ಆ್ಯಪ್ನಗರ

ಆರ್‌.ಆರ್ ನಗರ ಮತದಾರರಿಗೆ ಮತ್ತೆ ಬಿಟ್ಟಿ ಉಡುಗೊರೆ ಬೇಕಂತೆ!

ಅಕ್ರಮ ವೋಟರ್ ಐಡಿ ಹಗರಣ ಸಂಬಂಧ ಮೇ 12 ರಂದು ನಡೆಯಬೇಕಿದ್ದ ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆ ಮೇ 28ಕ್ಕೆ ನಡೆಯಲಿದೆ ಎನ್ನುವ ಸಂಗತಿ ಎಲ್ಲರಿಗೂ ಗೊತ್ತಿದೆ.

TIMESOFINDIA.COM 26 May 2018, 12:18 pm
ಬೆಂಗಳೂರು: ಅಕ್ರಮ ವೋಟರ್ ಐಡಿ ಹಗರಣ ಸಂಬಂಧ ಮೇ 12 ರಂದು ನಡೆಯಬೇಕಿದ್ದ ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆ ಮೇ 28ಕ್ಕೆ ನಡೆಯಲಿದೆ ಎನ್ನುವ ಸಂಗತಿ ಎಲ್ಲರಿಗೂ ಗೊತ್ತಿದೆ. ಆದರೆ, ಇಲ್ಲಿನ ಮತದಾರರು ತಮ್ಮ ಅಮೂಲ್ಯ ಮತ ಚಲಾಯಿಸಲು ಅಭ್ಯರ್ಥಿಗಳು ಬಳಿ ಎರಡನೇ ಬಾರಿಯೂ ಬಿಟ್ಟಿ ಉಡುಗೊರೆ ಕೇಳುತ್ತಿದ್ದಾರಂತೆ. ಚುನಾವಣಾ ಪ್ರಚಾರದ ಮ್ಯಾನೇಜರ್‌ಗಳಿಗೆ ಗುಪ್ತ ಮೂಲಗಳು ಈ ಮಾಹಿತಿ ನೀಡಿವೆ.
Vijaya Karnataka Web vote


ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಈ ಕ್ಷೇತ್ರದ ಪ್ರಮುಖ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಸಾಕಷ್ಟು ಪ್ರಮಾಣದಲ್ಲಿ ಹಣ ಹಾಗೂ ಉಡುಗೊರೆಗಳನ್ನು ಹಂಚಿದ ಆರೋಪಗಳು ಕೇಳಿಬಂದಿದ್ದವು. ಈಗ ಮತದಾರರು ಇನ್ನೊಮ್ಮೆ ಹಣ ಹಾಗೂ ಉಡುಗೊರೆಗಳನ್ನು ಕೇಳುತ್ತಿರುವುದು ಕಣದಲ್ಲಿರುವ ಅಭ್ಯರ್ಥಿಗಳಿಗೆ ತಲೆನೋವಾಗಿ ಪರಿಣಮಿಸಿದೆಯಂತೆ.

ಚುನಾವಣೆ ವೇಳೆಯಲ್ಲಿ ಎಲ್ಲ ಪಕ್ಷದವರು ಮತದಾರರಿಗೆ ಹಣ, ಉಡುಗೊರೆ ಹಂಚುತ್ತಾರೆ ಎನ್ನುವುದು ಗೊತ್ತಿರುವ ಸತ್ಯ. ಸಾಮಾನ್ಯವಾಗಿ ಇದು ಚುನಾವಣೆಯ ಮುನ್ನಾದಿನ ನಡೆಯುತ್ತದೆ. ಆದರೆ ಈ ಬಾರಿ ಆರ್‌ಆರ್‌ ನಗರ ಕ್ಷೇತ್ರದಲ್ಲಿ ಎರಡನೇ ಬಾರಿ ಹಣ, ಉಡುಗೊರೆ ಹಂಚುವ ಸ್ಥಿತಿ ನಿರ್ಮಾಣವಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ರಾಷ್ಟ್ರೀಯ ಪಕ್ಷದ ಕಾರ್ಯಕರ್ತರೊಬ್ಬರು ಹೇಳಿಕೊಂಡಿದ್ದಾರೆ.

ಕ್ಷೇತ್ರದ ಮತದಾರರು ಮತ ಚಲಾಯಿಸಲು ಹಣ ಹಾಗೂ ಉಡುಗೊರೆಗೆ ಬೇಡಿಕೆ ಇಡುತ್ತಿದ್ದಾರೆ ಎಂದು ಮತ್ತೊಂದು ಪಕ್ಷದ ಕಾರ್ಯಕರ್ತರು ದೃಢಪಡಿಸಿದ್ದಾರೆ. 'ಅಭ್ಯರ್ಥಿ ಪರ ಎರಡನೇ ಬಾರಿ ಪ್ರಚಾರ ನಡೆಸಲು ಕಾರ್ಯಕರ್ತರು ಸಹ ಹೆಚ್ಚಿನ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ' ಇಂದು ಅವರು ಹೇಳಿಕೊಂಡಿದ್ದಾರೆ.

ಕ್ಷೇತ್ರದಲ್ಲಿ ಕಳೆದ ಎರಡು ವಾರಗಳಲ್ಲಿ ಚುನಾವಣಾಧಿಕಾರಿಗಳ ತಂಡ ಸಾಕಷ್ಟು ಪ್ರಮಾಣದಲ್ಲಿ ಮತದಾರರಿಗೆ ಹಂಚಲು ತಂದಿದ್ದ ಉಡುಗೊರೆಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಮತದಾರರು ಮತ ನೀಡಬೇಕೆಂದರೆ ಉಡುಗೊರೆ ನೀಡಲೇ ಬೇಕೆಂದು ಪಟ್ಟು ಹಿಡಿಯುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ