ನೆಲಮಂಗಲ (ಬೆಂಗಳೂರು ಗ್ರಾಮಾಂತರ): ಕೊರೊನಾ ಹರಡುವಿಕೆಯನ್ನು ನಿಯಂತ್ರಣ ಮಾಡಲು ಗುಂಪು ಸೇರಬಾರದು ಎಂಬ ನಿಯಮವಿದೆ. ಈ ಕಾರಣಕ್ಕಾಗಿ ಮಸೀದಿಯಲ್ಲಿ ನಮಾಜ್ ಮಾಡಬೇಡಿ, ಧ್ವನಿವರ್ಧಕದ ಶಬ್ದ ಕಡಿಮೆ ಮಾಡಿ ಎಂದು ಗ್ರಾಮದ ಜನರು ಮನವಿ ಮಾಡಿದರು. ಇದರಿಂದ ಕೆರಳಿದ ಮುಸ್ಲಿಂ ಸಮುದಾಯದ 22 ಜನರು ಹಲ್ಲೆ ನಡೆಸಿರುವ ಘಟನೆ, ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ. ತಾಲೂಕಿನ ಆನಂದನಗರದಲ್ಲಿ ಹಿಂದೂ ಹಾಗೂ ಮುಸ್ಲಿಮರು ಒಗ್ಗಟ್ಟಿನಿಂದ ಇದ್ದಾರೆ. ಈ ಗ್ರಾಮದಲ್ಲಿ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಮುಸ್ಲಿಂ ಸಮುದಾಯದವರು ಮಸೀದಿಯಲ್ಲಿ ನಮಾಜ್ ಮಾಡುವಾಗ, ಮೋಹನ್ ಹಾಗೂ ಸಿದ್ದಗಂಗಯ್ಯ ಎಂಬುವವರು ನಮಾಜ್ ಮಾಡಬೇಡಿ, ಶಬ್ದ ಕಡಿಮೆ ಮಾಡಿ ಎಂದು ಹೇಳಿದರು. ಈ ಕಾರಣಕ್ಕೇ ಅವರ ಮೇಲೆ ಹಲ್ಲೆ ಮಾಡಲಾಗಿದ್ದು, ಕೇಳಲು ಹೋದ ಹನುಮಂತರಾಜು, ಮೋಹನ್, ಭಾಗ್ಯಮ್ಮ ಅವರಿಗೂ ಸಹ ಹಲ್ಲೆ ಮಾಡಲಾಗಿದೆ. ಈ ಬಗ್ಗೆ 22 ಮುಸ್ಲಿಂ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಕರಣದ ಸೂಕ್ತ ತನಿಖೆ ಮಾಡಿ ಕಾನೂನು ರೀತಿ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಹೊಸದಾಗಿ 20 ಜನರಿಗೆ ಕೊರೊನಾ, 23 ರೋಗಿಗಳು ಡಿಸ್ಚಾರ್ಜ್
ಎಸ್ಪಿ ಭೇಟಿ: ಪ್ರಕರಣದ ವಿಚಾರ ತಿಳಿಯುತ್ತಿದ್ದಂತೆ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ. ಚೆನ್ನಣ್ಣನವರ್, ಡಿವೈಎಸ್ಪಿ ಮೋಹನ್ಕುಮಾರ್, ವೃತ್ತನಿರೀಕ್ಷಕ ಶಿವಣ್ಣ ಸೇರಿದಂತೆ ಕೆಲ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪ್ರಕರಣದ ಮಾಹಿತಿ ಪಡೆದು ಶಾಂತಿ ಕಾಪಾಡುವಂತೆ ಮನವಿ ಮಾಡಿ ಗಲಾಟೆ ಮಾಡಿಕೊಳ್ಳದಂತೆ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ 12 ಹೊಸ ಕೊರೊನಾ ಪ್ರಕರಣ, ಓರ್ವ ಸಾವು; 12 ಸೋಂಕಿತರು ಡಿಸ್ಚಾರ್ಜ್
ಪೊಲೀಸರ ಸರ್ಪಗಾವಲು: ಗ್ರಾಮದಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಮೊಕ್ಕಾಂ ಹೂಡಿದ್ದು, ಗ್ರಾಮಕ್ಕೆ ಕೆಎಸ್ಆರ್ಪಿ ಪೊಲೀಸರು ಸರ್ಪಗಾವಲಿದ್ದು ಎಲ್ಲರ ಮೇಲೆ ನಿಗಾ ವಹಿಸಲಾಗಿದೆ.
ವಿಕ ವೆಬ್ ಅಭಿಯಾನ : ಮಧುಲೋಕ ಬಾಳು ನರಕ, ಗುಂಡಿನ ದಾಸ್ಯ ಬ್ಯಾಡವೋ ಸಿಸ್ಯ!
ರಾಜ್ಯದಲ್ಲಿ ಹೊಸದಾಗಿ 20 ಜನರಿಗೆ ಕೊರೊನಾ, 23 ರೋಗಿಗಳು ಡಿಸ್ಚಾರ್ಜ್
ಎಸ್ಪಿ ಭೇಟಿ: ಪ್ರಕರಣದ ವಿಚಾರ ತಿಳಿಯುತ್ತಿದ್ದಂತೆ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ. ಚೆನ್ನಣ್ಣನವರ್, ಡಿವೈಎಸ್ಪಿ ಮೋಹನ್ಕುಮಾರ್, ವೃತ್ತನಿರೀಕ್ಷಕ ಶಿವಣ್ಣ ಸೇರಿದಂತೆ ಕೆಲ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪ್ರಕರಣದ ಮಾಹಿತಿ ಪಡೆದು ಶಾಂತಿ ಕಾಪಾಡುವಂತೆ ಮನವಿ ಮಾಡಿ ಗಲಾಟೆ ಮಾಡಿಕೊಳ್ಳದಂತೆ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ 12 ಹೊಸ ಕೊರೊನಾ ಪ್ರಕರಣ, ಓರ್ವ ಸಾವು; 12 ಸೋಂಕಿತರು ಡಿಸ್ಚಾರ್ಜ್
ಪೊಲೀಸರ ಸರ್ಪಗಾವಲು: ಗ್ರಾಮದಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಮೊಕ್ಕಾಂ ಹೂಡಿದ್ದು, ಗ್ರಾಮಕ್ಕೆ ಕೆಎಸ್ಆರ್ಪಿ ಪೊಲೀಸರು ಸರ್ಪಗಾವಲಿದ್ದು ಎಲ್ಲರ ಮೇಲೆ ನಿಗಾ ವಹಿಸಲಾಗಿದೆ.
ವಿಕ ವೆಬ್ ಅಭಿಯಾನ : ಮಧುಲೋಕ ಬಾಳು ನರಕ, ಗುಂಡಿನ ದಾಸ್ಯ ಬ್ಯಾಡವೋ ಸಿಸ್ಯ!