ಆ್ಯಪ್ನಗರ

ದಿಢೀರ್‌ ಚಳಿಗೆ ಮುದುಡಿದ ಬೆಂಗಳೂರು: ಮೋಡ ಮುಸುಕಿದ ವಾತಾವರಣ, ಹಗುರ ಮಳೆ!

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮೋಡ ಮುಸುಕಿದ ವಾತಾವರಣದಿಂದಾಗಿ ದಿಢೀರ್‌ ಚಳಿಗೆ ಜನರ ಮೈ-ಮನ ಮುದುಡಿದೆ. ಶುಕ್ರವಾರವೂ ನಗರದ ಹಲವೆಡೆ ಮಂಜು ಮುಸುಕಿದ ವಾತಾವರಣ ಕಾಣಲಿದೆ. ಇದರ ಬೆನ್ನಲ್ಲೇ ಹಗುರದಿಂದ ಕೂಡಿದ ಮಳೆಯಾಗಲಿದೆ. ಸಂಜೆ ಬಳಿಕವೂ ಮೋಡ ಮುಸುಕಿರುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Vijaya Karnataka Web 4 Dec 2020, 8:10 am
ಬೆಂಗಳೂರು ಗ್ರಾಮಾಂತರ ಜಿಲ್ಲೆ: ನಗರದಲ್ಲಿ ಗುರುವಾರ ಇಡೀ ದಿನ ಮೋಡ ಮುಸುಕಿದ ವಾತಾವರಣದಿಂದಾಗಿ ಜನರಿಗೆ ಚಳಿಯ ಅನುಭವ ಮತ್ತೆ ಕಾಡಲಾರಂಭಿಸಿತು. ಬಂಗಾಳ ಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತದಿಂದಾಗಿ ನಗರದ ವಾತಾವರಣವು ಬದಲಾಗಿದೆ. ಬೆಳಗ್ಗೆಯಿಂದಲೇ ಬಿಟ್ಟುಬಿಡದೆ ಸುರಿದ ಜಿಟಿಜಿಟಿ ಮಳೆ ಜನರನ್ನು ಮನೆಯಿಂದ ಹೊರಬರಲು ಬಿಡಲಿಲ್ಲ.
Vijaya Karnataka Web Cold
ಸಾಂದರ್ಭಿಕ ಚಿತ್ರ


ಕನಕ ಜಯಂತಿಗೆ ಸರಕಾರಿ ರಜೆ ಇದ್ದ ಕಾರಣ ಬಹುತೇಕ ಸಾರ್ವಜನಿಕರು ಮನೆಯಲ್ಲೇ ಬಂದಿಯಾಗಿ ರಜೆಯ ಸವಿಯನ್ನು ಅನುಭವಿಸಿದರು. ಇಡೀ ದಿನ ನಗರದಲ್ಲಿ ಕೇವಲ 1 ಮಿ.ಮೀ.ನಷ್ಟು ಮಳೆ ದಾಖಲಾಗಿದೆ. ಆದರೆ, ತೇವಾಂಶ ಹಾಗೂ ಮೋಡ ಮುಸುಕಿದ್ದ ಕಾರಣ ಮಧ್ಯಾಹ್ನವೇ ಚಳಿಯಿಂದಾಗಿ ಜನರು ಸ್ವೆಟರ್‌ ತೊಟ್ಟು ಸಂಚರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಚಳಿಗಾಲದಲ್ಲಿ ಈ ಆಹಾರಗಳನ್ನು ಸೇವಿಸದೇ ಇರುವುದೇ ಒಳ್ಳೆಯದು

ಸಂಜೆ ಬಳಿಕ ತುಸು ಹೆಚ್ಚಾಗಿಯೇ ಮಳೆ ಬರುವುದೆಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿತ್ತಾದರೂ, ಅದು ಹುಸಿಯಾಯಿತು. ಬದಲಾಗಿ ಚಳಿಯ ವಾತಾವರಣ ಒಂದೇ ಸಮನಾಗಿ ಕಂಡಿತು. ಡಿಸೆಂಬರ್‌ ತಿಂಗಳಿನಲ್ಲಿ ನಗರದ ಕನಿಷ್ಠ ಉಷ್ಣಾಂಶ 16 ಡಿಗ್ರಿಗಿಂತ ಕೆಳಗಿಳಿಯುತ್ತದೆ. ಮಳೆಯಿಂದಾಗಿ ಇದೇ ಪ್ರಮಾಣದ ಉಷ್ಣಾಂಶ ದಾಖಲಾಗಿದ್ದು, ಇನ್ನೂ 2-3 ದಿನ ಚಳಿ ಮುಂದುವರಿಯಲಿದೆ.
ಚಳಿಗಾಲದಲ್ಲಿ ಯಾಕೆ ನೀವು ಸನ್‍ಸ್ಕ್ರೀನ್ ಕ್ರೀಮ್ ಹಚ್ಚಿಕೊಳ್ಳಬೇಕು ಗೊತ್ತಾ?

ಇಂದೂ ಹಗುರ ಮಳೆ

ಶುಕ್ರವಾರ ಬೆಳಗ್ಗೆ ನಗರದ ಹಲವೆಡೆ ಮಂಜು ಮುಸುಕಿದ ವಾತಾವರಣ ಕಾಣಲಿದೆ. ಇದರ ಬೆನ್ನಲ್ಲೇ ಹಗುರದಿಂದ ಕೂಡಿದ ಮಳೆಯಾಗಲಿದೆ. ಸಂಜೆ ಬಳಿಕವೂ ಮೋಡ ಮುಸುಕಿರುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ