ಆ್ಯಪ್ನಗರ

ಆಟೋ ಚಾಲಕ ಸಾವು, ಕೊಲೆ ಶಂಕೆ

ಸೋಂಪುರ ಹೋಬಳಿಯ ಹೊಸಹಳ್ಳಿ- ಚನ್ನತಿಮ್ಮಯ್ಯನಪಾಳ್ಯದ ನಿರ್ಜನ ಪ್ರದೇಶದಲ್ಲಿ ಯುವ ಆಟೋ ಚಾಲನಕನೊಬ್ಬ ಅಪಘಾತಕ್ಕೀಡಾಗಿ ದೇಹ ಕಂಬವೊಂದರಲ್ಲಿ ನೇತಾಡುವ ಸ್ಥಿತಿಯಲ್ಲಿ ಪತ್ತೆಯಾಗಿದ್ದುಸಾವಿನ ಹಿಂದೆ ಕೊಲೆಯ ಶಂಕೆ ವ್ಯಕ್ತವಾಗಿದೆ.

Vijaya Karnataka 7 Jun 2019, 5:00 am
ದಾಬಸ್‌ಪೇಟೆ: ಸೋಂಪುರ ಹೋಬಳಿಯ ಹೊಸಹಳ್ಳಿ- ಚನ್ನತಿಮ್ಮಯ್ಯನಪಾಳ್ಯದ ನಿರ್ಜನ ಪ್ರದೇಶದಲ್ಲಿ ಯುವ ಆಟೋ ಚಾಲನಕನೊಬ್ಬ ಅಪಘಾತಕ್ಕೀಡಾಗಿ ದೇಹ ಕಂಬವೊಂದರಲ್ಲಿ ನೇತಾಡುವ ಸ್ಥಿತಿಯಲ್ಲಿ ಪತ್ತೆಯಾಗಿದ್ದುಸಾವಿನ ಹಿಂದೆ ಕೊಲೆಯ ಶಂಕೆ ವ್ಯಕ್ತವಾಗಿದೆ.
Vijaya Karnataka Web auto driver died murder suspect
ಆಟೋ ಚಾಲಕ ಸಾವು, ಕೊಲೆ ಶಂಕೆ

ಸೋಂಪುರ ಹೋಬಳಿಯ ಹೊನ್ನೇನಹಳ್ಳಿ ಗ್ರಾಮದ ವಿಜಯಕುಮಾರ್‌ (23) ಸಾವನ್ನಪ್ಪಿರುವ ಯುವಕ.
ಘಟನೆ ವಿವರ: ಮಂಗಳವಾರ ರಾತ್ರಿ 10.30 ರ ಸಮಯದಲ್ಲಿ ಸೆಕ್ಯುರಿಟಿ ಕೆಲಸ ಮಾಡುವ ವ್ಯಕ್ತಿಯೊಬ್ಬ ಹೊಸಹಳ್ಳಿ- ಚನ್ನತಿಮ್ಮಯ್ಯನಪಾಳ್ಯದ ರಸ್ತೆಯಲ್ಲಿ ಬರುತ್ತಿದ್ದಾಗ ವಿದ್ಯುತ್‌ ಕಂಬಕ್ಕೆ ಆಟೋ ಡಿಕ್ಕಿಯಾಗಿ ಕಂಬದಲ್ಲಿ ಯುವಕನೊಬ್ಬನ ಶವ ನೇತಾಡುತ್ತಿದ್ದನ್ನು ಕಂಡುಗಾಬರಿಯಾಗಿ ದಾಬಸ್‌ಪೇಟೆ ಪೊಲೀಸರಿಗೆ ವಿ ಷಯ ಮುಟ್ಟಿಸಿದ್ದಾನೆ. ಘಟನಾ ಸ್ಥಳಕ್ಕೆ ದಾಬಸ್‌ಪೇಟೆ ಪೊಲೀಸ್‌ಠಾಣೆಯ ಆರಕ್ಷ ಕಉಪನಿರೀಕ್ಷ ಕ ಶಂಕರ್‌ನಾಯ್ಕ್‌ ಭೇಟಿ ನೀಡಿ ಪೊಷಕರನ್ನು ಕರೆಸಿ ಮೃತನ ಗುರುತ್ತು ಪತ್ತೆಹಚ್ಚಿದ್ದಾರೆ.

ಮೃತನ ಸಹೋದರಿ ಭಾಗ್ಯಮ್ಮ ಹೇಳುವ ಪ್ರಕಾರ ವಿ ಜಯಕುಮಾರ್‌ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ ಅವನನ್ನು ಯಾರೋ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂಬ ಅನುಮಾನ ನಮಗೆ ದಟ್ಟವಾಗಿಕಾಡುತ್ತಿದೆ. ನನ್ನತಮ್ಮ ಆಟೋಚಾಲಕನಾಗಿದ್ದು ಬಾಡಿಗೆ ರೂಪದಲ್ಲಿ ತೃತೀಯ ಲಿಂಗಿಗಳನ್ನು ಮದುವೆ ಸಮಾರಂಭಗಳಿಗೆ ಕರೆದುಕೊಂಡು ಹೋಗುತ್ತಿದ್ದನು. ಹಾಗಾಗಿ ಅವನಿಗೆ ಚರಿಷ್ಮಾ ಎಂಬ ತೃತೀಯ ಲಿಂಗಿಯ ಪರಿಚಯವಿದ್ದ ಕಾರಣ ಸಾಯುವ ದಿನವೂ ಅವರನ್ನು ಜೊತೆಯಲ್ಲಿ ಮದುವೆಗೆ ಕರೆದುಕೊಂಡು ಹೋಗುತ್ತಾನೆ. ಚರಿಷ್ಮಾ ಎಂಬಾಕೆಗೆ ನನ್ನತಮ್ಮನ ದ್ವೇಷಿಗಳು ಸುಪಾರಿಕೊಟ್ಟು ಕೊಲೆ ಮಾಡಿಸಿ ನೇಣು ಹಾಕಿದ್ದಾರೆ ಇದುಕೊಲೆಯೇ ಹೊರೆತು ಆತ್ಮಹತ್ಯೆಯಲ್ಲ . ಕೊಲೆ ಆರೋಪಿಯನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.

ಘಟನೆಗೆ ಮತ್ತೊಂದು ತಿರುವು: ಆದರೆ ಘಟನಾ ಸ್ಥಳದಲ್ಲಿ ತೃತೀಯಲಿಂಗಿದೆನ್ನಲಾದ ಬಳೆ, ಒಂದು ಚಪ್ಪಲಿ ಬಿದ್ದಿದ್ದು, ತೃತೀಯ ಲಿಂಗಿ ಜತೆ ಮಂಗಳವಾರ ರಾತ್ರಿ ಆಟೋದಲ್ಲಿ ಪ್ರಯಾಣಿಸುವಾಗ ಯಾರೋ ಕಿಡಿಗೇಡಿಗಳು ಅಟ್ಟಿಸಿಕೊಂಡು ಬಂದಿದ್ದು, ತಪ್ಪಿಸಿಕೊಳ್ಳುವ ಭರದಲ್ಲಿ ಆಟೋ ಪಲ್ಟಿ ಆಗಿದೆ. ಘಟನೆಯಲ್ಲಿ ತೃತೀಯ ಲಿಂಗಿಗೂ ಗಾಯವಾಗಿದ್ದು, ವಿಜಯಕುಮಾರ್‌ನನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಪಾಂಡುರಂಗ, ವೃತ್ತ ನಿರೀಕ್ಷ ಕ ಅನಿಲ್‌ಕುಮಾರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ