ಆ್ಯಪ್ನಗರ

ಹೋಟೆಲ್‌ಗಳ ಮೇಲೆ ದಾಳಿ: ಅವಧಿ ಮೀರಿದ ವಸ್ತುಗಳು ವಶಕ್ಕೆ

ಜಿಲ್ಲಾ ಆಹಾರ ಗುಣಮಟ್ಟ ಮತ್ತು ಸುರಕ್ಷತೆ ಇಲಾಖೆಯ ಅಧಿಕಾರಿಗಳು ಪಟ್ಟಣ ಸೇರಿದಂತೆ ಹೆದ್ದಾರಿಗಳ ಆಸುಪಾಸಿನಲ್ಲಿರುವ ಡಾಬಾಗಳು ಮತ್ತು ಹೋಟಲ್‌, ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಿ ...

Vijaya Karnataka 17 Apr 2019, 5:00 am
ನೆಲಮಂಗಲ: ಜಿಲ್ಲಾ ಆಹಾರ ಗುಣಮಟ್ಟ ಮತ್ತು ಸುರಕ್ಷತೆ ಇಲಾಖೆಯ ಅಧಿಕಾರಿಗಳು ಪಟ್ಟಣ ಸೇರಿದಂತೆ ಹೆದ್ದಾರಿಗಳ ಆಸುಪಾಸಿನಲ್ಲಿರುವ ಡಾಬಾಗಳು ಮತ್ತು ಹೋಟಲ್‌, ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಿ ಅವಧಿ ಮೀರಿದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡು ನೋಟಿಸ್‌ ನೀಡಿ ದಂಡ ವಿಧಿಸಿದ್ದಾರೆ.
Vijaya Karnataka Web attack on hotels expiry objects detained
ಹೋಟೆಲ್‌ಗಳ ಮೇಲೆ ದಾಳಿ: ಅವಧಿ ಮೀರಿದ ವಸ್ತುಗಳು ವಶಕ್ಕೆ


ಪಟ್ಟಣದ ಸುತ್ತಮುತ್ತಲಿನ ಹೋಟಲ್‌ ಹಾಗೂ ಡಾಬಾಗಳ ಮೇಲೆ ದಿಢೀರ್‌ದಾಳಿ ಮಾಡಿದ ಅಧಿಕಾರಿಗಳು ಸ್ವಚ್ಚತೆ, ಆಹಾರ ತಯಾರಿಕೆ ಹಾಗೂ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ವಸ್ತುಗಳ ಗುಣಮಟ್ಟವನ್ನು ಪರಿಶೀಲಿಸಿದರು. ಹೋಟಲ್‌ಗಳಲ್ಲಿ ಅಡಿಗೆ ತಯಾರಿಸುವವರ ಆರೋಗ್ಯವನ್ನು ಪರಿಶೀಲಿಸಿ ಅನುಸರಿಸಬೇಕಾದ ವಿಧಾನಗಳ ಬಗ್ಗೆ ಎಚ್ಚರಿಕೆಯನ್ನು ನೀಡುವ ಮೂಲಕ ಆರೋಗ್ಯ ಸುಧಾರಣೆಯ ರೀತಿನೀತಿಗಳನ್ನು ತಿಳಿಸುವ ಮೂಲಕ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ಎಚ್ಚರಿಕೆ ನೀಡಿದ್ದಾರೆ.

ವಸ್ತುಗಳು ವಶ: ಜಿಲ್ಲಾ ಆರೋಗ್ಯ ಅಧಿಕಾರಿಗಳು ತಾಲೂಕಿನ ಗಾರ್ಡ್‌ನ್‌ಗೇಟ್‌ ಫ್ಯಾಮಿಲಿ ರೆಸ್ಟೋರೆಂಟ್‌, ಸೌತ್‌ಪ್ಲಾಜಾ, ಚಾಮುಂಡಿ ಫಾರಂ ಡಾಬ, ಫ್ಯಾಮಿಲಿ ಡಾಬಗಳ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳು ಕಂಡು ಬಂದಿದ್ದು ತಕ್ಷಣ ವಶಪಡಿಸಿಕೊಂಡು ನೋಟಿಸ್‌ ನೀಡುವ ಮೂಲಕ ದಂಡ ವಿಧಿಸಲಾಗಿದೆ.

ಸಂದರ್ಭದಲ್ಲಿ ಜಿಲ್ಲಾ ಅಂಕಿತ ಅಧಿಕಾರಿ ಡಾ.ಧರ್ಮೇಂದ್ರ, ತಾಲೂಕು ಆರೋಗ್ಯ ಅಧಿಕಾರಿ ಡಾ.ಹರೀಶ್‌, ಆರೋಗ್ಯ ಸಹಾಯಕ ನಾಗೇಶ್‌ ಮತ್ತಿತರ ಸಿಬ್ಬಂದಿ ದಾಳಿ ವೇಳೆ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ