ಆ್ಯಪ್ನಗರ

ಪೇಜಾವರ ಶ್ರೀಗಳ ಎಸ್ಕಾರ್ಟ್ ವಾಹನಕ್ಕೆ ಕಾರು ಡಿಕ್ಕಿ: ದಂಪತಿ ಸಾವು

ಪೇಜಾವರ ಶ್ರೀಗಳ ಎಸ್ಕಾರ್ಟ್ ವಾಹನಕ್ಕೆ ಇಂಡಿಗೋ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ದಂಪತಿಗಳು ಸ್ಥಳದಲ್ಲೆ ಸಾವನ್ನಪಿದ್ದಾರೆ.

Vijaya Karnataka Web 18 Nov 2018, 1:18 pm
ಬೆಂಗಳೂರು: ಬೆಂಗಳೂರಿನಿಂದ ಚಿಂತಾಮಣಿ ರಸ್ತೆಯಲ್ಲಿ ತೆರಳುತ್ತಿದ್ದ ಪೇಜಾವರ ಶ್ರೀಗಳ ಎಸ್ಕಾರ್ಟ್ ವಾಹನಕ್ಕೆ ಇಂಡಿಗೋ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ದಂಪತಿಗಳು ಸ್ಥಳದಲ್ಲೆ ಸಾವನ್ನಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕರಪನಹಳ್ಳಿ ಗೇಟ್ ಬಳಿ ನಡೆದಿದೆ.
Vijaya Karnataka Web bang


ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಬೆಂಗಳೂರಿನಿಂದ ಹೊಸಕೋಟೆ ಮುಖಾಂತರ ಚಿಂತಾಮಣಿ ರಸ್ತೆಯಲ್ಲಿ ತೆರಳುತ್ತಿದ್ದ ಪೇಜಾವರ ಶ್ರೀಗಳ ಕಾರಿನ ಮುಂದೆ ಸಾಗುತ್ತಿದ್ದ ಪೊಲೀಸ್ ಎಸ್ಕಾರ್ಟ್ ವಾಹನಕ್ಕೆ, ಚಿಂತಾಮಣಿ ಕಡೆಯಿಂದ ಎದುರಿನಿಂದ ಅತಿವೇಗವಾಗಿ ಬಂದ ಇಂಡಿಗೋ ಕಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಇಂಡಿಗೋ ಕಾರಿನಲ್ಲಿದ್ದ ಚಿಂತಾಮಣಿ ಮೂಲದ ದಂಪತಿಗಳಾದ ರಾಮಕೃಷ್ಣಯ್ಯ ಮತ್ತು ಸರ್ವಲೋಚನಂ ಎಂಬುವರು ಸ್ಥಳದಲ್ಲೇ ದುರ್ಮಣರಕ್ಕೀಡಾಗಿದ್ದಾರೆ.

ಎಸ್ಕಾರ್ಟ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದರಿಂದ ಅದೃಷ್ಟವಶಾತ್ ಪೇಜಾವರ ಶ್ರೀಗಳು ಸಂಚರಿಸುತ್ತಿದ್ದ ಕಾರು ಅಪಘಾತದಿಂದ ಪಾರಾಗಿದೆ. ಇನ್ನೂ ಎಸ್ಕಾರ್ಟ್ ಕಾರಿನಲ್ಲಿದ್ದ ಎಎಸ್ಐ ಶಂಭಯ್ಯ ಕಾಲಿಗೂ ಸಹ ಗಂಭಿರ ಗಾಯವಾಗಿದ್ದು, ಅವರನ್ನು ಬೆಂಗಳೂರಿನ ಆಸ್ವತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಅಪಘಾತವಾದ ನಂತರ ಗಾಯಾಳುಗಳನ್ನು ಆ್ಯಂಬುಲೆನ್ಸ್ ಮುಖಾಂತರ ಆಸ್ಪತ್ರೆಗೆ ಸಾಗಿಸುವ ತನಕ ಶ್ರೀಗಳು ಸ್ಥಳದಲ್ಲಿದ್ದು ಅವರ ಯೋಗಕ್ಷೇಮ ವಿಚಾರಿಸಿ ತಮ್ಮ ಮುಂದಿನ ಪಯಣ ಬೆಳೆಸಿದ್ದಾರೆ.

ಈ ಸಂಬಂಧ ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ