ಆ್ಯಪ್ನಗರ

ಹೊಟ್ಟೆಪಾಡಿಗೆಂದು ರಾಜ್ಯ ಬಿಟ್ಟು ಬಂದವರು ಅಣ್ಣನನ್ನೇ ಕೊಂದರು

ಪಶ್ಚಿಮ ಬಂಗಾಳ ಮೂಲದ ಎಲೆಕ್ಟ್ರೀಷಿಯನ್‌ ಮಿಥಾಯ್‌ ಚಂದ್ರಶೇಖರ್‌ (20) ಕೊಲೆಯಾದವರಾಗಿದ್ದು, ಇವರ ಸಹೋದರರಾದ ಬೀರೇಶ್‌ ಮತ್ತು ಮಿಥಾಯಿ ಸುರೇಶ್‌ ಎನ್ನುವವರನ್ನು ವಶಕ್ಕೆ ಪಡೆದಿದ್ದಾರೆ.

Vijaya Karnataka 9 Oct 2018, 10:01 am
ಬೆಂಗಳೂರು: ಕಗ್ಗದಾಸಪುರ ಮುಖ್ಯರಸ್ತೆಯ ಪುರವಂಕರ ಸೀಸನನ್ಸ್ ಪ್ರಾಜೆಕ್ಟ್ ಆವರಣದಲ್ಲಿರುವ ಕೊಳಚೆ ನೀರು ಶುದ್ಧೀಕರಣ ಘಟಕದ ಪೈಪ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾದ ಪ್ರಕರಣದ ನಿಗೂಢವನ್ನು ಭೇದಿಸಿರುವ ಬೈಯಪ್ಪನಹಳ್ಳಿ ಠಾಣೆ ಪೊಲೀಸರು, ಸಹೋದರರಿಬ್ಬರನ್ನು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.
Vijaya Karnataka Web Murder


ಪಶ್ಚಿಮ ಬಂಗಾಳ ಮೂಲದ ಎಲೆಕ್ಟ್ರೀಷಿಯನ್‌ ಮಿಥಾಯ್‌ ಚಂದ್ರಶೇಖರ್‌ (20) ಕೊಲೆಯಾದವರಾಗಿದ್ದು, ಇವರ ಸಹೋದರರಾದ ಬೀರೇಶ್‌ ಮತ್ತು ಮಿಥಾಯಿ ಸುರೇಶ್‌ ಎನ್ನುವವರನ್ನು ವಶಕ್ಕೆ ಪಡೆದಿದ್ದಾರೆ. ಸಹೋದರರೇ ಚಂದ್ರಶೇಖರ್‌ ಅವರನ್ನು ಅಪಾಟ್‌ರ್‍ಮೆಂಟ್‌ನಲ್ಲಿಕೊಲೆ ಮಾಡಿದ ನಂತರ ಮೃತದೇಹವನ್ನು ಶುದ್ಧೀಕರಣ ಘಟಕದ ಪೈಪ್‌ಲೈನ್‌ ಒಳಗೆ ತುರುಕಿದ್ದರು. ಆ ನಂತರ ಠಾಣೆಯಲ್ಲಿನಾಪತ್ತೆ ಪ್ರಕರಣ ದಾಖಲಿಸಿದ್ದರು.

ಶುದ್ಧೀಕರಣ ಘಟಕದ ಮೇಲ್ವಿಚಾರಣೆ ನಡೆಸುತ್ತಿದ್ದ ವಂಶಿಕೃಷ್ಣ ಎನ್ನುವವರು ಸೆ.20ರಂದು ಕೆಲಸ ಮಾಡುತ್ತಿದ್ದಾಗ ಬೆಳಗ್ಗೆ 8.45ರ ಸುಮಾರಿಗೆ ಅಪರಿಚಿತ ವ್ಯಕ್ತಿಯ ಕೊಳೆತ ಸ್ಥಿತಿಯಲ್ಲಿರುವ ಅರ್ಧ ಶವ ತೇಲುತ್ತಿರುವುದು ಕಾಣಿಸಿತ್ತು. ಈ ಕುರಿತು ವಂಶಿಕೃಷ್ಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಪ್ಲಾಂಟ್‌ನಲ್ಲಿದ್ದ ಕೊಳಚೆ ನೀರನ್ನು ತೆಗೆದು ಪರಿಶೀಲನೆ ನಡೆಸಿದಾಗ ಶವದ ಇನ್ನರ್ಧ ಭಾಗವೂ ಅಡಿಯಲ್ಲಿದೊರಕಿದೆ. ದುಷ್ಕರ್ಮಿಗಳು ಕೊಲೆ ಮಾಡಿ ಶವವನ್ನು ಪ್ಲಾಸ್ಟಿಕ್‌ ಚೀಲದಲ್ಲಿಹಾಕಿ ಕಬ್ಬಿಣದ ತಂತಿ ಮತ್ತು ಪ್ಲಾಸ್ಟಿಕ್‌ ಹಗ್ಗದಿಂದ ಕಟ್ಟಿ, ಪ್ಲಾಂಟ್‌ನೊಳಗಿನ ಪೈಪ್‌ಲೈನ್‌ ಒಳಗೆ ಬಿಸಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಾಟ್‌ರ್‍ಮೆಂಟ್‌ ಆವರಣದಲ್ಲಿಎಲೆಕ್ಟ್ರಿಷಿಯನ್‌ ಆಗಿ ಕೆಲಸ ಮಾಡುತ್ತಿದ್ದ ಮಿಥಾಯ್‌ಚಂದ್ರ ಆ.22ರ ಬೆಳಗ್ಗೆಯಿಂದ ಕಾಣೆಯಾಗಿದ್ದು, ಇದುವರೆಗೂ ಪತ್ತೆಯಾಗಿಲ್ಲ. ಶವವೂ ಆತನದ್ದೇ ಆಗಿರಬಹುದು ಎಂದು ಪ್ಲಾಂಟ್‌ ನೋಡಿಕೊಳ್ಳುತ್ತಿದ್ದ ವಂಶಿಕೃಷ್ಣ ದೂರಿನಲ್ಲಿತಿಳಿಸಿದ್ದರು. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಮಿಥಾಯ್‌ ಚಂದ್ರನನ್ನು ಕೊಲೆ ಮಾಡಿ ಶವವನ್ನು ಪ್ಲಾಂಟ್‌ಗೆ ಬಿಸಾಡಿರುವ ಶಂಕೆ ಇತ್ತು. ಸಹೋದರರ ವರ್ತನೆ ಅನುಮಾನಕ್ಕೆ ಕಾರಣ ಆಗಿತ್ತು. ಈ ಬಗ್ಗೆ ಕೆಲವೊಂದು ಸುಳಿವುಗಳು ಸಿಕ್ಕ ನಂತರ ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ. ವಿಚಾರಣೆ ನಂತರ ಆರೋಪಿಗಳನ್ನು ಬಂ-ಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಹೆಚ್ಚಿನ ವಿವರ ಪಡೆಯಲು ಠಾಣಾಧಿಕಾರಿ ಮತ್ತು ಎಸಿಪಿ ಅವರಿಗೆ ನಿರಂತರ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ