ಆ್ಯಪ್ನಗರ

ಓಂಶಕ್ತಿ ಅಮ್ಮನವರ ಪ್ರತಿಷ್ಠಾಪನೆ

ಹಿಂದೂ ಧರ್ಮದಲ್ಲಿ ಭಕ್ತಿಯು ಒಂದು ಪ್ರಮುಖ ನಂಬಿಕೆಯಾಗಿದ್ದು, ದೇವರನ್ನು ಪ್ರೀತಿಸುತ್ತಾ ಜೀವನದ ಸಕಲಕಾರ್ಯಗಳನ್ನೂ ದೇವರಸೇವೆಯೆಂಬ ಭಾವನೆಯಿಂದ ಮಾಡುವುದರಿಂದ ಪ್ರೀತಿ, ವಿಶ್ವಾಸ ಅಧಿಕಗೊಳ್ಳುತ್ತದೆ ಎಂದು ಪ್ರಧಾನಾರ್ಚಕಿ ಸೂರ್ಯಕಲಾ ತಿಳಿಸಿದರು.

Vijaya Karnataka 11 Dec 2018, 5:00 am
ವಿಜಯಪುರ: ಹಿಂದೂ ಧರ್ಮದಲ್ಲಿ ಭಕ್ತಿಯು ಒಂದು ಪ್ರಮುಖ ನಂಬಿಕೆಯಾಗಿದ್ದು, ದೇವರನ್ನು ಪ್ರೀತಿಸುತ್ತಾ ಜೀವನದ ಸಕಲಕಾರ್ಯಗಳನ್ನೂ ದೇವರಸೇವೆಯೆಂಬ ಭಾವನೆಯಿಂದ ಮಾಡುವುದರಿಂದ ಪ್ರೀತಿ, ವಿಶ್ವಾಸ ಅಧಿಕಗೊಳ್ಳುತ್ತದೆ ಎಂದು ಪ್ರಧಾನಾರ್ಚಕಿ ಸೂರ್ಯಕಲಾ ತಿಳಿಸಿದರು.
Vijaya Karnataka Web bhakti is belief in hindu religion
ಓಂಶಕ್ತಿ ಅಮ್ಮನವರ ಪ್ರತಿಷ್ಠಾಪನೆ


ಹೋಬಳಿಯ ಕೊಮ್ಮಸಂದ್ರ ಗ್ರಾಮದ ಶ್ರೀ ಯೋಗಿನಾರೇಯಣ ಯತೀಂದ್ರರ ದೇವಾಲಯದ ಬಳಿಯಿರುವ ಓಂಶಕ್ತಿ ಅಮ್ಮನವರ ದೇವಾಲಯದಲ್ಲಿ ನಡೆದ ನೂತನ ಸುಮಾರು ಆರೂವರೆ ಅಡಿ ಎತ್ತರದ ಓಂಶಕ್ತಿ ಅಮ್ಮನವರ ಪ್ರತಿಮೆ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾನುವಾರ ರಾತ್ರಿ ಪಾಲ್ಗೊಂಡು ಅವರು ಮಾತನಾಡಿದರು.

ಭಗವಂತನ ಮಾರ್ಗವನ್ನು ಕಂಡುಕೊಳ್ಳಲು ಪ್ರೀತಿಯೊಂದು ಮಾರ್ಗ. ಜೀವನ, ಜಗತ್ತು, ಭಗವಂತ ಸಂಬಂಧಗಳ ಸತ್ಯವಾದ ಪರಿಜ್ಞಾನವನ್ನು ಹೊಂದಿ ಸರ್ವರಲ್ಲಿಯೂ ದೇವರಲ್ಲಿ ಏಕತೆಯನ್ನು ಸಾಧಿಸಬೇಕು ಎಂದರು.

ಅರ್ಚಕ ಕೃಷ್ಣಪ್ಪ ಮಾತನಾಡಿ, ದೇವರಿಗೆ ಸಮರ್ಪಿಸುವ ಭಕ್ತಿಯು ನಿಷ್ಕಳಂಕ, ಪರಿಶುದ್ಧವಾಗಿರಬೇಕು. ದೇವರ ಮೇಲಿನ ವಿಶ್ವಾಸವೇ ಉತ್ತಮ ಜೀವನಪಥದತ್ತ ನಮ್ಮನ್ನು ಕೊಂಡೊಯ್ಯುತ್ತದೆ ಎಂದರು.

ಆ ಪ್ರಯುಕ್ತ ದೇವಾಲಯದಲ್ಲಿ ವಿಶೇಷ ಹೋಮಾದಿ ಕಾರ್ಯಗಳು, ನೂತನ ವಿಗ್ರಹ ಪ್ರತಿಷ್ಠಾಪನೆ, ಅಲಂಕಾರ, ವಿಶೇಷ ಪೂಜೆ ನಡೆಯಿತು. ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು. ಮಹಿಳೆಯರು ದೇವರಿಗೆ ಗಂಜಿಪೂಜೆ, ದೀಪಾರತಿ ಬೆಳಗಿದರು.

ದೇವಾಲಯದಲ್ಲಿ ಮಹಿಳೆಯರು ನಾನಾ ಬಗೆಯ ರಂಗೋಲಿ ಹಾಕಿದರು. ನಾನಾ ತಂಡಗಳಿಂದ ಭಕ್ತಿಗೀತೆ ಗಾಯನ, ಭಜನೆ ನಡೆಯಿತು. ಧರ್ಮದರ್ಶಿ ಸಿ.ಪ್ರಕಾಶ್‌, ಎ.ರಂಗನಾಥಪುರ ರಮೇಶ್‌, ರಾಧಮ್ಮ, ನಾಗಮಣಿ, ನೀಲಮ್ಮ, ಆರತಿ, ಸಾಧು ಚನ್ನಪ್ಪಸ್ವಾಮಿ, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ