ಆ್ಯಪ್ನಗರ

ವಿಜಯಪುರದಲ್ಲಿ ಸಂಭ್ರಮದ ಕ್ರಿಸ್‌ಮಸ್‌

ಶಾಂತಿ ಮತ್ತು ಸೌಹಾರ್ದತೆ ಪ್ರತೀಕವಾದ ಕ್ರಿಸ್ಮಸ್‌ ಹಬ್ಬವನ್ನು ಕ್ರೈಸ್ತ ಬಾಂಧವರು ಪಟ್ಟಣದಲ್ಲಿ ಅದ್ದೂರಿಯಾಗಿ ಆಚರಿಸಿದರು. ಪಟ್ಟಣದ ಎಲ್ಲಾ ಚರ್ಚ್‌ಗಳು ವಿದ್ಯುತ್‌ ದೀಪಾಲಂಕೃತಗೊಂಡು ಕಂಗೊಳಿಸಿದವು.

Vijaya Karnataka 26 Dec 2018, 5:00 am
ವಿಜಯಪುರ: ಶಾಂತಿ ಮತ್ತು ಸೌಹಾರ್ದತೆ ಪ್ರತೀಕವಾದ ಕ್ರಿಸ್ಮಸ್‌ ಹಬ್ಬವನ್ನು ಕ್ರೈಸ್ತ ಬಾಂಧವರು ಪಟ್ಟಣದಲ್ಲಿ ಅದ್ದೂರಿಯಾಗಿ ಆಚರಿಸಿದರು. ಪಟ್ಟಣದ ಎಲ್ಲಾ ಚರ್ಚ್‌ಗಳು ವಿದ್ಯುತ್‌ ದೀಪಾಲಂಕೃತಗೊಂಡು ಕಂಗೊಳಿಸಿದವು.
Vijaya Karnataka Web christmas celebrated in vijayapura
ವಿಜಯಪುರದಲ್ಲಿ ಸಂಭ್ರಮದ ಕ್ರಿಸ್‌ಮಸ್‌


ಹಬ್ಬದ ಪ್ರಯುಕ್ತ ಚರ್ಚುಗಳಲ್ಲಿ ಯೇಸು ಜನನದ ಸವಿ ನೆನಪಿಗಾಗಿ ಕ್ರೈಸ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪಟ್ಟಣದ ಬಾಲ ಯೇಸು ಚರ್ಚ್‌ನಲ್ಲಿ ಹಾಗೂ ಕೆರೆಕೋಡಿ ರಸ್ತೆಯ ಸ್ನೇಹಾಲಯ ಆಸ್ಪತ್ರೆಯ ಚರ್ಚ್‌ನಲ್ಲಿಯೂ, ಮಂಡಿಬೆಲೆ ರಸ್ತೆಯ ಮರ್ಥೋಮಾ ಚರ್ಚ್‌ನಲ್ಲಿಯೂ, ಚಂದೇನಹಳ್ಳಿ ಗೇಟ್‌ ಬಳಿಯಿರುವ ಯೇಸ್‌ ಪ್ರೇಮಾಲಯಾ ಚರ್ಚ್‌, ಸಹ ಕ್ರಿಸ್‌ಮಸ್‌ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.

ಸಮೀಪದ ಕಾರಹಳ್ಳಿ, ಹಾಗೂ ದೊಡ್ಡಸಾಗರಹಳ್ಳಿಯ ಸೈಂಟ್‌ ಜೂಸ್‌ ಚರ್ಚ್‌ಗಳಲ್ಲಿಯೂ ರಾತ್ರಿ ವಿಶೇಷ ಪೂಜೆಗಳನ್ನು ಆಯೋಜಿಸಲಾಗಿತ್ತು, ಜನತೆಗೆ ಸಂದೇಶಗಳನ್ನು ನೀಡುವ ಕಾರ್ಯ ನಡೆಯಿತು.

ಹಬ್ಬದ ಪ್ರಯುಕ್ತ ಯೇಸು ಕ್ರಿಸ್ತನ ಜನನ ಹಾಗೂ ಬಾಲ್ಯವನ್ನು ನೆನಪಿಸುವ ಉದ್ದೆಶದಿಂದ ನಿರ್ಮಿಸಲಾದ ಗೋದಲಿಗಳು ಎಲ್ಲರನ್ನು ಆಕರ್ಷಿಸಿತು.

ಕ್ರಿಸ್‌ಮಸ್‌ ಅಂಗವಾಗಿ ಚರ್ಚುಗಳನ್ನು ವಿದ್ಯುತ್‌ ದೀಪಗಳಿಂದ ವಿಶೇಷವಾಗಿ ಚರ್ಚನ್ನು ಶೃಂಗರಿಸಲಾಗಿತ್ತು. ಹಬ್ಬದ ಪ್ರಯುಕ್ತ ಕ್ರೈಸ್ತ ಬಾಂಧವರು ಇತರ ಸಮೂದಾಯದ ಜನರಿಗೂ ಸಿಹಿ, ಕೇಕ್‌ ಹಂಚಿ ಕ್ರಿಸ್‌ಮಸ್‌ ಶುಭಾಶಯ ವಿನಿಮಯ ಮಾಡಿಕೊಂಡರು.

ಫಾದರ್‌ ಮುನಿನಾರಾಯಣ ಮಾತನಾಡಿ, ಪ್ರೀತಿ ವಿಶ್ವಾಸ, ಸೌಹಾರ್ದತೆಯ ಬಗ್ಗೆ ತಿಳಿಸಿದ ಧರ್ಮಗುರು ಎಲ್ಲಾ ಧರ್ಮಗಳ ಸಂದೇಶ ಒಂದೇ. ಸಮಾಜದಲ್ಲಿ ಎಲ್ಲರೂ ತಮ್ಮ ಧರ್ಮಗಳನ್ನು ನಿಷ್ಟೆಯಿಂದ ಪಾಲಿಸಿದಾಗ ಮಾತ್ರ ಶಾಂತಿ ನೆಮ್ಮದಿ ನೆಲೆಸಲು ಸಾಧ್ಯ. ಮನುಷ್ಯ ತನ್ನ ಸ್ವಾರ್ಥ ಜೀವನಕ್ಕಾಗಿ ಹಾತೊರೆಯುತ್ತಿದ್ದಾನೆ. ಧರ್ಮ ಮಾರ್ಗದಲ್ಲಿ ದುಡಿದು ಅದರಲ್ಲಿ ಸ್ವಲ್ಪ ಭಾಗವನ್ನಾದರೂ ಬಡವರಿಗೆ ದೀನ ದಲಿತರಿಗೆ ದಾನ ಮಾಡುವುದರಿಂದ ಮನಶಾಂತಿ ಪಡೆಯಬಹುದು ಎಂದು ತಿಳಿಸಿದರು.

ಫಾದರ್‌ ಪಾಲ್‌ಕೃಷ್ಣ ಮಾತನಾಡಿ, ಕ್ರಿಸ್‌ಮಸ್‌ ಪ್ರೀತಿಯ ಹಾಗೂ ಸುಖ ಶಾಂತಿಯ ಸಂಕೇತದ ಹಬ್ಬವಾಗಿದೆ. ಇದನ್ನು ಪ್ರತಿಯೊಬ್ಬರು ತಿಳಿದುಕೊಳ್ಳುವುದು ಅವಶ್ಯಕವಿದೆ. ಯೇಸುಕ್ರಿಸ್ತನ ಪ್ರೀತಿಯ ಜ್ಯೋತಿ ಎಲ್ಲಾ ಕಡೆ ಪ್ರಜ್ವಲಿಸಬೇಕಾದರೆ ನಮ್ಮಲಿ ಕ್ರಿಯಾಶೀಲತೆ, ತ್ಯಾಗ ಮತ್ತು ಸೇವಾ ಮನೋಭಾವ ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ