ಆ್ಯಪ್ನಗರ

ಇಸ್ಲಾಂಪುರದಲ್ಲಿ ಕೋಮು ಘರ್ಷಣೆ: ಲಾಠಿ ಚಾರ್ಜ್‌

ಇತ್ತೀಚೆಗೆ ಗೋಕಾಕ್‌ನಲ್ಲಿ ಗೋ ರಕ್ಷ ಣೆಯ ವಿಚಾರವಾಗಿ ಶಿವ ಉಪ್ಪಾರ್‌ ಎಂಬ ಯುವಕ ಸಾವನಪ್ಪಿದ್ದ ಕುರಿತು ಸ್ಥಳೀಯ ಮುಸ್ಲಿಂ ಯುವಕನೋರ್ವ ಅವಹೇಳನಕಾರಿಯಾಗಿ ಪೇಸ್‌ ಬುಕ್‌ನಲ್ಲಿ ಬರೆದುಕೊಂಡಿದನೆಂದು ಭಾನುವಾರ ಸಂಜೆ ನಗರದ ಇಸ್ಲಾಂಪುರದ ವೃತ್ತದಲ್ಲಿ ಹಿಂದೂ ಜಾಗರಣಾ ವೇದಿಕೆ ಮತ್ತು ಮುಸ್ಲಿಂರ ನಡುವೆ ಘರ್ಷಣೆ ನಡೆದಿದ್ದು, ಪೊಲೀಸರು ಸಕಾಲಕ್ಕೆ ಲಾಠಿ ಪ್ರಯೋಗಿಸಿ ಭಾರಿ ಸಂಘರ್ಷ ತಪ್ಪಿಸಿದ್ದಾರೆ.

Vijaya Karnataka 10 Jun 2019, 5:00 am
ಫೇಸ್‌ಬುಕ್‌ನಲ್ಲಿ ಪ್ರಚೋದನಕಾರಿ ಪೋಸ್ಟ್‌, ಯುವಕನ ಬಂಧನ
Vijaya Karnataka Web communal violance police lati charge
ಇಸ್ಲಾಂಪುರದಲ್ಲಿ ಕೋಮು ಘರ್ಷಣೆ: ಲಾಠಿ ಚಾರ್ಜ್‌


ವಿಕ ಸುದ್ದಿಲೋಕ ದೊಡ್ಡಬಳ್ಳಾಪುರ

ಇತ್ತೀಚೆಗೆ ಗೋಕಾಕ್‌ನಲ್ಲಿ ಗೋ ರಕ್ಷ ಣೆಯ ವಿಚಾರವಾಗಿ ಶಿವ ಉಪ್ಪಾರ್‌ ಎಂಬ ಯುವಕ ಸಾವನಪ್ಪಿದ್ದ ಕುರಿತು ಸ್ಥಳೀಯ ಮುಸ್ಲಿಂ ಯುವಕನೋರ್ವ ಅವಹೇಳನಕಾರಿಯಾಗಿ ಪೇಸ್‌ ಬುಕ್‌ನಲ್ಲಿ ಬರೆದುಕೊಂಡಿದನೆಂದು ಭಾನುವಾರ ಸಂಜೆ ನಗರದ ಇಸ್ಲಾಂಪುರದ ವೃತ್ತದಲ್ಲಿ ಹಿಂದೂ ಜಾಗರಣಾ ವೇದಿಕೆ ಮತ್ತು ಮುಸ್ಲಿಂರ ನಡುವೆ ಘರ್ಷಣೆ ನಡೆದಿದ್ದು, ಪೊಲೀಸರು ಸಕಾಲಕ್ಕೆ ಲಾಠಿ ಪ್ರಯೋಗಿಸಿ ಭಾರಿ ಸಂಘರ್ಷ ತಪ್ಪಿಸಿದ್ದಾರೆ.

ಇಲ್ಲಿನ ಇಸ್ಲಾಂಪುರದ ವಸೀಮ್‌ ಸೈಯದ್‌ ಮುಸ್ಲಿಂ ಯುವಕ ಫೇಸ್‌ಬಕ್‌ ನಲ್ಲಿ ಇತ್ತೀಚೆಗೆ ಗೋ ರಕ್ಷ ಣೆ ವಿಚಾರದಲ್ಲಿ ಸಾವನಪ್ಪಿದ್ದ ಬಜರಂಗದಳದ ಶಿವು ಉಪ್ಪಾರ್‌ ಎಂಬ ಯುವಕನ ಕುರಿತು ? ಪ್ರಚೋದನಕಾರಿಯಾಗಿ ಬರೆದುಕೊಂಡಿದ್ದ. ಇದರಿಂದ ಕುಪಿತರಾಗಿದ್ದ ಬಜರಂಗದಳದ ಕಾರ್ಯಕರ್ತರು ವಾಸೀಮ್‌ ಸಯದ್‌ ಎಂಬ ಯುವಕನ ಕೋಳಿ ಅಂಗಡಿ ಸಮೀಪ ಬಂದು ಪ್ರಶ್ನಿಸಿದ್ದಾರೆ. ಪರಿಣಾಮ ವಾಗ್ವಾದಗಳು ಜರುಗಿ ಎರಡು ಕಡೆಯವರು ಜಮಾಯಿಸಿ ಗಲಾಟೆಯವರೆಗೆ ಪ್ರಕರಣ ಬೆಳೆದಿದೆ. ಇನ್ನೇನು ಪರಿಸ್ಥಿತಿ ಉದ್ವಿಗ್ನ ರೂಪ ತಾಳುವ ಹಂತದಲ್ಲಿದ್ದ ಸಮಯಕ್ಕೆ ಪೊಲೀಸರು ಉದ್ವಿಗ್ನ ಗುಂಪುಗಳನ್ನು ಚದುರಿಸಲು ಲಾಠಿ ಚಾರ್ಜ್‌ ಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಘಟನೆಯ ನಂತರ ಬಜರಂಗದಳದ ಕಾರ್ಯಕರ್ತರು ಮತ್ತು ಮುಖಂಡರನ್ನು ಸರ್ಕಲ್‌ ಇನ್ಸ್‌ಫೆಕ್ಟ್ರ್‌ ಸಿದ್ದರಾಜು ಅವರು ಠಾಣೆಗೆ ಕರೆಸಿಕೊಂಡು ನಮಗೆ ದೂರು ನೀಡÜ ಆನಂತರ ನಾವು ಅಪರಾದಿಯನ್ನು ಬಂಧಿಸುತ್ತೇವೆ. ಅದನ್ನು ಬಿಟ್ಟು ನೀವೆ ಕಾನೂನು ಕೈಗೆ ತೆಗೆದುಕೊಂಡು ಶಾಂತಿ ಬಂಗ ಮಾಡುವುದು ಬೇಡ ಎಂದು ಮನವಿ ಮಾಡಿದರು2.

ದೂರು ದಾಖಲು;ಘಟನೆ ಕುರಿತಂತೆ ಬಜರಂಗದಳ ಕಾರ್ಯಕರ್ತರು ವಸೀಮ್‌ ಸಯದ್‌ ವಿರುದ್ದ ನಗರಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಪೊಲೀಸರು ಆರೋಪಿ ವಸೀಮ್‌ ಸಯದ್‌ ಅವನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ