ನೆಲಮಂಗಲ: ಜನರಿಗೆ ಆತಂಕ ಮೂಡಿಸಿದ ಚಿರತೆ
ಅರಣ್ಯ ಇಲಾಖೆ ಚಿರತೆಯನ್ನು ಸೆರೆಹಿಡಿಯಲು ಬೋನಿರಿಸಿದ್ದರು. ಕೊಡಗಿಬೊಮ್ಮನಹಳ್ಳಿ, ಹಲ್ಕೂರು, ನರಸಪುರ, ಹೇಮಾಪುರ ಸೇರಿದಂತೆ ಅನೇಕ ಗ್ರಾಮಕ್ಕೆ ಹೊಂದಿಕೊಂಡಂತಿರುವ ಗುಡ್ಡಗಳಲ್ಲಿ ಚಿರತೆ ಕಂಡು ಬಂದಿದೆ.
Vijaya Karnataka Web 13 Nov 2020, 8:28 pm
ನೆಲಮಂಗಲ: ತಾಲೂಕಿನ ತ್ಯಾಮಗೊಂಡ್ಲು ಹಾಗೂ ಸೋಲೂರು ಹೋಬಳಿಯಲ್ಲಿ ಚಿರತೆಯ ಓಡಾಟ ಕಂಡು ಬಂದಿದೆ. ಇದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಅರಣ್ಯ ಇಲಾಖೆ ಚಿರತೆಯನ್ನು ಸೆರೆಹಿಡಿಯಲು ಬೋನಿರಿಸಿದ್ದರು. ಕೊಡಗಿಬೊಮ್ಮನಹಳ್ಳಿ, ಹಲ್ಕೂರು, ನರಸಪುರ, ಹೇಮಾಪುರ ಸೇರಿದಂತೆ ಅನೇಕ ಗ್ರಾಮಕ್ಕೆ ಹೊಂದಿಕೊಂಡಂತಿರುವ ಗುಡ್ಡಗಳಲ್ಲಿ ಚಿರತೆ ಕಂಡು ಬಂದಿದೆ.
ಜಾನುವಾರಗಳನ್ನು ಮೇಯಿಸಲು ಹಾಗೂ ಜಮೀನುಗಳಿಗೆ ಕೆಲಸಕ್ಕೆ ಹೋಗಲು ಜನ ಹೆದರುತ್ತಿದ್ದಾರೆ. ಚಿರತೆ ಓಡಾಡುವುದನ್ನು ಕಂಡ ಗ್ರಾಮಗಳಲ್ಲಿಸಂಜೆ 6ರ ನಂತರ ರಸ್ತೆಯಲ್ಲಿಸಂಚರಿಸುವುದು, ಜಾನುವಾರಗಳನ್ನು ಹೊರಭಾಗದಲ್ಲಿ ಕಟ್ಟುವುದು ಹಾಗೂ ಜನರು ಓಡಾಡುವುದನ್ನು ನಿಲ್ಲಿಸಲಾಗಿದೆ. ಮನೆಗಳ ಬಾಗಿಲು ಬಂದ್ ಮಾಡುವ ಅನಿವಾರ್ಯತೆ ಎದುರಾಗಿದೆ.
ಇದಲ್ಲದೇ ನಗರ ಪ್ರದೇಶಕ್ಕೆ ಕೆಲಸಕ್ಕೆ ಹೋಗುವ ಜನರು ಗ್ರಾಮಗಳಿಗೆ ಬರುವುದಕ್ಕೂ ಆತಂಕ ಪಡುವಂತಾಗಿದೆ. ತಕ್ಷಣ ಚಿರತೆ ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಅರಣ್ಯ ಇಲಾಖೆ ಚಿರತೆಯನ್ನು ಸೆರೆಹಿಡಿಯಲು ಬೋನಿರಿಸಿದ್ದರು. ಕೊಡಗಿಬೊಮ್ಮನಹಳ್ಳಿ, ಹಲ್ಕೂರು, ನರಸಪುರ, ಹೇಮಾಪುರ ಸೇರಿದಂತೆ ಅನೇಕ ಗ್ರಾಮಕ್ಕೆ ಹೊಂದಿಕೊಂಡಂತಿರುವ ಗುಡ್ಡಗಳಲ್ಲಿ ಚಿರತೆ ಕಂಡು ಬಂದಿದೆ.
ಜಾನುವಾರಗಳನ್ನು ಮೇಯಿಸಲು ಹಾಗೂ ಜಮೀನುಗಳಿಗೆ ಕೆಲಸಕ್ಕೆ ಹೋಗಲು ಜನ ಹೆದರುತ್ತಿದ್ದಾರೆ. ಚಿರತೆ ಓಡಾಡುವುದನ್ನು ಕಂಡ ಗ್ರಾಮಗಳಲ್ಲಿಸಂಜೆ 6ರ ನಂತರ ರಸ್ತೆಯಲ್ಲಿಸಂಚರಿಸುವುದು, ಜಾನುವಾರಗಳನ್ನು ಹೊರಭಾಗದಲ್ಲಿ ಕಟ್ಟುವುದು ಹಾಗೂ ಜನರು ಓಡಾಡುವುದನ್ನು ನಿಲ್ಲಿಸಲಾಗಿದೆ. ಮನೆಗಳ ಬಾಗಿಲು ಬಂದ್ ಮಾಡುವ ಅನಿವಾರ್ಯತೆ ಎದುರಾಗಿದೆ.
ಇದಲ್ಲದೇ ನಗರ ಪ್ರದೇಶಕ್ಕೆ ಕೆಲಸಕ್ಕೆ ಹೋಗುವ ಜನರು ಗ್ರಾಮಗಳಿಗೆ ಬರುವುದಕ್ಕೂ ಆತಂಕ ಪಡುವಂತಾಗಿದೆ. ತಕ್ಷಣ ಚಿರತೆ ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.