ಆ್ಯಪ್ನಗರ

ಫಸಲ್‌ ಭಿಮಾ ಕಂತು ಕಟ್ಟಿಸಿಕೊಳ್ಳಲು ಬ್ಯಾಂಕ್‌ಗಳು ಹಿಂದೇಟು !

ಫಸಲ್‌ ಭಿಮಾ ಯೋಜನೆಯಲ್ಲಿ ವಿಮೆ ಹಣವನ್ನು ಕಟ್ಟಲು ಹಾಗೂ ಹೆಸರನ್ನು ನೊಂದಾಯಿಸಲು ಆಗಸ್ಟ್‌ 14ರ ವರೆಗೂ ಸರ್ಕಾರ ವಿಸ್ತರಿಸಿದರು ಸ್ಥಳೀಯ ಬ್ಯಾಂಕ್‌ನ ಅಧಿಕಾರಿಗಳು ನಮಗೆ ಯಾವುದೇ ಆದೇಶ ಬಂದಿಲ್ಲ ಎಂದು ವಿಮೆ ಹಣವನ್ನು ಕಟ್ಟಿಸಿಕೊಳ್ಳುತ್ತಿಲ್ಲ ಎಂದು ರೈತರು ಬ್ಯಾಂಕ್‌ ಸಿಬ್ಬಂದಿಗಳ ಮೇಲೆ ಅಕ್ರೋಶ ವ್ಯಕ್ತಪಡಿಸಿದರು.

Vijaya Karnataka 5 Aug 2019, 5:00 am
ಆ.14ರವರೆಗೆ ದಿನಾಂಕ ವಿಸ್ತರಣೆಯಾಗಿದ್ದರೂ ಅಧಿಕಾರಿಗಳಿಂದ ನಿರಾಕರಣೆ ರೈತರ ಆಕ್ರೋಶ
Vijaya Karnataka Web banks reluctant to make fazal insurance premiums
ಫಸಲ್‌ ಭಿಮಾ ಕಂತು ಕಟ್ಟಿಸಿಕೊಳ್ಳಲು ಬ್ಯಾಂಕ್‌ಗಳು ಹಿಂದೇಟು !


ತ್ಯಾಮಗೊಂಡ್ಲು :
ಫಸಲ್‌ ಭಿಮಾ ಯೋಜನೆಯಲ್ಲಿ ವಿಮೆ ಹಣವನ್ನು ಕಟ್ಟಲು ಹಾಗೂ ಹೆಸರನ್ನು ನೊಂದಾಯಿಸಲು ಆಗಸ್ಟ್‌ 14ರ ವರೆಗೂ ಸರ್ಕಾರ ವಿಸ್ತರಿಸಿದರು ಸ್ಥಳೀಯ ಬ್ಯಾಂಕ್‌ನ ಅಧಿಕಾರಿಗಳು ನಮಗೆ ಯಾವುದೇ ಆದೇಶ ಬಂದಿಲ್ಲ ಎಂದು ವಿಮೆ ಹಣವನ್ನು ಕಟ್ಟಿಸಿಕೊಳ್ಳುತ್ತಿಲ್ಲ ಎಂದು ರೈತರು ಬ್ಯಾಂಕ್‌ ಸಿಬ್ಬಂದಿಗಳ ಮೇಲೆ ಅಕ್ರೋಶ ವ್ಯಕ್ತಪಡಿಸಿದರು.

ಮಳೆಯ ಅಭಾವ ಮತ್ತು ಪ್ರತಿಕೂಲ ಹವಾಮಾನದಿಂದ ಮುಂಗಾರು ಮಳೆಗೆ ಬಿತ್ತನೆ ಮಾಡಿದ ಬೆಳೆಗಳು ನೆಲಕಚ್ಚುವ ಹಂತವನ್ನು ತಲುಪಿದ್ದು ಫಸಲ್‌ ಬೀಮಾ ಯೋಜನೆಗೆ ಹೆಸರನ್ನು ನೋಂದಾಯಿಸಲು ಜುಲೈ 31ಕ್ಕೆ ಕೊನೆ ದಿನಾಂಕವಾಗಿತ್ತು . ಆದರೆ ಮಳೆಯ ಅಭಾವ ಹೆಚ್ಚಾದ ಕಾರಣ ಕೊನೆಯ ದಿನಾಂಕವನ್ನು ಆಗಸ್ಟ್‌ 14ರ ವರೆಗೂ ವಿಸ್ತರಿಸಲಾಯಿತು. ಆದರೆ ಪಟ್ಟಣದ ಕೆನರಾ ಬ್ಯಾಂಕ್‌ ಹಾಗೂ ಎಸ್‌.ಬಿ.ಐ ಬ್ಯಾಂಕ್‌ಗಳಿಗೆ ಹೋದರೆ ಅಲ್ಲಿನ ಅಧಿಕಾರಿಗಳು ವಿಮೆ ಹಣವನ್ನು ಕಟ್ಟಿಸಿಕೊಳ್ಳದೇ ವಾಪಸ್‌ ಕಳುಹಿಸುತ್ತಿದ್ದಾರೆಂದು ರೈತರು ದೂರಿದ್ದಾರೆ.ದಿನಾಂಕವನ್ನು ವಿಸ್ತರಿಸಿದ್ದಾರೆ ಎಂದು ಹೇಳಿದರು ಕೇಳುತ್ತಿಲ್ಲ ಎಂದು ಅವಲತ್ತುಕೊಳ್ಳುತ್ತಿದ್ದಾರೆ.

--

ಫಸಲ್‌ ಭಿಮಾ ಯೋಜನೆಯ ಅಡಿಯಲ್ಲಿ ಆಗಸ್ಟ್‌ 14ರ ವರೆಗೂ ರಾಗಿ (ನೀರಾವರಿ), ಮುಸುಕಿನ ಜೋಳ ( ಮಳೆ ಮತ್ತು ನೀರಾವರಿ), ಭತ್ತ (ನೀರಾವರಿ), ಹುರಳಿ (ಮಳೆ) ಬೆಳೆಗಳಿನ್ನು ಬಿತ್ತನೆ ಮಾಡಿರುವ ರೈತರು ವಿಮೆ ಹಣವನ್ನು ಕಟ್ಟಿ ಹೆಸರನ್ನು ನೋದಾಂಯಿಸಹುದಾಗಿದೆ. ಈ ಸಂಬಂಧ ಫಸಲ್‌ ಭಿಮಾ ಯೋಜನೆಗೆ ಹೆಸರನ್ನು ನೋದಾಂಯಿಸುವ ಕೊನೆಯ ದಿನಾಂಕವನ್ನು ಆಗಸ್ಟ್‌ 14ರ ವರೆಗೂ ವಿಸ್ತರಿಸಲಾಗಿದೆ ಅದರೆ ಬ್ಯಾಂಕ್‌ ಅಕಾರಿಗಳು ನಮ್ಮ ಮೇಲಿನ ಅಕಾರಿಗಳಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಹಣವನ್ನು ಕಟ್ಟಿಸಿಕೊಳ್ಳುತ್ತಿಲ್ಲ, ಇದರಿಂದ ರೈತರು ಕಂಗಾಲಾಗಿದರು ಸರ್ಕಾರ ಆದೇಶಗಳನ್ನು ಈಗಾಗಲೇ ಬ್ಯಾಂಕ್‌ ಅಕಾರಿಗಳಿಗೆ ನೀಡಲಾಗಿದ್ದು ಸಮಸ್ಯೆಯನ್ನು ಬಗೆಹರಿಸಲಾಗುತ್ತಿದೆ, ರೈತರು ಯಾರು ಹೆಸರು ನೋದಾಂಯಿಸಿಲ್ಲ ತಕ್ಷ ಣವೇ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ.

-ಅಂಜಾನ ಕೃಷಿ ಅಕಾರಿ ತ್ಯಾಮಗೊಂಡ್ಲು ರೈತ ಸಂಪರ್ಕ ಕೇಂದ್ರ.

--

ಮಳೆಯನ್ನು ನಂಬಿ ಬಿತ್ತನೆ ಮಾಡಿದ್ದ ರಾಗಿ ಮತ್ತು ಜೋಳದ ಬೆಳೆಗಳು ಗರಿ ಚಿಗುರಿದ್ದು ಮಳೆಗಾಗಿ ಕಾದೆವು. ಅದರೆ ಕಳೆದ ಒಂದು ವಾರದಿಂದ ಮಳೆ ಬಾರದೆ ಗರಿಗಳು ಗಾಳಿ ಮತ್ತು ಬಿಸಿಲಿಗೆ ಬಾಡುತ್ತಿವೆ. ಈ ಸಂಬಂಧ ಬೆಳೆ ವಿಮೆ ಮಾಡಿಸಲು ರೈತ ಸಂಪರ್ಕಕ್ಕೆ ಹೋದರೆ ವಿಮೆ ಹಣ ಪಾವತಿ ಮಾಡಿ ಎನ್ನುತ್ತಾರೆ, ಬ್ಯಾಂಕ್‌ ಸಿಬ್ಬಂದಿಗಳು ಹಣ ಕಟ್ಟಿಸಿಕೊಳ್ಳುವ ದಿನಾಂಕ ಮುಗಿದಿದೆ ನೀವು ಕೃಷಿ ಅಧಿಕಾರಿಗಳನ್ನು ಕೇಳಿ ಎನ್ನುತ್ತಾರೆ. ಇದ್ದರಿಂದ ರೈತರಿಗೆ ಸರಿಯಾದ ಮಾಹಿತಿ ಮತ್ತು ಅನುಕೂಲಗಳು ಅಧಿಕಾರಿಗಳಿಂದ ಸಿಗುತ್ತಿಲ್ಲ.

-ಸಿದ್ದಯ್ಯ ಕೃಷಿಕ ತ್ಯಾಮಗೊಂಡ್ಲು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ