ಆ್ಯಪ್ನಗರ

ವಿಮಾನದ ಊಟದಲ್ಲಿ ಹುಳು ಪತ್ತೆ: ಟ್ವೀಟ್ ದೂರು

ಮುಂಬಯಿನಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಏರ್‌ ಇಂಡಿಯಾ ವಿಮಾನದಲ್ಲಿ ನೀಡಲಾಗಿದ್ದ ಊಟದಲ್ಲಿ ಹುಳ ಪತ್ತೆಯಾಗಿದ್ದು, ಪ್ರಯಾಣಿಕರೊಬ್ಬರು ಟ್ವಿಟರ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

Vijaya Karnataka 2 Sep 2018, 10:03 am
ಬೆಂಗಳೂರು: ಮುಂಬಯಿನಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಏರ್‌ ಇಂಡಿಯಾ ವಿಮಾನದಲ್ಲಿ ನೀಡಲಾಗಿದ್ದ ಊಟದಲ್ಲಿ ಹುಳ ಪತ್ತೆಯಾಗಿದ್ದು, ಪ್ರಯಾಣಿಕರೊಬ್ಬರು ಟ್ವಿಟರ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
Vijaya Karnataka Web insect in flight


ಮಾರುಕಟ್ಟೆ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ರಾಜ್‌ ಸೇನಾಪತಿ ಎಂಬುವವರು, ಆ.24ರಂದು ಮುಂಬಯಿನಿಂದ ಬೆಂಗಳೂರಿಗೆ ಏರ್‌ ಇಂಡಿಯಾ ಫ್ಲೈಟ್‌ ಎಐ-639ನಲ್ಲಿ ಪ್ರಯಾಣಿಸಿದ್ದರು. ಮಾರ್ಗ ಮಧ್ಯೆ ನೀಡಲಾದ ಅನ್ನದಲ್ಲಿ ರೆಕ್ಕೆ ಇರುವ ಹುಳವೊಂದು ಸಿಕ್ಕಿದೆ. ಅದರ ಫೋಟೋ ಕ್ಲಿಕ್ಕಿಸಿಕೊಂಡಿರುವ ರಾಜ್‌, ''ಶುಚಿತ್ವವಿಲ್ಲದ ಆಹಾರವನ್ನು ಏರ್‌ ಇಂಡಿಯಾ ವಿಮಾನದಲ್ಲಿ ನೀಡುತ್ತಿದೆ. ಅನ್ನದಲ್ಲಿ ಸತ್ತ ಹುಳು ಪತ್ತೆಯಾಗಿರುವುದು ತೀವ್ರ ಬೇಸರ ಮೂಡಿಸಿದೆ. ಈ ಕುರಿತು ಕ್ಯಾಬಿನ್‌ ಸಿಬ್ಬಂದಿಗೆ ಮಾಹಿತಿ ನೀಡಿದರೆ ಅದನ್ನು ಸಹಜ ಎನ್ನುವಂತೆ ಮಾತನಾಡಿದ್ದಾರೆ. ದೇಶದ ಪ್ರಮುಖ ಏರ್‌ಲೈನ್ಸ್‌ನಲ್ಲಿ ಈ ರೀತಿಯ ಊಟ ನೀಡುತ್ತಾರೆ ಎನ್ನುವುದನ್ನು ನಿರೀಕ್ಷಿಸಲು ಅಸಾಧ್ಯ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ

ಆ.24ರಂದು ನೀಡಿದ್ದ ದೂರಿಗೆ ಆ.27ರಂದು ಪ್ರತಿಕ್ರಿಯಿಸಿರುವ ಏರ್‌ ಇಂಡಿಯಾ, ''ನಿಮಗಾಗಿರುವ ತೊಂದರೆಗೆ ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆ. ಈ ವಿಷಯವನ್ನು ಕ್ಯಾಟರಿಂಗ್‌ ಸೇವೆಗಳ ವಿಭಾಗಕ್ಕೆ ವರ್ಗಾಯಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ''ಎಂದು ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ