ಆ್ಯಪ್ನಗರ

ಮದುವೆಮನೆಗೆ ಪ್ರಿಯಕರ ದಿಢೀರ್‌ ಪ್ರತ್ಯಕ್ಷ: ಅರ್ಧಕ್ಕೇ ಮುರಿದು ಬಿತ್ತು ಅದ್ಧೂರಿ ಮದುವೆ

ಮದುವೆ ಮನೆಯಲ್ಲಿನ ವಧು ತನ್ನ ಪ್ರಿಯಕರನನ್ನು ಕಂಡು ಮದುವೆ ನಿರಾಕರಿಸಿದ ಘಟನೆ ಪಟ್ಟಣ ಸಮೀಪದ ವಿಶ್ವಶಾಂತಿ ಸಮುದಾಯ ಭವನದಲ್ಲಿ ನಡೆದಿದೆ.

Vijaya Karnataka 19 Nov 2018, 3:30 pm
ನೆಲಮಂಗಲ: ಮದುವೆ ಮನೆಯಲ್ಲಿನ ವಧು ತನ್ನ ಪ್ರಿಯಕರನನ್ನು ಕಂಡು ಮದುವೆ ನಿರಾಕರಿಸಿದ ಘಟನೆ ಪಟ್ಟಣ ಸಮೀಪದ ವಿಶ್ವಶಾಂತಿ ಸಮುದಾಯ ಭವನದಲ್ಲಿ ನಡೆದಿದೆ.
Vijaya Karnataka Web boy friend arrives at marriage hall arranged marriage broken down
ಮದುವೆಮನೆಗೆ ಪ್ರಿಯಕರ ದಿಢೀರ್‌ ಪ್ರತ್ಯಕ್ಷ: ಅರ್ಧಕ್ಕೇ ಮುರಿದು ಬಿತ್ತು ಅದ್ಧೂರಿ ಮದುವೆ


ಘಟನೆಯ ವಿವರ: ಬೆಂಗಳೂರಿನ ಕಾಮಾಕ್ಷೀಪಾಳ್ಯದ ನಿವಾಸಿಯಾದ ವಧು ಪದ್ಮಪ್ರಿಯಾಳನ್ನು ಕುಟುಂಬದವರು ಒಪ್ಪಿಗೆ ಪಡೆದು ಮದುವೆ ಮಾಡಲು ತಯಾರು ಮಾಡುವ ಜತೆಗೆ ಶನಿವಾರ ಮತ್ತು ಭಾನುವಾರ ಮದುವೆ ಸಮಾರಂಭ ನಿಶ್ಚಯವಾಗಿತ್ತು.

ಅದೇರೀತಿ ವಧುವಿನ ಕಡೆಯವರು ಮತ್ತು ಪಟ್ಟಣ ಸಮೀಪದ ನಂದರಾಮಯ್ಯನ ಪಾಳ್ಯದ ವರ ರಂಗನಾಥ್‌ ಕಡೆಯವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಕ್ಕಳ ಮದುವೆಗೆ ಅದ್ಧೂರಿ ಸಮಾರಂಭ ಆಯೋಜಿಸಿದ್ದರು. ಆದರೆ ಶನಿವಾರ ಆರತಕ್ಷತೆಯಲ್ಲಿ ಸಂತೋಷದಿಂದ ಸಮಾರಂಭದಲ್ಲಿ ಭಾಗವಹಿಸಿದ ವಧು ಪದ್ಮಪ್ರಿಯಾ ಬೆಳಗ್ಗೆ ತಾಳಿಕಟ್ಟುವ ಸಂದರ್ಭದಲ್ಲಿ ಎದುರಿಗೆ ದಿಢೀರ್‌ ಬಂದ ಪ್ರಿಯಕರ ಸಂಜುನನ್ನು ನೋಡಿ ತಾಳಿಕಟ್ಟಿಸಿಕೊಳ್ಳಲು ನಿರಾಕರಿಸುವ ಜತೆಗೆ ವರ ರಂಗನಾಥ್‌ನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ.

ತಕ್ಷಣ ವಧು ಪದ್ಮಪ್ರಿಯಾಳ ದೀಢೀರ್‌ ಬದಲಾವಣೆಯನ್ನು ಕಂಡ ಸಂಬಂಧಿಕರು ಆಚ್ಚರಿಯಾಗುವ ಜತೆ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ವಧುವಿನ ವರ್ತನೆಯಿಂದ ವರನ ಕುಟುಂಬದವರು ಕಂಗಾಲಾದರು.

ಗೊಂದಲ: ಸಂತೋಷದಿಂದ ಆರತಕ್ಷತೆಯಲ್ಲಿ ಭಾಗವಹಿಸಿದ ವಧು ಪದ್ಮಪ್ರಿಯಾ ಪ್ರಿಯಕರ ಸಂಜುವನ್ನು ಕಂಡ ತಕ್ಷಣ ಮದುವೆಯಾಗಲು ನಿರಾಕರಿಸುತ್ತಿದ್ದಂತೆ ವಧು, ವರನ ಕಡೆಯವರ ಗಲಾಟೆ ಗದ್ದಲದಿಂದಾಗಿ ಕಲ್ಯಾಣ ಮಂಟಪದಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಅನಂತರ ಸ್ಥಳಕ್ಕೆ ಬಂದ ಪಟ್ಟಣ ಪೊಲೀಸರು ಗಲಾಟೆಯನ್ನು ತಡೆಯಲು ಮುಂದಾದರು, ಅನಂತರ ವಧು ಮತ್ತು ವರನ ಮನೆಯವರು ಮರಳಿ ಮನೆಗೆ ಅನ್ನುವ ರೀತಿಯಲ್ಲಿ ಮನೆಗೆ ಹಿಂತಿರುಗಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ