ಆ್ಯಪ್ನಗರ

ಕಳ್ಳದಾರಿ ಮೂಲಕ ಗ್ರಾಮಕ್ಕೆ ಎಂಟ್ರಿ ತಮಿಳುನಾಡಿನ ಏಳು ಮಂದಿಗೆ ಕ್ವಾರಂಟೈನ್‌!

ತಮಿಳುನಾಡು ಗಡಿಭಾಗದಿಂದ ಕಳ್ಳದಾರಿಯ ಮೂಲಕ ಪಟ್ಟಣಕ್ಕೆ ಬಂದ ಏಳು ಜನರನ್ನು ತಾಲೂಕು ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.

Vijaya Karnataka Web 23 May 2020, 4:03 pm
ತ್ಯಾಮಗೊಂಡ್ಲು: ಲಾಕ್‌ಡೌನ್‌ ಸಡಿಲಿಕೆಯಿಂದ ತಮಿಳುನಾಡು ಗಡಿಭಾಗದಿಂದ ಕಳ್ಳದಾರಿಯ ಮೂಲಕ ಪಟ್ಟಣಕ್ಕೆ ಬಂದ ಏಳು ಜನರನ್ನು ತಾಲೂಕು ಆಸ್ಪತ್ರೆಯಲ್ಲಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ತ್ಯಾಮಗೊಂಡ್ಲು ಪಟ್ಟಣದಲ್ಲಿ ಸುಮಾರು ವರ್ಷಗಳಿಂದ ಪಾನಿಪುರಿ ಮಾರಾಟ ಮಾಡುತ್ತಿದ್ದ ಕುಟುಂಬವೊಂದು ಲಾಕ್‌ಡೌನ್‌ ಸಮಯಕ್ಕೂ ಮುಂಚೆ ತಮಿಳುನಾಡಿಗೆ ಹೋಗಿದ್ದರು.
Vijaya Karnataka Web corona-agencies


ಕಳೆದ ಎರಡು ತಿಂಗಳಿಂದ ಅಲ್ಲಿಯೇ ಇದ್ದರು ಲಾಕ್‌ಡೌನ್‌ ಸಡಿಲಿಕೆಯಾದ ಕಾರಣ ಗುರುವಾರ ತಡರಾತ್ರಿ ಪಟ್ಟಣದಲ್ಲಿರುವ ತಮ್ಮ ಮನೆಗೆ ಬಂದು ನೆಲೆಸಿದ್ದರು. ಮಾಹಿತಿ ಸಿಕ್ಕಿದ ತಕ್ಷಣ ಮನೆಗೆ ತೆರಳಿದ ವೈದ್ಯಾಧಿಕಾರಿ ಡಾ.ಲಕ್ಷ್ಮಿಕಾಂತ್ ಮತ್ತು ಸಿಬ್ಬಂದಿ ಕರೆದುಕೊಂಡು ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ.

ಆರೋಗ್ಯ ತಪಾಸಣೆ ಮಾಡಿಸಿಲ್ಲ!
ತಮಿಳುನಾಡಿನ ಮೂಲದ ಒಂದೇ ಕುಟುಂಬ ಏಳು ಮಂದಿಯು ಕೊರೊನಾ ತಪಾಸಣೆಯನ್ನು ಮಾಡಿಸದೇ ಮತ್ತು ಗಡಿಯ ಮುಖ್ಯ ರಸ್ತೆಯಲ್ಲಿ ಬಾರದೇ ಕಳ್ಳ ದಾರಿಯ ಮೂಲಕ ಬಂದಿದ್ದಾರೆ. ತ್ಯಾಮಗೊಂಡ್ಲುಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಲಕ್ಷ್ಮಿಕಾಂತ್‌ ಮತ್ತು ಪೊಲೀಸ್‌ ಸಿಂಬ್ಬದಿ ಅವರ ಮನೆಗೆ ಭೇಟಿ ನೀಡಿ ವಿಚಾರಿಸಿದಾಗ ಕಳ್ಳದಾರಿಯಲ್ಲಿ ಬಂದಿರುವುದಾಗಿ ತಿಳಿಸಿದ್ದಾರೆ.

ವಲಸೆ ಕಾರ್ಮಿಕರೊಂದಿಗೆ ರಾಹುಲ್ ಸಂವಾದ‌: ಕಾಂಗ್ರೆಸ್‌ನಿಂದ ಡಾಕ್ಯುಮೆಂಟರಿ ಬಿಡುಗಡೆ


ಕೊರೊನಾದ ಕ್ವಾರಂಟೈನ್‌ ಭಯದಿಂದ ಹೀಗೆ ಮಾಡಿದ್ದೇವೆ ಎಂದಿದ್ದಾರೆ ಕುಟುಂಬಸ್ಥರು. ಆರೋಗ್ಯ ತಪಾಸಣೆಯನ್ನು ಮಾಡಿ ಗಂಟಲು ದ್ರವ ಪರೀಕ್ಷೆ ಮತ್ತು ಕ್ವಾರಂಟೈನ್‌ಗೆ ತಾಲೂಕು ಆಸ್ಪತ್ರೆಗೆ ಏಳು ಮಂದಿಯನ್ನು ಕಲುಹಿಸಲಾಗಿದೆ. ರಾತ್ರಿ ವೇಳೆಯಲ್ಲಿ ಬಂದು ನೆಲೆಸಿದ್ದ ಹಿನ್ನೆಲೆ ಮನೆಯ ಸುತ್ತಮುತ್ತ ಸ್ಯಾನಿಟೈಸರ್‌ ಸಿಂಪಡಿಸುವಂತೆ ಅಕ್ಕಪಕ್ಕದ ಮನೆಯವರು ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದಾರೆ. ಇನ್ನು ಇವರ ಕಳ್ಳ ದಾರಿ ಮೂಲಕ ಎಂಟ್ರಿಯಿಂದಾಗಿ ತ್ಯಾಮಗೊಂಡ್ಲುವಿನಲ್ಲಿ ಕೊರೊನಾದ ಭಯದ ಛಾಯೆ ಆವರಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ