ಬೆಂಗಳೂರು: ಕೊರೊನಾ ವೈರಸ್ ನೆಪದಲ್ಲಿ ಖಾಸಗಿ ಆ್ಯಂಬುಲೆನ್ಸ್ನಲ್ಲಿ ಗೆಳೆಯನ ಜೊತೆ ಮನೆ ತೊರೆದು ತೀವ್ರ ಆತಂಕ ಸೃಷ್ಟಿಸಿದ್ದ ಉತ್ತರ ಭಾರತ ಮೂಲದ ಮಹಿಳೆ ಗುರುವಾರ(ಸೆ.24) ಬೆಂಗಳೂರಿನ ಬೊಮ್ಮನಹಳ್ಳಿಯ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷಳಾಗಿದ್ದಾಳೆ.
ಕೋವಿಡ್ ಹಿನ್ನೆಲೆಯಲ್ಲಿ ಆಸ್ಪತ್ರೆಗೆಂದು ಆ್ಯಂಬುಲೆನ್ಸ್ನಲ್ಲಿ ಹೋಗಿದ್ದ ಮಹಿಳೆ ಕಾಣೆಯಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿತ್ತು. ಇದರಿಂದಾಗಿ ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಜನ ಕೋವಿಡ್ ಪರೀಕ್ಷೆ ಮತ್ತು ಆಸ್ಪತ್ರೆಗೆ ತೆರಳಲು ಯೋಚನೆ ಮಾಡುವಂತಹ ಸನ್ನಿವೇಶ ಸೃಷ್ಟಿಯಾಗಿತ್ತು. ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿಯ ಕುರಿತು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದರು. ಘಟನೆಯ ಕುರಿತು ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆಗಳು ಆಂತರಿಕ ವಿಚಾರಣೆ ನಡೆಸಿದ್ದವು.
ಇತ್ತೀಚೆಗೆ ವಿವಾಹವಾಗಿ ಪತಿ ಜೊತೆ ಬೆಂಗಳೂರಿಗೆ ಬಂದಿದ್ದ ಉತ್ತರ ಭಾರತ ಮೂಲದ ಮಹಿಳೆ, ಸಾಂಸಾರಿಕ ವಿಚಾರವಾಗಿ ಬೇಸರಗೊಂಡು ಕೋವಿಡ್ ನೆಪದಲ್ಲಿ ಸೆ.4ರಂದು ಆ್ಯಂಬುಲೆನ್ಸ್ನಲ್ಲಿ ಮನೆ ತೊರೆದಿದ್ದಳು. ಇದನ್ನು ಅರಿಯದ ಪತಿ, ಕೋವಿಡ್ ಸೋಂಕಿತ ಪತ್ನಿ ಕಾಣೆಯಾಗಿದ್ದಾಳೆಂದು ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಬೆಂಗಳೂರಲ್ಲಿ ಹೊಸ ದಾಖಲೆ ಬರೆದ ಕೊರೊನಾ: 4,196 ಹೊಸ ಸೋಂಕು!
ವಿಚಾರಣೆ ನಡೆಸಿದಾಗ, 'ಕೌಟುಂಬಿಕ ಕಲಹದಿಂದ ಮನೆ ತೊರೆಯಲು ಆ್ಯಂಬುಲೆನ್ಸ್ ಬಳಸಿದ್ದೇನೆ. ಅದಕ್ಕೆ ನನ್ನ ಸ್ನೇಹಿತ ಸಾಥ್ ನೀಡಿದ್ದಾನೆ' ಎಂದು ಪೊಲೀಸರಿಗೆ ತಿಳಿಸಿದ್ದಳು. ಆದರೂ, ಜನರಲ್ಲಿ ಆತಂಕ ಮುಂದುವರಿದಿತ್ತು. ಪೊಲೀಸರು ಮನವೊಲಿಕೆ ಮಾಡಿದ ಕಾರಣ ಆಕೆ ಬೊಮ್ಮನಹಳ್ಳಿ ಠಾಣೆಗೆ ತೆರಳಿ ಪೊಲೀಸರಿಗೆ ಸ್ಪಷ್ಟನೆ ನೀಡಿದ್ದಾಳೆ.
ರಾಜ್ಯದಲ್ಲಿ ತಗ್ಗಿ ಬೆಂಗಳೂರಿನಲ್ಲಿ ಅಬ್ಬರ ಮುಂದುವರಿಸಿದ ಕೊರೊನಾ..! ರಾಜಧಾನಿಯಲ್ಲಿ 4,000+ ಹೊಸ ಕೇಸ್
ಕಾಣೆಯಾದ ಘಟನೆಗೂ, ಕೊರೊನಾ ಸೋಂಕು ಪರೀಕ್ಷೆ ನಡೆಸುವ ಬಿಬಿಎಂಪಿಯ ವೈದ್ಯಕೀಯ ಸಿಬ್ಬಂದಿಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಮಹಿಳೆ ಹೇಳಿಕೆ ನೀಡಿದ್ದಾಳೆ. ನಾಗರಿಕರು ಆತಂಕ, ಮುಜುಗರಕ್ಕೆ ಒಳಗಾಗದೇ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಪೊಲೀಸರು ಕೋರಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ಆಸ್ಪತ್ರೆಗೆಂದು ಆ್ಯಂಬುಲೆನ್ಸ್ನಲ್ಲಿ ಹೋಗಿದ್ದ ಮಹಿಳೆ ಕಾಣೆಯಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿತ್ತು. ಇದರಿಂದಾಗಿ ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಜನ ಕೋವಿಡ್ ಪರೀಕ್ಷೆ ಮತ್ತು ಆಸ್ಪತ್ರೆಗೆ ತೆರಳಲು ಯೋಚನೆ ಮಾಡುವಂತಹ ಸನ್ನಿವೇಶ ಸೃಷ್ಟಿಯಾಗಿತ್ತು. ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿಯ ಕುರಿತು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದರು. ಘಟನೆಯ ಕುರಿತು ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆಗಳು ಆಂತರಿಕ ವಿಚಾರಣೆ ನಡೆಸಿದ್ದವು.
ಇತ್ತೀಚೆಗೆ ವಿವಾಹವಾಗಿ ಪತಿ ಜೊತೆ ಬೆಂಗಳೂರಿಗೆ ಬಂದಿದ್ದ ಉತ್ತರ ಭಾರತ ಮೂಲದ ಮಹಿಳೆ, ಸಾಂಸಾರಿಕ ವಿಚಾರವಾಗಿ ಬೇಸರಗೊಂಡು ಕೋವಿಡ್ ನೆಪದಲ್ಲಿ ಸೆ.4ರಂದು ಆ್ಯಂಬುಲೆನ್ಸ್ನಲ್ಲಿ ಮನೆ ತೊರೆದಿದ್ದಳು. ಇದನ್ನು ಅರಿಯದ ಪತಿ, ಕೋವಿಡ್ ಸೋಂಕಿತ ಪತ್ನಿ ಕಾಣೆಯಾಗಿದ್ದಾಳೆಂದು ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಬೆಂಗಳೂರಲ್ಲಿ ಹೊಸ ದಾಖಲೆ ಬರೆದ ಕೊರೊನಾ: 4,196 ಹೊಸ ಸೋಂಕು!
ವಿಚಾರಣೆ ನಡೆಸಿದಾಗ, 'ಕೌಟುಂಬಿಕ ಕಲಹದಿಂದ ಮನೆ ತೊರೆಯಲು ಆ್ಯಂಬುಲೆನ್ಸ್ ಬಳಸಿದ್ದೇನೆ. ಅದಕ್ಕೆ ನನ್ನ ಸ್ನೇಹಿತ ಸಾಥ್ ನೀಡಿದ್ದಾನೆ' ಎಂದು ಪೊಲೀಸರಿಗೆ ತಿಳಿಸಿದ್ದಳು. ಆದರೂ, ಜನರಲ್ಲಿ ಆತಂಕ ಮುಂದುವರಿದಿತ್ತು. ಪೊಲೀಸರು ಮನವೊಲಿಕೆ ಮಾಡಿದ ಕಾರಣ ಆಕೆ ಬೊಮ್ಮನಹಳ್ಳಿ ಠಾಣೆಗೆ ತೆರಳಿ ಪೊಲೀಸರಿಗೆ ಸ್ಪಷ್ಟನೆ ನೀಡಿದ್ದಾಳೆ.
ರಾಜ್ಯದಲ್ಲಿ ತಗ್ಗಿ ಬೆಂಗಳೂರಿನಲ್ಲಿ ಅಬ್ಬರ ಮುಂದುವರಿಸಿದ ಕೊರೊನಾ..! ರಾಜಧಾನಿಯಲ್ಲಿ 4,000+ ಹೊಸ ಕೇಸ್
ಕಾಣೆಯಾದ ಘಟನೆಗೂ, ಕೊರೊನಾ ಸೋಂಕು ಪರೀಕ್ಷೆ ನಡೆಸುವ ಬಿಬಿಎಂಪಿಯ ವೈದ್ಯಕೀಯ ಸಿಬ್ಬಂದಿಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಮಹಿಳೆ ಹೇಳಿಕೆ ನೀಡಿದ್ದಾಳೆ. ನಾಗರಿಕರು ಆತಂಕ, ಮುಜುಗರಕ್ಕೆ ಒಳಗಾಗದೇ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಪೊಲೀಸರು ಕೋರಿದ್ದಾರೆ.