ವಿಜಯಕುಮಾರ್ ಎಚ್. ಎಸ್.
ನೆಲಮಂಗಲ (ಬೆಂಗಳೂರು ಗ್ರಾಮಾಂತರ): ಕೊರೊನಾ ಸಂಕಷ್ಟದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಮಾಡುವ ವ್ಯಕ್ತಿಗಳ ಸ್ನೇಹಿತರನ್ನು ಟಾರ್ಗೆಟ್ ಮಾಡಿ ಹಣ ವಸೂಲಿ ಮಾಡುವ ಜಾಲ ಹೆಚ್ಚಾಗಿದ್ದು, ಶಾಸಕರು, ಸರಕಾರಿ ಅಧಿಕಾರಿಗಳು, ಶಿಕ್ಷಕರ ಹೆಸರಿನ ನಕಲಿ ಖಾತೆಗಳು ಸೃಷ್ಟಿಯಾಗಿವೆ. ವಿಶ್ವಾದ್ಯಂತ 300 ಮಿಲಿಯನ್ ಬಳಕೆದಾರರಿರುವ ಫೇಸ್ಬುಕ್ ಹಾಗೂ 200 ಕೋಟಿ ಬಳಕೆದಾರರಿರುವ ವಾಟ್ಸಪ್ನಲ್ಲಿ ದಿನನಿತ್ಯ ಜನರು ಸಕ್ರಿಯರಾಗಿದ್ದಾರೆ. ಕೊರೊನಾ ಲಾಕ್ಡೌನ್ ನಂತರದ ದಿನಗಳಲ್ಲಿ ಕೆಲವು ಫೇಸ್ಬುಕ್ ಖಾತೆಗಳನ್ನು ಟಾರ್ಗೆಟ್ ಮಾಡಿ ಆ ಖಾತೆಯಲ್ಲಿನ ಪೋಟೊಗಳನ್ನು ಬಳಸಿ, ಅವರ ಸ್ನೇಹಿತರಿಗೆ ಹಣ ನೀಡಿ ಎಂದು ವಿನಂತಿ ಮಾಡಿ ಹಣ ಪಡೆಯುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ.
ಶಾಸಕರು, ಅಧಿಕಾರಿಗಳು ಟಾರ್ಗೆಟ್: ಫೇಸ್ಬುಕ್ ಖಾತೆಗಳಲ್ಲಿ ಪ್ರಭಾವಿಗಳು, ಅಧಿಕಾರಿಗಳು, ರಾಜಕೀಯ ಮುಖಂಡರು ಸೇರಿದಂತೆ ಶ್ರೀಮಂತ ವ್ಯಕ್ತಿಗಳ ಪೋಟೋಗಳನ್ನು ಆಯ್ಕೆ ಮಾಡಿಕೊಂಡು, ನಕಲಿ ಖಾತೆಗೆ ಅವರ ಪೋಟೋ ಬಳಸಿ ಅವರ ಸ್ನೇಹಿತರಿಗೆ ಲಿಂಕ್ ಕಳುಹಿಸುತ್ತಾರೆ. ನನಗೆ ಸಮಸ್ಯೆಯಾಗಿದೆ. ನನ್ನ ತಾಯಿಗೆ ಸಮಸ್ಯೆ ಹಾಗೂ ಇತರ ಆರೋಗ್ಯ ಸಮಸ್ಯೆಗಳನ್ನು ಹೇಳುವ ಮೂಲಕ ಹಣಕ್ಕಾಗಿ ಮನವಿ ಮಾಡಿ ಪಡೆಯುತ್ತಿದ್ದಾರೆ.
ಸ್ನೇಹಿತ ಕಷ್ಟದಲ್ಲಿ ಇರಬಹುದು ಎಂದು ಕೆಲವರು ಹಣ ಕಳುಹಿಸಿ ಮೋಸ ಹೋಗಿದ್ದಾರೆ. ನೆಲಮಂಗಲ ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ, ಬಿಇಒ, ಸರಕಾರಿ ಶಿಕ್ಷಕರು, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮುಖಂಡರ ಖಾತೆಗಳನ್ನು ನಕಲಿ ಮಾಡಿ ಹಣ ಪಡೆದಿದ್ದಾರೆ.
ದೂರು ನೀಡಿಲ್ಲ, ವಿದ್ಯಾವಂತರ ಅಸಡ್ಡೆ: ನೆಲಮಂಗಲ ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ ಅವರ ಫೇಸ್ಬುಕ್ ಖಾತೆ ನಕಲಿ ಮಾಡಿ ಹಣಕ್ಕಾಗಿ ಸ್ನೇಹಿತರಿಗೆ ಮನವಿ ಮಾಡಿರುವ ಪ್ರಕರಣವಿದ್ದರೂ, ಶಾಸಕರು ದೂರು ನೀಡಲು ಮುಂದಾಗಿಲ್ಲ. ಸರಕಾರಿ ಹಾಗೂ ಖಾಸಗಿ ಕಂಪನಿಗಳ ಅಧಿಕಾರಿಗಳು, ಶಿಕ್ಷಕರು, ವಿದ್ಯಾವಂತರು ನಕಲಿ ಖಾತೆಯ ಸಮಸ್ಯೆಯ ಬಗ್ಗೆ ದೂರು ನೀಡಲು ಮುಂದಾಗಿಲ್ಲ. ಇದರ ಪರಿಣಾಮ ಖದೀಮರು ಪ್ರತಿನಿತ್ಯ ಲಕ್ಷಾಂತರ ರೂ.ಹಣವನ್ನು ಕುಳಿತಲ್ಲಿ ಸಂಪಾದನೆ ಮಾಡುತ್ತಿದ್ದಾರೆ.
ವಾಟ್ಸಪ್ ನಕಲಿ: ಫೇಸ್ಬುಕ್ನಲ್ಲಿ ಮೊಬೈಲ್ ನಂಬರ್ ಪಬ್ಲಿಕ್ಗೆ ಕಾಣುವಂತೆ ಇದ್ದರೆ, ಆ ನಂಬರ್ ಬಳಸಿ ನಕಲಿ ವಾಟ್ಸಪ್ ನಂಬರ್ನಿಂದ ಡಿಪಿ ಬದಲಿಸಿ ನನ್ನ ಹೊಸ ಮೊಬೈಲ್ ಸಂಖ್ಯೆ.. ನನಗೆ ಸಮಸ್ಯೆ ಇದೆ, ಹಣ ಬೇಕು ಎಂದು ಮನವಿ ಮಾಡುವ ಸಂದೇಶ ಕಳುಹಿಸಿ ಹಣ ಲಪಟಾಯಿಸುತ್ತಿದ್ದಾರೆ.
ಪೊಲೀಸರು ದೂರು ಪಡೆಯುವುದಿಲ್ಲ: ಫೇಸ್ಬುಕ್ ಹಾಗೂ ವಾಟ್ಸಪ್ಗಳ ನಕಲಿ ಖಾತೆ ಸೃಷ್ಟಿಸಿ ಹಣ ಪಡೆದಿದ್ದಾರೆ ಎಂಬ ದೂರುಗಳನ್ನು ಅನೇಕ ಜನರು ಪೊಲೀಸರ ಗಮನಕ್ಕೆ ತಂದಾಗ ಇದು ಕಾಮನ್, ದೂರು ನೀಡಿದರೆ ಖದೀಮರು, ಹಣ ಸಿಗುವುದಿಲ್ಲ. ಪೋಟೋ ಡಿಲೀಟ್ ಮಾಡಿ ಸ್ನೇಹಿತರಿಗೆ ಕಳುಹಿಸದಂತೆ ಹೇಳಿ ಎಂದು ವಾಪಸ್ ಕಳುಹಿಸುತ್ತಿರುವ ಘಟನೆ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ನಡೆಯುತ್ತಿವೆ. ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ಸೇರಿದಂತೆ ಅನೇಕರು ಪೊಲೀಸರ ಈ ವರ್ತನೆಯನ್ನು ಖಂಡಿಸಿದ್ದಾರೆ.
'ನನ್ನ ಫೇಸ್ಬುಕ್ ಖಾತೆ ನಕಲಿ ಮಾಡಿ ಹಣ ನೀಡುವಂತೆ ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ಸಂದೇಶ ಹೋಗಿರುವ ವಿಚಾರ ತಿಳಿಯಿತು. ಖಾತೆ ಬ್ಲಾಕ್ ಮಾಡಿಸಿದ್ದೇನೆ ದೂರು ನೀಡಿಲ್ಲ, ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಜನರು ಎಚ್ಚರ ವಹಿಸಬೇಕು' ಎಂದು ನೆಲಮಂಗಲ ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ ಮನವಿ ಮಾಡಿದ್ದಾರೆ.
ನೆಲಮಂಗಲ (ಬೆಂಗಳೂರು ಗ್ರಾಮಾಂತರ): ಕೊರೊನಾ ಸಂಕಷ್ಟದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಮಾಡುವ ವ್ಯಕ್ತಿಗಳ ಸ್ನೇಹಿತರನ್ನು ಟಾರ್ಗೆಟ್ ಮಾಡಿ ಹಣ ವಸೂಲಿ ಮಾಡುವ ಜಾಲ ಹೆಚ್ಚಾಗಿದ್ದು, ಶಾಸಕರು, ಸರಕಾರಿ ಅಧಿಕಾರಿಗಳು, ಶಿಕ್ಷಕರ ಹೆಸರಿನ ನಕಲಿ ಖಾತೆಗಳು ಸೃಷ್ಟಿಯಾಗಿವೆ.
ಶಾಸಕರು, ಅಧಿಕಾರಿಗಳು ಟಾರ್ಗೆಟ್: ಫೇಸ್ಬುಕ್ ಖಾತೆಗಳಲ್ಲಿ ಪ್ರಭಾವಿಗಳು, ಅಧಿಕಾರಿಗಳು, ರಾಜಕೀಯ ಮುಖಂಡರು ಸೇರಿದಂತೆ ಶ್ರೀಮಂತ ವ್ಯಕ್ತಿಗಳ ಪೋಟೋಗಳನ್ನು ಆಯ್ಕೆ ಮಾಡಿಕೊಂಡು, ನಕಲಿ ಖಾತೆಗೆ ಅವರ ಪೋಟೋ ಬಳಸಿ ಅವರ ಸ್ನೇಹಿತರಿಗೆ ಲಿಂಕ್ ಕಳುಹಿಸುತ್ತಾರೆ. ನನಗೆ ಸಮಸ್ಯೆಯಾಗಿದೆ. ನನ್ನ ತಾಯಿಗೆ ಸಮಸ್ಯೆ ಹಾಗೂ ಇತರ ಆರೋಗ್ಯ ಸಮಸ್ಯೆಗಳನ್ನು ಹೇಳುವ ಮೂಲಕ ಹಣಕ್ಕಾಗಿ ಮನವಿ ಮಾಡಿ ಪಡೆಯುತ್ತಿದ್ದಾರೆ.
ಸ್ನೇಹಿತ ಕಷ್ಟದಲ್ಲಿ ಇರಬಹುದು ಎಂದು ಕೆಲವರು ಹಣ ಕಳುಹಿಸಿ ಮೋಸ ಹೋಗಿದ್ದಾರೆ. ನೆಲಮಂಗಲ ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ, ಬಿಇಒ, ಸರಕಾರಿ ಶಿಕ್ಷಕರು, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮುಖಂಡರ ಖಾತೆಗಳನ್ನು ನಕಲಿ ಮಾಡಿ ಹಣ ಪಡೆದಿದ್ದಾರೆ.
ದೂರು ನೀಡಿಲ್ಲ, ವಿದ್ಯಾವಂತರ ಅಸಡ್ಡೆ: ನೆಲಮಂಗಲ ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ ಅವರ ಫೇಸ್ಬುಕ್ ಖಾತೆ ನಕಲಿ ಮಾಡಿ ಹಣಕ್ಕಾಗಿ ಸ್ನೇಹಿತರಿಗೆ ಮನವಿ ಮಾಡಿರುವ ಪ್ರಕರಣವಿದ್ದರೂ, ಶಾಸಕರು ದೂರು ನೀಡಲು ಮುಂದಾಗಿಲ್ಲ. ಸರಕಾರಿ ಹಾಗೂ ಖಾಸಗಿ ಕಂಪನಿಗಳ ಅಧಿಕಾರಿಗಳು, ಶಿಕ್ಷಕರು, ವಿದ್ಯಾವಂತರು ನಕಲಿ ಖಾತೆಯ ಸಮಸ್ಯೆಯ ಬಗ್ಗೆ ದೂರು ನೀಡಲು ಮುಂದಾಗಿಲ್ಲ. ಇದರ ಪರಿಣಾಮ ಖದೀಮರು ಪ್ರತಿನಿತ್ಯ ಲಕ್ಷಾಂತರ ರೂ.ಹಣವನ್ನು ಕುಳಿತಲ್ಲಿ ಸಂಪಾದನೆ ಮಾಡುತ್ತಿದ್ದಾರೆ.
ವಾಟ್ಸಪ್ ನಕಲಿ: ಫೇಸ್ಬುಕ್ನಲ್ಲಿ ಮೊಬೈಲ್ ನಂಬರ್ ಪಬ್ಲಿಕ್ಗೆ ಕಾಣುವಂತೆ ಇದ್ದರೆ, ಆ ನಂಬರ್ ಬಳಸಿ ನಕಲಿ ವಾಟ್ಸಪ್ ನಂಬರ್ನಿಂದ ಡಿಪಿ ಬದಲಿಸಿ ನನ್ನ ಹೊಸ ಮೊಬೈಲ್ ಸಂಖ್ಯೆ.. ನನಗೆ ಸಮಸ್ಯೆ ಇದೆ, ಹಣ ಬೇಕು ಎಂದು ಮನವಿ ಮಾಡುವ ಸಂದೇಶ ಕಳುಹಿಸಿ ಹಣ ಲಪಟಾಯಿಸುತ್ತಿದ್ದಾರೆ.
ಪೊಲೀಸರು ದೂರು ಪಡೆಯುವುದಿಲ್ಲ: ಫೇಸ್ಬುಕ್ ಹಾಗೂ ವಾಟ್ಸಪ್ಗಳ ನಕಲಿ ಖಾತೆ ಸೃಷ್ಟಿಸಿ ಹಣ ಪಡೆದಿದ್ದಾರೆ ಎಂಬ ದೂರುಗಳನ್ನು ಅನೇಕ ಜನರು ಪೊಲೀಸರ ಗಮನಕ್ಕೆ ತಂದಾಗ ಇದು ಕಾಮನ್, ದೂರು ನೀಡಿದರೆ ಖದೀಮರು, ಹಣ ಸಿಗುವುದಿಲ್ಲ. ಪೋಟೋ ಡಿಲೀಟ್ ಮಾಡಿ ಸ್ನೇಹಿತರಿಗೆ ಕಳುಹಿಸದಂತೆ ಹೇಳಿ ಎಂದು ವಾಪಸ್ ಕಳುಹಿಸುತ್ತಿರುವ ಘಟನೆ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ನಡೆಯುತ್ತಿವೆ. ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ಸೇರಿದಂತೆ ಅನೇಕರು ಪೊಲೀಸರ ಈ ವರ್ತನೆಯನ್ನು ಖಂಡಿಸಿದ್ದಾರೆ.
'ನನ್ನ ಫೇಸ್ಬುಕ್ ಖಾತೆ ನಕಲಿ ಮಾಡಿ ಹಣ ನೀಡುವಂತೆ ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ಸಂದೇಶ ಹೋಗಿರುವ ವಿಚಾರ ತಿಳಿಯಿತು. ಖಾತೆ ಬ್ಲಾಕ್ ಮಾಡಿಸಿದ್ದೇನೆ ದೂರು ನೀಡಿಲ್ಲ, ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಜನರು ಎಚ್ಚರ ವಹಿಸಬೇಕು' ಎಂದು ನೆಲಮಂಗಲ ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ ಮನವಿ ಮಾಡಿದ್ದಾರೆ.