ಆ್ಯಪ್ನಗರ

ಮಾನವನ ದುರಾಸೆಯಿಂದ ಗುಬ್ಬಚ್ಚಿ ಸಂತತಿ ಮಾಯ

ಮಾನವ ತನ್ನ ಅಪರಿಮಿತ ಬುದ್ಧಿ ಶಕ್ತಿಯಿಂದ ಜೀವ ರಾಶಿಗಳ ಮೇಲೆ ಪ್ರಭುತ್ವ ಸಾಧಿಸಿ, ಪ್ರಕೃತಿಯ ಸಂಪತ್ತನ್ನು ಅನುಭವಿಸುತ್ತಿರುವುದರಿಂದ ಗುಬ್ಬಚ್ಚಿಯಂತಹ ಪುಟ್ಟ ಪಕ್ಷಿಗಳ ಸಂತತಿ ಮಾಯವಾಗುತ್ತಿದೆ ಎಂದು ಮರುಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪುರುಷೋತ್ತಮ್ ರೆಡ್ಡಿ ತಿಳಿಸಿದರು.

ವಿಕ ಸುದ್ದಿಲೋಕ 21 Mar 2016, 3:47 pm
ಆನೇಕಲ್: ಮಾನವ ತನ್ನ ಅಪರಿಮಿತ ಬುದ್ಧಿ ಶಕ್ತಿಯಿಂದ ಜೀವ ರಾಶಿಗಳ ಮೇಲೆ ಪ್ರಭುತ್ವ ಸಾಧಿಸಿ, ಪ್ರಕೃತಿಯ ಸಂಪತ್ತನ್ನು ಅನುಭವಿಸುತ್ತಿರುವುದರಿಂದ ಗುಬ್ಬಚ್ಚಿಯಂತಹ ಪುಟ್ಟ ಪಕ್ಷಿಗಳ ಸಂತತಿ ಮಾಯವಾಗುತ್ತಿದೆ ಎಂದು ಮರುಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪುರುಷೋತ್ತಮ್ ರೆಡ್ಡಿ ತಿಳಿಸಿದರು.
Vijaya Karnataka Web
ಮಾನವನ ದುರಾಸೆಯಿಂದ ಗುಬ್ಬಚ್ಚಿ ಸಂತತಿ ಮಾಯ


ತಾಲೂಕಿನ ಮರಸೂರು ಗ್ರಾಮದಲ್ಲಿ ಟಿವಿಎಸ್ ಕಾರ್ಖಾನೆ ಹಾಗೂ ಮರುಸೂರು ಪಂಚಾಯಿತಿ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಗುಬ್ಬಚ್ಚಿ ದಿನಾಚರಣೆಯಲ್ಲಿ ಮಾತನಾಡಿದ ಅವರು, 25 ವರ್ಷಗಳ ಹಿಂದೆ ಗುಬ್ಬಚ್ಚಿಗಳ ಕಲರವ ಇಂಪಾಗಿ ಕೇಳುತಿತ್ತು. ಇಂದು ಮಾನವನ ದುರಾಸೆಯಿಂದ ಇವೆಲ್ಲ ಮಾಯವಾಗಿದೆ ಎಂದರು.

ಮಾನವನ ದುರಾಸೆಯ ಪ್ರತಿಫಲವಾಗಿ ಇಂದು ಅನ್ನ ನೀಡುವ ಭೂತಾಯಿಯನ್ನೂ ಹಣದಾಸೆಗೆ ಮಾರಾಟ ಮಾಡುತ್ತಿರುವುದರಿಂದ ಕಾಂಕ್ರೀಟ್ ನಾಡಾಗಿ ಪರಿವರ್ತನೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಷ್ಟೋ ಪ್ರಾಣಿ-ಪಕ್ಷಿಗಳ ಸಂಕುಲ ನಶಿಸಿ ಹೋಗುತ್ತಿದೆ. ಈ ನಿಟ್ಟಿನಲ್ಲಿ ಪ್ರಾಣಿ-ಪಕ್ಷಿಗಳ ರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಪಂಚಾಯಿತಿ ಸದಸ್ಯ ಎಸ್‌ಟಿಡಿ ರಮೇಶ್ ಮಾತನಾಡಿ, ಅತಿಯಾದ ಶಬ್ದಮಾಲಿನ್ಯ ಹಾಗೂ ಹೆಚ್ಚಾಗುತ್ತಿರುವ ಮೊಬೈಲ್ ಟವರ್‌ಗಳ ತರಂಗಗಳಿಂದ ಗುಬ್ಬಚ್ಚಿಯಂತಹ ಪುಟ್ಟ ಪಕ್ಷಿಗಳು ಮಾಯವಾಗುತಿದೆ. ಮತ್ತೆ ಅವುಗಳನ್ನು ರಕ್ಷಿಸಲು ಗುಬ್ಬಚ್ಚಿ ದಿನಾಚರಣೆಯನ್ನು ಟಿವಿಎಸ್ ಸಂಸ್ಥೆ ಹಾಗೂ ಮರುಸೂರು ಗ್ರಾಮ ಪಂಚಾಯಿತಿ ವತಿಯಿಂದ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.

ಟಿವಿಎಸ್ ಕಂಪನಿಯ ದೊರೈ, ಪಂಚಾಯಿತಿ ಸದಸ್ಯರಾದ ಮಂಜುಳಾ ಚಂದ್ರಾರೆಡ್ಡಿ, ಅನುಷಾ ರಾಮರೆಡ್ಡಿ, ನಿರ್ಮಲ ಆನಂದ್, ಕೃಷ್ಣಪ್ಪ, ಯೋಗ ಗುರು ನಾರಾಯಣಮ್ಮ ಮತ್ತಿತರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ