ಆ್ಯಪ್ನಗರ

ದಲಿತ ಶಾಸಕನ ಮನೆ ಮೇಲಿನ ದಾಳಿಗೆ ಖಂಡನೆ: ಪುಂಡರಿಂದಲೇ ನಷ್ಟ ವಸೂಲಿಗೆ ವಿಎಚ್‌ಪಿ ಆಗ್ರಹ..!

ಬೆಂಗಳೂರಿನ ಕೆಜಿ ಹಳ್ಳಿ, ಡಿಜೆ ಹಳ್ಳಿ ಹಾಗೂ ಕಾವಲ್ ಭೈರಸಂದ್ರ ವ್ಯಾಪ್ತಿಯಲ್ಲಿ ನಡೆದ ಗಲಭೆಗೆ ವಿಎಚ್‌ಪಿ ಆಕ್ರೋಶ ವ್ಯಕ್ತಪಡಿಸಿದೆ. ಗಲಭೆಗೆ ಕಾರಣರಾದವರಿಂದಲೇ ಹಾನಿಯ ನಷ್ಟ ಭರಿಸುವಂತೆ ಆಗ್ರಹಿಸಿದ್ದಾರೆ. ದಲಿತ ಶಾಸಕನ ಮೇಲಿನ ದಾಳಿಗೂ ಆಕ್ರೋಶ ವ್ಯಕ್ತಪಡಿಸಿದೆ.

Vijaya Karnataka Web 13 Aug 2020, 7:41 pm

ಹೈಲೈಟ್ಸ್‌:

  • ಗಲಭೆ ಮಾಡಿದವರಿಂದಲೇ ನಷ್ಟದ ಹಣ ತುಂಬಿಸಿಕೊಳ್ಳಿ
  • ಗಲಭೆಯಲ್ಲಿ ನೊಂದವರಿಗೆ ದೊಂಬಿಕೋರರಿಂದ ಸಂಗ್ರಹಿಸಿದ ಹಣವನ್ನೇ ಪರಿಹಾರವಾಗಿ ನೀಡಿ
  • ಸರ್ಕಾರದ ಆಸ್ತಿ ಪಾಸ್ತಿ ಹಾನಿ ಮಾಡಿದವರೇ ನಷ್ಟ ಭರಿಸಲಿ: ವಿಎಚ್‌ಪಿ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ಬೆಂಗಳೂರು: ರಾಜಧಾನಿಯ ವಿಎಚ್‌ಪಿ ಹಾಗೂ ಭಜರಂಗ ದಳ ಕಾರ್ಯಕರ್ತರು, ಬೆಂಗಳೂರಿನಲ್ಲಿ ನಡೆದ ಗಲಭೆ ಖಂಡಿಸಿ ಪ್ರತಿಭಟನೆ ನಡೆಸಿದರು.
ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ದೊಂಬಿಗೆ ಆಕ್ರೋಶ ವ್ಯಕ್ತಪಡಿಸಿದ ಭಜರಂಗದಳ ಕಾರ್ಯಕರ್ತರು, ಕೊರೊನಾ ವೈರಸ್‌ ಅಬ್ಬರಿಸುತ್ತಿರುವ ಸಂದರ್ಭದಲ್ಲೂ ಕಾನೂನು ಕೈಗೆತ್ತಿಕೊಂಡು ಪುಂಡಾಟ ಮೆರೆದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಯ ಒಳಸುಳಿ..! ಪೊಲೀಸರ ಮೇಲೆ ನಡೆದದ್ದು ಗೆರಿಲ್ಲಾ ದಾಳಿ..!

ರಾಜಧಾನಿ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಸೇರಿದ ಭಜರಂಗದಳ ಕಾರ್ಯಕರ್ತರಿಗೆ ವಿಶ್ವ ಹಿಂದೂ ಪರಿಷತ್ ಸೇರಿದಂತೆ ಹಲವು ಹಿಂದೂ ಪರ ಸಂಘಟನೆಗಳು ಸಾಥ್ ನೀಡಿದವು. ಮಂಗಳವಾರ ರಾತ್ರಿ ನಡೆದ ಗಲಭೆ, ಹಿಂದೂಗಳ ಮೇಲೆ ನಡೆದ ದಾಳಿ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ದಲಿತ ಶಾಸಕನ ಮನೆ ಮೇಲೆ ನಡೆದ ದಾಳಿಯನ್ನೂ ಪ್ರತಿಭಟನಾಕಾರರು ಖಂಡಿಸಿದರು.

ಮತ್ತದೇ ಚಾಳಿ..! ಕೆಜಿ ಹಳ್ಳಿ ಗಲಭೆಯಲ್ಲೂ ಪಿಎಫ್‌ಐ, ಎಸ್‌ಡಿಪಿಐ ಹೆಸರು..! 'ಶಾಶ್ವತ' ಪರಿಹಾರ ಯಾವಾಗ..?

ಈ ವೇಳೆ ಮಾತನಾಡಿದ ವಿಶ್ವ ಹಿಂದೂ ಪರಿಷತ್ ನಾಯಕ ಕೇಶವ ಹೆಗ್ಡೆ, ಸರ್ಕಾರದ ಆಸ್ತಿಪಾಸ್ತಿ ಹಾನಿ ಮಾಡಿದ ದುಷ್ಕರ್ಮಿಗಳಿಂದಲೇ ನಷ್ಟದ ಹಣವನ್ನು ಸಂಗ್ರಹಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು. ಅಷ್ಟೇ ಅಲ್ಲ, ಗಲಭೆಯಲ್ಲಿ ಹಾನಿಗೊಳಗಾದವರಿಗೆ ಇದೇ ಹಣದಲ್ಲಿ ಪರಿಹಾರವನ್ನೂ ನೀಡಬೇಕು ಎಂದು ಆಗ್ರಹಿಸಿದರು.

ದೇಗುಲಕ್ಕಾಗಿ ಜೀವ ಪಣಕ್ಕಿಟ್ಟ ಈ ಮುಸ್ಲಿಮರು ಕೆಜಿ ಹಳ್ಳಿ ಗಲಭೆಕೋರಿಗೆ ಮಾದರಿಯಾಗಲಿ..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ