ಆ್ಯಪ್ನಗರ

ಬೆಂಗಳೂರಿನಲ್ಲಿ ಹೆಣ್ಣು ಮಕ್ಕಳು ಸುರಕ್ಷಿತರಲ್ಲ!

ಪೀಣ್ಯಾ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ನಂ. 1 ಎಂಬ ಕುಖ್ಯಾತಿ ಗಳಿಸಿದರೆ, ಸುಬ್ರಮಣ್ಯಪುರ ಎರಡನೇ ಸ್ಥಾನದಲ್ಲಿದೆ.

Bangalore Mirror Bureau 21 Jun 2017, 3:03 pm
ಬೆಂಗಳೂರು ಹೆಣ್ಣು ಮಕ್ಕಳಿಗೆ ಸುರಕ್ಷಿತ ತಾಣವೇ? 2015ರಿಂದ ಇಲ್ಲಿವರೆಗಿನ ಅಪರಾಧ ಪ್ರಕರಣಗಳ ವರದಿಗಳ ಅಂಕಿ ಅಂಶ ಗಮನಿಸಿದಾಗ ಈ ನಗರದಲ್ಲಿ ಹೆಣ್ಣು ಮಕ್ಕಳು ಸುರಕ್ಷಿತವಾಗಿಲ್ಲ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
Vijaya Karnataka Web women suffer most in bengaluru
ಬೆಂಗಳೂರಿನಲ್ಲಿ ಹೆಣ್ಣು ಮಕ್ಕಳು ಸುರಕ್ಷಿತರಲ್ಲ!


ಅದರಲ್ಲೂ ಪೀಣ್ಯಾ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ನಂ. 1 ಎಂಬ ಕುಖ್ಯಾತಿ ಗಳಿಸಿದರೆ, ಸುಬ್ರಮಣ್ಯಪುರ ಎರಡನೇ ಸ್ಥಾನದಲ್ಲಿದೆ. ಇನ್ನು ಇಂದಿರಾನಗರ, ಕೋರಮಂಗಲ, ಜಯನಗರದಲ್ಲಿ ಪರಿಸ್ಥಿತಿಯೇನೂ ಭಿನ್ನವಾಗಿಲ್ಲ.

ಹೆಣ್ಣು ಮಕ್ಕಳ ವಿರುದ್ಧ ದಾಖಲಾಗಿರುವ ದೌರ್ಜನ್ಯ ಪ್ರಕರಣದಲ್ಲಿ ಶೇ. 70ರಷ್ಟು ಮಹಿಳೆಯರು ಗಂಡ ಹಾಗೂ ಗಂಡನ ಮನೆಯವರಿಂದಲೇ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. 2015ರಿಂದ 3,157 ಕೇಸ್‌ ದಾಖಲಾಗಿದ್ದು, ದಿನದಲ್ಲಿ 8 ಅಧಿಕ ಮಹಿಳೆಯರ ವಿರುದ್ಧ ದೌರ್ಜನ್ಯ ಮಾಡಿರುವ ದೂರುಗಳು ದಾಖಲಾಗುತ್ತಿದೆ ಎಂದು ವರದಿ ತಿಳಿಸಿದೆ.

ರೆಸಿಡೆನ್ಸಿ ಜಾಗದಲ್ಲಿಯೇ ಮಹಿಳೆಯರಿಗೆ ಅಭದ್ರತೆ!

ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಅತ್ಯಧಿಕ ಕೇಸ್‌ಗಳು ಗಂಡ ಹಾಗೂ ಆತನ ಮನೆಯವರು ದೌರ್ಜನ್ಯ ಎಸಗಿದ್ದಾರೆ ಎಂದು ಐಪಿಸಿ ಸೆಕ್ಷನ್ 498ಎ ಅಡಿಯಲ್ಲಿ ದಾಖಲಾಗಿವೆ. ಆದರೆ 498ಎ ಕಾಯ್ದೆಯನ್ನು ದುರುಪಯೋಗ ಪಡಿಸಿರುವ ಪ್ರಕರಣಗಳು ಕೂಡ ತನಿಖೆಯಿಂದ ಬೆಳಕಿಗೆ ಬಂದಿದೆ.

ಇನ್ನು ನಗರದ ಶ್ರೀಮಂತ ಪ್ರದೇಶಗಳಲ್ಲಿ ಒಂದಾದ ಜಯನಗರದಲ್ಲಂತೂ ಅತ್ಯಧಿಕ ಸಂಖ್ಯೆಯಲ್ಲಿ ಮಹಿಳೆಯರ ವಿರುದ್ಧ ದೌರ್ಜನ್ಯ ಕೇಸ್‌ಗಳು ದಾಖಲಾಗಿವೆ.

ಅದೇ ಸದಾ ಜನಜಂಗುಳಿಯಿಂದ ತುಂಬಿ ತುಳುಕುತ್ತಿರುವ ಕೆ ಆರ್‌ ಮಾರ್ಕೆಟ್ ಹಾಗೂ ಯಶವಂತಪುರದಲ್ಲಿ ಒಂದೇ ಒಂದು ಕೇಸ್ ದಾಖಲಾಗಿಲ್ಲ ಎಂದು 101Reporters.com ವರದಿ ಮಾಡಿದೆ.



ಇನ್ನು ಕರ್ನಾಟಕದಲ್ಲಿ ಶೇ. 24ರಷ್ಟು ಅಪರಾಧ ಪ್ರಕರಣಗಳು ಬೆಂಗಳೂರಿನಲ್ಲಿಯೇ ನಡೆಯುತ್ತಿದೆ.
'ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ತುಂಬಾ ವಿಳಂಬವಾಗುತ್ತಿರುವುದರಿಂದ ಮಹಿಖೆಯರಿಗೆ ಕಾನೂನು ವ್ಯವಸ್ಥೆಯಲ್ಲಿ ನಂಬಿಕೆ ಕಡಿಮೆಯಾಗುತ್ತಿದೆ. ಅಪರಾಧಿಗಳಿಗೂ ಕಾನೂನಿನ ಭಯವಿಲ್ಲದೇ ಇರುವುದರಿಂದ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ' ಎಂದು ಎಂಎಲ್‌ಸಿ ವಿ ಎಸ್‌ ಉಗ್ರಪ್ಪ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ