ಆ್ಯಪ್ನಗರ

ಯುವರಾಜ್ ವಿರುದ್ಧ ಮತ್ತೊಂದು ಕೇಸ್: ಬಿಜೆಪಿಯ ಬಿಎಲ್‌ ಸಂತೋಷ್ ಹೆಸರಲ್ಲಿ 30 ಲಕ್ಷ ವಂಚನೆ

ಇನಿತ್‌ ಕುಮಾರ್‌ ಅವರಿಗೆ ಬಿಎಲ್‌ ಸಂತೋಷ್ ಅಣ್ಣನ ಮಗನೆಂದು ಪರಿಚಯಿಸಿಕೊಂಡಿದ್ದ ಯುವರಾಜ್‌, ನಿನ್ನನ್ನು ರಾಷ್ಟ್ರಮಟ್ಟದಲ್ಲಿ ಯೂತ್ ಐಕಾನ್ ಮಾಡುವುದಾಗಿ ನಂಬಿಸಿದ್ದ. ಅಲ್ಲದೆ ಸೆಂಟ್ರಲ್ ಸಿಲ್ಕ್ ಬೋರ್ಡ್ ಅಧ್ಯಕ್ಷ ಮಾಡುವುದಾಗಿ ಪುಂಗಿ ಊದಿದ್ದ. ಇದಕ್ಕಾಗಿ 3 ಕೋಟಿ ರೂ. ಹಣವನ್ನು ಯುವರಾಜ್‌ ಇನಿತ್‌ ಕುಮಾರ್‌ ಬಳಿ ಬೇಡಿಕೆ ಇಟ್ಟಿದ್ದಾನೆ.

Vijaya Karnataka Web 11 Jan 2021, 3:16 pm
ಬೆಂಗಳೂರು: ಸಿಸಿಬಿ ಕಸ್ಟಡಿಯಲ್ಲಿರುವ ವಂಚಕ ಯುವರಾಜ್ ವಿರುದ್ಧ ಇದೀಗ ಮತ್ತೊಂದು ಎಫ್‌ಐಆರ್‌ ದಾಖಲಾಗಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್‌ ಸಂತೋಷ್ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಯುವರಾಜ್‌ ಮೋಸ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ. ಬೆಂಗಳೂರಿನ ಬಿಲ್ಡರ್‌ ಇನಿತ್‌ಕುಮಾರ್ ಎಂಬುವವರಿಗೆ ಯುವರಾಜ್‌ ವಂಚಿಸಿರುವ ಬಗ್ಗೆ ಅವರು ದೂರು ದಾಖಲಿಸಿದ್ದಾರೆ.
Vijaya Karnataka Web 1
Yuvaraj


ಇನಿತ್‌ ಕುಮಾರ್‌ ಅವರಿಗೆ ಬಿಎಲ್‌ ಸಂತೋಷ್ ಅಣ್ಣನ ಮಗನೆಂದು ಪರಿಚಯಿಸಿಕೊಂಡಿದ್ದ ಯುವರಾಜ್‌, ನಿನ್ನನ್ನು ರಾಷ್ಟ್ರಮಟ್ಟದಲ್ಲಿ ಯೂತ್ ಐಕಾನ್ ಮಾಡುವುದಾಗಿ ನಂಬಿಸಿದ್ದ. ಅಲ್ಲದೆ ಸೆಂಟ್ರಲ್ ಸಿಲ್ಕ್ ಬೋರ್ಡ್ ಅಧ್ಯಕ್ಷ ಮಾಡುವುದಾಗಿ ಪುಂಗಿ ಊದಿದ್ದ. ಇದಕ್ಕಾಗಿ 3 ಕೋಟಿ ರೂ. ಹಣವನ್ನು ಯುವರಾಜ್‌ ಇನಿತ್‌ ಕುಮಾರ್‌ ಬಳಿ ಬೇಡಿಕೆ ಇಟ್ಟಿದ್ದಾನೆ.

ಅಷ್ಟು ಹಣ ತನ್ನ ಬಳಿ ಇಲ್ಲ ಎಂದಿದ್ದಕ್ಕೆ ಕೊನೆಗೆ 30 ಲಕ್ಷ ರೂಪಾಯಿ ಪಡೆದು ಇತಿನ್‌ ಕುಮಾರ್‌ಗೆ ವಂಚಿಸಿದ್ದಾನೆ ಎಂದು ಯುವರಾಜ್ ವಿರುದ್ಧ ಬಿಲ್ಡರ್ ಇನಿತ್‌ಕುಮಾರ್ ಆರೋಪಿಸಿದ್ದಾರೆ. ಆತನ ಮಾತನ್ನು ನಂಬಿ ಮೋಸ ಹೋಗಿರುವುದಾಗಿ ತಿಳಿಸಿರುವ ಇತಿನ್‌ ಈ ಬಗ್ಗೆ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೆಂಗಳೂರು: ಎಟಿಎಂನಿಂದಲೇ 15.39 ಲಕ್ಷ ರೂ. ಎಗರಿಸಿದ ಖತರ್ನಾಕ್‌ ಕಳ್ಳರು, ಕೈಚಳಕ ಹೇಗಿತ್ತು?

ಇನ್ನು ಗವರ್ನರ್ ಆಗಲು ಬಯಸಿದ್ದ ನಿವೃತ್ತ ನ್ಯಾಯಾಧೀಶೆಯೊಬ್ಬರು ಬರೋಬ್ಬರಿ 8.8 ಕೋಟಿ ರೂಪಾಯಿಯನ್ನು ಯುವರಾಜ್ ಸ್ವಾಮಿಗೆ ನೀಡಿದ್ದರು ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ವಂಚನೆ ದೂರು ದಾಖಲಾಗಿದೆ. ಅಲ್ಲದೆ ಪ್ರಮುಖ ಹೆಸರನ್ನು ಬಳಸಿ ಭಾರೀ ವಂಚನೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬರುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ