ಕುಂದಾಣ : 12ನೇ ಶತಮಾನದಲ್ಲಿ ಸಮಾಜದಲ್ಲಿ ಬೇರೂರಿದ್ದ ಅಸ್ಪೃಶ್ಯತೆ, ಕಂದಾಚಾರ, ಮೂಢನಂಬಿಕೆಗಳಂತಹ ಸಾಮಾಜಿಕ ಸಮಸ್ಯೆಗಳನ್ನು ತೊಡೆದು ಹಾಕಲು ಬಸವಣ್ಣ ಚಿಕಿತ್ಸಕರಾಗಿದ್ದರು ಎಂದು ಬಸವತತ್ವ ಚಿಂತಕ ಬಸವರಾಜ್ ತಿಳಿಸಿದರು.
ಕುಂದಾಣ ಹೋಬಳಿಯ ಚಪ್ಪರದಕಲ್ಲಿನ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಜಿಲ್ಲಾ ಮಟ್ಟದ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, 12ನೇ ಶತಮಾನದಲ್ಲಿ ಬಿಜ್ಜಳನ ರಾಜ್ಯದಲ್ಲಿ ಅರ್ಥ ಸಚಿವರಾಗಿದ್ದ ಬಸವಣ್ಣ, ಸಮಾಜದಲ್ಲಿನ ಅನಿಷ್ಟ ಪದ್ದತಿಗಳನ್ನುದ ಬುಡ ಸಮೇತ ತೊಡೆದುಹಾಕಲು ಶ್ರಮಿಸಿದ್ದಾರೆಂದರು.
ರಾಜ್ಯ ವಿಜ್ಞಾನ ಪರಿಷತ್ ಉಪಾಧ್ಯಕ್ಷ ಹುಲಿಕಲ್ ನಟರಾಜ್ ಮಾತನಾಡಿ, 12ನೇ ಶತಮಾನದಲ್ಲಿ ಹದಗೆಟ್ಟಿದ್ದ ಸಮಾದ ಅಂಕುಡೊಂಕುಗಳನ್ನು ತಿದ್ದಲು ತಮ್ಮ ಪ್ರಾಣವನ್ನೇ ಮುಡಿಪಿಟ್ಟು ಕ್ರಾಂತಿ ಮಾಡಿದರು.
ಸಮಾನತೆ ಎಂಬ ದಿವ್ಯ ಜ್ಯೋತಿಯನ್ನು ಎತ್ತಿಹಿಡಿದು ವಿಶ್ವಮಾನ್ಯರೆನಿಸಿದರು. ವಚನ ಸಾಹಿತ್ಯದ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಅಸ್ಪೃಶ್ಯತೆಯ ವಿರುದ್ಧ ಸಮರ ಸಾರಿದ ಮÖನ್ ಪುರುಷರು ಎಣದರು.
ಸಂವಿಧಾನದಲ್ಲಿ ಬಸವಣ್ಣನವರ ಪರಿಕಲ್ಪನೆ ವೀರಶೈವ ಲಿಂಗಾಯುತ ಯುವ ಘಟಕ ಜಿಲ್ಲಾಧ್ಯಕ್ಷ ಪ್ರಶಾಂತ್ ಕಲ್ಲೂರು ಮಾತನಾಡಿ, ಬಸವಣ್ಣ ಇದೇ ನೆಲದಲ್ಲಿ ಹುಟ್ಟಿ 886 ವರ್ಷಗಳೇ ಕಳೆದಿದೆ. ಸಮಾನತೆಗಾಗಿ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಲ್ಲಿಯೂ ಸಹ ಬಸವಣ್ಣನವರ ಪರಿಕಲ್ಪನೆಗಳಿವೆ. ಬಸವ ಜಯಂತಿ ಬರೀ ಲಿಂಗಾಯತ ವೀರಶೈವರಿಗೆ ಮಾತ್ರ ಸೀಮಿತವಲ್ಲ, ಎಲ್ಲಾ ವರ್ಗದ ಸಮುದಾಯದ ಒಳಿತಿಗಾಗಿ ಹೋರಾಟ ನಡೆಸಿದ ಆದರ್ಶ ಪುರಷ ಬಸವಣ್ಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಚನಗಳು ಸಂವಿಧಾನ ರಚನೆಗೆ ಪ್ರೇರಣೆ: ಜಿಲ್ಲಾಧಿಕಾರಿ ಸಿ.ಎಸ್.ಕರೀಗೌಡ ಅಧ್ಯಕ್ಷ ತೆ ವಹಿಸಿ ಮಾತನಾಡಿ, ಬುದ್ಧ, ಬಸವಣ್ಣ, ಅಂಬೇಡ್ಕರ್ ಒಂದು ರೀತಿಯ ಕೆಚ್ಚೆದೆಯ ವೀರರು, ವಚನಗಳಿಂದ ಸಂವಿಧಾನದ ಕಾನೂನು ರಚಬೆಗೆ ಮೂಲ ಪ್ರೇರಣೆಯಾಗಿದೆ. ವ್ಯಕ್ತಿ ಪೂಜೆಗಿಂತ ಮಹನೀಯರ ಆದರ್ಶ ಪಾಲನೆಗೆ ಹೆಚ್ಚು ಒತ್ತು ನೀಡುವಂತಾಗಲಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾ ಸಭಾ ರಾಜ್ಯ ಮಹಿಳಾ ಘಟಕ ಪ್ರಧಾನ ಕಾರ್ಯದರ್ಶಿ ಸುಧಾ ಪಾಟೀಲ್, ವಕೀಲೆ ಪೂರ್ಣಿಮ ಮಲ್ಲೇಶ್, ವೀರಶೈವ ಲಿಂಗಾಯುತ ಸಮಾಜ ತಾಲೂಕು ಘಟಕ ಅಧ್ಯಕ್ಷ ರಮೇಶ್, ಪ್ರಧಾನ ಕಾರ್ಯದರ್ಶಿ ವಿಜಯ್ಕುಮಾರ್, ಖಜಾಂಚಿ ಕೋಡಿಹಳ್ಳಿ ನಾಗೇಶ್, ಉಪಾಧ್ಯಕ್ಷ ನಾಗಭೂಷಣ್, ಮಹಿಳಾ ಘಟಕ ಉಪಾಧ್ಯಕ್ಷ ಶಶಿಕಲಾ, ಮುಖಂಡರಾದ ಬಸವರಾಜು, ವೀರಭದ್ರಪ್ಪ, ವೈ.ಸಿ.ಸತೀಶ್, ಆರ್.ಗಿರೀಶ್, ಪ್ರಕಾಶ್, ವಿಶ್ವನಾಥ್, ಸೋಮಶೇಖರ್, ಶಾಂತಕುಮಾರ್, ನಳಿನಾ ಮತ್ತಿತರರು ಇದ್ದರು.
ಕುಂದಾಣ ಹೋಬಳಿಯ ಚಪ್ಪರದಕಲ್ಲಿನ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಜಿಲ್ಲಾ ಮಟ್ಟದ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, 12ನೇ ಶತಮಾನದಲ್ಲಿ ಬಿಜ್ಜಳನ ರಾಜ್ಯದಲ್ಲಿ ಅರ್ಥ ಸಚಿವರಾಗಿದ್ದ ಬಸವಣ್ಣ, ಸಮಾಜದಲ್ಲಿನ ಅನಿಷ್ಟ ಪದ್ದತಿಗಳನ್ನುದ ಬುಡ ಸಮೇತ ತೊಡೆದುಹಾಕಲು ಶ್ರಮಿಸಿದ್ದಾರೆಂದರು.
ರಾಜ್ಯ ವಿಜ್ಞಾನ ಪರಿಷತ್ ಉಪಾಧ್ಯಕ್ಷ ಹುಲಿಕಲ್ ನಟರಾಜ್ ಮಾತನಾಡಿ, 12ನೇ ಶತಮಾನದಲ್ಲಿ ಹದಗೆಟ್ಟಿದ್ದ ಸಮಾದ ಅಂಕುಡೊಂಕುಗಳನ್ನು ತಿದ್ದಲು ತಮ್ಮ ಪ್ರಾಣವನ್ನೇ ಮುಡಿಪಿಟ್ಟು ಕ್ರಾಂತಿ ಮಾಡಿದರು.
ಸಮಾನತೆ ಎಂಬ ದಿವ್ಯ ಜ್ಯೋತಿಯನ್ನು ಎತ್ತಿಹಿಡಿದು ವಿಶ್ವಮಾನ್ಯರೆನಿಸಿದರು. ವಚನ ಸಾಹಿತ್ಯದ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಅಸ್ಪೃಶ್ಯತೆಯ ವಿರುದ್ಧ ಸಮರ ಸಾರಿದ ಮÖನ್ ಪುರುಷರು ಎಣದರು.
ಸಂವಿಧಾನದಲ್ಲಿ ಬಸವಣ್ಣನವರ ಪರಿಕಲ್ಪನೆ ವೀರಶೈವ ಲಿಂಗಾಯುತ ಯುವ ಘಟಕ ಜಿಲ್ಲಾಧ್ಯಕ್ಷ ಪ್ರಶಾಂತ್ ಕಲ್ಲೂರು ಮಾತನಾಡಿ, ಬಸವಣ್ಣ ಇದೇ ನೆಲದಲ್ಲಿ ಹುಟ್ಟಿ 886 ವರ್ಷಗಳೇ ಕಳೆದಿದೆ. ಸಮಾನತೆಗಾಗಿ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಲ್ಲಿಯೂ ಸಹ ಬಸವಣ್ಣನವರ ಪರಿಕಲ್ಪನೆಗಳಿವೆ. ಬಸವ ಜಯಂತಿ ಬರೀ ಲಿಂಗಾಯತ ವೀರಶೈವರಿಗೆ ಮಾತ್ರ ಸೀಮಿತವಲ್ಲ, ಎಲ್ಲಾ ವರ್ಗದ ಸಮುದಾಯದ ಒಳಿತಿಗಾಗಿ ಹೋರಾಟ ನಡೆಸಿದ ಆದರ್ಶ ಪುರಷ ಬಸವಣ್ಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಚನಗಳು ಸಂವಿಧಾನ ರಚನೆಗೆ ಪ್ರೇರಣೆ: ಜಿಲ್ಲಾಧಿಕಾರಿ ಸಿ.ಎಸ್.ಕರೀಗೌಡ ಅಧ್ಯಕ್ಷ ತೆ ವಹಿಸಿ ಮಾತನಾಡಿ, ಬುದ್ಧ, ಬಸವಣ್ಣ, ಅಂಬೇಡ್ಕರ್ ಒಂದು ರೀತಿಯ ಕೆಚ್ಚೆದೆಯ ವೀರರು, ವಚನಗಳಿಂದ ಸಂವಿಧಾನದ ಕಾನೂನು ರಚಬೆಗೆ ಮೂಲ ಪ್ರೇರಣೆಯಾಗಿದೆ. ವ್ಯಕ್ತಿ ಪೂಜೆಗಿಂತ ಮಹನೀಯರ ಆದರ್ಶ ಪಾಲನೆಗೆ ಹೆಚ್ಚು ಒತ್ತು ನೀಡುವಂತಾಗಲಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾ ಸಭಾ ರಾಜ್ಯ ಮಹಿಳಾ ಘಟಕ ಪ್ರಧಾನ ಕಾರ್ಯದರ್ಶಿ ಸುಧಾ ಪಾಟೀಲ್, ವಕೀಲೆ ಪೂರ್ಣಿಮ ಮಲ್ಲೇಶ್, ವೀರಶೈವ ಲಿಂಗಾಯುತ ಸಮಾಜ ತಾಲೂಕು ಘಟಕ ಅಧ್ಯಕ್ಷ ರಮೇಶ್, ಪ್ರಧಾನ ಕಾರ್ಯದರ್ಶಿ ವಿಜಯ್ಕುಮಾರ್, ಖಜಾಂಚಿ ಕೋಡಿಹಳ್ಳಿ ನಾಗೇಶ್, ಉಪಾಧ್ಯಕ್ಷ ನಾಗಭೂಷಣ್, ಮಹಿಳಾ ಘಟಕ ಉಪಾಧ್ಯಕ್ಷ ಶಶಿಕಲಾ, ಮುಖಂಡರಾದ ಬಸವರಾಜು, ವೀರಭದ್ರಪ್ಪ, ವೈ.ಸಿ.ಸತೀಶ್, ಆರ್.ಗಿರೀಶ್, ಪ್ರಕಾಶ್, ವಿಶ್ವನಾಥ್, ಸೋಮಶೇಖರ್, ಶಾಂತಕುಮಾರ್, ನಳಿನಾ ಮತ್ತಿತರರು ಇದ್ದರು.