ಆ್ಯಪ್ನಗರ

ಶಿಕ್ಷ ಕರ ಸೇವೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಶ್ರೇಷ್ಠವಾದದ್ದು

ಸೂಲಿಬೆಲೆ: ಅತ್ಯಂತ ಶ್ರೇಷ್ಠವಾಗಿರುವ ಶಿಕ್ಷ ಕ ವೃತ್ತಿಯಲ್ಲಿ ಕೆಲಸ ಮಾಡುವವರನ್ನು ಗುರುತಿಸಿ ಅವರ ಸೇವೆಯನ್ನು ಪ್ರೋತ್ಸಾಹಿಸಿ ಗೌರವಿಸುವ ಕೆಲಸ ಎಲ್ಲರಿಂದಾಗಬೇಕು. ಸಮಾಜಕ್ಕೆ ಉತ್ತಮ ನಾಗರಿಕರನ್ನಾಗಿ ತಯಾರು ಮಾಡುವ ಶಿಕ್ಷ ಕರ ಸೇವೆ ಸ್ಮರಣೀಯವಾಗಿದೆ ಎಂದು ಹೊಸಕೋಟೆ ಕಸಾಪ ಕೋಶಾಧ್ಯಕ್ಷ ಎಂ.ಆರ್‌ ಉಮೇಶ್‌ ಹೇಳಿದರು.

Vi.Ka. Suddiloka 24 Dec 2017, 5:00 am

ಸೂಲಿಬೆಲೆ: ಅತ್ಯಂತ ಶ್ರೇಷ್ಠವಾಗಿರುವ ಶಿಕ್ಷ ಕ ವೃತ್ತಿಯಲ್ಲಿ ಕೆಲಸ ಮಾಡುವವರನ್ನು ಗುರುತಿಸಿ ಅವರ ಸೇವೆಯನ್ನು ಪ್ರೋತ್ಸಾಹಿಸಿ ಗೌರವಿಸುವ ಕೆಲಸ ಎಲ್ಲರಿಂದಾಗಬೇಕು. ಸಮಾಜಕ್ಕೆ ಉತ್ತಮ ನಾಗರಿಕರನ್ನಾಗಿ ತಯಾರು ಮಾಡುವ ಶಿಕ್ಷ ಕರ ಸೇವೆ ಸ್ಮರಣೀಯವಾಗಿದೆ ಎಂದು ಹೊಸಕೋಟೆ ಕಸಾಪ ಕೋಶಾಧ್ಯಕ್ಷ ಎಂ.ಆರ್‌ ಉಮೇಶ್‌ ಹೇಳಿದರು.

ಸೂಲಿಬೆಲೆ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಹಮ್ಮಿಕೊಂಡಿದ್ದ ಶಿಕ್ಷ ಕರಿಗೆ ಸನ್ಮಾನ ಕಾರ‍್ಯಕ್ರಮದಲ್ಲಿ ಮಾತನಾಡಿದರು.

ಒಬ್ಬರ ಮನೆಯಲ್ಲಿ ಒಂದಿಬ್ಬರು ಮಕ್ಕಳನ್ನು ನಿತ್ಯ ನಿಭಾಯಿಸಲು ಆಗೋಲ್ಲ. ಇಂಥದ್ದರಲ್ಲಿ ನಿತ್ಯ ಹತ್ತಾರು ಮಕ್ಕಳನ್ನು ಶಾಲೆಯಲ್ಲಿ ನಿಭಾಯಿಸುವುದು ಸುಲಭದ ಕೆಲಸವಲ್ಲ. ಎಲ್ಲ ಹುದ್ದೆಗಳಿಗಿಂತ ಶಿಕ್ಷ ಕ ಹುದ್ದೆ ಜವಾಬ್ದಾರಿ ಹಾಗೂ ಸಮಾಜದಲ್ಲಿ ಉತ್ತಮ ಗೌರವವನ್ನು ತಂದುಕೊಡುವ ವೃತ್ತಿಯಾಗಿದೆ. ಒತ್ತಡದಲ್ಲಿ ಕೆಲಸ ಮಾಡುವ ಶಿಕ್ಷ ಕರನ್ನು ಗುರುತಿಸಿ ಸನ್ಮಾನಿಸುವುದರಿಂದ ಮತ್ತಷ್ಟು ಜವಾಬ್ದಾರಿ ಹೆಚ್ಚಾಗಿ ಮಕ್ಕಳ ಕಲಿಕೆಯತ್ತ ಹೆಚ್ಚು ಆಸಕ್ತಿಯನ್ನು ತೋರಲು ಪ್ರೇರಣೆ ನೀಡಲಿದೆ ಎಂದರು.

ಹೊಸಕೋಟೆ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ನಿರ್ದೇಶಕ ಅನಂತರಾಮಯ್ಯ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಶಿಕ್ಷ ಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾದರಿಯಾಗಿದೆ. ಕನ್ನಡ ಸಾಹಿತ್ಯ ಚಟುವಟಿಕೆಗಳ ಜತೆಗೆ ಇಂಥ ಕಾರ‍್ಯಕ್ರಮಗಳು ಸಮಾಜದ ಬದಲಾವಣೆಗೆ ಕಾರಣವಾಗಲಿವೆ. ಶಿಕ್ಷ ಕರಿಗೆ ಮತ್ತಷ್ಟು ಸ್ಫೂರ್ತಿಯನ್ನು ತುಂಬುವ ಕೆಲಸ ಕಸಾಪದಿಂದ ನಡೆಯುತ್ತಿದ್ದು, ಇದು ನಿರಂತರವಾಗಿರಲಿ ಎಂದರು.

ಹಿರಿಯ ಶಿಕ್ಷ ಕಿ ಮಂಜುಳಾ, ಕನಕಲತಾ, ಕಲಾ, ರತ್ನಮ್ಮ, ಮಂಜುಳಾ, ಸುಕನ್ಯಾಬಾಯಿ, ನಂಜಮ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮುಖ್ಯ ಶಿಕ್ಷ ಕಿ ಓಂಕಾರಮ್ಮ, ಕಸಾಪ ಹೋಬಳಿ ಅಧ್ಯಕ್ಷ ಮೇಘ ಸ್ಟುಡಿಯೋ ಆನಂದ್‌, ಕಸಾಪ ಕಾರ‍್ಯದರ್ಶಿ ಆಂಜಿನಪ್ಪ, ಮಹಿಳಾ ಘಟಕದ ಸುನೀತಾ, ರಾಜೇಶ್ವರಿ, ನಾಗವೇಣಿ, ಶಿಕ್ಷ ಕಿ ಭಾರತಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ