ಆ್ಯಪ್ನಗರ

ಬೆಂ.ಗ್ರಾ: ಕೈ ಮೇಲೆ ಸೀಲು, ದಿಢೀರ್‌ ಬಂದ ಹೊರಗಿನ ಜನ, ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕುಂದಾಣ ಬಳಿ 16 ಜನರು ಬೇರೆಡೆಯಿಂದ ಬಂದಿರುವ ಹಿನ್ನಲೆ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ. ಇವರನ್ನು ಆಕಾಶ್‌ ಆಸ್ಪತ್ರೆಯಲ್ಲಿಂದ ಹೋಂ-ಕ್ವಾರೆಂಟೈನ್‌ಗಾಗಿ ಶಿಫಾರಸ್ಸು ಮಾಡಲಾಗಿದೆ

Vijaya Karnataka Web 1 Apr 2020, 12:08 pm
ಕುಂದಾಣ: ತಾಲೂಕಿನ ಕುಂದಾಣ ಹೋಬಳಿಯ ಕೊಯಿರ ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 16 ಜನರು ಹೊಸದಾಗಿ ಇಲ್ಲಿನ ಕೊಯಿರ, ಮನಗೊಂಡನಹಳ್ಳಿ ಮತ್ತು ಕೆ.ಹೊಸೂರು ಗ್ರಾಮಗಳಿಗೆ ಬೇರೆ ಕಡೆಗಳಿಂದ ಬಂದಿದ್ದರಿಂದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಕೊರೊನಾ ವೈರಸ್ ಹರಡುವ ಆತಂಕ ಸೃಷ್ಠಿಯಾದ ಘಟನೆ ನಡೆದಿದೆ.
Vijaya Karnataka Web coronavirus


ಇವರು ಸಂಬಂಧಿಕರ ಮನೆಗೆ ಬಂದಿದ್ದು , ಸ್ಥಳೀಯರಾಗಿದ್ದು ಇವರಲ್ಲಿ4 ಜನರಿಗೆ ಆಕಾಶ್‌ ಆಸ್ಪತ್ರೆಯಲ್ಲಿ vಕೊರೊನಾ ಪತ್ತೆ ತಪಾಸಣೆಗೊಳಪಡಿಸಲಾಗಿತ್ತು. ವೈದ್ಯರು ಹೋಂ ಕ್ವಾರಂಟೈನ್‌ ಶಿಫಾರಸ್ಸು ಮಾಡಿರುತ್ತಾರೆ. ಇಷ್ಟೇ ಅಲ್ಲದೇ ಕೆಲವರ ಕೈಗೆ ಸೀಲ್‌ ಹಾಕಿರುವುದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿತ್ತು.

ಒಂದೇ ಕುಟುಂಬದ 4 ಜನ ಗೌರಿಬಿದನೂರು ಭಾಗದಿಂದ ಮತ್ತು ಬೆಂಗಳೂರಿನಿಂದ 10 ಜನ ಬಂದಿರುತ್ತಾರೆ. ಕೆ.ಹೊಸೂರಿಗೆ ಬಂದಿದ್ದ ಇಬ್ಬರು ಅವರ ಊರಿಗೆ ವಾಪಾಸಾಗಿರುತ್ತಾರೆ. ಸ್ಥಳದಲ್ಲಿದ್ದವರನ್ನು ಸ್ಥಳೀಯ ಕೊಯಿರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಂದ ತಪಾಸಣೆ ಮಾಡಿಸಿದಾಗ ಯಾವುದೇ ಸೋಂಕು ಲಕ್ಷಣಗಳು ಕಂಡುಬಂದಿರುವುದಿಲ್ಲ. ಈ ಹತ್ತು ಜನರಿಗೆ ಮತ್ತೊಂದು ಬಾರಿ ಆಕಾಶ್‌ ಆಸ್ಪತ್ರೆಯಲ್ಲಿತಪಾಸಣೆ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿರುತ್ತಾರೆ. ಸ್ಥಳಕ್ಕೆ ವಿಶ್ವನಾಥಪುರ ಠಾಣಾ ಪೊಲೀಸರು, ಗ್ರಾಪಂ ಪಿಡಿಒ ಸ್ಥಳಪರಿಶೀಲನೆ ನಡೆಸಿ ಯಾವುದೇ ಆತಂಕಗೊಳ್ಳುವ ಅಗತ್ಯವಿಲ್ಲಎಂದು ಗ್ರಾಮಸ್ಥರಿಗೆ ಸಲಹೆ ಮಾಡಿದ್ದಾರೆ.

ಕೊರೊನಾ ಪರಿಹಾರ ನಿಧಿಗೆ ಒಂದು ವರ್ಷದ ವೇತನವನ್ನು ನೀಡಿದ ಬಿಎಸ್‌ವೈ

ತಹಶೀಲ್ದಾರ್‌ ಆದೇಶದ ಮೇರೆಗೆ ಬಂದಿರುವವರನ್ನು ಪ್ರತ್ಯೇಕ ಕೊಠಡಿಯಲ್ಲಿಇರುವಂತೆ ಸೂಚಿಸಿದ್ದು, ಗ್ರಾಮ ಪಂಚಾಯಿತಿಯಿಂದ ಅವರ ಮೇಲೆ ನಿಗಾವಹಿಸಲಾಗಿದೆ. ಅಗತ್ಯ ವಸ್ತುಗಳನ್ನು ಅವರ ಮನೆಗಳಿಗೆ ಪೂರೈಸಲು ಗ್ರಾಪಂ ಕ್ರಮವಹಿಸಿರುತ್ತದೆ ಎಂದು ಕೊಯಿರ ಗ್ರಾಪಂ ಪಿಡಿಒ ಮಲ್ಲೇಶ್‌ ಹಾಗೂ ಅಧ್ಯಕ್ಷೆ ಅಂಜಲಿ ನಂಜೇಗೌಡ ತಿಳಿಸಿರುತ್ತಾರೆ.

ಈ ವೇಳೆಯಲ್ಲಿಗ್ರಾಪಂ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್‌, ಸದಸ್ಯ ಕೆ.ಆರ್‌.ಬಾಬು, ಮುಖಂಡ ಕೆ.ಸಿ.ಮುನಿರಾಜ್‌, ಗ್ರಾಪಂ ಕಾರ್ಯದರ್ಶಿ ಆದೇಪ್ಪ, ಗ್ರಾಮಸ್ಥರು ಮತ್ತಿತರರು ಇದ್ದರು.

ದಿಲ್ಲಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ ರಾಜ್ಯದ 7 ಮಂದಿ ಆಸ್ಪತ್ರೆಗೆ ದಾಖಲು

ವೈದ್ಯರ ಬೇಜವಾಬ್ದಾರಿತನ
ಪರಸ್ಥಳದಿಂದ ಗ್ರಾಮಕ್ಕೆ ಬಂದಿರುವವರನ್ನು ಆಕಾಶ್‌ ಆಸ್ಪತ್ರೆಗೆ ಆ್ಯಂಬುಲೆನ್ಸ್‌ ಅಥವಾ ಸರಕಾರಿ ವಾಹನದಲ್ಲಿಕರೆದೊಯ್ಯುವ ಬದಲಿಗೆ ಅವರನ್ನೇ ನೇರವಾಗಿ ಆಕಾಶ್‌ ಆಸ್ಪತ್ರೆಯಲ್ಲಿತಪಾಸಣೆ ಮಾಡಿಸಿಕೊಂಡು ಬರುವಂತೆ ತಿಳಿಸಿದ ಆರೋಗ್ಯ ಕೇಂದ್ರದ ವೈದ್ಯರು ಬೇಜಾವಾಬ್ದಾರಿತನದಿಂದ ನಡೆದುಕೊಂಡಿದ್ದಾರೆ. ಒಂದು ವೇಳೆ ಕೊರೊನಾ ಸೋಂಕು ಇವರಲ್ಲಿದ್ದಿದ್ದರೆ ಮುಂದಿನ ಅನಾಹುತಗಳಿಗೆ ಕಾರಣವಾಗುತ್ತಿತ್ತು. ಇದು ಆಸ್ಪತ್ರೆ ವೈದ್ಯರ ಕರ್ತವ್ಯ ನಿರ್ಲಕ್ಷತ್ರ್ಯವೆಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ