ಆ್ಯಪ್ನಗರ

ಪೊಲೀಸ್‌ ಮೇಲೆ ಹಲ್ಲೆ: ಆರು ಜನರ ಬಂಧನ

ಹೊಸಕೋಟೆ ನಗರ ಪೊಲೀಸ್ ಪೇದೆ ಸುಬ್ರಮಣಿ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ 6 ಜನರನ್ನು ಬಂಧಿಸಲಾಗಿದೆ. ಪೇದೆ ಬಲಗೈಗೆ ಬಲವಾದ ಹೊಡೆತ ಬಿದ್ದಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

Vijaya Karnataka Web 25 Jun 2018, 3:36 pm
ಬೆಂಗಳೂರು: ಹೊಸಕೋಟೆ ನಗರ ಪೊಲೀಸ್ ಪೇದೆ ಸುಬ್ರಮಣಿ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ 6 ಜನರನ್ನು ಬಂಧಿಸಲಾಗಿದೆ. ಪೇದೆ ಬಲಗೈಗೆ ಬಲವಾದ ಹೊಡೆತ ಬಿದ್ದಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
Vijaya Karnataka Web arrest


ರಾತ್ರಿ ಪಾಳಿಯಲ್ಲಿ ಗಸ್ತಿನಲ್ಲಿದ್ದ ಪೊಲೀಸರಿಗೆ ಹೊಸಕೋಟೆ ನಗರದ ಕೆ.ಆರ್ ಸರ್ಕಲ್ ಬಳಿ ಗಲಾಟೆಯಾಗುತ್ತಿದೆ ಎಂದು ಮಾಹಿತಿ ಲಭ್ಯವಾಗಿತ್ತು. ಈ ಸಂದರ್ಭದಲ್ಲಿ ಗಸ್ತಿನಲ್ಲಿದ್ದ ಪೇದೆ ಸುಬ್ರಮಣಿ ಮತ್ತು ಗೃಹರಕ್ಷಕ ದಳದ ನಾಗೇಶ್ ಸ್ಥಳಕ್ಕೆ ಹೋಗಿ ಗಲಾಟೆ ಬಿಡಿಸಲು ಮುಂದಾಗಿದ್ದರು.

ಗಲಾಟೆ ಮಾಡುತ್ತಿದ್ದ ಆರು ಜನರು ಪೊಲೀಸರ ಮೇಲೆ ತಿರುಗಿ ಬಿದ್ದು ಅವರದ್ದೇ ಲಾಠಿಯನ್ನು ಕಸಿದುಕೊಂಡು ಬಡಿದಿದ್ದಾರೆ. ನಂತರ ಪೇದೆ ಸುಬ್ರಮಣಿ ಕೈ ಮುರಿದಿದ್ದಾರೆ. ತನಿಖೆ ನಡೆಸಿದ ಹೊಸಕೋಟೆ ಪೋಲೀಸರು ಅರುಣ್, ನವೀನ್, ಚಂದ್ರಶೇಖರ್, ವಿಷ್ಣು, ಪ್ರಜ್ವಲ್ ಮತ್ತು ಸೂರ್ಯಪ್ರಕಾಶ್‌ನನ್ನು ಬಂಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ