ಆ್ಯಪ್ನಗರ

ರಸ್ತೆ ವಿಭಜಕಕ್ಕೆ ಕಾರ್‌ ಅಪ್ಪಳಿಸಿ ಮೂವರು ದುರ್ಮರಣ

ರಾಷ್ಟ್ರೀಯ ಹೆದ್ದಾರಿ 75ರ ಚನ್ನಾಪುರ ಗೇಟ್‌ ಬಳಿ ಬುಧವಾರ ಮುಂಜಾನೆ 3 ಗಂಟೆ ಸಮಯದಲ್ಲಿ ಕಾರೊಂದು ರಸ್ತೆ ವಿಭಜಕಕ್ಕೆ ಅಪ್ಪಳಿಸಿ ಉರುಳಿಬಿದ್ದ ಪರಿಣಾಮವಾಗಿ ಮೂವರು ಮೃತಪಟ್ಟಿದ್ದಾರೆ.

Vijaya Karnataka 3 Jan 2019, 5:00 am
ರಸ್ತೆ ವಿಭಜಕಕ್ಕೆ ಕಾರ್‌ ಅಪ್ಪಳಿಸಿ ಮೂವರು ದುರ್ಮರಣ
Vijaya Karnataka Web ಹೊಸಕೋಟೆ
ಹೊಸಕೋಟೆ ತಾಲೂಕಿನ ಚನ್ನಾಪುರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ವಿಭಜಕ್ಕೆ ಅಪ್ಪಳಿಸಿ ನಜ್ಜುಗುಜ್ಜಾದ ಕಾರು.


ವಿಕ ಸುದ್ದಿಲೋಕ
ಹೊಸಕೋಟೆ

ರಾಷ್ಟ್ರೀಯ ಹೆದ್ದಾರಿ 75ರ ಚನ್ನಾಪುರ ಗೇಟ್‌ ಬಳಿ ಬುಧವಾರ ಮುಂಜಾನೆ 3 ಗಂಟೆ ಸಮಯದಲ್ಲಿ ಕಾರೊಂದು ರಸ್ತೆ ವಿಭಜಕಕ್ಕೆ ಅಪ್ಪಳಿಸಿ ಉರುಳಿಬಿದ್ದ ಪರಿಣಾಮವಾಗಿ ಮೂವರು ಮೃತಪಟ್ಟಿದ್ದಾರೆ.

ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ದುದ್ದುಕೇರು ಗ್ರಾಮದ ಮೂಲದವರಾದ ಶ್ರೀ ರೇಖಾ (32), ಶ್ರೀಲತಾ (37), ಚಾಲಕ ಶ್ರೀನಾಥ ಅಬ್ಬೂರ್‌ (45) ಮೃತರು.

ಬೆಂಗಳೂರಿನ ವೈಟ್‌ಫೀಲ್ಡ್‌ ಬಳಿಯ ಇಮ್ಮಡಿಹಳ್ಳಿಯಲ್ಲಿ ವಾಸವಿರುವ, ಟಿಸಿಎಸ್‌ ಸಂಸ್ಥೆ ಉದ್ಯೋಗಿ ಬಾಲಕಿಶೋರ್‌ ಮುಲ್ಲಾಪುಡಿ ಅವರು ತಮ್ಮ ಪತ್ನಿ, ಮಗಳು, ನಾದಿನಿ ಹಾಗೂ ಆಕೆಯ ಮಗನ ಸಮೇತ ಕಾರಿನಲ್ಲಿ ಆಂಧ್ರದಿಂದ ಬೆಂಗಳೂರಿಗೆ ಹಿಂದಿರುಗುತ್ತಿದ್ದರು. ಬುಧವಾರ ಮುಂಜಾನೆ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಉರುಳಿ ಬೆಂಗಳೂರು-ಕೋಲಾರ ರಸ್ತೆ ಕಡೆಗೆ ಬಿದ್ದಿತು. ತೀವ್ರವಾಗಿ ಗಾಯಗೊಂಡಿದ್ದ ಶ್ರೀರೇಖಾ ಹಾಗೂ ಶ್ರೀಲತಾ ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಗಾಯಗೊಂಡಿದ್ದ ಚಾಲಕ ಶ್ರೀನಾಥ್‌ನನ್ನು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಇತರೆ ವಾಹನ ಸವಾರರು ಅಂಬುಲೆನ್ಸ್‌ ಕರೆಸಿ ರವಾನಿಸುವ ಕಾರ‍್ಯ ಮಾಡಿದ್ದಾರೆ. ಆದರೆ ಅಬ್ಬೂರ್‌ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಹೆದ್ದಾರಿಯಲ್ಲಿ ಹೋಗುತ್ತಿದ್ದ ಇತರೆ ವಾಹನ ಸವಾರರು ಬಾಲಕಿಶೋರ್‌, ಮಗಳು ವರ್ಷಿಣಿ(10), ನಾದಿನಿಯ ಮಗ ಯಜ್ಞೇಶ್‌ (5)ಅದೃಷ್ಟವಶಾತ್‌ ಪಾರಾಗಿದ್ದು,, ಆಸ್ಪತ್ರೆಯಲ್ಲಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಹೊಸಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಹೊಸಕೋಟೆ ತಾಲೂಕಿನ ಚನ್ನಾಪುರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ವಿಭಜಕ್ಕೆ ಅಪ್ಪಳಿಸಿ ನಜ್ಜುಗುಜ್ಜಾದ ಕಾರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ