ಆ್ಯಪ್ನಗರ

ಆರತಕ್ಷತೆಯಲ್ಲಿ ಇದ್ಳು.. ಮುಹೂರ್ತಕ್ಕೆ ಕೈ ಕೊಟ್ಟಳು...

ರಾತ್ರಿ ನಡೆದ ಮದುವೆಯ ಅರಕ್ಷತೆಯಲ್ಲಿ ವರನೊಂದಿಗೆ ಪಾಲ್ಗೊಂಡು ಅರಕ್ಷತೆ ಅಚರಿಸಿಕೊಂಡ ನವ ವಧುವೊಬ್ಬಳು ಬೆಳಗ್ಗೆ ಮಹೂರ್ತಕ್ಕೆ ಕೈ ಕೊಟ್ಟು ಪರಾರಿಯಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ.

Vijaya Karnataka Web 26 Oct 2017, 4:40 pm
ಸೂಲಿಬೆಲೆ: ರಾತ್ರಿ ನಡೆದ ಮದುವೆಯ ಅರಕ್ಷತೆಯಲ್ಲಿ ವರನೊಂದಿಗೆ ಪಾಲ್ಗೊಂಡು ಅರಕ್ಷತೆ ಅಚರಿಸಿಕೊಂಡ ನವ ವಧುವೊಬ್ಬಳು ಬೆಳಗ್ಗೆ ಮಹೂರ್ತಕ್ಕೆ ಕೈ ಕೊಟ್ಟು ಪರಾರಿಯಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಬೀಮಕನಹಳ್ಳಿಯಲ್ಲಿರುವ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದಿದೆ.
Vijaya Karnataka Web bride escaped from marriege hall reason shocks
ಆರತಕ್ಷತೆಯಲ್ಲಿ ಇದ್ಳು.. ಮುಹೂರ್ತಕ್ಕೆ ಕೈ ಕೊಟ್ಟಳು...


ಘಟನೆಯಿಂದ ವಿಚಲಿತರಾದ ಗಂಡಿನ ಕಡೆಯವರು ಅದೇ ಕಲ್ಯಾಣ ಮಂಟಪ್ಪದಲ್ಲಿ ಬೇರೊಂದು ಹುಡುಗಿಯ ಜತೆ ಮದುವೆ ಮಾಡಲು ಹುಡುಗಿಗಾಗಿ ತಲಾಶೆ ನಡೆಸಿದ್ದಾರೆ. ಹುಡುಗಿ ಪರಾರಿಯಾದ ತಕ್ಷಣ ಸಂಭ್ರಮದಲ್ಲಿ ಕಲ್ಯಾಣ ಮಂಟಪ ದಲ್ಲಿ ನಿರವ ಮೌನ ಅವರಿಸಿಕೊಂಡಿತ್ತು. ಮುಂದೇನು ಮಾಡಬೇಕೆಂದು ತಿಳಿಯದೆ ಕುಟುಂಬಸ್ಥರು ದಿಕ್ಕು ತೋಚದಂತೆ ಕುಳಿತ್ತಿದ್ದು ಕಂಡುಬಂತು.

ಹೊಸಕೋಟೆ ತಾಲೂಕು ಬೀಮಾಪುರ ಗ್ರಾಮದ ಯುವಕನೊಂದಿಗೆ ವಿಜಯಪುರ ಯುವತಿ ಜತೆ ಮದುವೆ ನಿಶ್ಚಯವಾಗಿತ್ತು .ಇವರ ಮದುವೆ ಹೊಸಕೋಟೆ ಚಿಂತಾಮಣೆ ರಸ್ತೆ ಬಿಮಕ್ಕನಹಳ್ಳಿ ಗುಂಡಾಜಿನೇಯಸ್ವಾಮಿ ದೇಗುಲದ ಬಳಿ ಇರುವ ನವ ಕೋಟಿ ನಾರಾಯಣ ಕಲ್ಯಾಣ ಮಂಟಪ ದಲ್ಲಿ ಗುರುವಾರ ಮಹೂರ್ತ ನಿಗಧಿಯಾಗಿತ್ತು.

ಬುದುವಾರ ರಾತ್ರಿ ಅರತಕ್ಷತೆ ಮುಗಿಸಿಕೊಂಡಿದ್ದಾರೆ. ಬೆಳಗ್ಗೆ ಐದು ಗಂಟೆಯಿಂದ ಮಹೂರ್ತ ನಿಗದಿಯಾಗಿತ್ತು. ಈ ವೇಳೆ ವದುವಿನ ಕಡೆಯವರು ಮೊಗ್ಗಿನ ಜಡೆಯ ನೆಪದಲ್ಲಿ ಕ್ಷುಲಕ ಕಾರಣವನ್ನು ಮುಂದಿಟ್ಟು ವರಾತ ತೆಗೆದಿದ್ದಾರೆ ಎನ್ನಲಾಗಿದೆ. ಈ ನಡುವೆ ಇದಕ್ಕಿದಂತೆ ವದುವಿನ ಕಡೆಯವರು ವದುವಿನೊಂದಿಗೆ ಕಾರಿನಲ್ಲಿ ಪರಾರಿಯಾಗಿದ್ದಾರೆ. ಇವರ ಕಡೆಯಿಂದ ಬಂದಿದ್ದ ಕುಟುಂಬಸ್ಥರು, ನೆಂಟರು, ಹಿತೈಷಿಗಳು ಇಲ್ಲೇ ಇದ್ದರೆ ಧರ್ಮದೇಟು ಬೀಳುವುದು ಗ್ಯಾರೆಂಟಿ ಎಂದು ಕಾಲ್ಕಿತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ