ಆ್ಯಪ್ನಗರ

ಮಣ್ಣೆಗೆ ಪುರಾತತ್ವ ಅಧಿಕಾರಿಗಳ ಭೇಟಿ

ನಿರ್ಲಕ್ಷ್ಯಕ್ಕೊಳಗಾದ ಗಂಗರ ರಾಜಧಾನಿ ಮಣ್ಣೆ ಗ್ರಾಮಕ್ಕೆ ಪುರಾತತ್ವ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ವಿಕ ವರದಿ ಫಲಶೃತಿ ಎನಿಸಿದೆ.

Vijaya Karnataka 6 Oct 2019, 5:00 am
ತ್ಯಾಮಗೊಂಡ್ಲು : ನಿರ್ಲಕ್ಷ್ಯಕ್ಕೊಳಗಾದ ಗಂಗರ ರಾಜಧಾನಿ ಮಣ್ಣೆ ಗ್ರಾಮಕ್ಕೆ ಪುರಾತತ್ವ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ವಿಕ ವರದಿ ಫಲಶೃತಿ ಎನಿಸಿದೆ. ವಿಶ್ವ ಪ್ರವಾಸೋದ್ಯಮ ದಿನದಂದು ವಿಜಯಕರ್ನಾಟಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನಿರ್ಲಕ್ಷ್ಯಕ್ಕೊ ಗಾದ ಪ್ರವಾಸಿತಾಣಗಳ ಬಗ್ಗೆ ಗಂಗರ ಮಾನ್ಯಪುರಕ್ಕೆ ಪ್ರವಾಸಿ ಮಾನ್ಯತೆ ನೀಡಿ ಎಂಬ ಶೀರ್ಷಿಕೆಯಡಿ ಪ್ರಕಟಿಸಿದ ವರದಿ ಆಧರಿಸಿ ವಸ್ತು ಸ್ಥಿತಿ ಪರಿಶೀಲಿಸಿದರು. ಪುರಾತತ್ವ ಇಲಾಖೆ ಅಧಿಕಾರಿ ಕಿರಣ್‌ ಸ್ಥಳಕ್ಕೆ ಭೇಟಿ ನೀಡಿ, ಸ್ಥಳೀಯ ಶಾಸನಗಳು, ಸೂಳೆ ಗುಡಿ, ಕಪಿಲೇಶ್ವರ ದೇವಾಲಯ ಮತ್ತು ಅಕ್ಕ ತಂಗಿ ದೇವಾಲಯಗಳಿಗೆ ಭೇಟಿ ನೀಡಿ ಅವುಗಳ ಸ್ಥಿತಿಗತಿ ದಾಖಲಿಸಿ ಕೊಂಡರು.
Vijaya Karnataka Web arcological department offiecer visit to manne first capital of gangas kingdom
ಮಣ್ಣೆಗೆ ಪುರಾತತ್ವ ಅಧಿಕಾರಿಗಳ ಭೇಟಿ

ಮಣ್ಣಲ್ಲಿಮರೆಯಾದ ಇತಿಹಾಸ: ಬಳಿಕ ವಿಕ ಜೊತೆ ಮಾತನಾಡಿದ ಅಧಿಕಾರಿ ರಾಜ ಧಾನಿಗೆ ಹತ್ತಿರವಿರುವ ಗ್ರಾಮ ದ ಇತಿಹಾಸ ಮಣ್ಣಾಗುತ್ತಿದೆ. ಈ ಬಗ್ಗೆ ಬೆಳಕು ಚೆಲ್ಲಿದ ವಿಜಯ ಕರ್ನಾಟಕ ಮತ್ತು ಆಸಕ್ತ ಸಂಘಟನೆಗಳಿಗೆ ಧನ್ಯವಾದ ಗಳು. ಇಲ್ಲಿನ ಐತಿಹಾಸಿಕ ಶಾಸನಗಳು, ದೇವಾ ಲಯಗಳು ನಾಶದ ಅಂಚಿನ ಲ್ಲಿದ್ದು ಸ್ಥಳೀಯರೇ ಸಾಕ ಷ್ಟು ಹಾನಿ ಮಾಡಿದ್ದಾರೆ ಎಂದು ಬೇಸರಿಸಿದರು. ರಕ್ಷಣೆ ಬಗ್ಗೆ ವರದಿ: ಸೂಳೆಗುಡಿ ಎಂದು ಕರೆಯು ವ ಜೈನ ಬಸದಿಯೂ ದನದ ಕೊಟ್ಟಿಗೆಯಾಗಿದೆ. ಜನ ರು ನಮ್ಮ ನಾಡಿನ ಇತಿಹಾಸ ಉಳಿಸುವಲ್ಲಿಇಲಾಖೆ ಯೊಂದಿಗೆ ಸಹ ಕಾರ ನೀಡಬೇಕು. ಇಲ್ಲಿನ ಸ್ಥಿತಿಗತಿ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು ಮೇಲಿನ ಅಧಿಕಾರಿಗಳಿಗೆ ವರದಿ ನೀಡುತ್ತೇನೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ