ಆ್ಯಪ್ನಗರ

ಮಷಿನ್‌ ಕಟ್ಟರ್‌ನಿಂದ ಎಟಿಎಂ ಯಂತ್ರ ಕತ್ತರಿಸಿ 3 ಲಕ್ಷ ದರೋಡೆ

ಭಾರಿ ಹಣ ಇದೆ ಎಂದು ಎಟಿಎಂ ಯಂತ್ರವನ್ನು ಮಷಿನ್‌ ಕಟರ್‌ನಿಂದ ಕತ್ತರಿಸಿದ ದರೋಡೆಕೋರರಿಗೆ ಕೊನೆಗೆ ಸಿಕ್ಕಿದ್ದು 3 ಲಕ್ಷ ರೂ.ಗಳು ಮಾತ್ರ.

Vijaya Karnataka 10 Sep 2019, 3:43 pm
ಬೆಂಗಳೂರು: ಭಾರಿ ಹಣ ಇದೆ ಎಂದು ಎಟಿಎಂ ಯಂತ್ರವನ್ನು ಮಷಿನ್‌ ಕಟರ್‌ನಿಂದ ಕತ್ತರಿಸಿದ ದರೋಡೆಕೋರರಿಗೆ ಕೊನೆಗೆ ಸಿಕ್ಕಿದ್ದು 3 ಲಕ್ಷ ರೂ.ಗಳು ಮಾತ್ರ.
Vijaya Karnataka Web atm machine cut by cutter machine and 3 lakh robbery
ಮಷಿನ್‌ ಕಟ್ಟರ್‌ನಿಂದ ಎಟಿಎಂ ಯಂತ್ರ ಕತ್ತರಿಸಿ 3 ಲಕ್ಷ ದರೋಡೆ


ಇಂಥದೊಂದು ಘಟನೆ ಬನಶಂಕರಿ ಠಾಣೆ ವ್ಯಾಪ್ತಿಯ ಕೆ.ಆರ್‌.ರಸ್ತೆಯಲ್ಲಿನಡೆದಿದೆ. ಕೆ.ಆರ್‌.ರಸ್ತೆಗೆ ಹೊಂದಿಕೊಂಡಿದ್ದ ಆಕ್ಸಿಸ್‌ ಬ್ಯಾಂಕ್‌ನ ಎಟಿಎಂ ಕೇಂದ್ರದಲ್ಲಿದರೋಡೆ ಮಾಡಲು ಬಂದವರು ಲಕ್ಷ ಲಕ್ಷ ಹಣ ಸಿಗಬಹುದು ಎಂದು ಲೆಕ್ಕ ಹಾಕಿದ್ದಾರೆ. ಕೊನೆಗೆ ಮಷಿನ್‌ ಕಟ್ಟರ್‌ ತಂದು ಎಟಿಎಂ ಯಂತ್ರ ಕತ್ತರಿಸಿದ್ದಾರೆ. ಸಾಮಾನ್ಯವಾಗಿ ಒಂದು ಮೆಷಿನ್‌ನಲ್ಲಿಗರಿಷ್ಠ 30 ಲಕ್ಷ ರೂ.ವರೆಗೆ ನೋಟುಗಳನ್ನು ತುಂಬಿಸಲಾಗುತ್ತದೆ. ಎಟಿಎಂ ಯಂತ್ರದಲ್ಲಿಫುಲ್‌ ಹಣ ಇದೆ ಎಂಬ ಲೆಕ್ಕಾಚಾರದಲ್ಲೇ ಲೂಟಿಗಿಳಿದ ದರೋಡೆಕೋರರು ಯಂತ್ರದಲ್ಲಿಇದ್ದ 3 ಲಕ್ಷ ರೂ. ದೋಚಿಕೊಂಡು ಪರಾರಿಯಾಗಿದ್ದಾರೆ. ಘಟನಾ ಸ್ಥಳದ ಸುತ್ತ ಮುತ್ತ ಇರುವ ಖಾಸಗಿ ಮಳಿಗೆಗಳಲ್ಲಿನ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲಎಂದು ಪೊಲೀಸರು ತಿಳಿಸಿದ್ದಾರೆ.

ನಸುಕಿನ 3 ಗಂಟೆ ಸುಮಾರಿಗೆ ಘಟನೆ ನಡೆದಿದ್ದು ಇಬ್ಬರು ವ್ಯಕ್ತಿಗಳು ಕೃತ್ಯದಲ್ಲಿಭಾಗಿ ಆಗಿರುವ ಶಂಕೆ ಇದೆ. ಮಷಿನ್‌ ಕಟರ್‌ನಿಂದ ಯಂತ್ರವನ್ನು ಕತ್ತರಿಸಿ ಹಣ ದೋಚಿದ್ದಾರೆ. ಹಲವು ದಿನಗಳಿಂದ ನಿಗಾ ಇಟ್ಟು ಕೃತ್ಯ ಎಸಗಿರುವ ಸಾಧ್ಯತೆಗಳಿವೆ. ಎಟಿಎಂ ಕೇಂದ್ರದಲ್ಲಿಕಾವಲು ಸಿಬ್ಬಂದಿಯನ್ನು ಬ್ಯಾಂಕ್‌ ನೇಮಿಸಿರಲಿಲ್ಲ. ಸಿಸಿ ಕ್ಯಾಮರಾ ಮತ್ತು ಅಲಾರಂ ಕೂಡ ಅಳವಡಿಸಿರಲಿಲ್ಲ. ಈ ಕಾರಣದಿಂದಲೇ ಆರೋಪಿಗಳು ಸುಲಭವಾಗಿ ಬಂದು ಕಳ್ಳತನ ಎಸಗಿದ್ದಾರೆ. ಈ ಕೇಂದ್ರದಲ್ಲಿಭದ್ರತಾ ವ್ಯವಸ್ಥೆಯನ್ನು ಬ್ಯಾಂಕ್‌ ಅಳವಡಿಸಿಲ್ಲಎನ್ನುವುದನ್ನು ಖಚಿತಪಡಿಸಿಕೊಂಡೇ ಕಳ್ಳತನ ಎಸಗಿದ್ದಾರೆ. ಕಾವಲು ಸಿಬ್ಬಂದಿಯನ್ನು ನೇಮಿಸಿಕೊಳ್ಳದ ಬಗ್ಗೆ ಹಾಗೂ ಸಿಸಿ ಕ್ಯಾಮರಾ ಅಳವಡಿಸದ ಬಗ್ಗೆ ಬ್ಯಾಂಕ್‌ ಮ್ಯಾನೇಜರ್‌ಗೆ ನೋಟಿಸ್‌ ನೀಡಿ ವಿವರಣೆ ಕೇಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದು ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ