ಬೆಂಗಳೂರು: ಕೌಟುಂಬಿಕ ಕಲಹದಿಂದ ನೊಂದು ನ್ಯಾಯಕ್ಕಾಗಿ ಠಾಣೆಗೆ ಬಂದ ಮಹಿಳೆಯ ದೂರು ಕೇಳಿ ಕಾನೂನು ಕ್ರಮ ಜರುಗಿಸುವ ಬದಲು ಅವರಿಗೆ ಕಿರುಕುಳದ ಸಂದೇಶ ಕಳುಹಿಸಿದ ಸಬ್ಇನ್ಸ್ಪೆಕ್ಟರ್ ಅವರನ್ನು ಅಮಾನತುಗೊಳಿಸಲಾಗಿದೆ.
ಬಾಸಣವಾಡಿ ಪೊಲೀಸ್ ಠಾಣೆಯಲ್ಲಿ ಪ್ರೊಬೇಷನರಿ ಎಸ್ಸೈಯಾಗಿ ಕೆಲಸ ಮಾಡುತ್ತಿದ್ದ ಆಂಜನೇಯ ಅಮಾನತುಗೊಂಡವರು. ಸಂತ್ರಸ್ತಮಹಿಳೆಯ ದೌರ್ಬಲ್ಯದ ದುರುಧಿಪಯೋಗ ಮಾಡಿಕೊಂಡ ಎಸ್ಸೈ, ಒಂದೇ ದಿನದಲ್ಲಿ 8 ವಾಟ್ಸ್ಆ್ಯಪ್ ಸಂದೇಶಗಳು ಮತ್ತು ಒಂದು ವಾಟ್ಸ್ಆ್ಯಪ್ ಕಾಲ್ ಮಾಡಿದ್ದಾರೆ. ನ್ಯಾಯ ಕೇಳಿ ಹೋದ ಪೊಲೀಸರಿಂದ ಮತ್ತಷ್ಟು ಅನ್ಯಾಯ, ಕಿರುಕುಳ, ಹಿಂಸೆ ಸಿಕ್ಕಿದೆ. ಇದರಿಂದ ಆಘಾತಗೊಂಡ ಮಹಿಳೆ, ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಆದರೆ, ಅಲ್ಲಿಯೂ ದೂರು ತೆಗೆದುಕೊಳ್ಳುವ ಬದಲು ‘‘ನಿಮ್ಮ ಸಿಮ್ ಕಾರ್ಡ್ ಬದಲಿಸಿಕೊಳ್ಳಿ’’ ಎಂಬ ಬಿಟ್ಟಿ ಸಲಹೆ ನೀಡಿದ್ದಾರೆ, ಎಂದು ಆರೋಪಿಸಲಾಗಿದೆ.
ಆಗಿದ್ದೇನು?: ಸಂತ್ರಸ್ತ ಮಹಿಳೆ ಜು.18ರಂದು ಬಾಣಸವಾಡಿ ಠಾಣೆಗೆ ತೆರಳಿ ತನ್ನ ಪತಿ ಮತ್ತು ಪತಿಯ ಸಂಬಂಧಿಕರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. ಈ ವೇಳೆ ಎಸ್ಸೈ ಆಂಜನೇಯನನ್ನು ಭೇಟಿಯಾಗಿದ್ದರು. ದೂರಿನ ನಂತರ ಸಂತ್ರಸ್ತೆಯ ಮನೆಗೆ ರಾತ್ರಿ 9 ಗಂಟೆಗೆ ಭೇಟಿ ನೀಡಿದ ಎಸ್ಸೈ ವಿಚಾರಣೆ ನಡೆಸಿದರು. ತದನಂತರ ದೂರು ಪ್ರತಿಯಲ್ಲಿದ್ದ ಫೋನ್ ನಂಬರ್ಗೆ ಆ.11ರಿಂದ ಅನಗತ್ಯವಾಗಿ ಸಂದೇಶ ಗಳನ್ನು ಕಳುಹಿಸುವುದಲ್ಲದೆ, ಫೋನ್ ಮಾಡಲು ಆರಂಭಿಸಿದರು ಎಂದು ಆರೋಪಿಸಲಾಗಿದೆ. ಸಂತ್ರಸ್ತೆಗೆ ಮೊದಲು ‘‘ಹಲೋ’’ ಎಂದು ಸಂದೇಶ ಕಳುಹಿಸಿದ್ದರೂ, ಅದಕ್ಕೆ ಮಹಿಳೆ ಉತ್ತರ ನೀಡಿರಲಿಲ್ಲ. ನಂತರ ಅವರ ಹೆಸರು ಉಲ್ಲೇಖಿಸಿ ‘‘ಹಾಯ್’’, ‘‘ಗುಡ್ ಮಾರ್ನಿಂಗ್ ಡಿಯರ್’’ ಮುಂತಾದ ಸಂದೇಶ ಮತ್ತು ಜೋಕ್ಸ್ಗಳನ್ನು ಕಳುಹಿಸುತ್ತಿದ್ದ. ಆದರೆ, ಸಂತ್ರಸ್ತೆ ಯಾವುದಕ್ಕೂ ಸ್ಪಂದಿಸದೆ ಸುಮ್ಮನಾಗಿದ್ದರು. ಅದಾದ ನಂತರ ಏಕವಚನದಲ್ಲಿ ಹೆಸರಿಟ್ಟು ಕರೆದ ಆಂಜನೇಯ, ‘‘ಗುಡ್ ನೈಟ್ ಡಿಯರ್’’, ‘‘ಕಾಲ್ ಮಿ ಒನ್ಸ್ ಪ್ಲೀಸ್’’ ಎಂದು ಸಂದೇಶ ಕಳುಹಿಸಿದ್ದಲ್ಲದೆ ‘‘ಹನಿ’’, ‘‘ಸ್ವೀಟ್ ಹಾರ್ಟ್’’ ಎಂದು ಕರೆಯಲು ಆರಂಭಿಸಿದರು ಎಂದು ಆರೋಪಿಸಲಾಗಿದೆ.
ನಿರಂತರವಾಗಿ ಬರುತ್ತಿದ್ದ ಸಂದೇಶಗಳಿಂದ ಆಘಾತಗೊಂಡ ಮಹಿಳೆ, ಸೈಬರ್ ಕ್ರೈಂ ಠಾಣೆಗೆ ದೂರು ನೀಡಲು ಹೋಗಿದ್ದರು. ಆದರೂ, ಅಲ್ಲೂ ಅವರಿಗೆ ಆಘಾತ ಕಾದಿತ್ತು. ‘‘ಎಸ್ಸೈ ಕಿರುಕುಳದ ಕುರಿತು ದೂರು ನೀಡಲು ಸೈಬರ್ ಕ್ರೈಂ ಠಾಣೆಗೆ ತೆರಳಿದ್ದೆವು. ಆದರೆ, ದೂರಿನ ಮೇಲೆ ಕ್ರಮದ ಬದಲು ಸಿಮ್ ಕಾರ್ಡ್ ಬದಲಿಸಿ ಎಂದು ಬಿಟ್ಟಿ ಸಲಹೆ ಕೊಟ್ಟರು’’, ಎಂದು ಸಂತ್ರಸ್ತೆಯ ಮಾವ ಆರೋಪಿಸಿದ್ದಾರೆ. ಸೈಬರ್ ಪೊಲೀಸರು ದೂರು ಸ್ವೀಕರಿಸದ ಕಾರಣ ಪೋಸ್ಟ್ನಲ್ಲಿ ದೂರು ಪ್ರತಿ ಕಳುಹಿಸಲಾಯಿತು. ‘‘ಸಿಮ್ ಬದಲಾಯಿಸುವ ಸಲಹೆ ಪಡೆಯಲು ಬಾಣಸವಾಡಿ ಠಾಣೆಯಿಂದ ಸೈಬರ್ ಕ್ರೈಂ ಠಾಣೆಗೆ ಹೋಗಬೇಕಿತ್ತೇ?’’,ಎಂದು ಸಂತ್ರಸ್ತೆಯ ಮಾವ ಹೇಳಿದರು.
ಬಹಿರಂಗವಾದ ಬಳಿಕ ತೇಪೆ ಹಾಕಲು ಯತ್ನ
ಎಸ್ಸೈ ಕಿರುಕುಳದ ವಿಚಾರ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದಂತೆ ಸಂತ್ರಸ್ತೆ ಮತ್ತು ಆಕೆಯ ಕುಟುಂಬ ಸದಸ್ಯರಿಗೆ ಕರೆ ಮಾಡಿದ ಬಾಣಸವಾಡಿ ಠಾಣೆಯ ಪೊಲೀಸರು , ''ಮನೆಯಲ್ಲಿ ಏನೂ ತೊಂದರೆ ಇಲ್ಲ, ಎಂದು ಹೇಳಿಕೆ ಕೊಡಿ", ಎಂದು ಒತ್ತಾಯಿಸಿದ್ದಾರೆ. ಅಲ್ಲದೇ ಸೈಬರ್ ಕ್ರೈಂ ಪೊಲೀಸರು ಕೂಡ ಠಾಣೆಗೆ ಬಂದು ದೂರು ಕೊಡಿ ಕ್ರಮ ಕೈಗೊಳ್ಳುತ್ತೇವೆ, ಎಂದಿದ್ದಾರೆ, ಎಂದು ಸಂತ್ರಸ್ತೆ ಮತ್ತು ಅವರ ಮಾವ ಹೇಳಿದ್ದಾರೆ.
ಕೌನ್ಸಿಲಿಂಗ್ ಮಾಡಲು ಕರೆ ಮಾಡಿದ್ದೆ: ಕೌನ್ಸಿಲಿಂಗ್ ಮಾಡಲು ಸಂತ್ರಸ್ತೆಗೆ ಕರೆ ಮಾಡಿದ್ದೆ.ವಲ್ಗರ್ ಮೆಸೇಜ್ ಕಳುಹಿಸಿಲ್ಲ ಎಂದು ಆಂಜನೇಯ ಸಮರ್ಥನೆ ನೀಡಿದ್ದಾರೆ.
ಪೊಲೀಸರ ವರ್ತನೆಗೆ ಅಸಮಧಾನ
ಕೆಲವರು ಅಧಿಕಾರದ ಮದದಿಂದ ನ್ಯಾಯಕ್ಕಾಗಿ ಠಾಣೆಗೆ ಬರುವ ಸಂತ್ರಸ್ತರನ್ನು ಭಕ್ಷಕರ ರೀತಿಯಲ್ಲಿ ನೋಡುತ್ತಾರೆ. ಐಪಿಸಿ ಕಲಂ 354ಡಿ ಅನ್ವಯ ಇದು ಶಿಕ್ಷಾರ್ಹ
ಅಪರಾಧವಾಗುತ್ತದೆ. ಜೊತೆಗೆ ದುರಾಡಳಿತವಾಗುತ್ತದೆ. ಅಲ್ಲದೇ, ದೂರು ಸ್ವೀಕರಿಸಲು ನಿರಾಕರಿಸಿದ್ದು ಕೂಡ ದುರಾಡಳಿತವಾಗುತ್ತದೆ ಎಂದು ಬಾಣಸವಾಡಿ ಠಾಣೆಯ ಎಸ್ಸೈ ಆಂಜನೇಯ ವರ್ತನೆ ಮತ್ತು ನಂತರ ಸೈಬರ್ ಕ್ರೈಂ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿರುವ ಕುರಿತು ಟ್ವಿಟರ್ನಲ್ಲಿ ಐಪಿಎಸ್ ಅಧಿಕಾರಿ ಡಿ.ರೂಪಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರೊಬೇಷನರಿ ಎಸ್ಸೈಯನ್ನು ಅಮಾನತು ಮಾಡಿ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ- ರಾಹುಲ್ ಕುಮಾರ್ (ಡಿಸಿಪಿ ಪೂರ್ವ ವಿಭಾಗ)
ಬಾಸಣವಾಡಿ ಪೊಲೀಸ್ ಠಾಣೆಯಲ್ಲಿ ಪ್ರೊಬೇಷನರಿ ಎಸ್ಸೈಯಾಗಿ ಕೆಲಸ ಮಾಡುತ್ತಿದ್ದ ಆಂಜನೇಯ ಅಮಾನತುಗೊಂಡವರು. ಸಂತ್ರಸ್ತಮಹಿಳೆಯ ದೌರ್ಬಲ್ಯದ ದುರುಧಿಪಯೋಗ ಮಾಡಿಕೊಂಡ ಎಸ್ಸೈ, ಒಂದೇ ದಿನದಲ್ಲಿ 8 ವಾಟ್ಸ್ಆ್ಯಪ್ ಸಂದೇಶಗಳು ಮತ್ತು ಒಂದು ವಾಟ್ಸ್ಆ್ಯಪ್ ಕಾಲ್ ಮಾಡಿದ್ದಾರೆ. ನ್ಯಾಯ ಕೇಳಿ ಹೋದ ಪೊಲೀಸರಿಂದ ಮತ್ತಷ್ಟು ಅನ್ಯಾಯ, ಕಿರುಕುಳ, ಹಿಂಸೆ ಸಿಕ್ಕಿದೆ. ಇದರಿಂದ ಆಘಾತಗೊಂಡ ಮಹಿಳೆ, ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಆದರೆ, ಅಲ್ಲಿಯೂ ದೂರು ತೆಗೆದುಕೊಳ್ಳುವ ಬದಲು ‘‘ನಿಮ್ಮ ಸಿಮ್ ಕಾರ್ಡ್ ಬದಲಿಸಿಕೊಳ್ಳಿ’’ ಎಂಬ ಬಿಟ್ಟಿ ಸಲಹೆ ನೀಡಿದ್ದಾರೆ, ಎಂದು ಆರೋಪಿಸಲಾಗಿದೆ.
ಆಗಿದ್ದೇನು?: ಸಂತ್ರಸ್ತ ಮಹಿಳೆ ಜು.18ರಂದು ಬಾಣಸವಾಡಿ ಠಾಣೆಗೆ ತೆರಳಿ ತನ್ನ ಪತಿ ಮತ್ತು ಪತಿಯ ಸಂಬಂಧಿಕರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. ಈ ವೇಳೆ ಎಸ್ಸೈ ಆಂಜನೇಯನನ್ನು ಭೇಟಿಯಾಗಿದ್ದರು. ದೂರಿನ ನಂತರ ಸಂತ್ರಸ್ತೆಯ ಮನೆಗೆ ರಾತ್ರಿ 9 ಗಂಟೆಗೆ ಭೇಟಿ ನೀಡಿದ ಎಸ್ಸೈ ವಿಚಾರಣೆ ನಡೆಸಿದರು. ತದನಂತರ ದೂರು ಪ್ರತಿಯಲ್ಲಿದ್ದ ಫೋನ್ ನಂಬರ್ಗೆ ಆ.11ರಿಂದ ಅನಗತ್ಯವಾಗಿ ಸಂದೇಶ ಗಳನ್ನು ಕಳುಹಿಸುವುದಲ್ಲದೆ, ಫೋನ್ ಮಾಡಲು ಆರಂಭಿಸಿದರು ಎಂದು ಆರೋಪಿಸಲಾಗಿದೆ. ಸಂತ್ರಸ್ತೆಗೆ ಮೊದಲು ‘‘ಹಲೋ’’ ಎಂದು ಸಂದೇಶ ಕಳುಹಿಸಿದ್ದರೂ, ಅದಕ್ಕೆ ಮಹಿಳೆ ಉತ್ತರ ನೀಡಿರಲಿಲ್ಲ. ನಂತರ ಅವರ ಹೆಸರು ಉಲ್ಲೇಖಿಸಿ ‘‘ಹಾಯ್’’, ‘‘ಗುಡ್ ಮಾರ್ನಿಂಗ್ ಡಿಯರ್’’ ಮುಂತಾದ ಸಂದೇಶ ಮತ್ತು ಜೋಕ್ಸ್ಗಳನ್ನು ಕಳುಹಿಸುತ್ತಿದ್ದ. ಆದರೆ, ಸಂತ್ರಸ್ತೆ ಯಾವುದಕ್ಕೂ ಸ್ಪಂದಿಸದೆ ಸುಮ್ಮನಾಗಿದ್ದರು. ಅದಾದ ನಂತರ ಏಕವಚನದಲ್ಲಿ ಹೆಸರಿಟ್ಟು ಕರೆದ ಆಂಜನೇಯ, ‘‘ಗುಡ್ ನೈಟ್ ಡಿಯರ್’’, ‘‘ಕಾಲ್ ಮಿ ಒನ್ಸ್ ಪ್ಲೀಸ್’’ ಎಂದು ಸಂದೇಶ ಕಳುಹಿಸಿದ್ದಲ್ಲದೆ ‘‘ಹನಿ’’, ‘‘ಸ್ವೀಟ್ ಹಾರ್ಟ್’’ ಎಂದು ಕರೆಯಲು ಆರಂಭಿಸಿದರು ಎಂದು ಆರೋಪಿಸಲಾಗಿದೆ.
ನಿರಂತರವಾಗಿ ಬರುತ್ತಿದ್ದ ಸಂದೇಶಗಳಿಂದ ಆಘಾತಗೊಂಡ ಮಹಿಳೆ, ಸೈಬರ್ ಕ್ರೈಂ ಠಾಣೆಗೆ ದೂರು ನೀಡಲು ಹೋಗಿದ್ದರು. ಆದರೂ, ಅಲ್ಲೂ ಅವರಿಗೆ ಆಘಾತ ಕಾದಿತ್ತು. ‘‘ಎಸ್ಸೈ ಕಿರುಕುಳದ ಕುರಿತು ದೂರು ನೀಡಲು ಸೈಬರ್ ಕ್ರೈಂ ಠಾಣೆಗೆ ತೆರಳಿದ್ದೆವು. ಆದರೆ, ದೂರಿನ ಮೇಲೆ ಕ್ರಮದ ಬದಲು ಸಿಮ್ ಕಾರ್ಡ್ ಬದಲಿಸಿ ಎಂದು ಬಿಟ್ಟಿ ಸಲಹೆ ಕೊಟ್ಟರು’’, ಎಂದು ಸಂತ್ರಸ್ತೆಯ ಮಾವ ಆರೋಪಿಸಿದ್ದಾರೆ. ಸೈಬರ್ ಪೊಲೀಸರು ದೂರು ಸ್ವೀಕರಿಸದ ಕಾರಣ ಪೋಸ್ಟ್ನಲ್ಲಿ ದೂರು ಪ್ರತಿ ಕಳುಹಿಸಲಾಯಿತು. ‘‘ಸಿಮ್ ಬದಲಾಯಿಸುವ ಸಲಹೆ ಪಡೆಯಲು ಬಾಣಸವಾಡಿ ಠಾಣೆಯಿಂದ ಸೈಬರ್ ಕ್ರೈಂ ಠಾಣೆಗೆ ಹೋಗಬೇಕಿತ್ತೇ?’’,ಎಂದು ಸಂತ್ರಸ್ತೆಯ ಮಾವ ಹೇಳಿದರು.
ಬಹಿರಂಗವಾದ ಬಳಿಕ ತೇಪೆ ಹಾಕಲು ಯತ್ನ
ಎಸ್ಸೈ ಕಿರುಕುಳದ ವಿಚಾರ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದಂತೆ ಸಂತ್ರಸ್ತೆ ಮತ್ತು ಆಕೆಯ ಕುಟುಂಬ ಸದಸ್ಯರಿಗೆ ಕರೆ ಮಾಡಿದ ಬಾಣಸವಾಡಿ ಠಾಣೆಯ ಪೊಲೀಸರು , ''ಮನೆಯಲ್ಲಿ ಏನೂ ತೊಂದರೆ ಇಲ್ಲ, ಎಂದು ಹೇಳಿಕೆ ಕೊಡಿ", ಎಂದು ಒತ್ತಾಯಿಸಿದ್ದಾರೆ. ಅಲ್ಲದೇ ಸೈಬರ್ ಕ್ರೈಂ ಪೊಲೀಸರು ಕೂಡ ಠಾಣೆಗೆ ಬಂದು ದೂರು ಕೊಡಿ ಕ್ರಮ ಕೈಗೊಳ್ಳುತ್ತೇವೆ, ಎಂದಿದ್ದಾರೆ, ಎಂದು ಸಂತ್ರಸ್ತೆ ಮತ್ತು ಅವರ ಮಾವ ಹೇಳಿದ್ದಾರೆ.
ಕೌನ್ಸಿಲಿಂಗ್ ಮಾಡಲು ಕರೆ ಮಾಡಿದ್ದೆ: ಕೌನ್ಸಿಲಿಂಗ್ ಮಾಡಲು ಸಂತ್ರಸ್ತೆಗೆ ಕರೆ ಮಾಡಿದ್ದೆ.ವಲ್ಗರ್ ಮೆಸೇಜ್ ಕಳುಹಿಸಿಲ್ಲ ಎಂದು ಆಂಜನೇಯ ಸಮರ್ಥನೆ ನೀಡಿದ್ದಾರೆ.
ಪೊಲೀಸರ ವರ್ತನೆಗೆ ಅಸಮಧಾನ
ಕೆಲವರು ಅಧಿಕಾರದ ಮದದಿಂದ ನ್ಯಾಯಕ್ಕಾಗಿ ಠಾಣೆಗೆ ಬರುವ ಸಂತ್ರಸ್ತರನ್ನು ಭಕ್ಷಕರ ರೀತಿಯಲ್ಲಿ ನೋಡುತ್ತಾರೆ. ಐಪಿಸಿ ಕಲಂ 354ಡಿ ಅನ್ವಯ ಇದು ಶಿಕ್ಷಾರ್ಹ
ಅಪರಾಧವಾಗುತ್ತದೆ. ಜೊತೆಗೆ ದುರಾಡಳಿತವಾಗುತ್ತದೆ. ಅಲ್ಲದೇ, ದೂರು ಸ್ವೀಕರಿಸಲು ನಿರಾಕರಿಸಿದ್ದು ಕೂಡ ದುರಾಡಳಿತವಾಗುತ್ತದೆ ಎಂದು ಬಾಣಸವಾಡಿ ಠಾಣೆಯ ಎಸ್ಸೈ ಆಂಜನೇಯ ವರ್ತನೆ ಮತ್ತು ನಂತರ ಸೈಬರ್ ಕ್ರೈಂ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿರುವ ಕುರಿತು ಟ್ವಿಟರ್ನಲ್ಲಿ ಐಪಿಎಸ್ ಅಧಿಕಾರಿ ಡಿ.ರೂಪಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರೊಬೇಷನರಿ ಎಸ್ಸೈಯನ್ನು ಅಮಾನತು ಮಾಡಿ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ- ರಾಹುಲ್ ಕುಮಾರ್ (ಡಿಸಿಪಿ ಪೂರ್ವ ವಿಭಾಗ)