ಆ್ಯಪ್ನಗರ

ಮಳೆ ಬರುವಾಗ ಏನು ಎಚ್ಚರವಹಿಸಬೇಕು?

ರಾಜಧಾನಿಯಲ್ಲಿ ವಸ್ತುಶಃ ಜಲ ಪ್ರಳಯವಾಗಿದೆ. ಕಳೆದೆರಡು ತಿಂಗಳಿನಿಂದ ನಿರಂತರವಾಗಿ ಕಾಡುತ್ತಿರುವ ಮಳೆ ಶುಕ್ರವಾರ ಸಂಜೆ ಬಳಿಕ ತನ್ನ ಉಗ್ರಾವತಾರದ ಮತ್ತೊಂದು ಮುಖವನ್ನು ಪ್ರದರ್ಶಿಸಿದ್ದು ಐದು ಜೀವಗಳನ್ನು ಬಲಿ ಪಡೆದಿದೆ.

Vijaya Karnataka 14 Oct 2017, 12:41 pm

ಬೆಂಗಳೂರು: ರಾಜಧಾನಿಯಲ್ಲಿ ವಸ್ತುಶಃ ಜಲ ಪ್ರಳಯವಾಗಿದೆ. ಕಳೆದೆರಡು ತಿಂಗಳಿನಿಂದ ನಿರಂತರವಾಗಿ ಕಾಡುತ್ತಿರುವ ಮಳೆ ಶುಕ್ರವಾರ ಸಂಜೆ ಬಳಿಕ ತನ್ನ ಉಗ್ರಾವತಾರದ ಮತ್ತೊಂದು ಮುಖವನ್ನು ಪ್ರದರ್ಶಿಸಿದ್ದು ಐದು ಜೀವಗಳನ್ನು ಬಲಿ ಪಡೆದಿದೆ. ರಾಜಧಾನಿಯ ಕಾಲುವೆಗಳು ಉಕ್ಕಿ ಹರಿಯುತ್ತಿದ್ದು, ರಸ್ತೆಗಳು ಜಲಾವೃತವಾಗಿವೆ. ಕೆಲವೆಡೆ ಮನೆಗಳು ಧರಾಶಾಯಿಯಾಗಿವೆ. ರಾಜಧಾನಿಯ ಬಹುತೇಕ ಎಲ್ಲ ರಸ್ತೆಗಳು ನೀರಿನಿಂದ ಮುಳುಗಿದ್ದು, ಸಂಚಾರ ಬಹುತೇಕ ಸ್ತಬ್ಧಗೊಂಡಿವೆ.

Vijaya Karnataka Web what should be done when rain falls
ಮಳೆ ಬರುವಾಗ ಏನು ಎಚ್ಚರವಹಿಸಬೇಕು?


ಮಳೆ ಬರುವಾಗ ಏನು ಎಚ್ಚರವಹಿಸಬೇಕು?

* ನಗರದಲ್ಲಿ ಪ್ರತಿದಿನ ಸಂಜೆ ವೇಳೆ ಮಳೆ ಬರುತ್ತಿರುವುದರಿಂದ ತುರ್ತು ಕೆಲಸ ಹೊರತುಪಡಿಸಿ ಮನೆಯಿಂದ ಹೊರ ಹೋಗಬಾರದು

* ಚರಂಡಿ ಹಾಗೂ ರಾಜಕಾಲುವೆ ಇರುವ ಕಡೆ ಎಚ್ಚರವಹಿಸಬೇಕು.

* ಮ್ಯಾನ್ ಹೋಲ್, ಚರಂಡಿಗಳು ಬಾಯ್ತೆರೆದುಕೊಂಡಿರುವ ಕಡೆ ಹೋಗಬಾರದು.

* ಮಳೆ ಬರುವಾಗ ಮರದಡಿ ಆಶ್ರಯಪಡೆಯಬೇಡಿ. ಸುರಕ್ಷಿತ ಸ್ಥಳಗಳನ್ನು ಆಯ್ದುಕೊಳ್ಳಿ.

* ಮಳೆ ಬೀಳುವ ಸಮಯದಲ್ಲಿ ರಾತ್ರಿ ವೇಳೆ ಸಂಚರಿಸುವುದು ಸುರಕ್ಷಿತವಲ್ಲ.

ಚರಂಡಿ ಮೇಲೆ ನಡೆಯುವಾಗ ಎಚ್ಚರ !

ರಾಜಧಾನಿಯ ಹೆಚ್ಚಿನ ಕಡೆ ರಸ್ತೆ ಬದಿಯಲ್ಲೇ ಚರಂಡಿಗಳನ್ನು ನಿರ್ಮಿಸಲಾಗಿದೆ. ಈ ಚರಂಡಿಗಳ ಮೇಲೆ ಸ್ಪ್ಯಾಬ್‌ ಹಾಕಿ ಜನರ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ, ಭಾರಿ ಮಳೆ ಬಂದಾಗ ಈ ಹಾದಿ ಮೃತ್ಯುವಿಗೆ ಆಹ್ವಾನ ಕೊಟ್ಟಂತಾಗಿದೆ. ಕೆಲ ವರ್ಷಗಳಿಂದಲೂ ಮಳೆ ಸುರಿಯುವ ವೇಳೆ ಮನೆ ಸೇರುವ ತವಕದಲ್ಲಿ ಜನರು ಚರಂಡಿ ಮೇಲೆ ನಡೆಯುವಾಗಲೇ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗುವುದು ನಧಿಡೆಯುತ್ತಿದ. ಬಿರುಸಿನ ಮಳೆ ಬೀಳುವ ವೇಳೆ ಮನೆಯಿಂದ ಹೊರಗೆ ಓಡಾದಂತೆ ಪಾಲಿಕೆ ಜನರಲ್ಲಿ ವಿನಂತಿಸಿದೆ. ಅದರಲ್ಲೂ ಚರಂಡಿ ಬದಿ ನಡೆದು ಹೋಗುವಾಗ ಎಚ್ಚರಿಕೆ ವಹಿಸುವುದು ಹೆಚ್ಚು ಸೂಕ್ತ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ