಾಗೂ ಉತ್ಸವ ನಡೆಯಲಿದೆ. ಮಧ್ಯಾಹ್ನ ಶ್ರೀರಾಮರಥೋತ್ಸವ ಸಾಗಲಿದೆ. ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಸಂಜೆ ಗಜೇಂದ್ರ ಮೋಕ್ಷ ಮತ್ತು ಗಜೇಂದ್ರ ವಾಹನೋತ್ಸವ, ಹಂಸವಾಹನೋತ್ಸವ ರಾತ್ರಿ ಶ್ರೀರಾಮದೇವರಿಗೆ ಪುಷ್ಪಮಂಟಪೋತ್ಸವ ನಡೆಯಲಿದೆ. ರಾಮನವಮಿ ಅಂಗವಾಗಿ ನಗರದ ನಾನಾ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದು, ಈ ನಿಟ್ಟಿನಲ್ಲಿ ವಾಹನ ಸಂಚಾರ ಮಾರ್ಗ ಬದಲಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ