ಆ್ಯಪ್ನಗರ

ಅಡುಗೆ ತಯಾರಕರಿಗೆ ಶುಚಿ-ರುಚಿ ಕಾರ್ಯಾಗಾರ

ಶಾಲೆಗಳಲ್ಲಿ ಬಿಸಿಯೂಟ ತಯಾರಿಕಾ ಸಿಬ್ಬಂದಿಗೆ ಸದ್ಯ ನೀಡುತ್ತಿರುವ ವೇತನ ಹೆಚ್ಚಳ ಮಾಡಲು ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.

Vijaya Karnataka 26 Nov 2018, 5:00 am
ದೇವನಹಳ್ಳಿ: ಶಾಲೆಗಳಲ್ಲಿ ಬಿಸಿಯೂಟ ತಯಾರಿಕಾ ಸಿಬ್ಬಂದಿಗೆ ಸದ್ಯ ನೀಡುತ್ತಿರುವ ವೇತನ ಹೆಚ್ಚಳ ಮಾಡಲು ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.
Vijaya Karnataka Web clean taste workshop for food preparers
ಅಡುಗೆ ತಯಾರಕರಿಗೆ ಶುಚಿ-ರುಚಿ ಕಾರ್ಯಾಗಾರ


ಪಟ್ಟಣದ ಸೂಲಿಬೆಲೆ ರಸ್ತೆಯಲ್ಲಿರುವ ದೇವನಹಳ್ಳಿ ಗ್ರಾಮಾಂತರ ವಿದ್ಯಾದತ್ತಿಯ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷ ಣ ಇಲಾಖೆ ಮತ್ತು ಜಿಪಂ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಡುಗೆ ಮಾಡುವವರಿಗೆ ಶುಚಿ, ರುಚಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ದೇವರ ಸಮಾನ. ಅಡುಗೆ ಮಾಡುವ ಜಾಗವನ್ನು ಶುಚಿಯಾಗಿಟ್ಟುಕೊಳ್ಳಬೇಕು. ಶಾಲೆಯ ಎಲ್ಲಾ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಶುಚಿ ಹಾಗೂ ರುಚಿಯಾಗಿ ಅಡುಗೆ ಮಾಡಿ ಉಣಬಡಿಸುವ ಕೆಲಸ ಮಾಡುತ್ತಿರುವ ಅಡುಗೆ ತಯಾರಿಕಾ ಸಿಬ್ಬಂದಿಯ ಕೆಲಸ ಶ್ಲಾಘನೀಯ ಎಂದರು. ಅವರಿಗೆ ಪ್ರಸ್ತುತ ನೀಡುತ್ತಿರುವ ವೇತನ ಹೆಚ್ಚಳ ಮಾಡಲು ನಾನು ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸಿ ಒತ್ತಡ ತರುವೆ ಎಂದು ತಿಳಿಸಿದರು.

ಜಿಪಂ ಉಪಾಧ್ಯಕ್ಷೆ ಅನಂತಕುಮಾರಿ ಚಿನ್ನಪ್ಪ ಮಾತನಾಡಿ, ಅನ್ನದಾನಕ್ಕಿಂತ ಬೇರೆ ಧಾನವಿಲ್ಲ. ಅಡುಗೆ ಮಾಡಿ ಮಕ್ಕಳಿಗೆ ಬಡಿಸುವ ಸಿಬ್ಬಂದಿಯ ಕೆಲಸ ಶ್ರೇಷ್ಠ. ಅಡುಗೆ ರುಚಿಯ ಜೊತೆಗೆ ಸುಚಿತ್ವ ಕಾಪಾಡಿಕೊಳ್ಳುವ ಜವಾಬ್ದಾರಿ ನಿಮ್ಮದಾಗಿರುತ್ತದೆ. ಶುಚಿಯ ಜೊತೆ ರುಚಿಯಾದ ಅಡುಗೆಗಳನ್ನು ನೀಡಬೇಕು. ಗುಣಮಟ್ಟದ ಆಹಾರ ಪದಾರ್ಥಗಳನ್ನೆ ಬಳಸಬೇಕು. ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳು ಪೂರೈಕೆಯಾದರೆ ತಕ್ಷ ಣವೇ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.

ಅಕ್ಷ ರ ದಾಸೋಹ ಸಹಾಯಕ ನಿರ್ದೇಶಕ ರಿಯಾಜ್‌ ಮಾತನಾಡಿ, ತರಕಾರಿ ಮತ್ತು ಸೊಪ್ಪುಗಳನ್ನು ಶುದ್ಧ ನೀರಿನಿಂದ ಶುಚಿಗೊಳಿಸಿ ಸಾಂಬಾರ್‌ ತಯಾರಿಸಬೇಕು. ಅಡುಗೆಗೆ ಬಳಸುವ ಪಾತ್ರೆಗಳನ್ನು ಸುಚಿತ್ವವಾಗಿ ಇಟ್ಟುಕೊಳ್ಳಬೇಕು. ಅಡುಗೆ ಮಾಡುವ ಪರಿಕರಗಳನ್ನು ಇಡುವ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಅಡುಗೆ ಮನೆಗೆ ಮಕ್ಕಳು ಬರದಂತೆ ಎಚ್ಚರ ವಹಿಸಿಬೇಕು. ತಲೆಗೆ ಟೋಪಿ ಮತ್ತು ಕೈಗಳಿಗೆ ಗ್ಲೌಸ್‌ ಹಾಕಿಕೊಂಡು ಮಕ್ಕಳಿಗೆ ಊಟ ಬಡಿಸಬೇಕು ಎಂದರು.

ಇದೇ ವೇಳೆ ಕ್ಷೇತ್ರ ಶಿಕ್ಷ ಣಾಧಿಕಾರಿ ಗಾಯತ್ರಿದೇವಿ, ತಾಪಂ ಅಧ್ಯಕ್ಷೆ ಭಾರತಿ ಲಕ್ಷ ್ಮಣಗೌಡ, ಜಿಡಿಎಸ್‌ ತಾಲೂಕು ಘಟಕದ ಕಾರ್ಯಾಧ್ಯಕ್ಷ ಆರ್‌. ಮುನೇಗೌಡ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ಅಧ್ಯಕ್ಷ ನಾಗೇಶ್‌, ಸಂಪನ್ಮೂಲ ವ್ಯಕ್ತಿಗಳಾದ ಶಿವಪ್ರಸಾದ್‌, ಲೋಕೇಶ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ