ನಾಗರಾಜ ಎನ್ ಎಂ ನಂದಗುಡಿ
ಸುಮಾರು 610ಕ್ಕಿಂತ ಹೆಚ್ಚಿನ ಜೇನುಗೂಡುಗಳನ್ನು ಹೊಂದುವ ಮೂಲಕ ಅಂತಾರಾಷ್ಟ್ರೀಯ ಪಾರಂಪರಿಕ ತಾಣ ಎಂಬ ಮಾನ್ಯತೆ ಗಳಿಸಿರುವ ದೊಡ್ಡ ಆಲದಮರದ ತಾಣಕ್ಕೆ ಗುರುವಾರ ಕೇಂದ್ರಿಯ ಸಮಗ್ರ ಪೀಡೆ ನಿರ್ವಹಣಾ ಕೇಂದ್ರದ ಅಧಿಕಾರಿಗಳ ತಂಡ ಗುರುವಾರ ಭೇಟಿ ನೀಡಿ, ಪರಿಶೀಲನೆ ನಡೆಸಿತು.
ನಂದಗುಡಿ ಹೋಬಳಿ ಇಟ್ಟಸಂದ್ರ ಗ್ರಾಪಂ ವ್ಯಾಪ್ತಿಯ ರಾಮಗೋವಿಂದಪುರದ ದೊಡ್ಡಆಲದ ಮರದಲ್ಲಿರುವ ಸುಮಾರು 350ಕ್ಕೂ ಹೆಚ್ಚು ಜೇನುಗೂಡುಗಳಲ್ಲಿ ಪ್ರತಿನಿತ್ಯ ಜೇನು ಹುಳಗಳು ಸಾವನ್ನಪ್ಪುತ್ತಿರುವ ವಿಷಯ ಕುರಿತು ವಿಜಯ ಕರ್ನಾಟಕವು 'ಕೀಟನಾಶಕಗಳ ಸೋಂಕಿಗೆ ಜೇನುಹುಳಗಳ ಸಾವು' ಎಂಬ ಶಿರ್ಷಿಕೆಯಡಿ ನವೆಂಬರ್ 30ರಂದು ವರದಿ ಪ್ರಕಟಿಸಿತ್ತು.
ಈ ವರದಿಗೆ ಎಚ್ಚೆತ್ತ ಫರೀದಾಬಾದ್ನ ಕೇಂದ್ರಿಯ ಸಮಗ್ರ ಪೀಡೆ ನಿರ್ವಹಣಾ ಕೇಂದ್ರದ ಹಿರಿಯ ಜಂಟಿ ನಿರ್ದೇಶಕ ಡಾ. ಸತ್ಯನಾರಾಯಣ್, ದಕ್ಷಿಣ ವಲಯ ಜಂಟಿ ನಿರ್ದೇಶಕರಿಗೆ ಸೂಚಿಸಿದ ಹಿನ್ನೆಲೆಯಲ್ಲಿ, ಕೇಂದ್ರಿಯ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಜೀವಂತ ಹಾಗೂ ಸತ್ತು ಬಿದ್ದಿರುವ ಜೇನು ಹುಳಗಳನ್ನು ಸಂಗ್ರಹಿಸಿ, ಗ್ರಾಮಸ್ಥರಿಂದ ಮಾಹಿತಿ ಸಂಗ್ರಹಿಸಿದರು. ಈ ಭಾಗದ ರೈತರು ತಮ್ಮ ತೋಟಗಳಲ್ಲಿ ಯಾವ್ಯಾವ ಬೆಳೆಗಳನ್ನು ಬೆಳೆಯುತ್ತಾರೆ. ಉತ್ತಮ ಇಳುವರಿ ಪಡೆಯಲು ಬಳಕೆ ಮಾಡುವ ಕೀಟನಾಶಕಗಳ ವಿವರ ಪಡೆದು, ಕೋಳಿ ಫಾರಂಗಳಿಗೆ ಭೇಟಿ ನೀಡಿ ಬಳಸುವ ಔಷಧಗಳ ವಿವರ ಪಡೆದರು.
ಬೆಂಗಳೂರು ಕೇಂದ್ರಿಯ ಸಮಗ್ರ ಪೀಡೆ ನಿರ್ವಹಣಾ ಕೇಂದ್ರದ ಜಂಟಿ ನಿರ್ದೇಶಕ ಡಾ. ಪಿ. ಮಾಣಿಕ್ಯಂ ವಿಕ ಜತೆ ಮಾತನಾಡಿ, ಜೇನುಹುಳಗಳು ರೈತನ ಮಿತ್ರನಾಗಿ ಪರಾಗ ಸ್ಪರ್ಶ ಕ್ರಿಯೆಗೆ ಸಹಕಾರಿಯಾಗಿ ವಿವಿಧ ಫಸಲುಗಳ ಹೆಚ್ಚಿನ ಇಳುವರಿ ಪಡೆಯಲು ರೈತರಿಗೆ ನೆರವಾಗುತ್ತಿವೆ. ಸಮೃದ್ಧವಾಗಿ ಜೇನುಗೂಡುಗಳು ವಾಸಿಸುವ ಪ್ರದೇಶ ಆರೋಗ್ಯಕರ ವಾತಾವರಣ ಹೊಂದಿರಲು ಸಾಧ್ಯವಾಗುತ್ತದೆ. ಈ ಭಾಗದಲ್ಲಿ ಜೇನುಗೂಡುಗಳ ಸಂಖ್ಯೆ ಕುಸಿಯಲು ಆಹಾರ, ನೀರಿನ ಕೊರತೆಯೇ ಕಾರಣವಾಗಿದೆ. ಜೇನುಹುಳಗಳ ಸಾವಿಗೆ ಪ್ರಮುಖವಾಗಿ ಕೀಟನಾಶಕ ಔಷಧ ಸಿಂಪಡಿಸಿದ ವೇಳೆಯಲ್ಲಿ ಹೂವಿನ ತೋಟಗಳಲ್ಲಿ ಹೂಗಳಿಂದ ಮಧು ಸಂಗ್ರಹಿಸಲು ಜೇನುಹುಳಗಳು ಹೋದಾಗ ಔಷಧಗಳ ಸೋಂಕಿನಿಂದ ಸಾವನ್ನಪ್ಪಿರುವ ಸಾಧ್ಯತೆ ಹೆಚ್ಚಾಗಿದೆ ಎಂದರು.
ಈ ಬಗ್ಗೆ ಜೀವಂತ ಹಾಗೂ ಸತ್ತಿರುವ ಹುಳಗಳನ್ನು ಸಂಗ್ರಹಿಸಿ ಪ್ರಯೋಗಾಲಕ್ಕೆ ಕಳುಹಿಸಿ ಸಂಶೋಧಿಸಿ ಸಾವಿಗೆ ಕಾರಣ ತಿಳಿದು ಪರಿಹಾರ ಕಂಡು ಹಿಡಿಯಲಾಗುವುದು. ಇಲ್ಲಿನ ಕೃಷಿಕರಿಗೆ ತಜ್ಞರ ನೆರವು ಪಡೆದು ಕೀಟನಾಶಕಗಳನ್ನು ಬಳಸುವ ಕುರಿತು ಸ್ಥಳೀಯ ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳ ಸಹಯೋಗದೊಂದಿಗೆ ಈ ಭಾಗಗಳ ವ್ಯಾಪ್ತಿಯ ಕೃಷಿಕರನ್ನು ಒಗ್ಗೂಡಿಸಿ ತರಬೇತಿ ಕಾರ್ಯಾಗಾರ ಹಮ್ಮಿಕೊಂಡು ಅರಿವು ಮೂಡಿಸಲಾಗುವದು ಎಂದು ತಿಳಿಸಿದರು.
ಹಿರಿಯ ಗ್ರಾಮಸ್ಥ ಜಗದೀಶಪ್ಪ ಮಾತನಾಡಿ, 2007-08ರಲ್ಲಿ 610ಕ್ಕೂ ಹೆಚ್ಚು ಜೇನುಗೂಡುಗಳು ಒಂದೇ ಮರದಲ್ಲಿ ನೆಲೆಸಿ ವಿಶ್ವ ಪ್ರಸಿದ್ಧಿಯನ್ನು ಪಡೆದು ಅಮೆರಿಕ, ಜಪಾನ್, ಅಸ್ಪ್ರೇಲಿಯಾ, ರಷ್ಯಾ, ಚೈನಾ, ಜರ್ಮನಿ ಮುಂತಾದ ದೇಶಗಳ ನೂರಾರು ವಿದೇಶಿಗರು ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿರುವ ಈ ತಾಣಕ್ಕೆ ಭೇಟಿ ನೀಡಿದ್ದರು.
ಕಳೆದ 20 ವರ್ಷಗಳ ಅವಧಿಯಲ್ಲಿ ಈ ರೀತಿ ಜೇನುಹುಳಗಳ ಮಾರಣ ಹೋಮ ನಡೆದಿರಲಿಲ್ಲ. ನಾಲ್ಕೈದು ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿ ನೀರಿನ ಕೊರತೆ ಹೆಚ್ಚಾಗಿ ಜೇನು ಗೂಡುಗಳ ಸಂಖ್ಯೆ ಕ್ರಮೇಣ ಇಳಿಮುಖವಾಗುತ್ತಿದೆ. ಜೇನುಗೂಡಿಗೂ, ನಮ್ಮ ಗ್ರಾಮಕ್ಕೂ ನೂರಾರು ವರ್ಷಗಳ ನಂಟಿದ್ದು, ಜೇನು ಕೀಳಲು ಯಾರಿಗೂ ಅವಕಾಶ ನೀಡುತ್ತಿಲ್ಲ. ಕೆಲವು ವರ್ಷಗಳಿಂದ ಯಾವುದೇ ಬೆಳೆಗಳಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತಿಲ್ಲ. ಜೇನುಹುಳಗಳ ಸಾಮೂಹಿಕ ಸಾವು ಜನರನ್ನು ಚಿಂತೆಗೆ ಈಡು ಮಾಡಿದೆ ಎಂದು ಅಧಿಕಾರಿಗಳ ತಂಡಕ್ಕೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕೇಂದ್ರ ಸಹಾಯಕ ಸಸ್ಯ ಸಂರಕ್ಷ ಣಾಧಿಕಾರಿ ಕೆ ಎನ್ ಪ್ರಕಾಶ್, ಗ್ರಾಮಸ್ಥರಾದ ಅಶ್ವಥಪ್ಪ, ಜಗದೀಶಪ್ಪ, ಗಣೇಶಪ್ಪ, ಅಶ್ವಥಪ್ಪ, ದೇವರಾಜ್, ತಮ್ಮೇಗೌಡ, ಮುರಳಿ ಮತ್ತಿತರರು ಹಾಜರಿದ್ದರು.
ಇಲ್ಲಿನ ಸಮಸ್ಯೆಯ ಬಗ್ಗೆ ಸಂಕ್ಷಿಪ್ತ ವರದಿ ಪ್ರಕಟಿಸಿ ಕಳೆದ 15 ವರ್ಷಗಳ ಹಿಂದೆ ಇದ್ದ ಗ್ರಾಮದ ಖ್ಯಾತಿಯನ್ನು ಜಗತ್ತಿಗೆ ತಿಳಿಸಿ ಸಂಕಷ್ಟಕ್ಕೆ ಸಿಲುಕಿರುವ ಜೇನುಗೂಡುಗಳಿಗೆ ಪರಿಹಾರ ಒದಗಿಸುವ ಕಾರ್ಯಕ್ಕೆ ಕೇಂದ್ರಿಯ ತಂಡ ಆಗಮಿಸಲು ವಿಕ ವರದಿಯೇ ಕಾರಣ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಸಂಶೋಧನೆ ನಡೆಸಿ, ಜೇನುಹುಳಗಳ ಸಾವಿಗೆ ಮಂಗಳ ಹಾಡುವಂತಾಗಲಿ. ಗ್ರಾಮಸ್ಥರು ವಿಕ ಸಾಮಾಜಿಕ ಕಳಕಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
- ಗಣೇಶಪ್ಪ, ಹಿರಿಯ ಗ್ರಾಮಸ್ಥ, ರಾಮಗೋವಿಂದಪುರ
ಅಂತಾರಾಷ್ಟ್ರೀಯ ಮಾನ್ಯತೆ ಗಳಿಸಿರುವ ತಾಣವಾಗಿದ್ದರೂ, ಸರಕಾರದಿಂದ ವಿಶೇಷ ಅನುದಾನ ಬಿಡುಗಡೆ ಮಾಡಿ ಈ ತಾಣವನ್ನು ಪ್ರವಾಸಿ ಸ್ಥಳವಾಗಿ ಮಾಡಲು ಅಧಿಕಾರಿಗಳ ಇಚ್ಛಾ ಶಕ್ತಿಯ ಕೊರತೆ ಕಾಡುತ್ತಿದೆ. ಸ್ಥಳೀಯ ಅಧಿಕಾರಿಗಳು ಸಹ ಜೇನುಗೂಡುಗಳ ಸಂರಕ್ಷ ಣೆ ಮಾಡಲು ಕೈಗೊಳ್ಳಬೇಕಾದ ಕ್ರಮಗಳನ್ನು ಅನುಸರಿಸದೆ, ನಿರ್ಲಕ್ಷ ್ಯತೆ ವಹಿಸಿರುವುದೇ ಅನಾಹುತಕ್ಕೆ ಕಾರಣವಾಗಿದೆ. ವಿಕ ವರದಿಯ ಪರಿಣಾಮ ಪರಿಸರ ಪ್ರೇಮಿಗಳು ಇತ್ತ ಮುಖ ಮಾಡುವಂತಾಗಿದೆ. ವಿಕ ಪ್ರಯತ್ನಕ್ಕೆ ಗ್ರಾಮಸ್ಥರಲ್ಲಿ ಸಂತಸ ತಂದಿದೆ.
- ದೇವರಾಜ್, ಪದವೀಧರ ಯುವ ಕೃಷಿಕ, ರಾಮಗೋವಿಂದಪುರ
ಸುಮಾರು 610ಕ್ಕಿಂತ ಹೆಚ್ಚಿನ ಜೇನುಗೂಡುಗಳನ್ನು ಹೊಂದುವ ಮೂಲಕ ಅಂತಾರಾಷ್ಟ್ರೀಯ ಪಾರಂಪರಿಕ ತಾಣ ಎಂಬ ಮಾನ್ಯತೆ ಗಳಿಸಿರುವ ದೊಡ್ಡ ಆಲದಮರದ ತಾಣಕ್ಕೆ ಗುರುವಾರ ಕೇಂದ್ರಿಯ ಸಮಗ್ರ ಪೀಡೆ ನಿರ್ವಹಣಾ ಕೇಂದ್ರದ ಅಧಿಕಾರಿಗಳ ತಂಡ ಗುರುವಾರ ಭೇಟಿ ನೀಡಿ, ಪರಿಶೀಲನೆ ನಡೆಸಿತು.
ನಂದಗುಡಿ ಹೋಬಳಿ ಇಟ್ಟಸಂದ್ರ ಗ್ರಾಪಂ ವ್ಯಾಪ್ತಿಯ ರಾಮಗೋವಿಂದಪುರದ ದೊಡ್ಡಆಲದ ಮರದಲ್ಲಿರುವ ಸುಮಾರು 350ಕ್ಕೂ ಹೆಚ್ಚು ಜೇನುಗೂಡುಗಳಲ್ಲಿ ಪ್ರತಿನಿತ್ಯ ಜೇನು ಹುಳಗಳು ಸಾವನ್ನಪ್ಪುತ್ತಿರುವ ವಿಷಯ ಕುರಿತು ವಿಜಯ ಕರ್ನಾಟಕವು 'ಕೀಟನಾಶಕಗಳ ಸೋಂಕಿಗೆ ಜೇನುಹುಳಗಳ ಸಾವು' ಎಂಬ ಶಿರ್ಷಿಕೆಯಡಿ ನವೆಂಬರ್ 30ರಂದು ವರದಿ ಪ್ರಕಟಿಸಿತ್ತು.
ಈ ವರದಿಗೆ ಎಚ್ಚೆತ್ತ ಫರೀದಾಬಾದ್ನ ಕೇಂದ್ರಿಯ ಸಮಗ್ರ ಪೀಡೆ ನಿರ್ವಹಣಾ ಕೇಂದ್ರದ ಹಿರಿಯ ಜಂಟಿ ನಿರ್ದೇಶಕ ಡಾ. ಸತ್ಯನಾರಾಯಣ್, ದಕ್ಷಿಣ ವಲಯ ಜಂಟಿ ನಿರ್ದೇಶಕರಿಗೆ ಸೂಚಿಸಿದ ಹಿನ್ನೆಲೆಯಲ್ಲಿ, ಕೇಂದ್ರಿಯ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಜೀವಂತ ಹಾಗೂ ಸತ್ತು ಬಿದ್ದಿರುವ ಜೇನು ಹುಳಗಳನ್ನು ಸಂಗ್ರಹಿಸಿ, ಗ್ರಾಮಸ್ಥರಿಂದ ಮಾಹಿತಿ ಸಂಗ್ರಹಿಸಿದರು. ಈ ಭಾಗದ ರೈತರು ತಮ್ಮ ತೋಟಗಳಲ್ಲಿ ಯಾವ್ಯಾವ ಬೆಳೆಗಳನ್ನು ಬೆಳೆಯುತ್ತಾರೆ. ಉತ್ತಮ ಇಳುವರಿ ಪಡೆಯಲು ಬಳಕೆ ಮಾಡುವ ಕೀಟನಾಶಕಗಳ ವಿವರ ಪಡೆದು, ಕೋಳಿ ಫಾರಂಗಳಿಗೆ ಭೇಟಿ ನೀಡಿ ಬಳಸುವ ಔಷಧಗಳ ವಿವರ ಪಡೆದರು.
ಬೆಂಗಳೂರು ಕೇಂದ್ರಿಯ ಸಮಗ್ರ ಪೀಡೆ ನಿರ್ವಹಣಾ ಕೇಂದ್ರದ ಜಂಟಿ ನಿರ್ದೇಶಕ ಡಾ. ಪಿ. ಮಾಣಿಕ್ಯಂ ವಿಕ ಜತೆ ಮಾತನಾಡಿ, ಜೇನುಹುಳಗಳು ರೈತನ ಮಿತ್ರನಾಗಿ ಪರಾಗ ಸ್ಪರ್ಶ ಕ್ರಿಯೆಗೆ ಸಹಕಾರಿಯಾಗಿ ವಿವಿಧ ಫಸಲುಗಳ ಹೆಚ್ಚಿನ ಇಳುವರಿ ಪಡೆಯಲು ರೈತರಿಗೆ ನೆರವಾಗುತ್ತಿವೆ. ಸಮೃದ್ಧವಾಗಿ ಜೇನುಗೂಡುಗಳು ವಾಸಿಸುವ ಪ್ರದೇಶ ಆರೋಗ್ಯಕರ ವಾತಾವರಣ ಹೊಂದಿರಲು ಸಾಧ್ಯವಾಗುತ್ತದೆ. ಈ ಭಾಗದಲ್ಲಿ ಜೇನುಗೂಡುಗಳ ಸಂಖ್ಯೆ ಕುಸಿಯಲು ಆಹಾರ, ನೀರಿನ ಕೊರತೆಯೇ ಕಾರಣವಾಗಿದೆ. ಜೇನುಹುಳಗಳ ಸಾವಿಗೆ ಪ್ರಮುಖವಾಗಿ ಕೀಟನಾಶಕ ಔಷಧ ಸಿಂಪಡಿಸಿದ ವೇಳೆಯಲ್ಲಿ ಹೂವಿನ ತೋಟಗಳಲ್ಲಿ ಹೂಗಳಿಂದ ಮಧು ಸಂಗ್ರಹಿಸಲು ಜೇನುಹುಳಗಳು ಹೋದಾಗ ಔಷಧಗಳ ಸೋಂಕಿನಿಂದ ಸಾವನ್ನಪ್ಪಿರುವ ಸಾಧ್ಯತೆ ಹೆಚ್ಚಾಗಿದೆ ಎಂದರು.
ಈ ಬಗ್ಗೆ ಜೀವಂತ ಹಾಗೂ ಸತ್ತಿರುವ ಹುಳಗಳನ್ನು ಸಂಗ್ರಹಿಸಿ ಪ್ರಯೋಗಾಲಕ್ಕೆ ಕಳುಹಿಸಿ ಸಂಶೋಧಿಸಿ ಸಾವಿಗೆ ಕಾರಣ ತಿಳಿದು ಪರಿಹಾರ ಕಂಡು ಹಿಡಿಯಲಾಗುವುದು. ಇಲ್ಲಿನ ಕೃಷಿಕರಿಗೆ ತಜ್ಞರ ನೆರವು ಪಡೆದು ಕೀಟನಾಶಕಗಳನ್ನು ಬಳಸುವ ಕುರಿತು ಸ್ಥಳೀಯ ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳ ಸಹಯೋಗದೊಂದಿಗೆ ಈ ಭಾಗಗಳ ವ್ಯಾಪ್ತಿಯ ಕೃಷಿಕರನ್ನು ಒಗ್ಗೂಡಿಸಿ ತರಬೇತಿ ಕಾರ್ಯಾಗಾರ ಹಮ್ಮಿಕೊಂಡು ಅರಿವು ಮೂಡಿಸಲಾಗುವದು ಎಂದು ತಿಳಿಸಿದರು.
ಹಿರಿಯ ಗ್ರಾಮಸ್ಥ ಜಗದೀಶಪ್ಪ ಮಾತನಾಡಿ, 2007-08ರಲ್ಲಿ 610ಕ್ಕೂ ಹೆಚ್ಚು ಜೇನುಗೂಡುಗಳು ಒಂದೇ ಮರದಲ್ಲಿ ನೆಲೆಸಿ ವಿಶ್ವ ಪ್ರಸಿದ್ಧಿಯನ್ನು ಪಡೆದು ಅಮೆರಿಕ, ಜಪಾನ್, ಅಸ್ಪ್ರೇಲಿಯಾ, ರಷ್ಯಾ, ಚೈನಾ, ಜರ್ಮನಿ ಮುಂತಾದ ದೇಶಗಳ ನೂರಾರು ವಿದೇಶಿಗರು ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿರುವ ಈ ತಾಣಕ್ಕೆ ಭೇಟಿ ನೀಡಿದ್ದರು.
ಕಳೆದ 20 ವರ್ಷಗಳ ಅವಧಿಯಲ್ಲಿ ಈ ರೀತಿ ಜೇನುಹುಳಗಳ ಮಾರಣ ಹೋಮ ನಡೆದಿರಲಿಲ್ಲ. ನಾಲ್ಕೈದು ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿ ನೀರಿನ ಕೊರತೆ ಹೆಚ್ಚಾಗಿ ಜೇನು ಗೂಡುಗಳ ಸಂಖ್ಯೆ ಕ್ರಮೇಣ ಇಳಿಮುಖವಾಗುತ್ತಿದೆ. ಜೇನುಗೂಡಿಗೂ, ನಮ್ಮ ಗ್ರಾಮಕ್ಕೂ ನೂರಾರು ವರ್ಷಗಳ ನಂಟಿದ್ದು, ಜೇನು ಕೀಳಲು ಯಾರಿಗೂ ಅವಕಾಶ ನೀಡುತ್ತಿಲ್ಲ. ಕೆಲವು ವರ್ಷಗಳಿಂದ ಯಾವುದೇ ಬೆಳೆಗಳಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತಿಲ್ಲ. ಜೇನುಹುಳಗಳ ಸಾಮೂಹಿಕ ಸಾವು ಜನರನ್ನು ಚಿಂತೆಗೆ ಈಡು ಮಾಡಿದೆ ಎಂದು ಅಧಿಕಾರಿಗಳ ತಂಡಕ್ಕೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕೇಂದ್ರ ಸಹಾಯಕ ಸಸ್ಯ ಸಂರಕ್ಷ ಣಾಧಿಕಾರಿ ಕೆ ಎನ್ ಪ್ರಕಾಶ್, ಗ್ರಾಮಸ್ಥರಾದ ಅಶ್ವಥಪ್ಪ, ಜಗದೀಶಪ್ಪ, ಗಣೇಶಪ್ಪ, ಅಶ್ವಥಪ್ಪ, ದೇವರಾಜ್, ತಮ್ಮೇಗೌಡ, ಮುರಳಿ ಮತ್ತಿತರರು ಹಾಜರಿದ್ದರು.
ಇಲ್ಲಿನ ಸಮಸ್ಯೆಯ ಬಗ್ಗೆ ಸಂಕ್ಷಿಪ್ತ ವರದಿ ಪ್ರಕಟಿಸಿ ಕಳೆದ 15 ವರ್ಷಗಳ ಹಿಂದೆ ಇದ್ದ ಗ್ರಾಮದ ಖ್ಯಾತಿಯನ್ನು ಜಗತ್ತಿಗೆ ತಿಳಿಸಿ ಸಂಕಷ್ಟಕ್ಕೆ ಸಿಲುಕಿರುವ ಜೇನುಗೂಡುಗಳಿಗೆ ಪರಿಹಾರ ಒದಗಿಸುವ ಕಾರ್ಯಕ್ಕೆ ಕೇಂದ್ರಿಯ ತಂಡ ಆಗಮಿಸಲು ವಿಕ ವರದಿಯೇ ಕಾರಣ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಸಂಶೋಧನೆ ನಡೆಸಿ, ಜೇನುಹುಳಗಳ ಸಾವಿಗೆ ಮಂಗಳ ಹಾಡುವಂತಾಗಲಿ. ಗ್ರಾಮಸ್ಥರು ವಿಕ ಸಾಮಾಜಿಕ ಕಳಕಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
- ಗಣೇಶಪ್ಪ, ಹಿರಿಯ ಗ್ರಾಮಸ್ಥ, ರಾಮಗೋವಿಂದಪುರ
ಅಂತಾರಾಷ್ಟ್ರೀಯ ಮಾನ್ಯತೆ ಗಳಿಸಿರುವ ತಾಣವಾಗಿದ್ದರೂ, ಸರಕಾರದಿಂದ ವಿಶೇಷ ಅನುದಾನ ಬಿಡುಗಡೆ ಮಾಡಿ ಈ ತಾಣವನ್ನು ಪ್ರವಾಸಿ ಸ್ಥಳವಾಗಿ ಮಾಡಲು ಅಧಿಕಾರಿಗಳ ಇಚ್ಛಾ ಶಕ್ತಿಯ ಕೊರತೆ ಕಾಡುತ್ತಿದೆ. ಸ್ಥಳೀಯ ಅಧಿಕಾರಿಗಳು ಸಹ ಜೇನುಗೂಡುಗಳ ಸಂರಕ್ಷ ಣೆ ಮಾಡಲು ಕೈಗೊಳ್ಳಬೇಕಾದ ಕ್ರಮಗಳನ್ನು ಅನುಸರಿಸದೆ, ನಿರ್ಲಕ್ಷ ್ಯತೆ ವಹಿಸಿರುವುದೇ ಅನಾಹುತಕ್ಕೆ ಕಾರಣವಾಗಿದೆ. ವಿಕ ವರದಿಯ ಪರಿಣಾಮ ಪರಿಸರ ಪ್ರೇಮಿಗಳು ಇತ್ತ ಮುಖ ಮಾಡುವಂತಾಗಿದೆ. ವಿಕ ಪ್ರಯತ್ನಕ್ಕೆ ಗ್ರಾಮಸ್ಥರಲ್ಲಿ ಸಂತಸ ತಂದಿದೆ.
- ದೇವರಾಜ್, ಪದವೀಧರ ಯುವ ಕೃಷಿಕ, ರಾಮಗೋವಿಂದಪುರ