ದಾಬಸ್ಪೇಟೆ: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಾಲೀಕರ ಪರ ನಿಯಮಾವಳಿ ರೂಪಿಸುತ್ತಿದ್ದು ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿಕಾರ್ಮಿಕರು ಹೋರಾಟಗಳ ಮುಖಾಂತರ ನ್ಯಾಯ ಪಡೆಯಬೇಕು ಎಂದು ಸಿಐಟಿಯು ರಾಜ್ಯ ಸಮಿತಿಯ ಉಪಾಧ್ಯಕ್ಷ ಉಮೇಶ್ ತಿಳಿಸಿದರು.
ದಾಬಸ್ಪೇಟೆ ಪಟ್ಟಣದ ಖಾಸಗಿ ಭವನದಲ್ಲಿಸಿಐಟಿಯು ಸಂಘಟನೆಯ ವತಿುಂದ ಹಮ್ಮಿಕೊಂಡಿರುವ 12ನೇ ಕಾರ್ಮಿಕ ಸಮ್ಮೇಳನವನ್ನು ಸಸಿಗಳಿಗೆ ನೀರನ್ನು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಂಘಟಿತ ವಲಯದಲ್ಲಿಕಾಂಟ್ರಾಕ್ಟ್ ಹಾಗೂ ಕ್ಯಾಷುಯಲ್ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದೆ. ಖಾಯಂ ಉದ್ಯೋಗ ಮರೀಚಿಕೆಯಾಗಿದೆ. ನಮ್ಮನ್ನು ಆಳುವ ಸರಕಾರಗಳು ಕಾರ್ಮಿಕ ವರ್ಗವನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ. ವಿದ್ಯಾವಂತ ನಿರುದ್ಯೋಗಿಗಳು ಸಂಖ್ಯೆ ಹೆಚ್ಚಾಗುತ್ತಿವೆ. ಎಲೆಕ್ಟ್ರಾನಿಕ್ ಕಂಪನಿಗಳು ಮುಚ್ಚಿಕೊಂಡು ಹೋಗುತ್ತಿವೆ ಎಂದು ವಾಗ್ದಾಳಿ ನಡೆಸಿದರು.
ಸಿಐಟಿಯು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮೀೕನಾಕ್ಷಿ ಸುಂದರಂ ಮಾತನಾಡಿ ಕಾರ್ಮಿಕರ ಆದಾಯವನ್ನು ಮೊಟುಕುಗೊಳಿಸಿ ಮಾಲೀಕರ ಆದಾಯವನ್ನು ದುಪ್ಪಟ್ಟು ಮಾಡಿಕೊಳ್ಳುತ್ತಿದ್ದಾರೆ. ಕಾರ್ಮಿಕರು ಸಂಘ ಕಟ್ಟುವುದು ಅವರ ಮೂಲಭೂತ ಹಕ್ಕು, ಅದೇ ರೀತಿ ಸಂಘಕ್ಕೆ ಮಾನ್ಯತೆ ನೀಡಬೇಕಾದದ್ದು ಮಾಲೀಕರ ಕರ್ತವ್ಯ. ಆದರೆ ಇವೆಲ್ಲವನ್ನು ಬದಿಗೊತ್ತಲಾಗಿದ್ದು ಇವೆಲ್ಲವುಗಳ ವಿರುದ್ಧ ಸಮ್ಮೇಳನಗಳನ್ನು ಹಮ್ಮಿಕೊಂಡು ಇದೇ ತಿಂಗಳ 30ರಂದು ನವದೆಹಲಿಯಲ್ಲಿಕೇಂದ್ರಕಾರ್ಮಿಕ ಸಂಘಟನೆಗಳು ಬಹಿರಂಗ ಸಭೆ ಏರ್ಪಡಿಸಿ ಕೇಂದ್ರ ಸರಕಾರಕ್ಕೆ ಬಿಸಿ ಮುಟ್ಟಿಸಲು ನಿರ್ದರಿಸಿದ್ದೇವೆ ಎಂದರು.
ಸೋಂಪುರ ಹೋಬಳಿ ಪ್ರಧಾನ ಕಾರ್ಯದರ್ಶಿ ಬಸವರಾಜು ಮಾತನಾಡಿ, ಮೂರು ದಿನಗಳ ಕಾಲ ನಡೆಯಲಿರುವ ಸಮ್ಮೇಳನವು, ಕಾರ್ಮಿಕ ಕಾಯ್ದೆ, ಕಾರ್ಮಿಕ ಸಂಘ ಸ್ಥಾಪನೆ, ಜಾಗತಿಕ ಉದ್ಯೋಗಿಕ ಮಾಹಿತಿ ಹೀಗೆ ಹತ್ತು ಹಲವು ಕಾರ್ಮಿಕ ನೀತಿಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದರು.
ನೆಲಮಂಗಲ ತಾಲೂಕು ಅಧ್ಯಕ್ಷ ತಿರುಮಲಾಚಾರ್, ಬೆಂಗಳೂರು ಉತ್ತರ ವಲಯ ಅಧ್ಯಕ್ಷ ಪ್ರತಾಪ್ಸಿಂಹ, ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್, ಜಿಲ್ಲಾಸಮಿತಿ ಮುನಿರಾಜು, ತಾಲೂಕು ಕಾರ್ಯಾದ್ಯಕ್ಷ ನರಸಿಂಹಮೂರ್ತಿ, ರೈತಮುಖಂಡ ಚಂದ್ರತೇಜಸ್ವಿ, ಗೋಪಾಲ್ಗೌಡ,, ಅಂಜುಮ್ ಸೇರಿದಂತೆ ಹಲವಾರು ಕಾರ್ಮಿಕ ಮುಖಂಡರು ಇದ್ದರು.
ದಾಬಸ್ಪೇಟೆ ಪಟ್ಟಣದ ಖಾಸಗಿ ಭವನದಲ್ಲಿಸಿಐಟಿಯು ಸಂಘಟನೆಯ ವತಿುಂದ ಹಮ್ಮಿಕೊಂಡಿರುವ 12ನೇ ಕಾರ್ಮಿಕ ಸಮ್ಮೇಳನವನ್ನು ಸಸಿಗಳಿಗೆ ನೀರನ್ನು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಂಘಟಿತ ವಲಯದಲ್ಲಿಕಾಂಟ್ರಾಕ್ಟ್ ಹಾಗೂ ಕ್ಯಾಷುಯಲ್ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದೆ. ಖಾಯಂ ಉದ್ಯೋಗ ಮರೀಚಿಕೆಯಾಗಿದೆ. ನಮ್ಮನ್ನು ಆಳುವ ಸರಕಾರಗಳು ಕಾರ್ಮಿಕ ವರ್ಗವನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ. ವಿದ್ಯಾವಂತ ನಿರುದ್ಯೋಗಿಗಳು ಸಂಖ್ಯೆ ಹೆಚ್ಚಾಗುತ್ತಿವೆ. ಎಲೆಕ್ಟ್ರಾನಿಕ್ ಕಂಪನಿಗಳು ಮುಚ್ಚಿಕೊಂಡು ಹೋಗುತ್ತಿವೆ ಎಂದು ವಾಗ್ದಾಳಿ ನಡೆಸಿದರು.
ಸಿಐಟಿಯು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮೀೕನಾಕ್ಷಿ ಸುಂದರಂ ಮಾತನಾಡಿ ಕಾರ್ಮಿಕರ ಆದಾಯವನ್ನು ಮೊಟುಕುಗೊಳಿಸಿ ಮಾಲೀಕರ ಆದಾಯವನ್ನು ದುಪ್ಪಟ್ಟು ಮಾಡಿಕೊಳ್ಳುತ್ತಿದ್ದಾರೆ. ಕಾರ್ಮಿಕರು ಸಂಘ ಕಟ್ಟುವುದು ಅವರ ಮೂಲಭೂತ ಹಕ್ಕು, ಅದೇ ರೀತಿ ಸಂಘಕ್ಕೆ ಮಾನ್ಯತೆ ನೀಡಬೇಕಾದದ್ದು ಮಾಲೀಕರ ಕರ್ತವ್ಯ. ಆದರೆ ಇವೆಲ್ಲವನ್ನು ಬದಿಗೊತ್ತಲಾಗಿದ್ದು ಇವೆಲ್ಲವುಗಳ ವಿರುದ್ಧ ಸಮ್ಮೇಳನಗಳನ್ನು ಹಮ್ಮಿಕೊಂಡು ಇದೇ ತಿಂಗಳ 30ರಂದು ನವದೆಹಲಿಯಲ್ಲಿಕೇಂದ್ರಕಾರ್ಮಿಕ ಸಂಘಟನೆಗಳು ಬಹಿರಂಗ ಸಭೆ ಏರ್ಪಡಿಸಿ ಕೇಂದ್ರ ಸರಕಾರಕ್ಕೆ ಬಿಸಿ ಮುಟ್ಟಿಸಲು ನಿರ್ದರಿಸಿದ್ದೇವೆ ಎಂದರು.
ಸೋಂಪುರ ಹೋಬಳಿ ಪ್ರಧಾನ ಕಾರ್ಯದರ್ಶಿ ಬಸವರಾಜು ಮಾತನಾಡಿ, ಮೂರು ದಿನಗಳ ಕಾಲ ನಡೆಯಲಿರುವ ಸಮ್ಮೇಳನವು, ಕಾರ್ಮಿಕ ಕಾಯ್ದೆ, ಕಾರ್ಮಿಕ ಸಂಘ ಸ್ಥಾಪನೆ, ಜಾಗತಿಕ ಉದ್ಯೋಗಿಕ ಮಾಹಿತಿ ಹೀಗೆ ಹತ್ತು ಹಲವು ಕಾರ್ಮಿಕ ನೀತಿಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದರು.
ನೆಲಮಂಗಲ ತಾಲೂಕು ಅಧ್ಯಕ್ಷ ತಿರುಮಲಾಚಾರ್, ಬೆಂಗಳೂರು ಉತ್ತರ ವಲಯ ಅಧ್ಯಕ್ಷ ಪ್ರತಾಪ್ಸಿಂಹ, ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್, ಜಿಲ್ಲಾಸಮಿತಿ ಮುನಿರಾಜು, ತಾಲೂಕು ಕಾರ್ಯಾದ್ಯಕ್ಷ ನರಸಿಂಹಮೂರ್ತಿ, ರೈತಮುಖಂಡ ಚಂದ್ರತೇಜಸ್ವಿ, ಗೋಪಾಲ್ಗೌಡ,, ಅಂಜುಮ್ ಸೇರಿದಂತೆ ಹಲವಾರು ಕಾರ್ಮಿಕ ಮುಖಂಡರು ಇದ್ದರು.