ಆ್ಯಪ್ನಗರ

ಕೇಸರಿಗಿಂತ ಸಿದ್ದರಾಮಯ್ಯಗೆ ಟೋಪಿ ಮೇಲೆ ಪ್ರೀತಿ, ಪುಂಡರಿಗೆ ಬಿರಿಯಾನಿ ಬದಲು ಬುಲ್ಡೋಜರ್‌: ಸಿಟಿ ರವಿ

ಕುಂಕುಮ ಇಟ್ಟವರ ಕಂಡ್ರೆ ಹೆದರಿಕೆ ಆಗುತ್ತಂತೆ ಸಿದ್ದರಾಮಯ್ಯನವರಿಗೆ. ಅವರ ತಾಯಿ, ಹೆಣ್ಣುಮಕ್ಕಳು ಕುಂಕಮ‌ ಇಡ್ತಾರೋ ಇಲ್ವಾ..? ಕುಂಕಮ‌ ಇಟ್ಟವರು ಯಾರಾದ್ರೂ ಬಾಂಬ್ ಹಾಕಿದ್ರಾ..? ಬಾಂಬ್ ಹಾಕೋವರು ಯಾರು?

Vijaya Karnataka Web 22 Apr 2022, 5:24 pm
ವಿಜಯಪುರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳ್ತಾರೆ ನಾನು ಹಿಂದೂ ಅಂತ. ಆದರೆ ಸಿದ್ದರಾಮಯ್ಯಗೆ ಕೇಸರಿ ಟೋಪಿ ಮಾತ್ರ ಬೇಡ. ನಾನು ಹಿಂದೂ ಆದ್ರೆ ಕೇಸರಿ ಟೋಪಿ ಹಾಕೋಕೆ ಬಂದಾಗ ಅದನ್ನು ಕಿತ್ತಾಕಿದ್ರು. ಇಂಥವರು ಹಿಂದೂಗಳ ಬಗ್ಗೆ ಮಾತನಾಡುತ್ತಾರೆ ಎಂದು ಬಿಜೆಪಿ ನಾಯಕ ಸಿಟಿ ರವಿ ಗುಡುಗಿದರು.
Vijaya Karnataka Web ಸಿಟಿ ರವಿ
ಸಿಟಿ ರವಿ


ದೇವನಹಳ್ಳಿ ಸಮೀಪದ ವಿಜಯಪುರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಗಲಭೆಕೋರರ ಮಟ್ಟ ಹಾಕಲು 'ಬುಲ್ಡೋಜರ್' ಬಂದ್ರೆ ಒಳ್ಳೆಯದು: ಸಚಿವ ಆಶೋಕ್

ಕುಂಕುಮ ಇಟ್ಟವರ ಕಂಡ್ರೆ ಹೆದರಿಕೆ ಆಗುತ್ತಂತೆ ಸಿದ್ದರಾಮಯ್ಯನವರಿಗೆ. ಅವರ ತಾಯಿ, ಹೆಣ್ಣುಮಕ್ಕಳು ಕುಂಕಮ‌ ಇಡ್ತಾರೋ ಇಲ್ವಾ..? ಕುಂಕಮ‌ ಇಟ್ಟವರು ಯಾರಾದ್ರೂ ಬಾಂಬ್ ಹಾಕಿದ್ರಾ..? ಬಾಂಬ್ ಹಾಕೋವರು ಯಾರು? ಟೋಪಿ ಹಾಕಿದವರು..!! ಅಂತ ಸನ್ನೆ ಮಾಡಿ ಸಿ ಟಿ ರವಿ ತೋರಿಸಿದರು.

ಟೋಪಿ ಕಂಡ್ರೆ ಸಿದ್ದರಾಮಯ್ಯಗೆ ಬಹಳ ಪ್ರೀತಿ. ಕೇಸರಿ ಪೇಟಾ ತೊಟ್ಟವರು ಯಾರು ಬಾಂಬ್ ಹಾಕಲಿಲ್ಲ. ಕೇಸರಿ ಶಾಲು ಹಾಕಿದವರು ಭಾರತ್ ಮಾತಾ ಕೀ ಜೈ ಅಂದರು ಎಂದು ಸಿಟಿ ರವಿ ತಿಳಿಸಿದರು.

ತಪ್ಪು ಮಾಡಿದವರನ್ನು ತಲೆ ಮೇಲೆ ಕೂರಿಸಿಕೊಳ್ಳುವ ಜನ ನಾವಲ್ಲ. ಅಖಂಡ ಶ್ರೀನಿವಾಸ ಮೂರ್ತಿ ‌ಮನೆ ಮೇಲೆ ದಾಳಿ ಬಗ್ಗೆ ಕಾಂಗ್ರೆಸ್ ಪಕ್ಷದ ನಿಲುವೇನು. ತಪ್ಪು ಮಾಡಿದವರು‌ ನೀರು ಕುಡಿಯಲೇ ಬೇಕು, ಶಿಕ್ಷೆ ಆಗಲೇ ಬೇಕು. ತಪ್ಪು ಮಾಡಿದರು ವೋಟಿನಾಸೆಗೆ ಓಲೈಸೋ ಕಾಲವಿಲ್ಲ ತಪ್ಪು ಮಾಡಿದವರು ಬಡವರು, ಶ್ರೀಮಂತರು ಅನ್ನೋ ಪ್ರಶ್ನೇ ಇಲ್ಲ ಎಂದು ತಿಳಿಸಿದರು.

ಶ್ರೀರಾಮ ನವಮಿಯಂದು ಯಾಕೆ ಕಲ್ಲು ಎಸೆಯುತ್ತಾರೆ. ನಾವು ಏನಾದ್ರು ಅವರ ಮೆರವಣಿಗೆ ವೇಳೆ ಕಲ್ಲು ಹಾಕ್ತೀವಾ. ಒಬ್ಬರು ಹೇಳ್ತಾರೆ ಮಸೀದಿ‌ ಮುಂದೆ ಇಳಿಹಾಕಬಿಡಬೇಕು ಅಂತಾ. ಇದು ಬಹುಸಂಖ್ಯಾತ ಹಿಂದೂ ಗಳಿರೋ ದೇಶ. ಇಲ್ಲಿ ‌ನಾವು ಮೆರವಣಿಗೆ ಮಾಡಬಾರದು ಅಂದ್ರೆ ಯಾವ ಮಾನಸಿಕತೆ ಇದೆ ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು.

'ಬುಲ್ಡೋಜರ್ ಬೊಮ್ಮಾಯಿ' ಆಗ್ಬೇಕಾ ಬಸವರಾಜ ಬೊಮ್ಮಾಯಿ..? ಕರ್ನಾಟಕಕ್ಕೆ ಬೇಕಾ ಯುಪಿ ಮಾದರಿ..?

ದೇಶದಲ್ಲಿ ಭಯೋತ್ಪಾದಕರಿಗೆ ಬಿರಿಯಾನಿ ತಿನಿಸೋ ಕಾಲ‌ ಇತ್ತು. ಈಗ ಬಿರಿಯಾನಿ ಗಿರಿಯಾನಿ ಇಲ್ಲ. ಈಗ ಯಾರಾದ್ರೂ ಬಾಲ ಬಿಚ್ಚಿದ್ರೇ ಜೆಸಿಬಿ ಹೋಗುತ್ತೆ. ಬುಲ್ಡೋಜರ್ ಹೋಗುತ್ತೆ. ಸರಿನೋ ತಪ್ಪೋ..? ಎಂದು ಬಿಜೆಪಿ ಕಾರ್ಯಕರ್ತರಿಗೆ ಸಿ ಟಿ ರವಿ ಪ್ರಶ್ನೆ ಮಾಡಿದರು.

ಭಯೋತ್ಪಾದನೆ ಮಾಡುವವರಿಗೆ ಬಿರಿಯಾನಿ ತಿನಿಸಲ್ಲ. ಬಂದೂಕಿನಿಂದ ದಾಳಿ ಮಾಡುವವರಿಗೆ ಸೈನಿಕರ ಬಂದೂಕಿನಿಂದಲೇ ಉತ್ತರ ಕೊಡ್ತೀವಿ. ಸರ್ಜಿಕಲ್ ಸ್ಟ್ರೈಕ್ ಮೂಲಕ ಉತ್ತರ ಕೊಡ್ತೇವೆ ಎಂದು ಸಿಟಿ ರವಿ ಗುಡುಗಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ