ವಿಕ ಸುದ್ದಿಲೋಕ ಬೆಂಗಳೂರು
ಪರಿಸರ ಸಂರಕ್ಷಣೆಗೆ ಬದ್ಧವಾಗಿರುವುದನ್ನು ಸ್ಪಷ್ಟಪಡಿಸಲು ಈಗಾಗಲೇ ಪರಿಸರ ನೀತಿ ರೂಪಿಸಿರುವ ಬಿಎಂಆರ್ಸಿಎಲ್, ಇದೀಗ ಪ್ಲಾಸ್ಟಿಕ್ ಬಳಕೆ ನಿಯಂತ್ರಣ, ಕಸ ವಿಲೇವಾರಿ ಹಾಗೂ ನೀರಿನ ಸಂರಕ್ಷಣೆಯ ಅಂಶಗಳನ್ನು ಅದರಲ್ಲಿ ಸೇರ್ಪಡೆಗೊಳಿಸಿದೆ.
ಮೆಟ್ರೊ ಕಾಮಗಾರಿ ವೇಳೆ ಕಟ್ಟಡ ತ್ಯಾಜ್ಯವನ್ನು ಕೆರೆಯ ಬಳಿ ಹಾಕುತ್ತಿರುವುದರ ಕುರಿತು ಹಿಂದಿನಿಂದಲೂ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಕಟ್ಟಡ ತ್ಯಾಜ್ಯ ವಿಲೇವಾರಿ ವೇಳೆ ಎಚ್ಚರ ವಹಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಮಾರ್ಗ ನಿರ್ಮಾಣದ ಸ್ಥಳಗಳಲ್ಲಿ ಕಟ್ಟಡ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಸಾಧ್ಯವಿದ್ದರೆ ತ್ಯಾಜ್ಯವನ್ನು ಮರುಬಳಕೆ ಮಾಡಬೇಕು. ನಿರ್ಮಾಣದ ಸ್ಥಳದಲ್ಲಿ ಮಣ್ಣಿನ ಫಲವತ್ತತೆಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು. ನಿಲ್ದಾಣದಲ್ಲಿ ಉಂಟಾಗುವ ಕಸ ಹಾಗೂ ಕಾಮಗಾರಿ ವೇಳೆ ಉಂಟಾಗುವ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಕಚೇರಿಯಲ್ಲಿ ಕಾಗದ, ಮರದ ತ್ಯಾಜ್ಯವನ್ನು ಮರುಬಳಕೆ ಮಾಡುವ ಕ್ರಮಗಳನ್ನು ಜಾರಿ ಮಾಡಬೇಕು ಎಂದು ತಿಳಿಸಲಾಗಿದೆ.
ನೀರನ್ನು ಸಂಸ್ಕರಣೆ ಮಾಡಿ ಮರುಬಳಕೆ ಮಾಡುವ ಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ನೀತಿಯಲ್ಲಿ ಹೇಳಲಾಗಿದೆ. ನಿಲ್ದಾಣಗಳಲ್ಲಿ ಅಗತ್ಯವಿದ್ದರೆ ಎಸ್ಟಿಪಿ ನಿರ್ಮಿಸಿ ಆ ನೀರನ್ನು ಶುಚಿಗೊಳಿಸಲು ಹಾಗೂ ಉದ್ಯಾನಕ್ಕೆ ಬಳಸಲಾಗುವುದು. ಪ್ರತಿ ನಿಲ್ದಾಣ ಹಾಗೂ ಡಿಪೊದಲ್ಲಿ ನೀರಿನ ಬಳಕೆಯ ಪ್ರಮಾಣವನ್ನು ಲೆಕ್ಕ ಇಡಲಾಗುವುದು. ಮಳೆ ನೀರಿನ ಕೊಯ್ಲು ವ್ಯವಸ್ಥೆ ಎಲ್ಲ ನಿಲ್ದಾಣಗಳಲ್ಲಿದ್ದು, ಮುಂದೆ ನಿರ್ಮಿಸುವ ನಿಲ್ದಾಣಗಳಲ್ಲೂ ಈ ವ್ಯವಸ್ಥೆ ಅಳವಡಿಸಿಕೊಳ್ಳಲಾಗುವುದು. ಕಾಮಗಾರಿ ನಡೆಯುವಾಗ ಬೋರ್ವೆಲ್ ಮೊದಲಾದ ನೀರಿನ ಮೂಲಗಳು ಕಲುಷಿತವಾಗದಂತೆ ಎಚ್ಚರ ವಹಿಸಲಾಗುವುದು ಎಂದು ನೀತಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಪ್ಲಾಸ್ಟಿಕ್ ನಿಯಂತ್ರಣ:
ಪ್ಲಾಸ್ಟಿಕ್ನಿಂದ ಹೆಚ್ಚು ಮಾಲಿನ್ಯವಾಗುತ್ತಿರುವ ಹಿನ್ನೆಲೆಯಲ್ಲಿ ನಿಲ್ದಾಣ ಹಾಗೂ ಕಚೇರಿಗಳಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹೇರಲಾಗುವುದು ಎಂದು ನೀತಿಯಲ್ಲಿ ತಿಳಿಸಲಾಗಿದೆ. ಮೆಟ್ರೊದಲ್ಲಿ ಆಹಾರವನ್ನು ಕೊಂಡೊಯ್ಯಲು ನಿರ್ಬಂಧವಿಲ್ಲ. ಆದರೆ ನಿಲ್ದಾಣ ಹಾಗೂ ರೈಲಿನಲ್ಲಿ ತಿನ್ನುವುದು, ಕುಡಿಯುವುದಕ್ಕೆ ನಿಷೇಧವಿದೆ. ಪ್ಲಾಸ್ಟಿಕ್ ಕಸವನ್ನು ಎಲ್ಲೆಂದರಲ್ಲಿ ಬಿಸಾಡುವುದನ್ನು ಈ ಮೂಲಕ ತಡೆಯಲಾಗಿದೆ. ಕಚೇರಿಗಳಲ್ಲೂ ಪ್ಲಾಸ್ಟಿಕ್ ಬಳಕೆಗೆ ಕಡಿಮೆ ಮಾಡಲಾಗುವುದು. ಹಾಗೆಯೇ ಮರು ಬಳಕೆ ಮಾಡಲು ಸಾಧ್ಯವಾಗದ ವಸ್ತುಗಳ ಖರೀದಿಯನ್ನು ಕಡಿಮೆ ಮಾಡಲಾಗುವುದು ಎಂದು ನೀತಿಯಲ್ಲಿ ಹೇಳಲಾಗಿದೆ.
ಸುರಂಗ ಕಾಮಗಾರಿಯಿಂದ ಹೆಚ್ಚು ಮಾಲಿನ್ಯ
2 ನೇ ಹಂತದ ಯೋಜನೆಯಲ್ಲಿ ಗೊಟ್ಟಿಗೆರೆ-ನಾಗವಾರ ಮಾರ್ಗದಲ್ಲಿ ಸುರಂಗ ಕಾಮಗಾರಿ ನಡೆಯಲಿದೆ. ಅಪಾರ ಪ್ರಮಾಣದ ಮಣ್ಣನ್ನು ಅಗೆಯುವುದರಿಂದ ಮಣ್ಣು, ನೀರು, ವಾಯುಮಾಲಿನ್ಯ ಹೆಚ್ಚಾಗಲಿದೆ. ಹೊಸ ನೀತಿಯಲ್ಲಿ ಹೇಳಿರುವ ಅಂಶಗಳನ್ನು ಕಾಮಗಾರಿ ವೇಳೆ ಪಾಲಿಸಬೇಕು ಎಂದು ಸೂಚಿಸಲಾಗಿದೆ.
ಪರಿಸರ ಸಂರಕ್ಷಣೆಗೆ ಬದ್ಧವಾಗಿರುವುದನ್ನು ಸ್ಪಷ್ಟಪಡಿಸಲು ಈಗಾಗಲೇ ಪರಿಸರ ನೀತಿ ರೂಪಿಸಿರುವ ಬಿಎಂಆರ್ಸಿಎಲ್, ಇದೀಗ ಪ್ಲಾಸ್ಟಿಕ್ ಬಳಕೆ ನಿಯಂತ್ರಣ, ಕಸ ವಿಲೇವಾರಿ ಹಾಗೂ ನೀರಿನ ಸಂರಕ್ಷಣೆಯ ಅಂಶಗಳನ್ನು ಅದರಲ್ಲಿ ಸೇರ್ಪಡೆಗೊಳಿಸಿದೆ.
ಮೆಟ್ರೊ ಕಾಮಗಾರಿ ವೇಳೆ ಕಟ್ಟಡ ತ್ಯಾಜ್ಯವನ್ನು ಕೆರೆಯ ಬಳಿ ಹಾಕುತ್ತಿರುವುದರ ಕುರಿತು ಹಿಂದಿನಿಂದಲೂ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಕಟ್ಟಡ ತ್ಯಾಜ್ಯ ವಿಲೇವಾರಿ ವೇಳೆ ಎಚ್ಚರ ವಹಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಮಾರ್ಗ ನಿರ್ಮಾಣದ ಸ್ಥಳಗಳಲ್ಲಿ ಕಟ್ಟಡ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಸಾಧ್ಯವಿದ್ದರೆ ತ್ಯಾಜ್ಯವನ್ನು ಮರುಬಳಕೆ ಮಾಡಬೇಕು. ನಿರ್ಮಾಣದ ಸ್ಥಳದಲ್ಲಿ ಮಣ್ಣಿನ ಫಲವತ್ತತೆಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು. ನಿಲ್ದಾಣದಲ್ಲಿ ಉಂಟಾಗುವ ಕಸ ಹಾಗೂ ಕಾಮಗಾರಿ ವೇಳೆ ಉಂಟಾಗುವ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಕಚೇರಿಯಲ್ಲಿ ಕಾಗದ, ಮರದ ತ್ಯಾಜ್ಯವನ್ನು ಮರುಬಳಕೆ ಮಾಡುವ ಕ್ರಮಗಳನ್ನು ಜಾರಿ ಮಾಡಬೇಕು ಎಂದು ತಿಳಿಸಲಾಗಿದೆ.
ನೀರನ್ನು ಸಂಸ್ಕರಣೆ ಮಾಡಿ ಮರುಬಳಕೆ ಮಾಡುವ ಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ನೀತಿಯಲ್ಲಿ ಹೇಳಲಾಗಿದೆ. ನಿಲ್ದಾಣಗಳಲ್ಲಿ ಅಗತ್ಯವಿದ್ದರೆ ಎಸ್ಟಿಪಿ ನಿರ್ಮಿಸಿ ಆ ನೀರನ್ನು ಶುಚಿಗೊಳಿಸಲು ಹಾಗೂ ಉದ್ಯಾನಕ್ಕೆ ಬಳಸಲಾಗುವುದು. ಪ್ರತಿ ನಿಲ್ದಾಣ ಹಾಗೂ ಡಿಪೊದಲ್ಲಿ ನೀರಿನ ಬಳಕೆಯ ಪ್ರಮಾಣವನ್ನು ಲೆಕ್ಕ ಇಡಲಾಗುವುದು. ಮಳೆ ನೀರಿನ ಕೊಯ್ಲು ವ್ಯವಸ್ಥೆ ಎಲ್ಲ ನಿಲ್ದಾಣಗಳಲ್ಲಿದ್ದು, ಮುಂದೆ ನಿರ್ಮಿಸುವ ನಿಲ್ದಾಣಗಳಲ್ಲೂ ಈ ವ್ಯವಸ್ಥೆ ಅಳವಡಿಸಿಕೊಳ್ಳಲಾಗುವುದು. ಕಾಮಗಾರಿ ನಡೆಯುವಾಗ ಬೋರ್ವೆಲ್ ಮೊದಲಾದ ನೀರಿನ ಮೂಲಗಳು ಕಲುಷಿತವಾಗದಂತೆ ಎಚ್ಚರ ವಹಿಸಲಾಗುವುದು ಎಂದು ನೀತಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಪ್ಲಾಸ್ಟಿಕ್ ನಿಯಂತ್ರಣ:
ಪ್ಲಾಸ್ಟಿಕ್ನಿಂದ ಹೆಚ್ಚು ಮಾಲಿನ್ಯವಾಗುತ್ತಿರುವ ಹಿನ್ನೆಲೆಯಲ್ಲಿ ನಿಲ್ದಾಣ ಹಾಗೂ ಕಚೇರಿಗಳಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹೇರಲಾಗುವುದು ಎಂದು ನೀತಿಯಲ್ಲಿ ತಿಳಿಸಲಾಗಿದೆ. ಮೆಟ್ರೊದಲ್ಲಿ ಆಹಾರವನ್ನು ಕೊಂಡೊಯ್ಯಲು ನಿರ್ಬಂಧವಿಲ್ಲ. ಆದರೆ ನಿಲ್ದಾಣ ಹಾಗೂ ರೈಲಿನಲ್ಲಿ ತಿನ್ನುವುದು, ಕುಡಿಯುವುದಕ್ಕೆ ನಿಷೇಧವಿದೆ. ಪ್ಲಾಸ್ಟಿಕ್ ಕಸವನ್ನು ಎಲ್ಲೆಂದರಲ್ಲಿ ಬಿಸಾಡುವುದನ್ನು ಈ ಮೂಲಕ ತಡೆಯಲಾಗಿದೆ. ಕಚೇರಿಗಳಲ್ಲೂ ಪ್ಲಾಸ್ಟಿಕ್ ಬಳಕೆಗೆ ಕಡಿಮೆ ಮಾಡಲಾಗುವುದು. ಹಾಗೆಯೇ ಮರು ಬಳಕೆ ಮಾಡಲು ಸಾಧ್ಯವಾಗದ ವಸ್ತುಗಳ ಖರೀದಿಯನ್ನು ಕಡಿಮೆ ಮಾಡಲಾಗುವುದು ಎಂದು ನೀತಿಯಲ್ಲಿ ಹೇಳಲಾಗಿದೆ.
ಸುರಂಗ ಕಾಮಗಾರಿಯಿಂದ ಹೆಚ್ಚು ಮಾಲಿನ್ಯ
2 ನೇ ಹಂತದ ಯೋಜನೆಯಲ್ಲಿ ಗೊಟ್ಟಿಗೆರೆ-ನಾಗವಾರ ಮಾರ್ಗದಲ್ಲಿ ಸುರಂಗ ಕಾಮಗಾರಿ ನಡೆಯಲಿದೆ. ಅಪಾರ ಪ್ರಮಾಣದ ಮಣ್ಣನ್ನು ಅಗೆಯುವುದರಿಂದ ಮಣ್ಣು, ನೀರು, ವಾಯುಮಾಲಿನ್ಯ ಹೆಚ್ಚಾಗಲಿದೆ. ಹೊಸ ನೀತಿಯಲ್ಲಿ ಹೇಳಿರುವ ಅಂಶಗಳನ್ನು ಕಾಮಗಾರಿ ವೇಳೆ ಪಾಲಿಸಬೇಕು ಎಂದು ಸೂಚಿಸಲಾಗಿದೆ.