ಆ್ಯಪ್ನಗರ

ಪತ್ನಿಗೆ ಕೊರೊನಾ.. ಪತಿ ಪರಾರಿ..! ಅಂತ್ಯ ಸಂಸ್ಕಾರದಲ್ಲೂ ಭಾಗಿಯಾಗಿಲ್ಲ

ಕೊರೊನಾ ವೈರಸ್‌ ಇಡೀ ಜಗತ್ತಿಗೆ ಸಂಬಂಧ ಹಾಗೂ ಬಾಂಧವ್ಯದ ಅಸಲಿಯತ್ತನ್ನು ಪರಿಚಯ ಮಾಡಿಸಿದೆ. ಹೌದು, ಪತ್ನಿಗೆ ಕೋವಿಡ್‌-19 ಸೋಂಕು ದೃಢಪಡುತ್ತಿದ್ದಂತೆಯೇ ತನಗೂ ಸೋಂಕು ತಗಲಬಹುದೆಂಬ ಭಯದಿಂದ ಪತಿ ಪರಾರಿಯಾಗಿದ್ದಾನೆ.

Vijaya Karnataka Web 10 Aug 2020, 8:23 pm
ಬೆಂಗಳೂರು: ಕೊರೊನಾ ವೈರಸ್‌ ಇಡೀ ಜಗತ್ತಿಗೆ ಸಂಬಂಧ ಹಾಗೂ ಬಾಂಧವ್ಯದ ಅಸಲಿಯತ್ತನ್ನು ಪರಿಚಯ ಮಾಡಿಸಿದೆ. ಹೌದು, ಕೊರೊನಾ ಕಾಣಿಸಿಕೊಂಡ ನಂತರ ಗಂಡ-ಹೆಂಡಿರ ಹಾಗೂ ತಂದೆ-ಮಕ್ಕಳ ಸಂಬಂಧಗಳು ಕೆಲವು ಕಡೆ ತಮ್ಮ ಮಹತ್ವವನ್ನು ಕಳೆದುಕೊಂಡಿದ್ದವು. ಈಗ ಅಂತಹದ್ದೇ ಘಟನೆ ರಾಜಧಾನಿಯಲ್ಲೂ ನಡೆದಿದೆ.
Vijaya Karnataka Web wife tests coronavirus positive husband escape
ಪತ್ನಿಗೆ ಕೊರೊನಾ.. ಪತಿ ಪರಾರಿ..! ಅಂತ್ಯ ಸಂಸ್ಕಾರದಲ್ಲೂ ಭಾಗಿಯಾಗಿಲ್ಲ


ಪತ್ನಿಗೆ ಕೋವಿಡ್‌-19 ಸೋಂಕು ದೃಢಪಡುತ್ತಿದ್ದಂತೆಯೇ ತನಗೂ ಸೋಂಕು ತಗಲಬಹುದೆಂಬ ಭಯದಿಂದ ಪತಿ ಪರಾರಿಯಾಗಿದ್ದಾನೆ. ಪತ್ನಿಯ ಅಂತ್ಯಸಂಸ್ಕಾರದಲ್ಲಿ ಕೂಡ ಆತ ಭಾಗವಹಿಸಿಲ್ಲ. ಶಂಕರ ಮಠ ವಾರ್ಡ್‌ನ ಜೆ.ಸಿ.ನಗರದಲ್ಲಿ ಈ ದಂಪತಿ ವಾಸವಾಗಿದ್ದರು.

ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಗಂಡ ಕಾರು ಚಾಲಕನಾಗಿದ್ದರೆ, ಪತ್ನಿ ಒರಾಯನ್‌ ಮಾಲ್‌ನಲ್ಲಿ ಸೇಲ್ಸ್‌ ಗರ್ಲ್‌ ಆಗಿ ಕೆಲಸ ಮಾಡುತ್ತಿದ್ದರು. ಅನಾರೋಗ್ಯ ಕಾರಣದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ, ಕೊರೊನಾ ಪರೀಕ್ಷೆ ಮಾಡಿಸಿದಾಗ ಸೋಂಕು ತಗಲಿರುವುದು ದೃಢಪಟ್ಟಿದೆ.

ರಾಜ್ಯದಲ್ಲಿ ತಗ್ಗದ ಕೊರೊನಾ ವೇಗ..! 5,985 ಪಾಸಿಟಿವ್‌ ಕೇಸ್‌, ಲಕ್ಷದ ಗಡಿಯಲ್ಲಿ ಗುಣಮಖ

''ದಂಪತಿ ನಮ್ಮ ಮನೆಯಲ್ಲೇ ಬಾಡಿಗೆಗೆ ವಾಸವಿದ್ದರು. ಪತ್ನಿಗೆ ಸೋಂಕು ತಗಲಿರುವುದು ದೃಢಪಡುತ್ತಿ ದ್ದಂತೆಯೇ ಪತಿ ಪರಾರಿಯಾಗಿದ್ದಾನೆ. ಅವನು ಪರಾರಿಯಾದ ರಾತ್ರಿಯೇ ಪತ್ನಿ ಅಸುನೀಗಿದ್ದಾರೆ. ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ. ನಂತರ ಮೊಬೈಲ್‌ ಸ್ವಿಚ್‌್ಡ ಆಫ್‌ ಆಗಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ. ಮಹಿಳೆಯ ಶವವನ್ನು ಆ್ಯಂಬುಲೆನ್ಸ್‌ನಲ್ಲಿ ಕೊಂಡೊಯ್ದು ಕೋವಿಡ್‌-19 ಮಾರ್ಗಸೂಚಿಗಳನ್ವಯ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ,'' ಎಂದು ಪಾಲಿಕೆ ಸದಸ್ಯ ಎಂ.ಶಿವರಾಜ್‌ ತಿಳಿಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ನಾಗಾಲೋಟ..! 7 ಸಾವಿರ ಸಮೀಪ ಹೊಸ ಕೇಸ್‌; ಚೇತರಿಕೆಯಲ್ಲಿ ಏರಿಕೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ