ಆ್ಯಪ್ನಗರ

ಜಿಲ್ಲೆಯಲ್ಲಿ ಚೈಲ್ಡ್‌ ಲೈನ್‌ ಸೆ ದೋಸ್ತಿ ಸಪ್ತಾಹ

ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ನ.14ರಿಂದ ನ.22ರವರೆಗೆ ಚೈಲ್ಡ್‌ ಲೈನ್‌ ಸೆ ದೋಸ್ತಿ ವೀಕ್‌ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮೀಣ ಅಭ್ಯುದಯ ಸಂಸ್ಥೆ ಮುಖ್ಯಸ್ಥೆ ಅಮಲಿನಾಯಕ್‌ ತಿಳಿಸಿದರು.

Vijaya Karnataka 15 Nov 2018, 4:36 pm
ದೊಡ್ಡಬಳ್ಳಾಪುರ: ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ನ.14ರಿಂದ ನ.22ರವರೆಗೆ ಚೈಲ್ಡ್‌ ಲೈನ್‌ ಸೆ ದೋಸ್ತಿ ವೀಕ್‌ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮೀಣ ಅಭ್ಯುದಯ ಸಂಸ್ಥೆ ಮುಖ್ಯಸ್ಥೆ ಅಮಲಿನಾಯಕ್‌ ತಿಳಿಸಿದರು.
Vijaya Karnataka Web child line se dosti week in district
ಜಿಲ್ಲೆಯಲ್ಲಿ ಚೈಲ್ಡ್‌ ಲೈನ್‌ ಸೆ ದೋಸ್ತಿ ಸಪ್ತಾಹ


ಪಟ್ಟಣದ ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬಾಲ ಕಾರ್ಮಿಕ ಪದ್ದತಿ, ಮಕ್ಕಳ ಕಳ್ಳ ಸಾಗಣೆ ಮತ್ತು ಮಕ್ಕಳಿಗೆ ಲೈಂಗಿಕ ಕಿರುಕುಳ ಸೇರಿದಂತೆ ಮಕ್ಕಳ ಮೇಲಿನ ಶೋಷಣೆ ತಡೆಗಟ್ಟಲು ಚೈಲ್ಡ್‌ ಲೈನ್‌-1098 ಪರಿಣಾಮಕಾರಿ ಅನುಷ್ಠಾನಕ್ಕಾಗಿ ಚೈಲ್ಡ್‌ ಲೈನ್‌ ಸೆ ದೋಸ್ತಿ ಸಪ್ತಾಹ ಆಯೋಜಿಸಲಾಗಿದೆ.

ಪೊಲೀಸ್‌ ಇಲಾಖೆ, ಕಾರ್ಮಿಕ ಇಲಾಖೆ, ಶಿಕ್ಷ ಣ ಇಲಾಖೆ, ಆರೋಗ್ಯ ಇಲಾಖೆ, ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಹಾಗು ಸ್ವಯಂ ಸೇವಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಚೈಲ್ಡ್‌ ಲೈನ್‌-1098 ಕ್ರಿಯಾತ್ಮಕ ಜಾರಿಗೆ ಚೈಲ್ಡ್‌ ಲೈನ್‌ ಸೆ ದೋಸ್ತಿ ವೀಕ್‌ ಆರು ದಿನಗಳ ಕಾಲ ನಡೆಯಲಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಚೈಲ್ಡ್‌ ಲೈನ್‌-1098 ಕೇಂದ್ರವಾಗಿ ಕೊಲಾಬ್‌ ಸಂಸ್ಥೆ, ದೊಡ್ಡಬಳ್ಳಾಪುರದಲ್ಲಿ ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆ, ನೆಲಮಂಗಲದಲ್ಲಿ ನೆಮ್ಮದಿ ಟ್ರಸ್ಟ್‌, ದೇವನಹಳ್ಳಿಯಲ್ಲಿ ಸ್ಪರ್ಶ ಸಂಸ್ಥೆಗಳು ಉಪ ಕೇಂದ್ರವಾಗಿ 2015 ರಿಂದ ಕಾರ್ಯನಿರ್ವಹಿಸುತ್ತಿವೆ. ಯಾವುದೇ ಸಂಕಷ್ಟದಲ್ಲಿರುವ ಮಕ್ಕಳ ರಕ್ಷಣೆ ಮಾಡುವುದು ಈ ಸಂಸ್ಥೆಗಳ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಚೈಲ್ಡ್‌ ಲೈನ್‌ ಸೆ ದೋಸ್ತಿ ವೀಕ್‌ ಸಪ್ತಾಹ ವೇಳಾಪಟ್ಟಿ; ನ.14 ಚೈಲ್ಡ್‌ ಲೈನ್‌ ದೋಸ್ತಿ ಕಾರ್ಯ ವ್ಯಾಪ್ತಿ ಮತ್ತು ಉದ್ದೇಶಗಳನ್ನು ಸುದ್ದಿಗೋಷ್ಠಿ ಮೂಲಕ ತಿಳಿಸುವುದು. ನ.15ರಂದು ಭಿಕ್ಷಾಟನೆ ಮಾಡುವ ಮಗುವನ್ನು ರಕ್ಷಿಸುವ ಕುರಿತು ಜಾಗೃತಿ ಕಾರ್ಯಕ್ರಮ. ನ.16ರಂದು ಉದ್ಘಾಟನೆ ಮತ್ತು ಮೈತ್ರಿ ವ್ಯವಸ್ಥೆಗಳೊಂದಿಗೆ ರಕ್ಷಾ ಬಂಧನ್‌. ಮಕ್ಕಳ ಸ್ನೇಹಿ ಜಿಲ್ಲೆ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳು ಮತ್ತು ಮಕ್ಕಳು ಪ್ರತಿಜ್ಞೆಯನ್ನು ಸ್ವೀಕರಿಸುವುದು. ಸಹಿ ಆಂದೋಲನ ನಡೆಸಲಾಗುವುದು. ನ.17ರಂದು ಅಂತರ್ಜಾಲ ಸುರಕ್ಷ ತೆ, ಮಾದಕದ್ರವ್ಯ ವ್ಯಸನದ ಬಗ್ಗೆ ಮೌನ ಜಾಥಾದಲ್ಲಿ ಕಾಲೇಜುಗಳ ಎಲ್ಲಾ ವಿಭಾಗದ ಎನ್‌ಸಿಸಿ, ಎನ್ನೆಸ್ಸೆಸ್‌ ವಿದ್ಯಾರ್ಥಿಗಳ ಭಾಗವಹಿಸುವಿಕೆ ಹಾಗೂ ಈ ಕುರಿತ ಬೀದಿನಾಟಕ, ಫ್ಲಾಶ್‌ ಮಾನ್‌, ಮೈಮ್‌ ಸೇರಿದಂತೆ ಇತರೆ ನಾಟಕ ಪ್ರಕಾರಗಳಲ್ಲಿ ಜಾಗೃತಿ ಮೂಡಿಸುವುದು. ನ.18ರಂದು ಬಾಲ್ಯ ವಿವಾಹ ತಡೆಗಟ್ಟುವ ಬಗ್ಗೆ ಕಲ್ಯಾಣ ಮಂಟಪಗಳು, ಧಾರ್ಮಿಕ ಸ್ಥಳಗಳಿಗೆ ತೆರಳಿ ಧಾರ್ಮಿಕ ಮುಖಂಡರಿಗೆ ಹಾಗೂ ಸಂಬಂಧಿತರಿಗೆ ದೋಸ್ತಿ ಬ್ಯಾಂಡ್‌ ಕಟ್ಟುವ ಕಾರ್ಯ ಮಾಡುವುದು. ನ.19ರಂದು ಬಾಲ ಕಾರ್ಮಿಕರನ್ನು ಬಳಸಬಹುದಾದ ಸ್ಥಳಗಳಾದ ಬಾರ್‌, ರೆಸ್ಟೋರೆಂಟ್‌, ಗ್ಯಾರೇಜ್‌ ಸೇರಿದಂತೆ ಇತರೆ ಅಪಾಯಕಾರಿ ಕ್ಷೇತ್ರಗಳ ಉದ್ಯೋಗದಾತರನ್ನು ಸಂವೇದನೆಗೊಳಿಸುವುದು. ನ.20ರಂದು ಮಕ್ಕಳ ಲೈಂಗಿಕ ನಿಂದನೆ ಕುರಿತು ಶ್ವೇತ ಆಂದೋಲನ ನಡೆಸುವುದು. ನ.21ರಂದು ವಿಶೇಷ ಮಕ್ಕಳು ಮತ್ತು ವಿಕಲ ಚೇತನರೊಂದಿಗೆ ಸ್ಪರ್ಧೆಗಳು ಸೇರಿದಂತೆ ಇತರೆ ಚರ್ಚೆಗಳು. ನ.22ರಂದು ಮಕ್ಕಳ ಹಕ್ಕುಗಳು, ಕಾನೂನು ಕುರಿತು ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಣೆ ಮಾಡಲಾಗುವುದು. ಈ ಕಾರ್ಯಕ್ರಮಗಳು ನಾಲ್ಕು ತಾಲೂಕುಗಳಲ್ಲಿ ನಡೆಯಲಿದೆ ಎಂದು ಅಮಲಿ ನಾಯಕ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ