ಆ್ಯಪ್ನಗರ

ಬಿಜೆಪಿ ಬೆಂಬಲ ಊಹಾಪೋಹ... ದೇವನಹಳ್ಳಿ ಶಾಸಕ ಸ್ಪಷ್ಟನೆ

ಜೆಡಿಎಸ್‌ ವರಿಷ್ಠ ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿರುವಂತೆ ನಡೆಯುವ ಶಾಸಕರಲ್ಲಿ ನಾನು ಒಬ್ಬನಾಗಿದ್ದೇನೆ. ಬಿಜೆಪಿಗೆ ಬೆಂಬಲಿಸುತ್ತೇನೆಂದು ಕೇವಲ ಊಹಾಪೋಹವಾಗಿದೆ.

Vijaya Karnataka 31 Mar 2019, 5:00 am
ಕುಂದಾಣ : ಜೆಡಿಎಸ್‌ ವರಿಷ್ಠ ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿರುವಂತೆ ನಡೆಯುವ ಶಾಸಕರಲ್ಲಿ ನಾನು ಒಬ್ಬನಾಗಿದ್ದೇನೆ. ಬಿಜೆಪಿಗೆ ಬೆಂಬಲಿಸುತ್ತೇನೆಂದು ಕೇವಲ ಊಹಾಪೋಹವಾಗಿದೆ.
Vijaya Karnataka Web bjp support speculation devanahalli legislator clarifies
ಬಿಜೆಪಿ ಬೆಂಬಲ ಊಹಾಪೋಹ... ದೇವನಹಳ್ಳಿ ಶಾಸಕ ಸ್ಪಷ್ಟನೆ


ಯಾರು ಇದರ ಬಗ್ಗೆ ಕಿವಿಗೊಡದೆ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೇಳಿದಂತೆ ಕಾಂಗ್ರೆಸ್‌ ಪಕ್ಷ ದ ಅಭ್ಯರ್ಥಿ ಎಂ.ವೀರಪ್ಪ ಮೊಯ್ಲಿ ಅವರನ್ನು ಗೆಲ್ಲಿಸಿಕೊಳ್ಳಲು ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ನಾನು ಸಹ ಬೆಂಬಲಿಸಲಾಗಿದೆ ಎಂದು ಶಾಸಕ ನಿಸರ್ಗ ಎಲ್‌.ಎನ್‌.ನಾರಾಯಣಸ್ವಾಮಿ ಸ್ಪಷ್ಟಪಡಿಸಿದರು.

ವಿಕದೊಂದಿಗೆ ಮಾತನಾಡಿದ ಅವರು ಸಮಿಶ್ರ ಸರಕಾರ ಐದು ವರ್ಷ ಆಡಳಿತವನ್ನು ಪೂರ್ಣಗೊಳಿಸಲಿದ್ದು, ಯಾವುದೇ ವಿರೋಧ ಪಕ್ಷ ಗಳ ಆಟ ನಡೆಯುವುದಿಲ್ಲ, ಸಮ್ಮಿಶ್ರ ಸರಕಾರದಲ್ಲಿ ಶಾಸಕನಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಾಗಿ ಮತದಾರರ ಒಲವನ್ನು ಗಳಿಸಿರುವ ನಾನು ಬಿಜೆಪಿಗೆ ಬೆಂಬಲಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಬಿಜೆಪಿ ಬೆಂಬಲಿಸುವುದಿಲ್ಲ: ನನ್ನದು ಹೊಸಕೋಟೆ ತಾಲೂಕು ಆದರೂ ಸಹ ಒಂದು ಪಕ್ಷ ದ ಶಾಸಕನಾಗಿದ್ದು, ಎಲ್ಲಾ ಕಡೆ ಸ್ನೇಹದಿಂದ ಇದ್ದೇನೆ ಹೊರತು ಜೆಡಿಎಸ್‌ ಶಾಸಕನಾಗಿ ಬಿಜೆಪಿಗೆ ಯಾವುದೇ ರೀತಿಯಲ್ಲಿ ಬೆಂಬಲಿಸುವುದಿಲ್ಲ, ಇದೊಂದು ಗಾಳಿಸುದ್ದಿಯಾಗಿದೆ. ಕಾರ್ಯಕರ್ತರು ಇದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಕಾಂಗ್ರೆಸ್‌ ಅಭ್ಯರ್ಥಿ ಎಂ.ವೀರಪ್ಪ ಮೊಯ್ಲಿಯವರನ್ನು ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಾತಿನಂತೆ ಗೆಲ್ಲಿಸಿಕೊಳ್ಳಲು ಸಿದ್ಧರಾಗಿ ಎಂದು ಕರೆ ನೀಡಿದರು.

ಪ್ರಚಾರದಲ್ಲಿ ಬಾಗಿ: ಚುನಾವಣೆಯನ್ನು ಎದುರಿಸುವುದು ಬೇರೆ, ಸ್ನೇಹ ಬೇರೆ, ಬಿಜೆಪಿಗೆ ಬೆಂಬಲಿಸುತ್ತೇನೆ ಎಂಬುಂದು ಬರೀ ಕಾಲ್ಪನಿಕವಾಗಿದೆ. ವೀರಪ್ಪ ಮೊಯ್ಲಿ ನಾಮಪತ್ರ ಸಲ್ಲಿಸುವ ಮೊದಲು ನಮ್ಮ ಕಚೇರಿಗೆ ಬಂದು ನನ್ನೊಂದಿಗೆ ಚರ್ಚಿಸಿದ್ದಾರೆ. ಕಾಂಗ್ರೆಸ್‌ ಮುಖಂಡರು ನನ್ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಪ್ರಚಾರದಲ್ಲಿ ಎರಡು ದಿನ ಭಾಗಿಯಾಗುತ್ತೇನೆ. ತಾಲೂಕಿನಲ್ಲಿ ಎಲ್ಲಾ ಕಡೆಗಳಲ್ಲೂ ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ತೋರಿಸಲಿದ್ದೇನೆ. ಜೊತೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಒಟ್ಟಿಗೆ ಪ್ರಚಾರದಲ್ಲಿ ತೊಡಗುತ್ತೇವೆ ಎಂದು ಹೇಳಿದರು.

ರಾಜ್ಯದಲ್ಲಿ ಸಮ್ಮಿಶ್ರ ಸರಕಾರವನ್ನು ಉರುಳಿಸುವ ಮತ್ತು ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳ ಆತ್ಮಸ್ಥೈರ್ಯವನ್ನು ಕುಗ್ಗಿಸುವ ನಿಟ್ಟಿನಲ್ಲಿ ಬಿಜೆಪಿ ಐಟಿ ದಾಳಿ ಮಾಡಿಸಿದೆ ಇದರಿಂದ ಯಾರಿಗೂ ಭಯ ಇಲ್ಲ, ಹಿಂಬಾಗಿಲಿನಿಂದ ದುರಾಡಳಿತ ನಡೆಸುವ ಉನ್ನಾರದ ಬದಲು ನೇರವಾಗಿ ಸ್ಪರ್ಧಿಸುವಂತೆ ಆಗಬೇಕು. ವಿರೋಧ ಪಕ್ಷ ದ ನಾಯಕರುಗಳನ್ನೇ ಗುರಿಯನ್ನಾಗಿಸಿದ್ದಾರೆ ಎಂದು ಕಿಡಿಕಾರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ