ಆ್ಯಪ್ನಗರ

ಹೆಣ್ಣುಮಕ್ಕಳ ಮತ್ತು ಮಹಿಳೆಯರ ರಕ್ಷ ಣೆ: ದೊಡ್ಡಬಳ್ಳಾಪುರದಲ್ಲಿ ಬೃಹತ್‌ ಜಾಗೃತಿ ಜಾಥಾ

ನಗರದ ಮಹಿಳಾ ಮತ್ತು ಮಕ್ಕಳ ಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಾನಾ ಸಂಘಟನೆಗಳು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳ ಸಹಯೋಗದಲ್ಲಿ ಹೆಣ್ಣು ಮಕ್ಕಳ ಮತ್ತು ಮಹಿಳೆಯರ ರಕ್ಷ ಣೆಗಾಗಿ ಆಗ್ರಹಿಸಿ ಬೃಹತ್‌ ಜಾಗೃತಿ ಜಾಥಾ ಶುಕ್ರವಾರ ನಡೆಯಿತು.

Vijaya Karnataka 15 Dec 2018, 5:00 am
ದೊಡ್ಡಬಳ್ಳಾಪುರ: ನಗರದ ಮಹಿಳಾ ಮತ್ತು ಮಕ್ಕಳ ಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಾನಾ ಸಂಘಟನೆಗಳು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳ ಸಹಯೋಗದಲ್ಲಿ ಹೆಣ್ಣು ಮಕ್ಕಳ ಮತ್ತು ಮಹಿಳೆಯರ ರಕ್ಷ ಣೆಗಾಗಿ ಆಗ್ರಹಿಸಿ ಬೃಹತ್‌ ಜಾಗೃತಿ ಜಾಥಾ ಶುಕ್ರವಾರ ನಡೆಯಿತು.
Vijaya Karnataka Web awareness jatha about women and girls
ಹೆಣ್ಣುಮಕ್ಕಳ ಮತ್ತು ಮಹಿಳೆಯರ ರಕ್ಷ ಣೆ: ದೊಡ್ಡಬಳ್ಳಾಪುರದಲ್ಲಿ ಬೃಹತ್‌ ಜಾಗೃತಿ ಜಾಥಾ


ಈ ಸಂದರ್ಭದಲ್ಲಿ ಮಾತನಾಡಿದ ಮಹಿಳಾ ಮುಖಂಡರು, ಇವತ್ತಿನ ದಿನಗಳಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷ ಣ ಉದ್ಯೋಗ ತುಂಬಾ ಅನಿವಾರ್ಯವಾಗಿದೆ. ಶಿಕ್ಷ ಣ ಪಡೆಯುವಲ್ಲಿ ಹೆಣ್ಣು ಮಕ್ಕಳು ಮನೆ ಕೆಲಸ ಹಾಗೂ ಹೊರಗಿನ ಕೆಲಸಗಳನ್ನು ನಿಭಾಯಿಸುವುದರಲ್ಲಿ ಹೆಚ್ಚು ಒತ್ತಡಗಳಿಗೆ ಒಳಗಾಗಿರುತ್ತಾರೆ. ಅವರು ತಮ್ಮ ಮಾನ, ಪ್ರಾಣ, ರಕ್ಷ ಣೆ ಮಾಡಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಇದೆ ಎಂದು ಹೇಳಬಹುದು. ನಮ್ಮ ಸಮಾಜದಲ್ಲಿ ಹಿಂದಿನ ಹಲವು ಮೂಢನಂಬಿಕೆಗಳು ಕೆಲವು ಕ್ರೂರ ಪದ್ಧತಿಗಳಾದ ಹೆಣ್ಣು ಭ್ರೂಣ ಹತ್ಯೆ, ವರದಕ್ಷಿಣೆ, ಬಾಲ್ಯ ವಿವಾಹಗಳನ್ನು ಕಾನೂನುಗಳಲ್ಲಿ ನಿಷೇಧಿಸಿದ್ದರೂ ಅವುಗಳ ನೆರಳುಗಳು ಇಂದಿಗೂ ಮಹಿಳೆಯರನ್ನು ಕಾಡುತ್ತಿರುವುದು ವಿಷಾದನಿಯ ಸಂಗತಿ ಎಂದರು.

ಇವತ್ತಿನ ಪಿತೃಪ್ರಧಾನ ಕುಟುಂಬಗಳಲ್ಲಿ ಮಹಿಳೆಯರನ್ನು ಯಾವುದೇ ಪ್ರಾಧಾನ್ಯತೆ ನೀಡದೆ ಮೂಲೆಗುಂಪು ಮಾಡಿದ್ದಾರೆ. ಕೇವಲ ಹೆಣ್ಣು ಭೋಗದ ವಸ್ತು ಎಂಬಂತೆ ಕಾಣುತ್ತಿರುವ ಸಮಾಜದ ಕಣ್ಣು ತೆರೆಸಬೇಕಿದೆ. ಅವರ ಉತ್ತಮ ಬದುಕಿಗೆ ಭದ್ರ ಬುನಾದಿ ಹಾಕಬೇಕಾಗಿದೆ ಎಂದು ಹೇಳಿದರು.

ದೊಡ್ಡಬಳ್ಳಾಪುರದಲ್ಲಿ ದಿನೇ ದಿನೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದೆ. ತಾಲೂಕಿನಾದ್ಯಂತ ಶಾಲಾ ಕಾಲೇಜು ಹೆಣ್ಣುಮಕ್ಕಳ ಮೇಲೆ ಹಲ್ಲೆ, ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಅಪಹರಣ ಮತ್ತು ಕೊಲೆಯಂತಹ ವಿಕೃತ ಘಟನೆಗಳು ಅತಿ ಹೆಚ್ಚಾಗಿ ನಡೆಯುತ್ತಿವೆ. ಇತ್ತೀಚೆಗಷ್ಟೆ ನಗರದ ಬಿಎಸ್‌ಎ ಪ್ರೌಢಶಾಲೆಯ 10ನೇ ತರಗತಿಯಲ್ಲಿ ಓದುತ್ತಿದ್ದ ಕೀರ್ತನಾ ಎಂಬ ವಿದ್ಯಾರ್ಥಿನಿಯನ್ನು ಕಾಮುಕನೊಬ್ಬ ನಡುರಸ್ತೆಯಲ್ಲೇ ಲಾಂಗಿನಿಂದ ಕೊಚ್ಚಿ ಕೊಲೆ ಮಾಡಿರುವುದನ್ನು ಕಂಡ ಇಡಿ ನಗರವೆ ಬೆಚ್ಚಿ ಬಿದ್ದಿದೆ. ಕೂಡಲೇ ಶಾಲಾ, ಕಾಲೇಜು, ಮಕ್ಕಳು, ಮಹಿಳೆಯರಿಗೆ ಸೂಕ್ತ ರಕ್ಷ ಣೆ ಕೊಡಲು ಸರಕಾರ ಸಂಬಂಧಿಸಿದ ಇಲಾಖೆಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕು ಎಂದು ಆಗ್ರಹಿಸಲಾಯಿತು.

ನೆಲದ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಿಂದ ಹೊರಟ ಮೆರವಣಿಗೆ ತಾಲೂಕು ಕಚೇರಿಯ ವರೆಗೆ ನಡೆಯಿತು. ತಾಲೂಕು ಕಚೇರಿ ವೃತ್ತ ಮತ್ತು ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನಾ ಧರಣಿ ನಡೆಯಿತು. ಮನವಿಪತ್ರ ಸ್ವೀಕರಿಸಿದ ಜಿಲ್ಲಾಧಿಕಾರಿ ಕರಿಗೌಡ, ಪತ್ರದಲ್ಲಿರುವ ಆಗ್ರಹಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಹಕ್ಕೊತ್ತಾಯಗಳು; ಮಹಿಳೆಯರು ಪೊಲೀಸ್‌ ಠಾಣೆಗಳಿಗೆ ನೀಡುವ ದೂರುಗಳಿಗೆ ಸೂಕ್ತ ನ್ಯಾಯ ದೊರಕಿಸಿ ಕೊಡಬೇಕು. ಮಹಿಳೆಯರೇ ಹೆಚ್ಚಾಗಿ ಕೆಲಸ ಮಾಡುವ ಕಡೆಗಳಲ್ಲಿ ಸ್ಥಳಿಯ ದೂರು ಸಮಿತಿ ಸ್ಥಾಪಿಸಿ ಕನಿಷ್ಠ ಒಬ್ಬ ಮಹಿಳೆ ಪರ ಸಂಘದ ಪ್ರತಿನಿಧಿಗಳನ್ನು ನೇಮಿಸಬೇಕು. ನಗರದ ಮಹಿಳಾ ಪೊಲೀಸ್‌ ಠಾಣೆಗೆ ಹೆಚ್ಚಿನ ಅಧಿಕಾರ ಮತ್ತು ಸಿಬ್ಬಂದಿ ನೀಡಬೇಕು. ತಾಲೂಕಿನಲ್ಲಿ ಕೊಲೆಗೀಡಾಗಿರುವ ಹೆಣ್ಣುಮಕ್ಕಳು ಮಹಿಳೆಯರ ಸೂಕ್ತ ನ್ಯಾಯ ದೊರಕಿಸಬೇಕು ಹಾಗೂ ಅವರ ಕುಟುಂಬಗಳಿಗೆ ಆರ್ಥಿಕ ನೆರವನ್ನು ಸರಕಾರ ಕಲ್ಪಿಸಬೇಕು ಎಂಬ ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು.

ಮಹಿಳಾ ಸಮಾಜ, ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ, ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆ, ಕರ್ನಾಟಕ ರಕ್ಷ ಣಾ ವೇದಿಕೆ (ಪ್ರವೀಣ್‌ ಕುಮಾರ್‌ ಬಣ), ನವೋದಯ ಚಾರಿಟಬಲ್‌ ಟ್ರಸ್ಟ್‌, ಆತ್ರೇಯ ಆಯುರ್ವೇದಿಕ್‌ ವಿದ್ಯಾಲಯ ವಿದ್ಯಾರ್ಥಿಗಳು, ನಾನ ಶಾಲಾ ಕಾಲೇಜುಗಳು ಸೇರಿದಂತೆ ಮಹಿಳಾ ಪರ ಹತ್ತಾರು ಸಂಘಟನೆಗಳ ಪ್ರಮುಖರು, ಪದಾಧಿಕಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ