ಆ್ಯಪ್ನಗರ

3.5 ಲಕ್ಷ ಮೌಲ್ಯದ ರಕ್ತಚಂದನ ವಶ

ಸಾರ್‌ ಇಲ್ಲೊಂದು ವಾಹನ ಅಪಘಾತಕ್ಕೀಡಾಗಿದೆ ಬೇಗ ಬನ್ನಿ ಅಂತ ಹೊಸಕೋಟೆ ಪೊಲೀಸರಿಗೆ ಸಾರ್ವಜನಿಕರೊಬ್ಬರು ಪೋನ್‌ ಮಾಡಿ ವಿಷಯ ತಿಳಿಸುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರಿಗೆ ಆಶ್ಚರ್ಯ ಕಾದಿತ್ತು. ಕ್ವಾಲಿಸ್‌ ವಾಹನವೊಂದೇ ಇದೆ, ಬೇರಾರ‍ಯವುದೇ ವಾಹನವಿಲ್ಲವಲ್ಲ ಎಂದು ಕುತೂಹಲದಿಂದ ಪರಿಶೀಲಿಸಿದಾಗ ಸುಮಾರು 372 ಕೆಜಿ ರಕ್ತ ಚಂದನ ಪತ್ತೆಯಾಗಿದೆ.

Vijaya Karnataka Web 14 May 2017, 9:00 am

ಸೂಲಿಬೆಲೆ: ಸಾರ್‌ ಇಲ್ಲೊಂದು ವಾಹನ ಅಪಘಾತಕ್ಕೀಡಾಗಿದೆ ಬೇಗ ಬನ್ನಿ ಅಂತ ಹೊಸಕೋಟೆ ಪೊಲೀಸರಿಗೆ ಸಾರ್ವಜನಿಕರೊಬ್ಬರು ಪೋನ್‌ ಮಾಡಿ ವಿಷಯ ತಿಳಿಸುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರಿಗೆ ಆಶ್ಚರ್ಯ ಕಾದಿತ್ತು. ಕ್ವಾಲಿಸ್‌ ವಾಹನವೊಂದೇ ಇದೆ, ಬೇರಾರ‍ಯವುದೇ ವಾಹನವಿಲ್ಲವಲ್ಲ ಎಂದು ಕುತೂಹಲದಿಂದ ಪರಿಶೀಲಿಸಿದಾಗ ಸುಮಾರು 372 ಕೆಜಿ ರಕ್ತ ಚಂದನ ಪತ್ತೆಯಾಗಿದೆ.

ಅಸಲಿಗೆ ನಡೆದಿದ್ದೇನು? ಶನಿವಾರ ಬೆಳಗ್ಗೆ 10 ಗಂಟೆ ಸಮಯದಲ್ಲಿ ದೇವನಹಳ್ಳಿ ಕಡೆಯಿಂದ ಸೂಲಿಬೆಲೆ ಮಾರ್ಗವಾಗಿ ಪಶ್ಚಿಮ ಬಂಗಾಳ ನೋಂದಣೆ ಸಂಖ್ಯೆಯ ಕ್ವಾಲಿಸ್‌ ವಾಹನವೊಂದು ಅತಿವೇಗವಾಗಿ ಹೊಸಕೋಟೆಯತ್ತ ಹೊರಟಿದೆ. ಆ ವೇಗ ಕಂಡು ಅಕ್ಕಪಕ್ಕದ ವಾಹನ ಸವಾರರು ಭಯಗೊಂಡಿದ್ದು, ದಾರಿಯಲ್ಲಿ ವಾಹನವೊಂದಕ್ಕೆ ಗುದ್ದಿ ನಿಲ್ಲಿಸಿದೆ ಹೋಗುತ್ತಿದ್ದನ್ನು ಕಂಡ ನಾಲ್ಕೈದು ಬೈಕ್‌ ಸವಾರರು ಕ್ವಾಲೀಸ್‌ ವಾಹನ ಬೆನ್ನತ್ತಿದ್ದು, ಇದನ್ನು ಕಂಡ ನಾಲ್ವರು ಕ್ವಾಲಿಸ್‌ ವಾಹನವನ್ನು ಲಕ್ಕೊಂಡಹಳ್ಳಿ ರಸ್ತೆ ಮಾರ್ಗದಲ್ಲಿಯೇ ನಿಲ್ಲಿಸಿ ಪರಾರಿಯಾಗಿದ್ದಾರೆ.

ಕ್ವಾಲಿಸ್‌ ಪರಿಶೀಲಿಸಿದಾಗ ಬೆಲೆ ಬಾಳುವ ರಕ್ತ ಚಂದನ ತುಂಡುಗಳು ಪತ್ತೆಯಾಗಿವೆ. ಸುಮಾರು 372 ಕೆಜಿಯಷ್ಟು ರಕ್ತ ಚಂದನವಿತ್ತು ಎಂದು ಪಿಎಸ್‌ಐ ರಂಗಸ್ವಾಮಿ ತಿಳಿಸಿದ್ದಾರೆ. ಹೊಸಕೋಟೆ ಪೊಲೀಸರು ಮಾಲು ಸಮೇತ ವಾಹನವನ್ನು ವಶಪಡೆಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ