ನಾಗರಾಜು ಅಶ್ವತ್ಥ್
ಬೆಂಗಳೂರು ಗ್ರಾಮಾಂತರ: ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಸರಕಾರಿ ಖೋಟಾದಲ್ಲಿ ಬೆಡ್ ಪಡೆದವರ ಒಪ್ಪೊತ್ತಿನ ಊಟದಲ್ಲೂ ವಂಚನೆಯಾಗುತ್ತಿದೆ. ತಾಲೂಕು ಮಟ್ಟದ ನರ್ಸಿಂಗ್ ಹೋಮ್ಗಳಲ್ಲಿ ಶೇ.30ರಷ್ಟು ಬೆಡ್ಗಳನ್ನು ಪಡೆಯುತ್ತಿರುವ ಸರಕಾರಿ ಖೋಟಾದಡಿ ದಾಖಲಾದ ಸೋಂಕಿತರಿಗೆ ಉಚಿತ ಊಟ ಲಭ್ಯವಾಗುತ್ತಿಲ್ಲ. ಸೋಂಕಿತರ ಕುಟುಂಬಸ್ಥರು ನಿತ್ಯ ಊಟವನ್ನು ಆಸ್ಪತ್ರೆಗಳಿಗೆ ತಲುಪಿಸುವುದರಲ್ಲಿ ಸುಸ್ತಾಗುತ್ತಿದ್ದು, ಸಂಬಂಧಿಗಳಿಲ್ಲದ ಸೋಂಕಿತರು ಸಮಸ್ಯೆ ಅನುಭವಿಸುತ್ತಿದ್ದಾರೆ. ಸರಕಾರಿ ಆಸ್ಪತ್ರೆಗಳಲ್ಲೇನು?: ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಸೋಂಕಿತರಿಗೆ ಬೆಳಗ್ಗೆ ಪೊಂಗಲ್, ಚಿತ್ರಾನ್ನ ಅಥವಾ 4 ಇಡ್ಲಿ, ಮಧ್ಯಾಹ್ನ 2 ಚಪಾತಿ, ಪಲ್ಯ ಅಥವಾ ರಾಗಿ ಮುದ್ದೆ ಅನ್ನ, ಹಣ್ಣಿನ ಸಲಾಡ್, ರಾತ್ರಿ ಊಟ, 2 ಕಷಾಯ, 1 ಹಣ್ಣಿನ ಜ್ಯೂಸ್. ಟೀ ಅಥವಾ ಕೆಲವೆಡೆ ಕಾಫಿ ಸೌಕರ್ಯ ಕಲ್ಪಿಸಲಾಗುತ್ತಿದೆ. ಕೆಲ ಮೆಡಿಕಲ್ ಕಾಲೇಜುಗಳಲ್ಲಿ ಊಟೋಪಚಾರಕ್ಕೆ ಯಾವುದೇ ಸಮಸ್ಯೆ ಎದುರಾಗಿಲ್ಲ. ಆದರೆ, ತಾಲೂಕು ಕೇಂದ್ರಗಳಲ್ಲಿನ ಚಿಕ್ಕ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿರುವ ಸೋಂಕಿತರಿಗೆ ಊಟವಿಲ್ಲದ ಸ್ಥಿತಿ ಎದುರಾಗಿದೆ.
ಸರಕಾರ ಕೊಡೋದ್ಯಾವಾಗ?: ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗುವ ಸರಕಾರಿ ಖೋಟಾದ ಸೋಂಕಿತರಿಗೆ ಊಟದ ವ್ಯವಸ್ಥೆ ನೀಡಬೇಕೆನ್ನುವ ನಿಯಮವಿದೆ. ಆದರೆ, ಸರಕಾರ ಊಟಕ್ಕೆ ಸಕಾಲಕ್ಕೆ ಅನುದಾನ ಪಾವತಿ ಮಾಡುವುದಿಲ್ಲ. ಹೀಗಾಗಿ ಅನೇಕ ಖಾಸಗಿ ಆಸ್ಪತ್ರೆಗಳು ಊಟೋಪಚಾರದ ಜವಾಬ್ದಾರಿಯಿಂದ ಹೊರಗುಳಿಯುತ್ತವೆ ಎಂದು ಖಾಸಗಿ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
'ಬೆಂಗಳೂರು ಗ್ರಾಮಾಂತರ ಮಾತ್ರವಲ್ಲದೆ ರಾಜ್ಯದ ಹೊರ ಜಿಲ್ಲೆಗಳಲ್ಲಿ ಖಾಸಗಿ ಆಸ್ಪತ್ರೆಗಳು ಸರಕಾರಿ ಕೋಟಾದಡಿ ದಾಖಲಾಗುವ ಸೋಂಕಿತರಿಗೆ ಊಟದ ವ್ಯವಸ್ಥೆ ಮಾಡುತ್ತಿಲ್ಲ. ಸರಕಾರ ದಿನದ ಪ್ಯಾಕೇಜ್ಗೆಂದು 250ರೂ.ಅನ್ನು ಇದಕ್ಕೆಂದೇ ವಿನಿಯೋಗಿಸುತ್ತಿದ್ದು, ಸೋಂಕಿತರಿಗೆ ಊಟ ನೀಡದೇ ನಕಲಿ ಬಿಲ್ಗಳನ್ನು ನೀಡಿ ಸರಕಾರಕ್ಕೆ ದೊಡ್ಡ ಮಟ್ಟದಲ್ಲಿ ವಂಚಿಸಲಾಗುತ್ತಿದೆ' ಎಂದು ಹೆಸರನ್ನೇಳಲಿಚ್ಛಿಸದ ವೈದ್ಯರೊಬ್ಬರು ಮಾಹಿತಿ ನೀಡಿದ್ದಾರೆ.
'ಸರಕಾರದ ನಿಯಮಾವಳಿಗಳಿದ್ದು, ಅನುದಾನಗಳನ್ನು ಕೊಟ್ಟರೂ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಊಟದ ಸೌಕರ್ಯ ಕಲ್ಪಿಸುತ್ತಿಲ್ಲ. ಕುಟುಂಬಸ್ಥರಿಲ್ಲದ ಸೋಂಕಿತರು ಊಟವಿಲ್ಲದೇ ಉಳಿಯುವ ದಯನೀಯ ಸ್ಥಿತಿ ನಿರ್ಮಾಣವಾಗುತ್ತಿದ್ದು, ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ' ಎಂದು ಸಮಸ್ಯೆಗೊಳಗಾದ ಅಮರ್ನಾಥ್ ಎಂಬುವರು ಆಗ್ರಹಿಸಿದ್ಧಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಡಿಎಚ್ಒ ಡಾ. ಮಂಜುಳಾ ದೇವಿ, 'ಖಾಸಗಿ ಆಸ್ಪತ್ರೆಗಳಲ್ಲಿನ ಸರಕಾರಿ ಕೋಟಾದಡಿ ದಾಖಲಾದ ಸೋಂಕಿತರಿಗೆ ಮೂರು ಹೊತ್ತಿನ ಊಟವನ್ನು ಒದಗಿಸಲೇಬೇಕು. ಯಾವುದಾದರೂ ಖಾಸಗಿ ಆಸ್ಪತ್ರೆಗಳು ಊಟ ಒದಗಿಸಲು ಹಿಂಜರಿದರೆ ಅಧಿಕಾರಿಗಳಿಗೆ ಮಾಹಿತಿ ನೀಡಬಹುದು' ಎಂದು ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ: ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಸರಕಾರಿ ಖೋಟಾದಲ್ಲಿ ಬೆಡ್ ಪಡೆದವರ ಒಪ್ಪೊತ್ತಿನ ಊಟದಲ್ಲೂ ವಂಚನೆಯಾಗುತ್ತಿದೆ. ತಾಲೂಕು ಮಟ್ಟದ ನರ್ಸಿಂಗ್ ಹೋಮ್ಗಳಲ್ಲಿ ಶೇ.30ರಷ್ಟು ಬೆಡ್ಗಳನ್ನು ಪಡೆಯುತ್ತಿರುವ ಸರಕಾರಿ ಖೋಟಾದಡಿ ದಾಖಲಾದ ಸೋಂಕಿತರಿಗೆ ಉಚಿತ ಊಟ ಲಭ್ಯವಾಗುತ್ತಿಲ್ಲ. ಸೋಂಕಿತರ ಕುಟುಂಬಸ್ಥರು ನಿತ್ಯ ಊಟವನ್ನು ಆಸ್ಪತ್ರೆಗಳಿಗೆ ತಲುಪಿಸುವುದರಲ್ಲಿ ಸುಸ್ತಾಗುತ್ತಿದ್ದು, ಸಂಬಂಧಿಗಳಿಲ್ಲದ ಸೋಂಕಿತರು ಸಮಸ್ಯೆ ಅನುಭವಿಸುತ್ತಿದ್ದಾರೆ.
ಸರಕಾರ ಕೊಡೋದ್ಯಾವಾಗ?: ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗುವ ಸರಕಾರಿ ಖೋಟಾದ ಸೋಂಕಿತರಿಗೆ ಊಟದ ವ್ಯವಸ್ಥೆ ನೀಡಬೇಕೆನ್ನುವ ನಿಯಮವಿದೆ. ಆದರೆ, ಸರಕಾರ ಊಟಕ್ಕೆ ಸಕಾಲಕ್ಕೆ ಅನುದಾನ ಪಾವತಿ ಮಾಡುವುದಿಲ್ಲ. ಹೀಗಾಗಿ ಅನೇಕ ಖಾಸಗಿ ಆಸ್ಪತ್ರೆಗಳು ಊಟೋಪಚಾರದ ಜವಾಬ್ದಾರಿಯಿಂದ ಹೊರಗುಳಿಯುತ್ತವೆ ಎಂದು ಖಾಸಗಿ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
'ಬೆಂಗಳೂರು ಗ್ರಾಮಾಂತರ ಮಾತ್ರವಲ್ಲದೆ ರಾಜ್ಯದ ಹೊರ ಜಿಲ್ಲೆಗಳಲ್ಲಿ ಖಾಸಗಿ ಆಸ್ಪತ್ರೆಗಳು ಸರಕಾರಿ ಕೋಟಾದಡಿ ದಾಖಲಾಗುವ ಸೋಂಕಿತರಿಗೆ ಊಟದ ವ್ಯವಸ್ಥೆ ಮಾಡುತ್ತಿಲ್ಲ. ಸರಕಾರ ದಿನದ ಪ್ಯಾಕೇಜ್ಗೆಂದು 250ರೂ.ಅನ್ನು ಇದಕ್ಕೆಂದೇ ವಿನಿಯೋಗಿಸುತ್ತಿದ್ದು, ಸೋಂಕಿತರಿಗೆ ಊಟ ನೀಡದೇ ನಕಲಿ ಬಿಲ್ಗಳನ್ನು ನೀಡಿ ಸರಕಾರಕ್ಕೆ ದೊಡ್ಡ ಮಟ್ಟದಲ್ಲಿ ವಂಚಿಸಲಾಗುತ್ತಿದೆ' ಎಂದು ಹೆಸರನ್ನೇಳಲಿಚ್ಛಿಸದ ವೈದ್ಯರೊಬ್ಬರು ಮಾಹಿತಿ ನೀಡಿದ್ದಾರೆ.
'ಸರಕಾರದ ನಿಯಮಾವಳಿಗಳಿದ್ದು, ಅನುದಾನಗಳನ್ನು ಕೊಟ್ಟರೂ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಊಟದ ಸೌಕರ್ಯ ಕಲ್ಪಿಸುತ್ತಿಲ್ಲ. ಕುಟುಂಬಸ್ಥರಿಲ್ಲದ ಸೋಂಕಿತರು ಊಟವಿಲ್ಲದೇ ಉಳಿಯುವ ದಯನೀಯ ಸ್ಥಿತಿ ನಿರ್ಮಾಣವಾಗುತ್ತಿದ್ದು, ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ' ಎಂದು ಸಮಸ್ಯೆಗೊಳಗಾದ ಅಮರ್ನಾಥ್ ಎಂಬುವರು ಆಗ್ರಹಿಸಿದ್ಧಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಡಿಎಚ್ಒ ಡಾ. ಮಂಜುಳಾ ದೇವಿ, 'ಖಾಸಗಿ ಆಸ್ಪತ್ರೆಗಳಲ್ಲಿನ ಸರಕಾರಿ ಕೋಟಾದಡಿ ದಾಖಲಾದ ಸೋಂಕಿತರಿಗೆ ಮೂರು ಹೊತ್ತಿನ ಊಟವನ್ನು ಒದಗಿಸಲೇಬೇಕು. ಯಾವುದಾದರೂ ಖಾಸಗಿ ಆಸ್ಪತ್ರೆಗಳು ಊಟ ಒದಗಿಸಲು ಹಿಂಜರಿದರೆ ಅಧಿಕಾರಿಗಳಿಗೆ ಮಾಹಿತಿ ನೀಡಬಹುದು' ಎಂದು ತಿಳಿಸಿದ್ದಾರೆ.