ಆ್ಯಪ್ನಗರ

ಬಿಲ್‌ ಪಾವತಿ ಬಾಕಿ: ಐಬಿಗೆ ವಿದ್ಯುತ್‌ ಕಡಿತ

ಪಟ್ಟಣದ ಪರಿವೀಕ್ಷ ಣಾ ಮಂದಿರದಲ್ಲಿ ವಿದ್ಯುತ್‌ ಬಿಲ್‌ 3 ತಿಂಗಳು ಬಾಕಿಯಿದ್ದು ಅಧಿಕಾರಿಗಳು ಪಾವತಿಸದ ಕಾರಣ ಬೆಸ್ಕಾಂ ಇಲಾಖೆ ವಿಜಯಪುರ ಪರಿವೀಕ್ಷ ಣಾ ಮಂದಿರದ ವಿದ್ಯುತ್‌ ಕಡಿತಗೊಳಿಸಿದ್ದಾರೆ.

Vijaya Karnataka 13 Dec 2018, 5:00 am
ವಿಜಯಪುರ: ಪಟ್ಟಣದ ಪರಿವೀಕ್ಷ ಣಾ ಮಂದಿರದಲ್ಲಿ ವಿದ್ಯುತ್‌ ಬಿಲ್‌ 3 ತಿಂಗಳು ಬಾಕಿಯಿದ್ದು ಅಧಿಕಾರಿಗಳು ಪಾವತಿಸದ ಕಾರಣ ಬೆಸ್ಕಾಂ ಇಲಾಖೆ ವಿಜಯಪುರ ಪರಿವೀಕ್ಷ ಣಾ ಮಂದಿರದ ವಿದ್ಯುತ್‌ ಕಡಿತಗೊಳಿಸಿದ್ದಾರೆ.
Vijaya Karnataka Web bill payment electricity supply stopped to ib
ಬಿಲ್‌ ಪಾವತಿ ಬಾಕಿ: ಐಬಿಗೆ ವಿದ್ಯುತ್‌ ಕಡಿತ


ಕರ್ನಾಟಕ ಸರಕಾರ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಅಡಿಯಲ್ಲಿರುವ ಪ್ರವಾಸಿ ಮಂದಿರದಲ್ಲಿ ಕಳೆದ 12 ದಿನದಿಂದ ವಿದ್ಯುತ್‌ ಇಲ್ಲದೆ ರಾತ್ರಿ ವೇಳೆ ಭೂತ ಬಂಗಲೆಯಂತಾಗಿದೆ. ವಿದ್ಯುತ್‌ ಕಡಿತಗೊಳಿಸಿದ ಕಾರಣ ಪರಿವೀಕ್ಷ ಣಾ ಮಂದಿರದಲ್ಲಿ ನೀರಿಲ್ಲದೆ ಅಲ್ಲಿ ಬೆಳೆಸಲಾಗಿದ್ದ ಗಿಡ, ಮರ, ಹುಲ್ಲಿಗೆ ನೀರು ಹಾಯಿಸದೇ ಒಣಗಿ ಬರಡಾಗಿದೆ. ಎಲ್ಲಿ ನೋಡಿದರೂ ಬಾಡಿರುವ ಗಿಡಗಳು, ಹಸಿರು ಹುಲ್ಲಿನ ಬದಲು ಒಣಗಿದ ಕಡ್ಡಿಗಳಾಗಿವೆ.

ಪರಿವೀಕ್ಷ ಣಾ ಮಂದಿರದ ನಿರ್ವಹಣೆ ಅಧಿಕಾರಿ ಜೆಇ ಶ್ರೀನಿವಾಸಮೂರ್ತಿ ಅವರನ್ನು ಸಂಪರ್ಕಿಸಿದರೆ ಸರಕಾರದಿಂದ ಹಣ ಬಂದಿಲ್ಲ ಎನ್ನುತ್ತಾರೆ.

ವಿಜಯಪುರ ಪರಿವೀಕ್ಷ ಣಾ ಮಂದಿರದ ವಿದ್ಯುತ್‌ ಬಿಲ್‌ನ್ನು ಕಳೆದ ಸೆಪ್ಟೆಂಬರ್‌ನಲ್ಲೇ ಹಣ ಪಾವತಿಸಿದ್ದು ಬ್ಯಾಂಕ್‌ನ ಯುಟಿಆರ್‌ ನಂಬರ್‌ ಬದಲಾಗಿ ಇಲ್ಲಿ ಸಮಸ್ಯೆಯಾಗಿದೆ. ನಾನು ಬೆಸ್ಕಾಂ ಅಧಿಕಾರಿಗಳ ಬಳಿ ಮಾತನಾಡಿ ಸರಿಪಡಿಸುವುದಾಗಿ ಸಹಾಯಕ ಕಾರ್ಯಪಾಲಕ ಅಭಿಯಂತರ ಕೃಷ್ಣಪ್ಪ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ