ಆ್ಯಪ್ನಗರ

ದೊಡ್ಡಬಳ್ಳಾಪುರ: ಮತ್ತೆ ಮಾಸ್ಕ್‌ ಕಡ್ಡಾಯ, ಕೋವಿಡ್‌ ಟೆಸ್ಟ್‌ ಹೆಚ್ಚಳಕ್ಕೆ ಕ್ರಮ

​​ಕೋವಿಡ್‌ ಎದುರಿಸಲು ಜತೆಯಾದ ಲಸಿಕೆ ವಿತರಣೆ ಯಶಸ್ವಿಯಾಗಿ ಜಿಲ್ಲೆಯಲ್ಲಿನಡೆಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಈಗಾಗಲೇ 18 ವರ್ಷ ಮೇಲ್ಟವರಿಗೆ ಮೊದಲನೇ ಹಾಗೂ ಎರಡನೇ ಡೋಸ್‌ ಶೇ.100ರ ಗಡಿ ತಲುಪಿದೆ.

Vijaya Karnataka Web 26 Apr 2022, 6:55 pm
ಆದರ್ಶ ಕೋಡಿ, ದೊಡ್ಡಬಳ್ಳಾಪುರ
Vijaya Karnataka Web ಕೊರೊನಾ ಪರೀಕ್ಷೆ
ಕೊರೊನಾ ಪರೀಕ್ಷೆ


ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ ಎನ್ನುವಷ್ಟರಲ್ಲೇ ಮತ್ತೆ ನಿಧಾನಗತಿಯಲ್ಲಿಏರಿಕೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮಾಸ್ಕ್‌ ಕಡ್ಡಾಯಗೊಳಿಸಿದೆ.

ಹೊಸದಿಲ್ಲಿ, ತಮಿಳುನಾಡು, ಹರಿಯಾಣ ಸೇರಿದಂತೆ ಕರ್ನಾಟಕ ರಾಜ್ಯದಲ್ಲೂ ಕೋವಿಡ್‌ ಪ್ರಕರಣ ನಿಧಾನಗತಿಯಲ್ಲಿ ಏರಿಕೆ ಕಾಣುತ್ತಿದೆ. ಗ್ರಾಮಾಂತರ ಜಿಲ್ಲೆಯು ಮತ್ತೆ ಕೊರೊನಾ ಹಾಟ್‌ಸ್ಪಾಟ್‌ ಆಗದಂತೆ ಎಚ್ಚರ ವಹಿಸಲಾಗಿದೆ. ಕೋವಿಡ್‌ ಇಳಿಮುಖದಿಂದ ಮಾಸ್ಕ್‌ ದೂರ ಇಟ್ಟಿದ್ದ ಜನರು ಮತ್ತೆ ಮಾಸ್ಕ್‌ ಧರಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.

4ನೇ ಅಲೆಯ ಆತಂಕ

ಜಿಲ್ಲೆಯಲ್ಲಿ2 ಹಾಗೂ 3ನೇ ಅಲೆಯ ಸಂದರ್ಭದಲ್ಲಿಪ್ರತಿದಿನ ಸಾವಿರದ ಆಸುಪಾಸಿನಲ್ಲಿಸೋಂಕು ಕಂಡುಬರುತ್ತಿತ್ತು.ಜತೆಗೆ ಸಾವು ಕೂಡ ಹೆಚ್ಚುತ್ತಿತ್ತು.ಆದರೆ ಕೆಲ ತಿಂಗಳಿಂದ ಕೊರೊನಾ ಸೋಂಕಿನಲ್ಲಿಇಳಿಮುಖವಾಗಿದೆ. ಆದರೆ ಕೊರೊನಾ 4ನೇ ಅಲೆಯ ಆತಂಕ ಮನೆಮಾಡಿದ್ದು, ಕೊರೊನಾ ಅಂತ್ಯ ಯಾವಾಗ ಎಂಬ ಪ್ರಶ್ನೆ ಮೂಡುತ್ತಿದೆ.

ಶೇ.100 ಲಸಿಕಾಕರಣ

ಕೋವಿಡ್‌ ಎದುರಿಸಲು ಜತೆಯಾದ ಲಸಿಕೆ ವಿತರಣೆ ಯಶಸ್ವಿಯಾಗಿ ಜಿಲ್ಲೆಯಲ್ಲಿನಡೆಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಈಗಾಗಲೇ 18 ವರ್ಷ ಮೇಲ್ಟವರಿಗೆ ಮೊದಲನೇ ಹಾಗೂ ಎರಡನೇ ಡೋಸ್‌ ಶೇ.100ರ ಗಡಿ ತಲುಪಿದೆ. ಜತೆಗೆ 15 ರಿಂದ 17 ವರ್ಷದ ಮಕ್ಕಳಿಗೆ ಲಸಿಕೆ ಯಶಸ್ವಿಯಾಗಿದೆ.ಇದೀಗ 12ವರ್ಷ ಮೇಲ್ಪಟ ಮಕ್ಕಳಿಗೆ ಶೇ.85 ರಷ್ಟು ಮೊದಲ ಡೋಸ್‌ ಲಸಿಕೆ ವಿತರಿಸಲಾಗಿದೆ. ಆದರೆ ಜಿಲ್ಲೆಯಲ್ಲಿ ಕೆಲವರು ಇನ್ನೂಕೂಡ ಲಸಿಕೆ ಪಡೆದಿಲ್ಲ, ಈಗ ಲಸಿಕಾ ಕೇಂದ್ರದ ಕಡೆಗೆ ಬರುತ್ತಿದ್ದಾರೆ.

ಮುಂದುವರೆದ ಟೆಸ್ಟಿಂಗ್‌

ಕೋವಿಡ್‌ 4ನೇ ಅಲೆಯ ಆತಂಕ ಬೆನ್ನಲ್ಲೇ ತಾಲೂಕು ಆಸ್ಪತ್ರೆಗಳಲ್ಲಿ ಟೆಸ್ಟಿಂಗ್‌ ಮುಂದುವರೆಸಲಾಗಿದೆ. ಜ್ವರದ ಲಕ್ಷಣ ಹಾಗೂ ಅವಶ್ಯಕ ಸಂದರ್ಭದಲ್ಲಿ ಟೆಸ್ಟಿಂಗ್‌ ಮಾಡಲಾಗುತ್ತಿದೆ. ಪ್ರತಿದಿನ ನೂರರ ಸಂಖ್ಯೆಯಲ್ಲಿ ಕೋವಿಡ್‌ ಟೆಸ್ಟ್‌ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರಕರಣ ಹೆಚ್ಚಿದರೆ ಟೆಸ್ಟಿಂಗ್‌ ಹೆಚ್ಚಿಸುವ ನಿರೀಕ್ಷೆಯಿದೆ.

ಕೈತಪ್ಪಲು ಬಿಡಬೇಡಿ

ಕೊರೊನಾ ಸೋಂಕು ಒಂದಂಕಿಗೆ ಇಳಿಮುಖವಾಗಿದೆ. ಕಳೆದೆರಡು ವರ್ಷಗಳಿಂದ ಅಬ್ಬರಿಸಿದ್ದ ಮಹಾಮಾರಿ ಕೊರೊನಾ ಸೈಲೆಂಟ್‌ ಆಗಿದೆ. ಇದರಿಂದ ಜನರು ಕೊರೊನಾ ಎಚ್ಚರಿಕೆ ಮರೆಯಬಾರದು. ಜಾತ್ರೆ, ಮೆರವಣಿಗೆಯಂತಹ ಕಾರ್ಯಕ್ರಮಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಜತೆಗೆ ಮಾಸ್ಕ್‌ ಬಳಕೆ ಬಹುತೇಕ ಮರೆತುಬಿಟ್ಟಿದ್ದಾರೆ. ಆದರೆ ಕೊರೊನಾ ಶೇ.100ರಷ್ಟು ನಮ್ಮಿಂದ ಮರೆಯಾಗಿಲ್ಲ. ಇದರಿಂದ ಜನಸಂದಣಿ ಪ್ರದೇಶದಲ್ಲಿಕೊಂಚ ಎಚ್ಚರಿಕೆ ವಹಿಸಿ ಮಾಸ್ಕ್‌ ಧರಿಸಬೇಕು. ಜತೆಗೆ 2 ಅಡಿ ಅಂತರ ಕಾಯ್ದುಕೊಳ್ಳಬೇಕಿದೆ.

ಜಿಲ್ಲೆಯಲ್ಲಿ ಕೊರೊನಾ ಇಳಿಕೆ ಕಂಡಿದೆ. ಸಾರ್ವಜನಿಕ ಆಸ್ಪತ್ರೆಗಳಲ್ಲಿಟೆಸ್ಟಿಂಗ್‌ ಮುಂದುವರಿಸಲಾಗಿದೆ. ಲಸಿಕಾಕರಣವನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ.
-ಡಾ.ತಿಪ್ಪೇಸ್ವಾಮಿ | ಜಿಲ್ಲಾಆರೋಗ್ಯಾಧಿಕಾರಿ ಬೆಂ.ಗ್ರಾ.

ಸಾರ್ವಜನಿಕ ಸ್ಥಳಗಳು, ಕೆಲಸದ ಸ್ಥಳಗಳಲ್ಲಿ ಮತ್ತು ಪ್ರಯಾಣದ ವೇಳೆ ಸಾರ್ವಜನಿಕರು ಮಾಸ್ಕ್‌ ಧರಿಸುವುದು ಕಡ್ಡಾಯ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವಂತಿಲ್ಲ ಹಾಗೂ ವ್ಯಕ್ತಿಗಳು ಸಾರ್ವಜನಿಕ ಸ್ಥಳಗಳಲ್ಲಿ ಕನಿಷ್ಠ 2 ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೊರೊನಾ ನಿಯಮ ಉಲ್ಲಂಸುವವರಿಗೆ ದಂಡ ವಿಧಿಸಲಾಗುತ್ತದೆ.
-ಕೆ.ಶ್ರೀನಿವಾಸ್‌ | ಜಿಲ್ಲಾಧಿಕಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ