ಎನ್.ಪ್ರಸನ್ನಕುಮಾರ್ ಬೆಂಗಳೂರು ಗ್ರಾಮಾಂತರ
ಸಂಕ್ರಾಂತಿ ಬಳಿಕ ಜಿಲ್ಲಾಡಳಿತ ಸಂಪೂರ್ಣ ದೇವನಹಳ್ಳಿ ತಾಲೂಕು ಬೀರಸಂದ್ರ ಬಳಿಯಿರುವ ಜಿಲ್ಲಾಡಳಿತ ಭವನಕ್ಕೆ ಸ್ಥಳಾಂತರಗೊಳ್ಳುವ ಮೂಲಕ ಜಿಲ್ಲಾ ಕೇಂದ್ರದಲ್ಲೇ ಎಲ್ಲಾ ಇಲಾಖೆಗಳು ಕಾರ್ಯನಿರ್ವಹಿಸಲಿವೆ.
ಈಗಾಗಲೇ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಕೆಲವು ಇಲಾಖೆಗಳು ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದವು. ಆದರೆ ಜಿಪಂ ಅಧ್ಯಕ್ಷ, ಉಪಾಧ್ಯಕ್ಷ, ಸಿಇಒ ಕಚೇರಿ ಸೇರಿದಂತೆ ಇಲಾT2æಗಳ ಒಳಾಂಗಣ ವಿನ್ಯಾಸ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಹಲವು ಇಲಾಖೆಗಳು ಬೆಂಗಳೂರಿನಲ್ಲೇ ಕಾರ್ಯ ನಿರ್ವಹಿಸುತ್ತಿದ್ದವು. ಆದರೀಗ ಜ.16ರಿಂದ ಜಿಪಂ ಕಚೇರಿ ಜತೆಗೆ ಎಲ್ಲಾ ಇಲಾಖಾ ಕಚೇರಿಗಳು ಸ್ಥಳಾಂತರಗೊಳ್ಳಲಿವೆ.
ಜಿಲ್ಲಾಡಳಿತ ಭವನದಲ್ಲಿ ನೀರು, ಶೌಚಾಲಯ ಸಮಸ್ಯೆ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಬಹಳ ಕಾಡಿತ್ತು. ಆದರೆ ಇತ್ತೀಚಿಗೆ ನೀರಿನ ಪೂರೈಕೆ ಸಮಸ್ಯೆ ನೀಗಿರುವುದರಿಂದ ಬೀಗ ಹಾಕಿದ್ದ ಶೌಚಾಲಯಗಳಿಗೆ ಮುಕ್ತಿ ಸಿಕ್ಕಂತಾಗಿದೆ. ಜತೆಗೆ ಕರ್ತವ್ಯ ನಿರ್ವಹಣೆಗೆ ಅತಿ ಮುಖ್ಯವಾಗಿ ಅವಶ್ಯವಿದ್ದ ವಿದ್ಯುತ್, ಇಂಟರ್ನೆಟ್ ಸಂಪರ್ಕ ಕೂಡ ಕಲ್ಪಿಸಿರುವುದರಿಂದ ಎಲ್ಲಾ ಇಲಾಖೆಗಳು ಜಿಲ್ಲಾ ಕೇಂದ್ರದಿಂದಲೇ ಕಾರ್ಯ ನಿರ್ವಹಿಸಲಿವೆ.
ಇಡೀ ಆಡಳಿತವೇ ಸ್ಥಳಾಂತರಗೊಳ್ಳುವುದರಿಂದ ಅಧಿಕಾರಿಗಳ ಸಭೆ, ಸಮಾರಂಭ, ಪ್ರತಿಭಟನೆ, ಹೋರಾಟ, ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಜಿಲ್ಲಾಡಳಿತ ಭವನದಲ್ಲೇ ನಡೆಯುವುದರಿಂದ ದಶಕಗಳ ಬಳಿಕ ಜಿಲ್ಲೆಗೊಂದು ಪ್ರತ್ಯೇಕ ಸ್ಥಾನಮಾನ ಸಿಕ್ಕಂತಾಗುತ್ತಿದೆ ಎಂದು ಜಿಲ್ಲೆಯ ಜನತೆ ಹರ್ಷ ವ್ಯಕ್ತಪಡಿಸುತ್ತಿದ್ದರೆ ಅಧಿಕಾರಿಗಳು ಮಾತ್ರ ಜೇಬಿಗೆ ಕತ್ತರಿ ಬೀಳಲಿದೆಯಲ್ಲಾ ಎಂಬ ಚಿಂತೆಗೆ ಬಿದ್ದಿದ್ದಾರೆ.
ವೇತನ ಕಡಿತ: ಸದ್ಯ ಜಿಲ್ಲಾಡಳಿತ ಕಾರ್ಯನಿರ್ವಹಿಸುವ ಸ್ಥಳ ಗ್ರಾಪಂ ವ್ಯಾಪ್ತಿಗೆ ಒಳಪಡುವುದರಿಂದ ಇಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳಿಗೆ ಸಿಗುತ್ತಿದ್ದ ಟಿಎ, ಡಿಎ, ಎಚ್ಆರ್ಎಗಳಲ್ಲಿ ಕಡಿತ ಉಂಟಾಗಲಿದೆ. ಬೆಂಗಳೂರು ಮಹಾನಗರದ ಸ್ಥಾನಮಾನದಲ್ಲಿ ಪಡೆಯುತ್ತಿದ್ದ ವೇತನ ಇನ್ನುಮುಂದೆ ಗ್ರಾಪಂ ಮಟ್ಟಕ್ಕೆ ಇಳಿಯುವುದರಿಂದ ವರ್ಷಕ್ಕೆ 50 ಸಾವಿರದಿಂದ ಲಕ್ಷ ರೂ.ವರೆಗೆ ಕಡಿತವಾಗುವುದು ಸಿಬ್ಬಂದಿಗಳ ಚಿಂತೆಗೆ ಕಾರಣವಾಗಿದೆ. ಈಗಾಗಾಲೇ ವೇತನ ಕಡಿತಕ್ಕೆ ಸಂಬಂಧಿಸಿದಂತೆ ಖಜಾನೆ ಇಲಾಖೆಗೆ ಮಾಹಿತಿ ರವಾನೆಯಾಗಿದ್ದು ಮುಂದಿನ ದಿನಗಳಲ್ಲಿ ಪಾವತಿಯಾಗುವ ವೇತನದಲ್ಲಿ ಕಡಿತವಾಗುವ ಸಾಧ್ಯತೆ ಇದೆ.
ಮೂಲ ಇಲಾಖೆಗೆ ವರ್ಗ: ಕಳೆದ ವರ್ಷ ಜಿಲ್ಲಾಡಳಿತ ಭವನ ಉದ್ಘಾಟನೆಯಾಗುತ್ತಿದ್ದಂತೆ ನಿಯೋಜನೆ ಮೇಲೆ ನಾನಾ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬಹುತೇಕ ಸಿಬ್ಬಂದಿಗಳು ಮಾತೃ ಇಲಾಖೆಗೆ ವರ್ಗವಾಗಿದ್ದರೆ ಉಳಿದ ಸಿಬ್ಬಂದಿಗಳು ಬೆಂಗಳೂರಿನಲ್ಲಿ ಇತರೆ ಇಲಾಖೆಗಳಿಗೆ ಹಾರಲು ಸಜ್ಜಾಗುತ್ತಿದ್ದಾರೆ. ಜಿಪಂನಲ್ಲಿ ಈಗಾಗಲೇ ಸಿಬ್ಬಂದಿ ಕೊರತೆ ಎದುರಾಗಿದ್ದು ಹೊಸ ಕಚೇರಿಗೆ ವರ್ಗವಾಗುವಷ್ಟರಲ್ಲಿ ಇನ್ನೆಷ್ಟು ಮಂದಿ ಇಲ್ಲಿಂದ ಕಾಲ್ಕಿಳುವರೋ ಎಂಬ ಮಾತು ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದಲ್ಲಿ ಕೇಳಿಬರುತ್ತಿದೆ.
ಓಡಾಟ, ವ್ಯಾಪಾರ ವೃದ್ಧಿ
ಜಿಲ್ಲಾಡಳಿತ ಭವನಕ್ಕೆ ಎಲ್ಲಾ ಇಲಾಖೆಗಳು ಸ್ಥಳಾಂತರಗೊಂಡು ಕಾರ್ಯರಂಭ ಮಾಡುವುದರಿಂದ ವಿಶ್ವನಾಥಪುರ ಸೇರಿದಂತೆ ಅಕ್ಕಪಕ್ಕದ ಪ್ರದೇಶಗಳಲ್ಲಿ ಜನರ ಓಡಾಟ ಹೆಚ್ಚಾಗುವುದರ ಜತೆಗೆ ವ್ಯಾಪಾರ ವಹಿವಾಟು ಕೂಡ ವೃದ್ಧಿಯಾಗಲಿದೆ. ಸೆಕ್ಯೂರಿಟಿ ಗಾರ್ಡ್ನಿಂದ ಹಿಡಿದು ಜಿಲ್ಲಾಧಿಕಾರಿ ಹುದ್ದೆವರಿಗಿನ ಸುಮಾರು ಎರಡು ಸಾವಿರಕ್ಕೂ ಅಧಿಕ ಮಂದಿ ಜಿಲ್ಲಾಡಳಿತ ಭವನದಲ್ಲಿ ಪ್ರತ್ಯೇಕ್ಷ ಹಾಗೂ ಪರೋಕ್ಷವಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇಷ್ಟೊಂದು ಬೃಹತ್ ಜನಸಂಖ್ಯೆ ಗ್ರಾಮೀಣ ಮಟ್ಟಕ್ಕೆ ಏಕಾಏಕಿ ಸ್ಥಳಾಂತರಗೊಳ್ಳುವುದರಿಂದ ಸ್ಥಳೀಯ ಮಟ್ಟದಲ್ಲಿ ವ್ಯವಹಾರ ಜೋರಾಗಿ ಸಾಗಲಿದೆ. ಜಿಲ್ಲಾಡಳಿತ ಭವನದಲ್ಲೇ ಕ್ಯಾಂಟಿನ್ ತೆರೆಯುವ ಯೋಜನೆ ರೂಪಿಸಲಾಗಿದ್ದರೂ ಹೋಟೆಲ್ ಉದ್ಯಮಕ್ಕೆ ಶುಕ್ರದೆಸೆ ಶುರುವಾಗಲಿದೆ ಎನ್ನಲಾಗುತ್ತಿದೆ. ಇದಲ್ಲದೆ ಸ್ಥಳೀಯವಾಗಿ ರಿಯಲ್ ಎಸ್ಟೇಟ್ ಕೂಡ ಗರಿಗೆದರಿಲಿದೆ ಎನ್ನುತ್ತಾರೆ ಉದ್ಯಮಿಗಳು.
ಜ.16ಕ್ಕೆ ಜಿಲ್ಲಾ ಪಂಚಾಯತ್ ಸ್ಥಳಾಂತರಗೊಳ್ಳಲಿದೆ. ಇನ್ನು ಮುಂದೆ ಸಭೆ, ಸಮಾರಂಭ ಸೇರಿದಂತೆ ಜಿಲ್ಲಾ ಪಂಚಾಯತ್ನ ಎಲ್ಲಾ ಚಟುವಟಿಕೆಗಳು ನೂತನ ಜಿಲ್ಲಾಡಳಿತ ಭವನದಲ್ಲೇ ನಡೆಯಲಿವೆ.
-ಆರ್.ಲತಾ, ಸಿಇಒ, ಜಿಪಂ
ಸಂಕ್ರಾಂತಿ ಬಳಿಕ ಜಿಲ್ಲಾಡಳಿತ ಸಂಪೂರ್ಣ ದೇವನಹಳ್ಳಿ ತಾಲೂಕು ಬೀರಸಂದ್ರ ಬಳಿಯಿರುವ ಜಿಲ್ಲಾಡಳಿತ ಭವನಕ್ಕೆ ಸ್ಥಳಾಂತರಗೊಳ್ಳುವ ಮೂಲಕ ಜಿಲ್ಲಾ ಕೇಂದ್ರದಲ್ಲೇ ಎಲ್ಲಾ ಇಲಾಖೆಗಳು ಕಾರ್ಯನಿರ್ವಹಿಸಲಿವೆ.
ಈಗಾಗಲೇ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಕೆಲವು ಇಲಾಖೆಗಳು ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದವು. ಆದರೆ ಜಿಪಂ ಅಧ್ಯಕ್ಷ, ಉಪಾಧ್ಯಕ್ಷ, ಸಿಇಒ ಕಚೇರಿ ಸೇರಿದಂತೆ ಇಲಾT2æಗಳ ಒಳಾಂಗಣ ವಿನ್ಯಾಸ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಹಲವು ಇಲಾಖೆಗಳು ಬೆಂಗಳೂರಿನಲ್ಲೇ ಕಾರ್ಯ ನಿರ್ವಹಿಸುತ್ತಿದ್ದವು. ಆದರೀಗ ಜ.16ರಿಂದ ಜಿಪಂ ಕಚೇರಿ ಜತೆಗೆ ಎಲ್ಲಾ ಇಲಾಖಾ ಕಚೇರಿಗಳು ಸ್ಥಳಾಂತರಗೊಳ್ಳಲಿವೆ.
ಜಿಲ್ಲಾಡಳಿತ ಭವನದಲ್ಲಿ ನೀರು, ಶೌಚಾಲಯ ಸಮಸ್ಯೆ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಬಹಳ ಕಾಡಿತ್ತು. ಆದರೆ ಇತ್ತೀಚಿಗೆ ನೀರಿನ ಪೂರೈಕೆ ಸಮಸ್ಯೆ ನೀಗಿರುವುದರಿಂದ ಬೀಗ ಹಾಕಿದ್ದ ಶೌಚಾಲಯಗಳಿಗೆ ಮುಕ್ತಿ ಸಿಕ್ಕಂತಾಗಿದೆ. ಜತೆಗೆ ಕರ್ತವ್ಯ ನಿರ್ವಹಣೆಗೆ ಅತಿ ಮುಖ್ಯವಾಗಿ ಅವಶ್ಯವಿದ್ದ ವಿದ್ಯುತ್, ಇಂಟರ್ನೆಟ್ ಸಂಪರ್ಕ ಕೂಡ ಕಲ್ಪಿಸಿರುವುದರಿಂದ ಎಲ್ಲಾ ಇಲಾಖೆಗಳು ಜಿಲ್ಲಾ ಕೇಂದ್ರದಿಂದಲೇ ಕಾರ್ಯ ನಿರ್ವಹಿಸಲಿವೆ.
ಇಡೀ ಆಡಳಿತವೇ ಸ್ಥಳಾಂತರಗೊಳ್ಳುವುದರಿಂದ ಅಧಿಕಾರಿಗಳ ಸಭೆ, ಸಮಾರಂಭ, ಪ್ರತಿಭಟನೆ, ಹೋರಾಟ, ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಜಿಲ್ಲಾಡಳಿತ ಭವನದಲ್ಲೇ ನಡೆಯುವುದರಿಂದ ದಶಕಗಳ ಬಳಿಕ ಜಿಲ್ಲೆಗೊಂದು ಪ್ರತ್ಯೇಕ ಸ್ಥಾನಮಾನ ಸಿಕ್ಕಂತಾಗುತ್ತಿದೆ ಎಂದು ಜಿಲ್ಲೆಯ ಜನತೆ ಹರ್ಷ ವ್ಯಕ್ತಪಡಿಸುತ್ತಿದ್ದರೆ ಅಧಿಕಾರಿಗಳು ಮಾತ್ರ ಜೇಬಿಗೆ ಕತ್ತರಿ ಬೀಳಲಿದೆಯಲ್ಲಾ ಎಂಬ ಚಿಂತೆಗೆ ಬಿದ್ದಿದ್ದಾರೆ.
ವೇತನ ಕಡಿತ: ಸದ್ಯ ಜಿಲ್ಲಾಡಳಿತ ಕಾರ್ಯನಿರ್ವಹಿಸುವ ಸ್ಥಳ ಗ್ರಾಪಂ ವ್ಯಾಪ್ತಿಗೆ ಒಳಪಡುವುದರಿಂದ ಇಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳಿಗೆ ಸಿಗುತ್ತಿದ್ದ ಟಿಎ, ಡಿಎ, ಎಚ್ಆರ್ಎಗಳಲ್ಲಿ ಕಡಿತ ಉಂಟಾಗಲಿದೆ. ಬೆಂಗಳೂರು ಮಹಾನಗರದ ಸ್ಥಾನಮಾನದಲ್ಲಿ ಪಡೆಯುತ್ತಿದ್ದ ವೇತನ ಇನ್ನುಮುಂದೆ ಗ್ರಾಪಂ ಮಟ್ಟಕ್ಕೆ ಇಳಿಯುವುದರಿಂದ ವರ್ಷಕ್ಕೆ 50 ಸಾವಿರದಿಂದ ಲಕ್ಷ ರೂ.ವರೆಗೆ ಕಡಿತವಾಗುವುದು ಸಿಬ್ಬಂದಿಗಳ ಚಿಂತೆಗೆ ಕಾರಣವಾಗಿದೆ. ಈಗಾಗಾಲೇ ವೇತನ ಕಡಿತಕ್ಕೆ ಸಂಬಂಧಿಸಿದಂತೆ ಖಜಾನೆ ಇಲಾಖೆಗೆ ಮಾಹಿತಿ ರವಾನೆಯಾಗಿದ್ದು ಮುಂದಿನ ದಿನಗಳಲ್ಲಿ ಪಾವತಿಯಾಗುವ ವೇತನದಲ್ಲಿ ಕಡಿತವಾಗುವ ಸಾಧ್ಯತೆ ಇದೆ.
ಮೂಲ ಇಲಾಖೆಗೆ ವರ್ಗ: ಕಳೆದ ವರ್ಷ ಜಿಲ್ಲಾಡಳಿತ ಭವನ ಉದ್ಘಾಟನೆಯಾಗುತ್ತಿದ್ದಂತೆ ನಿಯೋಜನೆ ಮೇಲೆ ನಾನಾ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬಹುತೇಕ ಸಿಬ್ಬಂದಿಗಳು ಮಾತೃ ಇಲಾಖೆಗೆ ವರ್ಗವಾಗಿದ್ದರೆ ಉಳಿದ ಸಿಬ್ಬಂದಿಗಳು ಬೆಂಗಳೂರಿನಲ್ಲಿ ಇತರೆ ಇಲಾಖೆಗಳಿಗೆ ಹಾರಲು ಸಜ್ಜಾಗುತ್ತಿದ್ದಾರೆ. ಜಿಪಂನಲ್ಲಿ ಈಗಾಗಲೇ ಸಿಬ್ಬಂದಿ ಕೊರತೆ ಎದುರಾಗಿದ್ದು ಹೊಸ ಕಚೇರಿಗೆ ವರ್ಗವಾಗುವಷ್ಟರಲ್ಲಿ ಇನ್ನೆಷ್ಟು ಮಂದಿ ಇಲ್ಲಿಂದ ಕಾಲ್ಕಿಳುವರೋ ಎಂಬ ಮಾತು ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದಲ್ಲಿ ಕೇಳಿಬರುತ್ತಿದೆ.
ಓಡಾಟ, ವ್ಯಾಪಾರ ವೃದ್ಧಿ
ಜಿಲ್ಲಾಡಳಿತ ಭವನಕ್ಕೆ ಎಲ್ಲಾ ಇಲಾಖೆಗಳು ಸ್ಥಳಾಂತರಗೊಂಡು ಕಾರ್ಯರಂಭ ಮಾಡುವುದರಿಂದ ವಿಶ್ವನಾಥಪುರ ಸೇರಿದಂತೆ ಅಕ್ಕಪಕ್ಕದ ಪ್ರದೇಶಗಳಲ್ಲಿ ಜನರ ಓಡಾಟ ಹೆಚ್ಚಾಗುವುದರ ಜತೆಗೆ ವ್ಯಾಪಾರ ವಹಿವಾಟು ಕೂಡ ವೃದ್ಧಿಯಾಗಲಿದೆ. ಸೆಕ್ಯೂರಿಟಿ ಗಾರ್ಡ್ನಿಂದ ಹಿಡಿದು ಜಿಲ್ಲಾಧಿಕಾರಿ ಹುದ್ದೆವರಿಗಿನ ಸುಮಾರು ಎರಡು ಸಾವಿರಕ್ಕೂ ಅಧಿಕ ಮಂದಿ ಜಿಲ್ಲಾಡಳಿತ ಭವನದಲ್ಲಿ ಪ್ರತ್ಯೇಕ್ಷ ಹಾಗೂ ಪರೋಕ್ಷವಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇಷ್ಟೊಂದು ಬೃಹತ್ ಜನಸಂಖ್ಯೆ ಗ್ರಾಮೀಣ ಮಟ್ಟಕ್ಕೆ ಏಕಾಏಕಿ ಸ್ಥಳಾಂತರಗೊಳ್ಳುವುದರಿಂದ ಸ್ಥಳೀಯ ಮಟ್ಟದಲ್ಲಿ ವ್ಯವಹಾರ ಜೋರಾಗಿ ಸಾಗಲಿದೆ. ಜಿಲ್ಲಾಡಳಿತ ಭವನದಲ್ಲೇ ಕ್ಯಾಂಟಿನ್ ತೆರೆಯುವ ಯೋಜನೆ ರೂಪಿಸಲಾಗಿದ್ದರೂ ಹೋಟೆಲ್ ಉದ್ಯಮಕ್ಕೆ ಶುಕ್ರದೆಸೆ ಶುರುವಾಗಲಿದೆ ಎನ್ನಲಾಗುತ್ತಿದೆ. ಇದಲ್ಲದೆ ಸ್ಥಳೀಯವಾಗಿ ರಿಯಲ್ ಎಸ್ಟೇಟ್ ಕೂಡ ಗರಿಗೆದರಿಲಿದೆ ಎನ್ನುತ್ತಾರೆ ಉದ್ಯಮಿಗಳು.
ಜ.16ಕ್ಕೆ ಜಿಲ್ಲಾ ಪಂಚಾಯತ್ ಸ್ಥಳಾಂತರಗೊಳ್ಳಲಿದೆ. ಇನ್ನು ಮುಂದೆ ಸಭೆ, ಸಮಾರಂಭ ಸೇರಿದಂತೆ ಜಿಲ್ಲಾ ಪಂಚಾಯತ್ನ ಎಲ್ಲಾ ಚಟುವಟಿಕೆಗಳು ನೂತನ ಜಿಲ್ಲಾಡಳಿತ ಭವನದಲ್ಲೇ ನಡೆಯಲಿವೆ.
-ಆರ್.ಲತಾ, ಸಿಇಒ, ಜಿಪಂ